ವಿಜಯಪುರ: ಕೆನರಾ ಬ್ಯಾಂಕ್ ನ ಸೇಫ್ ಲಾಕರ್ ಗೆ ಕನ್ನ ಹಾಕಿ ಸುಮಾರು 53.31 ಕೋಟಿ ರೂ ಮೌಲ್ಯದ ಚಿನ್ನಾಭರಣ ಮತ್ತು 5.20 ಲಕ್ಷ ರೂ. ನಗದು ಕಳ್ಳತನ ಮಾಡಿರುವ ಘಟನೆ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ಶಾಖೆಯಲ್ಲಿ ಮೇ.24ರ ಶನಿವಾರದಂದು ನಡೆದಿದೆ.
ಮೇ. ತಿಂಗಳಿನ ನಾಲ್ಕನೇ ವಾರದಲ್ಲಿ ಈ ಕಳ್ಳತನ ನಡೆದಿದ್ದು, ಈ ಬಗ್ಗೆ ಮೇ.26ರಂದು ಬ್ಯಾಂಕ್ ನ ಹಿರಿಯ ಮ್ಯಾನೇಜರ್ ದೂರು ದಾಖಲಿಸಿದ್ದರು. ತನಿಖೆಗೆ ಎಂಟು ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಕಳ್ಳತನ ನಡೆದ ಬಳಿಕ ಕಳವಾದ ಚಿನ್ನಾಭರಣ ಹಾಗೂ ನಗದಿನ ಅಂಕಿ-ಅಂಶಗಳ ಮೊತ್ತವನ್ನು ಪೊಲೀಸ್ ಇಲಾಖೆ ಸೋಮವಾರ ಬಹಿರಂಗ ಪಡಿಸಿದ್ದಾರೆ.
Leave a Reply