ಮಂಗಳೂರು : ಕಾವೂರು ಹಲ್ಲೆ ಪ್ರಕರಣ – ನಾಲ್ವರ ಬಂಧನ

ಮಂಗಳೂರು:  ಕಾವೂರು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳ ಮೇಲೆ ಭಾರತೀಯ ನೀತಿ ಸಂಹಿತೆ ಪ್ರಕಾರ 189(2), 191(2), 115(2), 118(1), 352, 351(2) ಆರ್/ಡಬ್ಲ್ಯೂ ಸೆಕ್ಷನ್ 190ರ ಅಡಿಯಲ್ಲಿ ದೂರು ದಾಖಲಿಸಲಾಗಿದೆ.

ಬಂಧಿತ ಆರೋಪಿಗಳನ್ನು ಬಜ್ಪೆಯ ಲಿಖಿತ್(29), ಕುತ್ತಾರ್‌ನ ರಾಕೇಶ್(34),ಸುರತ್ಕಲ್‌ನ ಧನರಾಜ್ ಅಲಿಯಾಸ್ ಧನು, ಮೂಡುಬಿದಿರೆಯ ಪ್ರಶಾಂತ್ ಶೆಟ್ಟಿ (26) ಎಂದು ಗುರುತಿಸಲಾಗಿದೆ.

ಎಲ್ಲಾ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

Comments

Leave a Reply

Your email address will not be published. Required fields are marked *