ಕರ್ನಾಟಕ ಸರ್ಕಾರದ ಅರಿವು ವಿದ್ಯಾ ಸಾಲ ಯೋಜನೆ: CET/NEET ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲ

ಬೆಂಗಳೂರು, ಮೇ 27, 2025: ಕರ್ನಾಟಕ ರಾಜ್ಯ ಸರ್ಕಾರದ ಅರಿವು ವಿದ್ಯಾ ಸಾಲ ಯೋಜನೆಯಡಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮೂಲಕ CET/NEET ಮೂಲಕ ಸರ್ಕಾರಿ ಕೋಟಾದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಶಿಕ್ಷಣ ಸಾಲವನ್ನು ಒದಗಿಸಲಾಗುತ್ತದೆ. ಈ ಯೋಜನೆಯ ಪ್ರಮುಖ ಅಂಶಗಳು ಈ ಕೆಳಗಿನಂತಿವೆ:

ಯೋಗ್ಯತಾ ಅಂಶಗಳು:

  • ಕುಟುಂಬದ ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ ರೂ. 8 ಲಕ್ಷಕ್ಕಿಂತ ಕಡಿಮೆ ಇರಬೇಕು.
  • ವಿದ್ಯಾರ್ಥಿಯು CET/NEET ಮೂಲಕ ಸರ್ಕಾರಿ ಕೋಟಾದಲ್ಲಿ ಆಯ್ಕೆಯಾಗಿರಬೇಕು.
  • ಕ್ರೈಸ್ತರನ್ನು ಹೊರತುಪಡಿಸಿ, ಇತರ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಕನಿಷ್ಠ 60% ಅಂಕಗಳನ್ನು ಪಡೆದಿರಬೇಕು.

ಸಾಲದ ಮೊತ್ತ (ಗರಿಷ್ಠ ಮಿತಿ):

ಕೋರ್ಸ್ಗರಿಷ್ಠ ಸಾಲದ ಮೊತ್ತ (ರೂ)
MBBS, MD, MS₹5,00,000
BDS, MDS₹1,00,000
BAMS, BHMS, BNYS, BUMS₹50,000
BE, B.Tech, M.Tech, B.Arch, M.Arch₹50,000
MBA, MCA, LLB₹50,000
B.Sc. (Agriculture, Horticulture, etc.)₹50,000
Pharmacy (B.Pharma, M.Pharma, D.Pharma, Pharma.D)₹50,000

ಅಗತ್ಯ ದಾಖಲೆಗಳು:

  1. ಜಾತಿ/ಅಲ್ಪಸಂಖ್ಯಾತ ಪ್ರಮಾಣಪತ್ರ
  2. ಆದಾಯ ಪ್ರಮಾಣಪತ್ರ
  3. ಆಧಾರ್ ಕಾರ್ಡ್ ಪ್ರತಿ
  4. CET ಪ್ರವೇಶ ಪತ್ರ
  5. NEET ಪ್ರವೇಶ ಪತ್ರ
  6. SSLC/10ನೇ ತರಗತಿಯ ಅಂಕಪಟ್ಟಿ
  7. PUC/ಡಿಪ್ಲೋಮಾ ಅಂಕಪಟ್ಟಿ
  8. ಇಂಡೆಮ್ನಿಟೀ ಬಾಂಡ್ (Indemnity Bond)
  9. ವಿದ್ಯಾರ್ಥಿಯ ಸ್ವಯಂ ಘೋಷಣೆ ಪತ್ರ
  10. ಪೋಷಕರ ಸ್ವಯಂ ಘೋಷಣೆ ಪತ್ರ

ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: ಮೇ 31, 2025

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

  • ☎️ 6363604332 – NNO Mangalore Community Centre
  • ☎️ 7259204123 – NNO Kundapura Community Centre
  • ☎️ 9945167801 – NNO Karkala Community Centre
  • ನಮ್ಮ ನಾಡ ಒಕ್ಕೂಟ ಕಾರ್ಕಳ ಪ್ರಕಟಣೆ

Comments

Leave a Reply

Your email address will not be published. Required fields are marked *