ಉಡುಪಿಯ ಎಸ್‌ಪಿ ಡಾ. ಅರುಣ್ ಕೆ ಸೇರಿದಂತೆ ನಾಲ್ವರು ಡಿಜಿ, ಐಜಿಪಿ ಶ್ಲಾಘನಾ ಪದಕಕ್ಕೆ ಆಯ್ಕೆ

ಉಡುಪಿ, ಮೇ 19: ರಾಜ್ಯದಲ್ಲಿ ಮೊದಲ ಬಾರಿಗೆ 2024-25ನೇ ಸಾಲಿನ ‘ಡಿಜಿ ಮತ್ತು ಐಜಿಪಿ ಶ್ಲಾಘನಾ ಪದಕ’ ಪ್ರದಾನಕ್ಕೆ ಘೋಷಣೆಯಾಗಿದೆ.

ಉಡುಪಿ ಜಿಲ್ಲೆಯ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ ಸೇರಿದಂತೆ ಜಿಲ್ಲೆಯ ನಾಲ್ವರು ಪೊಲೀಸ್ ಸಿಬ್ಬಂದಿಗಳು ಈ ಪ್ರತಿಷ್ಠಿತ ಗೌರವಕ್ಕೆ ಆಯ್ಕೆಯಾಗಿದ್ದಾರೆ.

ಇತರ ಪ್ರಶಸ್ತಿ ವಿಜೇತರು ಮಾಲ್ಪೆ ಕರಾವಳಿ ಭದ್ರತಾ ಪೊಲೀಸ್ ಠಾಣೆಯ ಉಪನಿರೀಕ್ಷಕ ವೈಲೆಟ್ ಫೆಮಿನಾ, ಕುಂದಾಪುರ ಟ್ರಾಫಿಕ್ ಪೊಲೀಸ್ ಠಾಣೆಯ ಮುಖ್ಯ ಕಾನ್‌ಸ್ಟೆಬಲ್ ಗುರುದಾಸ್ ಹಾಗೂ ಉಡುಪಿ ಜಿಲ್ಲಾ ಸಾಯುಧ ಮೀಸಲು ಪಡೆಯ ಸಾಯುಧ ಮೀಸಲು ಮುಖ್ಯ ಕಾನ್‌ಸ್ಟೆಬಲ್ ಸಂತೋಷ್ ಅವರಾಗಿದ್ದಾರೆ.

ಪದಕ ಪ್ರದಾನ ಸಮಾರಂಭವು ಮೇ 21ರಂದು ಬೆಂಗಳೂರಿನಲ್ಲಿ ನಡೆಯಲಿದೆ.

Comments

Leave a Reply

Your email address will not be published. Required fields are marked *