ಮಂಗಳೂರು: ರೌಡಿ ಶೀಟರ್ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಬರ್ಬರ ಹತ್ಯೆ ಕೇಸ್ನಲ್ಲಿ ಪೊಲೀಸರು 8 ಮಂದಿಯನ್ನ ಅರೆಸ್ಟ್ ಮಾಡಿದ್ದಾರೆ. ಮಂಗಳೂರು ಪೊಲೀಸರು ಸುಹಾಸ್ ಶೆಟ್ಟಿ ಪ್ರಕರಣದ ಇಂಚಿಂಚೂ ಮಾಹಿತಿಯನ್ನು ಕಲೆ ಹಾಕಿದ್ದು, ಆರೋಪಿಗಳ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರು ಮಾಧ್ಯಮಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. 6 ಜನ ಸೇರಿ ಸುಹಾಸ್ ಶೆಟ್ಟಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಅದರಲ್ಲಿ ಪ್ರಮುಖ ಆರೋಪಿ ಸಫ್ವಾನ್.
2023ರಲ್ಲಿ ಸಫ್ವಾನ್ ಮೇಲೆ ಮಾರಣಾಂತಿಕ ಹಲ್ಲೆ ಆಗಿರುತ್ತೆ. ಪ್ರಶಾಂತ್, ಧನರಾಜ್, ಸುಹಾಸ್ ಶೆಟ್ಟಿ ಸ್ನೇಹಿತರಿಂದ ಸಫ್ವಾನ್ಗೆ ಕೊಲೆ ಮಾಡುವ ಆತಂಕ ಇತ್ತು. ಈ ಹಿನ್ನೆಲೆಯಲ್ಲಿ ಸುಹಾಸ್ ಅನ್ನು ಕೊಲೆ ಮಾಡಲು ತೀರ್ಮಾನ
ಮಾಡಿದ್ದಾರೆ.
ಆರೋಪಿ ಸಫ್ವಾನ್, ಫಾಝಿಲ್ ತಮ್ಮನನ್ನು ಸಂಪರ್ಕಿಸಿ ಕೊಲೆ ಮಾಡೋಕೆ ತೀರ್ಮಾನ ಮಾಡಿದ್ದಾರೆ. ಸುಹಾಸ್ ಕೊಲೆಗೆ 5 ಲಕ್ಷ ರೂಪಾಯಿ ಹಣವನ್ನು ಆದಿಲ್ ಸಫ್ವಾನ್ ತಂಡಕ್ಕೆ ನೀಡಿದ್ದಾರೆ. ನಿಯಾಜ್ನ ಇಬ್ಬರು ಸ್ನೇಹಿತರು ನಾಗಾರಾಜ್ ಮತ್ತು ರಂಜಿತ್ ಅನ್ನು ಸಂಪರ್ಕ ಮಾಡಿದ್ದಾರೆ. ಈ ಇಬ್ಬರು ಸಫ್ವಾನ್ ಮನೆಯಲ್ಲಿ ಎರಡು ದಿನಗಳಿಂದ ವಾಸ ಮಾಡುತ್ತಾರೆ. ಕಳೆದ ಮೇ 1ರಂದು ಚಲನವಲನಗಳನ್ನು ಗಮನಿಸಿ ಸುಹಾಸ್ ಶೆಟ್ಟಿಯನ್ನ ಕೊಲೆ ಮಾಡಿದ್ದಾರೆ.
8 ಮಂದಿ ಆರೋಪಿಗಳು ಯಾರು?
ಸುಹಾಸ್ ಶೆಟ್ಟಿ ಕೇಸ್ನಲ್ಲಿ ಮೊದಲ ಆರೋಪಿ ಅಬ್ದುಲ್ ಸಫ್ವಾನ್, ನಿಯಾಜ್, ಮೊಹಮ್ಮದ್ ಮುಝಮಿಲ್, ಕಲಂದರ್ ಶಾಫಿ, ರಂಜಿತ್, ನಾಗರಾಜ್, ಮಹಮದ್ ರಿಜ್ವಾನ್ ಹಾಗೂ ಆದಿಲ್.
- ಅಬ್ದುಲ್ ಸಫ್ವಾನ್– 29 ವರ್ಷ ವಾಸ : ಶಾಂತಿಗುಡ್ಡೆ ಬಜಡೆ ಗ್ರಾಮ ಮಂಗಳೂರು ಕೆಲಸ : ಡ್ರೈವರ್
- ನಿಯಾಜ್ – 25 ವರ್ಷ ವಾಸ : ಶಾಂತಿಗುಡ್ಡೆ ಬಜಡೆ ಗ್ರಾಮ ಮಂಗಳೂರು
- ಮೊಹಮ್ಮದ್ ಮುಸ್ಸಾಮಿರ್ – 32 ವರ್ಷ ವಾಸ : ಶಾಂತಿಗುಡ್ಡೆ ಬಜಡೆ ಗ್ರಾಮ, ಮಂಗಳೂರು ಕೆಲಸ : ಸೌದಿ ಅರೇಬಿಯಾದಲ್ಲಿ ಸೇಲ್ಸ್ ಮ್ಯಾನ್
- ಕಲಂದರ್ ಶಾಫಿ – 29 ವರ್ಷ ತಂದೆ : ಮಹಮ್ಮದ್ ವಾಸ : ಕುರ್ಸು ಗುಡ್ಡೆ, ಬಾಳ ಗ್ರಾಮ, ಮಂಗಳೂರು ಕೆಲಸ: ಸೇಲ್ಸ್ ಮ್ಯಾನ್ ಬೆಂಗಳೂರು
- ಆದಿಲ್ ಮೆಹರೂಪ್ – 27 ವರ್ಷ ವಾಸ : ಜಾಪ್ನಾ ಮಂಜಿಲ್, ಬಾಳ ಗ್ರಾಮ, ಮಂಗಳೂರು
- ನಾಗರಾಜ್ – 20 ವರ್ಷ ವಾಸ: ಕೋಟೆ ಹೊಳೆ, ಮಾವಿನಕೆರೆ ಗ್ರಾಮ ಚಿಕ್ಕಮಂಗಳೂರು ಜಿಲ್ಲೆ ಕೆಲಸ: ಶಾಮಿಯಾನ ಅಂಗಡಿಯಲ್ಲಿ ಕೆಲಸ
- ಮೊಹಮದ್ ರಿಜ್ವಾನ್ – 28 ವರ್ಷ ವಾಸ: ಜೋಕಟ್ಟೆ, ತೋಕುರು ಗ್ರಾಮ, ಮಂಗಳೂರು
- ರಂಜಿತ್ ವಾಸ: ರುದ್ರ ಪಾದ, ಕಳಸ, ಚಿಕ್ಕಮಂಗಳೂರು ಕೆಲಸ: ಡ್ರೈವಿಂಗ್
Leave a Reply