ಕುಂದಾಪುರ:ದಿನಾಂಕ 09/01/2017 ರಂದು ಸಮಯ ಸುಮಾರು ಮದ್ಯಾಹ್ನ 12:45 ಗಂಟೆಗೆ ಕುಂದಾಪುರ ತಾಲೂಕು, ಬೀಜಾಡಿ ಗ್ರಾಮದ ಪೂಜಾ ಟೈಲ್ಸ್ ಬಳಿ ಪೂರ್ವ ಬದಿಯ ರಾಷ್ಟ್ರೀಯ ಹೆದ್ದಾರಿ 66 ರಸ್ತೆಯಲ್ಲಿ, ಅಬ್ದುಲ್ ಕುಂಜಿ ಎಂಬವರು KA-20-EK-0446 ನೇ ಮೋಟಾರ್ ಸೈಕಲ್ ನ್ನು ಸವಾರಿ ಮಾಡಿಕೊಂಡು, ಇಂಡಿಕೇಟರ್ ಹಾಕಿ ಡಿವೈಡರ್ ಮುಖೇನ ಪೂರ್ವ ಬದಿಯಿಂದ ಪಶ್ಚಿಮ ಬದಿಯ ರಸ್ತೆಗೆ ತಿರುಗಿಸುವಾಗ, ಆಪಾದಿತ ಅಬ್ದುಲ್ ಅಜೀಜ್ ಎಂಬವರು KA-19-B-3233 ನೇ ಈಚರ್ ಲಾರಿಯನ್ನು ಅತೀವೇಗ ಹಾಗೂ ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಡಿಕ್ಕಿ ಹೊಡೆದ ಪರಿಣಾಮ ಕುಂಜಿ ಅಹಮದ್ ರವರ ತಲೆಗೆ, ಹಾಗೂ ಬಲಕೈಗೆ ಒಳನೋವು ಹಾಗೂ ತರಚಿದ ಗಾಯವಾಗಿ ಕೊಟೇಶ್ವರ ಎನ್. ಆರ್ ಆಚಾರ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ಹೋಗಿರುತ್ತಾರೆ, ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 03/2017 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ –
source: Udupi Police
Leave a Reply