ಮಳೆಯ ನಡುವೆ ಹೊರಟಿದ್ದರು ದೋಣಿಯಲಿ,
ನಾಲ್ಕು ಜೀವಗಳು, ನಾಲ್ಕು ಕನಸುಗಳು…
ಒಬ್ಬನು ದಡ ಸೇರಿದ,
ಮೂವರು ಮರಳಿ ಬರಲಿಲ್ಲ…
ಅಮ್ಮನ ಕಣ್ಣಿಗೆ ನಿದ್ರೆ ಬಂದಿಲ್ಲ,
ಬಾಗಿಲು ಇನ್ನೂ ತೆರೆದೇ ಇದೆ,ಮಕ್ಕಳ ಪ್ರಶ್ನೆಗಳಿಗೆ ಉತ್ತರವೇ ಇಲ್ಲ,
ಪತ್ನಿಯ ಹೃದಯದಲ್ಲಿ ಪಾಳುಬಿದ್ದ ಆಸೆ –
ಹೌದು, ಈ ಬಾರಿ ಮರಳಿ ಬರಲಿಲ್ಲ…
ಆ ದೋಣಿ ಕೇವಲ ಕಡಲಲ್ಲಿ ಅಲ್ಲ,
ಒಂದು ಊರಿನ ನಂಬಿಕೆಯಲ್ಲಿ ಮುಳುಗಿತು.
ಅವರ ಕುಟುಂಬದ ಭರವಸೆಯೂ ಮುಳುಗಿತು.
ಅವರು ಹೋದರು…
ಹೃದಯಗಳಲ್ಲಿ ನೆನೆಪಾಗಿ ಉಳಿದರು.
ಕಣ್ಣೀರು ಮಾತ್ರ ದಡ ಸೇರುವಂತೆ ಹರಿದವು,
ಆದರೆ ಅವರು ಮರಳಿ ಬರಲಿಲ್ಲ…
- ಅನಾಮಿಕ ಗಂಗೊಳ್ಳಿ
Leave a Reply