ಚಾಮರಾಜನಗರ: ಸರ್ಕಾರಿ ಶಾಲೆಯೊಂದರಲ್ಲಿ ಬಿಸಿಯೂಟ ಬಡಿಸಲು ದಲಿತ ಮಹಿಳೆಯನ್ನು ನೇಮಿಕ ಮಾಡಿದ ಕಾರಣ ಶಾಲೆ ಬಿಟ್ಟ ಮಕ್ಕಳು, ಈ ಘಟನೆ ಚಾಮರಾಜನಗರ ತಾಲೂಕಿನ ಹೊಮ್ಮ ಗ್ರಾಮದಲ್ಲಿ ನಡೆದಿದೆ.
ಚಾಮರಾಜನಗರ ತಾಲೂಕಿನ ಹೊಮ್ಮ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಬಡಿಸಲು ದಲಿತ ಮಹಿಳೆಯನ್ನು ನೇಮಕ ಮಾಡಿಕೊಂಡಿರುವುದಕ್ಕೆ ಪೋಷಕರು ತಮ್ಮ ಮಕ್ಕಳನ್ನು ಶಾಲೆಯಿಂದ ಬಿಡಿಸಿದ್ದಾರೆ. ಈ ಶಾಲೆಯಲ್ಲಿ 22 ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದರು, ಆದರೆ ದಲಿತ ಮಹಿಳೆಯನ್ನು ನೇಮಕ ಮಾಡಿದ ನಂತರ 22 ಮಕ್ಕಳಲ್ಲಿ 21 ಮಕ್ಕಳು ಶಾಲೆಯನ್ನ ಬಿಟ್ಟಿದ್ದಾರೆ, ಕೇವಲ ಒಬ್ಬ ವಿದ್ಯಾರ್ಥಿ ಮಾತ್ರ ಪಾಠ ಪ್ರವಚನಕ್ಕೆ ತೆರಳುತ್ತಿದ್ದಾನೆ.
22 ಮಕ್ಕಳಲ್ಲಿ 12 ಮಕ್ಕಳು ಟಿಸಿ ಯನ್ನು ಪಡೆದುಕೊಂಡು ಹೋಗಿದ್ದಾರೆ, ಇನ್ನು 9 ಮಕ್ಕಳು ಟಿಸಿ ಗೆ ಹರ್ಜಿಯನ್ನು ಸಲ್ಲಿಸಿದ್ದಾರೆ. ಈ ಘಟನೆಯಿಂದ ದಲಿತ ಮಹಿಳೆ ಬೇಸರಗೊಂಡಿದ್ದಾರೆ.
Leave a Reply