ಉಡುಪಿ ಜು.13 ಕಳೆದ ಕೆಲವು ದಿನಗಳ ಹಿಂದೆ ಮಿತ್ರ ಆಸ್ಪತ್ರೆ ಬಳಿ ಸಾರ್ವಜನಿಕರ ಮನೆಗಳಿಗೆ ಬೆಳಗಿನ ಜಾವ ಆಗಮಿಸಿ ಭಯದ ವಾತಾವರಣ ಸೃಷ್ಟಿಸಿದ್ದ ಅಪರಿಚಿತ ಮಾನಸಿಕ ಯುವಕನನ್ನು ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ , ಬಾಳಿಗ ಆಸ್ಪತ್ರೆಗೆ ದಾಖಲಿಸಿದ್ದು ಇದೀಗ ಯುವಕನ ಕುಟುಂಬ ಪತ್ತೆಯಾಗಿದ್ದು ಹಸ್ತಾಂತರಿಸಲಾಗಿದೆ.
12 ವರ್ಷದ ಹಿಂದೆಯೇ ಮನೆ ಬಿಟ್ಟು ಹೋದ ನವಲಗುಂದ ಮೂಲದ ಸುಧಾಕರ ಪವಾರ್ (33) ರಕ್ಷಿಸಲ್ಪಟ್ಟ ಮಾನಸಿಕ ಯುವಕ. ಇದೀಗ ಕುಟುಂಬಕ್ಕೆ ಮಾಹಿತಿ ಲಭಿಸಿದ್ದು ಸಹೋದರ ಶ್ರೀನಿವಾಸ್ ಉಡುಪಿಗೆ ಬಂದಿದ್ದಾರೆ. ಬಾಳಿಗಾ ಆಸ್ಪತ್ರೆಯಲ್ಲಿ ವೈದ್ಯರು ರೋಗಿಯ ಬಗ್ಗೆ ಮಾಹಿತಿ ಹಾಗೂ ಮುಂದಿನ ಚಿಕಿತ್ಸೆಯ ಬಗ್ಗೆ ಸಹೋದರನಿಗೆ ತಿಳಿಸಿದ್ದಾರೆ. ಚಿಕಿತ್ಸೆಗೆ ಯುವಕ ಸ್ಪಂದಿಸಿದ್ದು ಸಹಜ ಸ್ಥಿತಿಗೆ ಬಂದಿದ್ದಾನೆ.
ಸುಧಾಕರ್ ಪವಾರ್ ನನ್ನು ಸಹೋದರನ ವಶಕ್ಕೆ ನೀಡುವಾಗ 12 ವರ್ಷಗಳೇ ಕಳೆದು ಹೋಗಿದೆ ಈತ ಮನೆ ತೊರೆದು ಮನೆಗೆ ಕರೆದುಕೊಂಡು ಹೋಗುತ್ತೇನೆ, ಸಹಕರಿಸಿದ ವಿಶು ಶೆಟ್ಟಿ ಹಾಗೂ ಚಿಕಿತ್ಸೆ ನೀಡಿದ ಆಸ್ಪತ್ರೆಯ ವೈದ್ಯಾಧಿಕಾರಿಗೆ ಧನ್ಯವಾದ ತಿಳಿಸಿದ್ದಾರೆ.
ತೀರಾ ಬಡತನದ ಕುಟುಂಬದವರಾದ ಇವರು ಆಸ್ಪತ್ರೆಯ ಚಿಕಿತ್ಸಾ ವೆಚ್ಚ ರೂ.15,500/- ಭರಿಸಲು ಅಸಹಾಯಕತೆ ತೋರಿಸಿದಾಗ ಚಿಕಿತ್ಸಾ ವೆಚ್ಚವನ್ನು ವಿಶು ಶೆಟ್ಟಿಯವರು ಭರಿಸಿ ಸಹಕರಿಸಿದರು.
Leave a Reply