ಮಂಗಳೂರಿನ ಸಫ್ವಾನ್ ಜುನೈದ್‌ಗೆ ಸೌದಿ ರಾಜರಿಂದ ಹಜ್ ಯಾತ್ರೆಗೆ ಆಹ್ವಾನ

ಮಂಗಳೂರು, ಮೇ 24, 2025: ಮಂಗಳೂರಿನ ಪಾಂಡೇಶ್ವರ ನಿವಾಸಿ ಸಫ್ವಾನ್ ಜುನೈದ್ ಅವರು ಪವಿತ್ರ ಮಕ್ಕಾ ಮತ್ತು ಮದೀನಾ ಮಸೀದಿಗಳ ಪಾಲಕರಾದ ಸೌದಿ ಅರೇಬಿಯಾದ ರಾಜರ ಅತಿಥಿಯಾಗಿ ಪವಿತ್ರ ಹಜ್ ಯಾತ್ರೆಗೆ ಆಹ್ವಾನಿತರಾಗಿದ್ದಾರೆ.

ಸೌದಿ ರಾಯಭಾರ ಕಚೇರಿಯು ವಿಶ್ವದ ವಿವಿಧ ದೇಶಗಳಿಂದ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳನ್ನು ಹಜ್ ಯಾತ್ರೆಗಾಗಿ ಆಯ್ಕೆ ಮಾಡುತ್ತದೆ. ಇದನ್ನು ಸೌದಿ ಅರೇಬಿಯಾದ ಧಾರ್ಮಿಕ ವ್ಯವಹಾರಗಳ ಸಚಿವಾಲಯವು ಸಂಯೋಜಿಸುತ್ತದೆ. ಈ ಅತಿಥಿಗಳ ಹಜ್ ಪ್ರಯಾಣದ ಸಂಪೂರ್ಣ ವೆಚ್ಚವನ್ನು ಸೌದಿ ರಾಜರು ಭರಿಸುತ್ತಾರೆ. ಇವರಿಗೆ ಸೌದಿಯ ಪ್ರಮುಖ ನಾಯಕರನ್ನು ಭೇಟಿ ಮಾಡುವ ಅವಕಾಶವೂ ಇರುತ್ತದೆ. ಸಫ್ವಾನ್ ಜುನೈದ್ ಅವರ ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಗಳನ್ನು ಗಮನಿಸಿ ಈ ಆಹ್ವಾನ ನೀಡಲಾಗಿದೆ ಎಂದು ತಿಳಿದುಬಂದಿದೆ.

ಈ ವರ್ಷ ಸೌದಿ ರಾಜರ ಅತಿಥಿಗಳಾಗಿ ವಿಶ್ವದ ವಿವಿಧ ಭಾಗಗಳಿಂದ 1300ಕ್ಕೂ ಹೆಚ್ಚು ಮಂದಿ ಹಜ್ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇವರಲ್ಲಿ ಭಾರತದಿಂದ 30 ಮಂದಿಗೆ ಈ ಅವಕಾಶ ದೊರೆತಿದ್ದು, ಮಂಗಳೂರಿನ ಸಫ್ವಾನ್ ಜುನೈದ್ ಕೂಡ ಅವರಲ್ಲಿ ಒಬ್ಬರಾಗಿದ್ದಾರೆ. ಈ ಅತಿಥಿಗಳು ಮೇ 27 ರಂದು ಹೊಸದಿಲ್ಲಿಯ ಸೌದಿ ರಾಯಭಾರ ಕಚೇರಿಗೆ ಭೇಟಿ ನೀಡಲಿದ್ದಾರೆ. ತದನಂತರ ಮೇ 28 ರಂದು ಹೊಸದಿಲ್ಲಿಯಿಂದ ಅವರ ಹಜ್ ಯಾತ್ರೆ ಪ್ರಾರಂಭವಾಗಲಿದೆ.

Comments

Leave a Reply

Your email address will not be published. Required fields are marked *