ಉಡುಪಿ: ಹಣ್ಣು ಹಂಪಲಿನ ಗಿಡಗಳ ಉಚಿತ ವಿತರಣೆ ಕಾರ್ಯಕ್ರಮ

ಉಡುಪಿ, ಜುಲೈ 12, 2025: ಪ್ರಿ ಓನ್ಡ್‌ ವೆಹಿಕಲ್‌ ಅಸೋಸಿಯೇಷನ್‌ ಉಡುಪಿ ಇದರ ವತಿಯಿಂದ ಒಂದು ಸಾವಿರಕ್ಕೂ ಮಿಕ್ಕಿ ಹಣ್ಣು ಹಂಪಲಿನ ಗಿಡಗಳ ಉಚಿತ ವಿತರಣೆ ಮತ್ತು ನೆಡುವ ಕಾರ್ಯಕ್ರಮ ಶನಿವಾರ ಉಡುಪಿ ಭುಜಂಗ ಪಾರ್ಕ್‌ ನ ಬಯಲು ರಂಗಮಂಟಪದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ನಗರ ಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಈಗ ಎಲ್ಲಿ ನೋಡಿದರು ಬಿಲ್ಡಿಂಗ್‌ ಗಳು ತಲೆ ಎತ್ತಿ ನಿಂತಿದ್ದು, ಮಳೆ ನೀರು ಇಂಗುವ ಸ್ಥಳಗಳೇ ಇಲ್ಲದೇ ಮಳೆ ನೀರು ಸಮುದ್ರವನ್ನು ಸೇರುತ್ತಿದೆ. ಗಿಡ ನೆಡುವುದರಿಂದ ನೀರಿನ ಜಲಮಟ್ಟವನ್ನು ಏರಿಸಬಹುದು. ನಗರದಲ್ಲಿ ಮರಗಳ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆ ಇಂದಿನ ದಿನಮಾನದಲ್ಲಿ ಉಷ್ಣತೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆ ನಗರದ 35 ವಾರ್ಡಿನಲ್ಲಿ ಪಾರ್ಕ್‌ ಗಳ ಸಂಖ್ಯೆ ಹೆಚ್ಚಿಸುವುದು ನಮ್ಮ ಪ್ರಥಮ ಆದ್ಯತೆ ಎಂದರು.

ಇಂತಹ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಶ್ಲಾಘನೀಯ, ನಿರಂತರವಾಗಿ ಇದನ್ನು ಮುಂದುವರಿಸಿ, ಇದನ್ನು ಇಡೀ ಜಿಲ್ಲೆಗೆ ವಿಸ್ತರಿಸಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಲ್.ಪಿ.ನಾಯಕ್, ವಲಯ ಅರಣ್ಯಧಿಕಾರಿ ವನಜಾಕ್ಷಿ, ನಗರಸಭಾ ಸದಸ್ಯರಾದ ಮಂಜುನಾಥ್ ಮಣಿಪಾಲ, ರಶ್ಮಿ ಭಟ್, ಡಾ.ಪ್ರಕಾಶ್ ಭಟ್, ಐರೋಡಿ ಅನಂತ ಪೈ. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಮೊಹಮ್ಮದ್ ಅಶ್ರಫ್ ವಹಿಸಿದ್ದರು, ಉದಯ್ ಕಿರಣ್ ಸ್ವಾಗತಿಸಿದರು.

Comments

Leave a Reply

Your email address will not be published. Required fields are marked *