ಉಡುಪಿ: ಆರೈಕೆದಾರನಿಂದ ಹಣ ಮೋಸ; ಪ್ರಕರಣ ದಾಖಲು

ಉಡುಪಿ, ಜುಲೈ 14, 2025: ಉಡುಪಿಯ ಅಂಬಲ್ಪಾಡಿಯ ನಿವಾಸಿ ಕಾರ್ತಿಕ್ (33) ಅವರ ತಂದೆ ವಸಂತರಾಜ್ ಅವರ ಆರೋಗ್ಯ ಚಿಕಿತ್ಸೆಗಾಗಿ 2024ರ ನವೆಂಬರ್‌ ತಿಂಗಳಿಂದ 2025ರ ಮಾರ್ಚ್‌ವರೆಗೆ ಮೇಲ್ ನರ್ಸ್ ವಿನೋದ್ ಎಂಬವರನ್ನು ನೇಮಕ ಮಾಡಲಾಗಿತ್ತು. ದಿನಾಂಕ 27/02/2025ರಂದು ವಸಂತರಾಜ್ ಅವರನ್ನು ಎಸ್‌ಡಿಎಂ ಉದ್ಯಾವರ್‌ನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಆರೈಕೆಗಾಗಿ ವಿನೋದ್ ಅವರನ್ನು ನೇಮಿಸಲಾಗಿತ್ತು.

ಆರೈಕೆಯ ಸಂದರ್ಭದಲ್ಲಿ ವಿನೋದ್ ಅವರು ಕಾರ್ತಿಕ್ ಅವರ ತಂದೆಯ ಗಮನಕ್ಕೆ ತಪ್ಪಿಸಿಕೊಂಡು, ಫೋನ್-ಪೇ ಮೂಲಕ ಒಟ್ಟು ₹68,500/-ನ್ನು ಅವರ ಬ್ಯಾಂಕ್ ಖಾತೆಯಿಂದ ವರ್ಗಾವಣೆ ಮಾಡಿದ್ದಾನೆ. ಇದರ ಬಗ್ಗೆ ವಿನೋದ್‌ರನ್ನು ವಿಚಾರಿಸಿದಾಗ, ಅವರು ಹಣ ತೆಗೆದುಕೊಂಡಿದ್ದನ್ನು ಒಪ್ಪಿಕೊಂಡಿದ್ದು, ₹12,000/-ನ್ನು ಮಾತ್ರ ಹಿಂತಿರುಗಿಸಿದ್ದಾರೆ. ಉಳಿದ ₹56,500/- ರೂಪಾಯಿಯನ್ನು ಕೊಡದೆ ಮೋಸ ಮಾಡಿರುವ ಆರೋಪದಡಿ, ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 129/2025ರಡಿ, ಕಲಂ 316(2), 318(4) BNS ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *