ಕುಂದಾಪುರ :ಹಂಗಳೂರು ಲಯನ್ಸ್ ಕ್ಲಬ್ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ

ಕುಂದಾಪುರ :ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ 85% ಕ್ಕಿಂತ ಅಧಿಕ ಅಂಕಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಆದ ಕುಂದಾಪುರದ ಆಸುಪಾಸಿನ ಸರಕಾರಿ ಹಾಗೂ ಅನುದಾನಿತ ಏಳು ಪ್ರೌಢ ಶಾಲೆಗಳ ನೂರಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ಸುಮಾರು ಎರಡು ಲಕ್ಷ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಕುಂದಾಪುರದ ಹೊಟೇಲ್ ಶಾರೋನ್ ಸಭಾಂಗಣದಲ್ಲಿ ಲಯನ್ ರೋವನ್ ಡಿ’ ಕೋಸ್ತ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಪ್ರಥಮ ಉಪಜಿಲ್ಲಾ ರಾಜ್ಯಪಾಲೆ ಲಯನ್ ಸಪ್ನಾ ಸುರೇಶ್, ದ್ವಿತೀಯ ಉಪರಾಜ್ಯಪಾಲ ಲಯನ್ ರಾಜೀವ್ ಕೋಟ್ಯಾನ್, ಜಿಲ್ಲಾ ಶಿಕ್ಷಣ ಕೋ ಆರ್ಡಿನೇಟರ್ ಲಯನ್ ಸುಜಯ ಜತ್ತನ್ನ್, ಲಯನ್ ಉದಯಕುಮಾರ್ ಶೆಟ್ಟಿ, ಲಯನ್ ಬಾಲಕೃಷ್ಣ ಶೆಟ್ಟಿ, ಲಯನ್ ಶಂಕರ್ ಶೆಟ್ಟಿ, ಲಯನ್ ಜೋಸೆಫ್ ಮಾರ್ಟಿಸ್ ಉಪಸ್ಥಿತರಿದ್ದರು.

ವಲಯಾಧ್ಯಕ್ಷ ಲಯನ್ ಬಾಲಕೃಷ್ಣ ಶೆಟ್ಟಿ ಪ್ರಾಸ್ತಾವಿಕ. ಮಾತುಗಳನ್ನಾಡಿದರು

ಲಯನ್ ಎಲ್. ಜೆ. ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಲಯನ್ ಮ್ಯಾಥ್ಯೂ ಜೋಸೆಫ್ ವಂದಿಸಿದರು.

Comments

Leave a Reply

Your email address will not be published. Required fields are marked *