ಮಂಗಳೂರು, ಮೇ 30, 2025: ಮಂಗಳೂರು ತೋಟ ಬೆಂಗ್ರೆ ಅಳಿವೆ ಬಾಗಿಲು ಸಮೀಪದಲ್ಲಿ ನಾಡ ದೋಣಿ ಮಗುಚಿ ಬಿದ್ದು ಇಬ್ಬರು ನೀರುಪಾಲಾದ ದುರಂತ ಘಟನೆ ಶುಕ್ರವಾರ, ಮೇ 30ರಂದು ನಡೆದಿದೆ.
ತೋಟ ಬೆಂಗ್ರೆ ಸಮೀಪದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ ದೋಣಿಯೊಂದು ಜೋರಾದ ಮಳೆ ಮತ್ತು ಗಾಳಿಯ ರಭಸಕ್ಕೆ ಮಗುಚಿ ಬಿದ್ದಿದೆ. ಈ ಘಟನೆಯಲ್ಲಿ ದೋಣಿಯಲ್ಲಿದ್ದ ಯಶವಂತ ಮತ್ತು ಕಮಲಾಕ್ಷ ಎಂಬ ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ನಂತರ, ದೋಣಿಯ ಪೆಟ್ರೋಲ್ ಟ್ಯಾಂಕ್ ತೋಟ ಬೆಂಗ್ರೆ ದಡಕ್ಕೆ ತೇಲಿಬಂದು ಬಿದ್ದಿದೆ. ಆದರೆ, ನಾಡ ದೋಣಿಯು ಇನ್ನೂ ಪತ್ತೆಯಾಗಿಲ್ಲ. ಸ್ಥಳೀಯ ಗ್ರಾಮಸ್ಥರು ನಾಪತ್ತೆಯಾದ ದೋಣಿ ಮತ್ತು ವ್ಯಕ್ತಿಗಳಿಗಾಗಿ ಹುಡುಕಾಟ ಕಾರ್ಯ ಆರಂಭಿಸಿದ್ದಾರೆ.
Leave a Reply