ಕೊಲ್ಲೂರು ಗಂಗೆ ಕೊರಗ ಮನೆ ಧ್ವಂಸ: ಆರೋಪಿಗಳ ಬಂಧನಕ್ಕೆ ಆಗ್ರಹ

ಕೊಲ್ಲೂರು: ಯಾವುದೇ ಮಾಹಿತಿ ನೀಡದೇ ಬುಡಕಟ್ಟು ಜನಾಂಗದ ಗಂಗೆ ಕೊರಗ ಎಂಬ ಬಡ ಮಹಿಳೆ 40 ವರ್ಷಗಳಿಂದ ವಾಸವಾಗಿದ್ದ ಮನೆಯನ್ನು ಜೆಸಿಬಿ ತಂದು ನೆಲಸಮ ಮಾಡಿ ಧ್ವಂಸಗೊಳಿಸಿರುವ ಜಗದಾಂಭ ಟ್ರಸ್ಟ್‌ ನ ಮಾಲೀಕರಾದ ಪರಮೇಶ್ವರ ಅಡಿಗ ಅವರನ್ನು ಶೀಘ್ರವಾಗಿ ಬಂಧಿಸಬೇಕು ಎಂದು ಉಡುಪಿ ಜಿಲ್ಲೆಯ ಜಿಲ್ಲಾ ದೌರ್ಜನ್ಯ ತಡೆ ಜಾಗೃತಿ ಉಸ್ತುವಾರಿ ಸಮಿತಿ ಸದಸ್ಯರಾದ ವಾಸುದೇವ ಮುದೂರು ಆಗ್ರಹಿಸಿದ್ದಾರೆ.

ಮಾನವಿಯತೆ ಇಲ್ಲದೇ ಮೃಗಗಳಂತೆ ವರ್ತಿಸುತ್ತಿರುವ, ಬಡವರ ಬದುಕಿನಲ್ಲಿ ಚೆಲ್ಲಾಟ ಆಡುವ ಪರಮೇಶ್ವರ ಅಡಿಗರಂತಹವರಿಗೆ ಕಾನೂನು ಭಯ ಉಂಟಾಗಬೇಕೆಂದರೆ ಅವರ ಬಂಧನ ಆಗಬೇಕು. ಆಗ ಮಾತ್ರ ಇಂತಹವರನ್ನು ಮಟ್ಟ ಹಾಕಲು ಸಾಧ್ಯ.

ಹೀಗಾಗಿ ಶೀಘ್ರವಾಗಿ ಅವರನ್ನು ಬಂಧಿಸುವಂತೆ ಉಡುಪಿ ಜಿಲ್ಲೆಯ ಜಿಲ್ಲಾ ದೌರ್ಜನ್ಯ ತಡೆ ಜಾಗೃತಿ ಉಸ್ತುವಾರಿ ಸಮಿತಿ ಸದಸ್ಯರಾದ ವಾಸುದೇವ ಮುದೂರು, ಉಡುಪಿಯ ದಲಿತ ಮುಖಂಡರು ಹಾಗೂ ಜನಪರ ಹೋರಾಟಗಾರರು ಅದ ಜಯ ಮಲ್ಪೆ, ಉಪ್ಪೂರು ಜಿಲ್ಲಾಧ್ಯಕ್ಷರು ಪ.ಜಾತಿ/ ಪ.ಪಂಗಡ ಸಂಘ ಉಡುಪಿ ಗುತ್ತಿಗೆದಾರರರಾದ ಪರಮೇಶ್ವರ, ಅಂಬೇಡ್ಕರ್ ಯುವ ಸೇನೆ ಉಡುಪಿಯ ಜಿಲ್ಲಾಧ್ಯಕ್ಷರಾದ ಗಣೇಶ್ ನೆರ್ಗಿ , ನರಸಿಂಹ ಹಳಗೇರಿ ಕೆಡಿಪಿ ಸದಸ್ಯರು, ಮಾಜಿ ದರ್ಮದರ್ಶಿಗಳು ಕೊಲ್ಲೂರು, ನಾಗರಾಜ್ ಉಪ್ಪುಂದ ಜಿಲ್ಲಾ ಸಂಘಟನಾ ಸಂಚಾಲಕರು, ಲಕ್ಷ್ಮಣ ಸಂಚಾಲಕರು ಬೈಂದೂರು ನಾಗರಾಜ್ ಸಟ್ವಾಡಿ ಕುಂದಾಪುರ ಇವರು ಜಂಟಿ ಪತ್ರೀಕ ಹೇಳಿಯಲ್ಲಿ ಆಗ್ರಹಿಸಿದ್ದಾರೆ.

Comments

Leave a Reply

Your email address will not be published. Required fields are marked *