ಮೇ 20 ರಂದು ಉಡುಪಿಯಲ್ಲಿ “ತಿರಂಗ ಯಾತ್ರೆ”

ಉಡುಪಿ: ರಾಷ್ಟ್ರ ರಕ್ಷಣಾ ಸಮಿತಿ ವತಿಯಿಂದ ಮೇ 20ರಂದು ತಿರಂಗ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿರಂಗ ಯಾತ್ರೆಯ ಸಂಘಟಕ ಕೇಶವ್ ಮಲ್ಪೆ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅಂದು ಸಂಜೆ 4ಗಂಟೆಗೆ ನಗರದ ಜೋಡುಕಟ್ಟೆಯಲ್ಲಿ ಯಾತ್ರಗೆ ಚಾಲನೆ ನೀಡಲಾಗುವುದು. ಅಲ್ಲಿಂದ ಆರಂಭಗೊಂಡ ಯಾತ್ರೆ ಕೋರ್ಟ್ ರಸ್ತೆ, ಡಯಾನ ಸರ್ಕಲ್, ಅಲಂಕಾರ್ ಮಾರ್ಗವಾಗಿ ಸಾಗಿಬಂದು ಕ್ಲಾಕ್ ಟವರ್ ನಲ್ಲಿ ಮುಕ್ತಾಯಗೊಳ್ಳಲಿದೆ ಎಂದರು.

ಪೆಹಲ್ಗಾಮ್ ದಾಳಿಯನ್ನು ಖಂಡಿಸಿ ಉಗ್ರ ಚಟುವಟಿಕೆಯ ವಿರುದ್ಧ ಹೋರಾಡಲು ಭಾರತೀಯರು ಒಗ್ಗಟ್ಟಾಗಬೇಕೆಂಬ ಉದ್ದೇಶದೊಂದಿಗೆ ಹಾಗೂ ಸಿಂಧೂರ್ ಆಪರೇಷನ್ ವಿಜಯೋತ್ಸವದ ಅಂಗವಾಗಿ ಈ ತಿರಂಗ ಯಾತ್ರೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಡಾ. ಸುಕನ್ಯಾ ಮೇರಿ, ರಾಹುಲ್ ಇದ್ದರು.

Comments

Leave a Reply

Your email address will not be published. Required fields are marked *