ಬೆಳ್ತಂಗಡಿ: ಎಸ್ ಡಿ ಪಿ ಐ ಯಿಂದ ಮನೆ ಹಸ್ತಾಂತರ

ಬೆಳ್ತಂಗಡಿ: ಒಂದು ವರ್ಷದ ಹಿಂದೆ ನಿಧಿಯ ವ್ಯವಹಾರದ ಮೋಸಕ್ಕೆ ಬಲಿಯಾಗಿ ತುಮಕೂರಿನಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೊಳಗಾಗಿದ್ದ ಸಾಹುಲ್ ಹಮೀದ್ ಉಜಿರೆ ರವರ ಕುಟುಂಬಕ್ಕೆ ಎಸ್ಡಿಪಿಐ ಬೆಳ್ತಂಗಡಿ ಮತ್ತು ಕುಟುಂಬದ ದಾನಿಗಳ ಸಹಾಯದಿಂದ ನಿರ್ಮಿಸಿರುವ ಮನೆಯನ್ನು ಇಂದು ಹಸ್ತಾಂತರಿಸಲಾಯಿತು.

ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು, ಸ್ಥಳೀಯ ಮಸೀದಿ ಖತೀಬರಾದ ಖಾದರ್ ಹಿಕಾಮಿ, ಮಸೀದಿ ಅಧ್ಯಕ್ಷರಾದ ಹುಸೈನ್ ತಂಙಳ್, ಇಂಜಿನಿಯರ್ ಹಮೀದ್, ಕ್ಷೇತ್ರ ಸಮಿತಿ ಅಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ, ಜಿಲ್ಲಾ ಕಾರ್ಯದರ್ಶಿಗಳಾದ ನವಾಝ್ ಕಟ್ಟೆ, ಅಶ್ರಫ್ ತಲಪಾಡಿ, ಉಜಿರೆ ಬ್ಲಾಕ್ ಸಮಿತಿ ಅಧ್ಯಕ್ಷರಾದ ಮಹಮ್ಮದ್ ಅಲಿ ಕುಂಟಿನಿ ಮತ್ತು ಇತರರು ಉಪಸ್ಥಿತರಿದ್ದರು.

Comments

Leave a Reply

Your email address will not be published. Required fields are marked *