ಬ್ರಹ್ಮಾವರ: ಜಾಗದ ವಿವಾದ; ಹಲ್ಲೆ, ಕೊಲೆ ಬೆದರಿಕೆ

ಬ್ರಹ್ಮಾವರ, ಮೇ 20, 2025: ಹೆಗ್ಗುಂಜೆ ಗ್ರಾಮದ ವಸಂತ (33) ಮತ್ತು ಅವರ ಅಣ್ಣ ಸುಧಾಕರ ಅವರ ‘ಕುಂಕಿ’ ಜಾಗಕ್ಕೆ ಸಂಬಂಧಿಸಿದಂತೆ 3 ದಿನಗಳ ಹಿಂದೆ ಧರೆ ಹಾಕಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ದಿನಾಂಕ 19-05-2025ರ ಬೆಳಿಗ್ಗೆ 8:45 ಗಂಟೆಗೆ ವಸಂತ ಮತ್ತು ಸುಧಾಕರ ಜಾಗದ ಪಕ್ಕದಲ್ಲಿ ಮೋಟಾರ್‌ಸೈಕಲ್ ನಿಲ್ಲಿಸುವ ಸ್ಥಳದಲ್ಲಿ ಇದ್ದಾಗ, ಆರೋಪಿಗಳಾದ ಸಂಜು, ಭರತ, ಕಾರ್ತಿಕ್, ಸಂತೋಷ, ಚೈತ್ರಾ, ಲಕ್ಷ್ಮೀ, ಜ್ಯೋತಿ, ದಿವ್ಯಾ ಮತ್ತು ಕಾವ್ಯಾ ತಕರಾರು ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಆರೋಪಿ ಭರತ ವಸಂತ ಅವರನ್ನು ಚರಂಡಿಗೆ ದೂಡಿದ್ದು, ಚೈತ್ರಾ ಸುಧಾಕರ ಅವರ ಕುತ್ತಿಗೆ ಹಿಡಿದಿದ್ದಾಳೆ. ಭರತ ಕೈಯಿಂದ ವಸಂತ ಮತ್ತು ಸುಧಾಕರ ಅವರ ಮುಖಕ್ಕೆ ಗುದ್ದಿದ್ದಾನೆ. ಸಂಜು ಮರದ ದೊಣ್ಣೆಯಿಂದ ಸುಧಾಕರ ಅವರ ಮರ್ಮಾಂಗಕ್ಕೆ ಮತ್ತು ಬೆನ್ನಿಗೆ ಹೊಡೆದಿದ್ದಾನೆ. ಸಂತೋಷ ಕೆನ್ನೆಗೆ ಹೊಡೆದಿದ್ದಾನೆ, ಕಾರ್ತಿಕ್ ಸುಧಾಕರ ಅವರನ್ನು ಕೆಳಗೆ ದೂಡಿದ್ದಾನೆ. ಆರೋಪಿಗಳೆಲ್ಲರೂ ಸೇರಿ ಸುಧಾಕರ ಅವರನ್ನು ಒತ್ತಿ ಹಿಡಿದಿದ್ದು, ಭರತ ಕೆಂಪು ಕಲ್ಲು ತಂದು “ನಿಮ್ಮ ತಲೆಗೆ ಹಾಕಿ ಜೀವಸಹಿತ ಬಿಡುವುದಿಲ್ಲ” ಎಂದು ಕೊಲೆ ಬೆದರಿಕೆ ಹಾಕಿದ್ದಾನೆ.

ಈ ಹಲ್ಲೆಯಿಂದ ವಸಂತ ಮತ್ತು ಸುಧಾಕರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 115/2025, ಕಲಂ 115(2), 118(1), 352, 351(2) ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *