ಭಟ್ಕಳ, ಮೇ 28, 2025: ಕಾಯ್ಕಿಣಿ ಪಂಚಾಯತ್ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯನ್ನು ದಾಟುತ್ತಿದ್ದ ವೃದ್ಧೆಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡ ಘಟನೆ ಇಂದು ನಡೆದಿದೆ.
ಗಾಯಗೊಂಡವರು ಮುರ್ಡೇಶ್ವರದ ಕಾಯ್ಕಿಣಿಯ ಬಸ್ತಿ ಮಾಳುಗದ್ದೆಯ ನಿವಾಸಿ ರಾಜೀವಿ ಜನಾರ್ಧನ ನಾಯ್ಕ (75). ಇವರ ತಲೆಯ ಹಿಂಭಾಗ ಮತ್ತು ಕೈಗೆ ಗಂಭೀರ ಗಾಯಗಳಾಗಿವೆ. ಮುರ್ಡೇಶ್ವರದಿಂದ ಭಟ್ಕಳ ಕಡೆಗೆ ವೇಗವಾಗಿ ಬರುತ್ತಿದ್ದ ಬಸ್ ವೃದ್ಧೆಗೆ ಡಿಕ್ಕಿ ಹೊಡೆದಿದೆ. ಬಸ್ನ ಚಾಲಕ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಹನುಮಂತ ಕೆಂಚಪ್ಪ ಕಡಪಟ್ಟಿ (39) ವಿರುದ್ಧ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೃದ್ಧೆಯ ಪುತ್ರ ರಜನೀಕಾಂತ, ಮುರ್ಡೇಶ್ವರದ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಅಟೆಂಡರ್ ಆಗಿದ್ದು, ಈ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದಾರೆ.
Leave a Reply