ಕಾರ್ಕಳ: ಅಕ್ರಮ ಮರಳು ಸಾಗಾಟ ಪ್ರಕರಣ; ಮೂವರು ವಶಕ್ಕೆ

ಕಾರ್ಕಳ, ಮೇ 14, 2025: ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಮುಂಡ್ಕೂರು ಗ್ರಾಮದ ಜಾರಿಗೆಕಟ್ಟೆ ಚೆಕ್‌ಪೋಸ್ಟ್‌ನಲ್ಲಿ ದಿನಾಂಕ 13/05/2025 ರಂದು ರಾತ್ರಿ 11:30 ಗಂಟೆಗೆ ಅಕ್ರಮ ಮರಳು ಸಾಗಾಟ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪಿರ್ಯಾದಿದಾರರಾದ ಸುಂದರ್ ಪಿ.ಎಸ್.ಐ., ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ, ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರ ಮಾಹಿತಿಯಂತೆ ಕರ್ತವ್ಯದಲ್ಲಿದ್ದಾಗ ಈ ಘಟನೆ ನಡೆದಿದೆ.

ಪೊಲೀಸ್ ಸಿಬ್ಬಂದಿ ಸೋಮಶೇಖರ್ ಅವರೊಂದಿಗೆ ರೌಂಡ್ಸ್‌ನಲ್ಲಿದ್ದ ವೇಳೆ, ಪಟ್ಟೆಕ್ರಾಸ್‌ನಿಂದ ಶಿರ್ವ ಕಡೆಗೆ ಎರಡು ಟಿಪ್ಪರ್ ಲಾರಿಗಳಲ್ಲಿ (KA-19-AE-3583 ಮತ್ತು KA-05-AB-6460) ಅಕ್ರಮವಾಗಿ ಮರಳು ಸಾಗಿಸುತ್ತಿರುವುದನ್ನು ಪತ್ತೆಹಚ್ಚಲಾಗಿದೆ. ಈ ಟಿಪ್ಪರ್‌ಗಳ ಚಾಲಕರಾದ ಕಲ್ಲಪ್ಪ ಹಡಪದ್, ಫಿರೋಜ್ ಸಿರಾಜ್ ಸಾಹೇಬ್ ಹಾಗೂ ಒಂದು ಟಿಪ್ಪರ್‌ನ ಮಾಲೀಕ ಶೇಖ್ ಅಲ್ಪಾಝ್ ಅಹಮ್ಮದ್ ಇವರು ಸಂಘಟಿತವಾಗಿ, ಸಂಬಂಧಿತ ಇಲಾಖೆಯಿಂದ ಪರವಾನಗಿ ಪಡೆಯದೆ ಉಳೆಪ್ಪಾಡಿಯ ಪಟ್ಟೆಕ್ರಾಸ್‌ನಿಂದ ಅಂದಾಜು ₹16,000 ಮೌಲ್ಯದ 2½ ಯುನಿಟ್ ಮರಳನ್ನು ಕಳವು ಮಾಡಿ ಸಾಗಾಟ ಮಾಡುತ್ತಿದ್ದರು.

ಪೊಲೀಸರು ಆರೋಪಿಗಳಾದ ಕಲ್ಲಪ್ಪ ಹಡಪದ್, ಫಿರೋಜ್ ಸಿರಾಜ್ ಸಾಹೇಬ್ ಮತ್ತು ಶೇಖ್ ಅಲ್ಪಾಝ್ ಅಹಮ್ಮದ್ ಅವರನ್ನು ವಶಕ್ಕೆ ಪಡೆದಿದ್ದು, ಎರಡು ಟಿಪ್ಪರ್ ಲಾರಿಗಳು ಹಾಗೂ ಅವುಗಳಲ್ಲಿದ್ದ ಮರಳನ್ನು ಜಪ್ತಿ ಮಾಡಿದ್ದಾರೆ.

ಈ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 66/2025ರಡಿ ಕಲಂ 303(2), 112(1) R/w 3(5) ಭಾರತೀಯ ನ್ಯಾಯ ಸಂಹಿತೆ 2023, ಕಲಂ 166 R/W 192(A) IMV ಆಕ್ಟ್, ಕಲಂ 4(1-A), 21(4) Mines and Minerals Regulation Act 1957 ರಂತೆ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *