ಗಂಗೊಳ್ಳಿ: ದಿನಾಂಕ 12/12/2016 ರಂದು ರಾಘವ ಎಸ್ ಪಡೀಲ್, ಪೊಲೀಸ್ ವೃತ್ತ ನಿರೀಕ್ಷಕರು, ಬೈಂದೂರು ವೃತ್ತ ಇವರು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಗುಜ್ಜಾಡಿ ಗ್ರಾಮದ ಗುಜ್ಜಾಡಿ ಬಸ್ ನಿಲ್ದಾಣದ ಗೂಡಂಗಡಿ ಬಳಿ 10:30 ಗಂಟೆಗೆ ಸಾರ್ವಜನಿಕವಾಗಿ ಮಟ್ಕಾಜುಗಾರಿ ಚೀಟಿ ಬರೆಯುತ್ತಿದ್ದ ಲಕ್ಷ್ಮಣ ಪೂಜಾರಿ (49), ತಂದೆ: ಕುಪ್ಪಯ್ಯ ಪೂಜಾರಿ, ವಾಸ: ದಾಕುಹಿತ್ಲು, ಗಂಗೊಳ್ಳಿ ಗ್ರಾಮ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ ಎಂಬುವವರನ್ನು ವಶಕ್ಕೆ ಪಡೆದು, ಮಟ್ಟಾ ಜುಗಾರಿ ಆಟದಿಂದ ಸಂಗ್ರಹಿಸಿದ ಹಣ 680/- ರೂಪಾಯಿ, ಮಟ್ಕಾ ಚೀಟಿ-1, ಬಾಲ್ ಪೆನ್ನು-1 ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 193/2016 ಕಲಂ: 78 (1) (111) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

Leave a Reply