ಉತ್ತರ ಕನ್ನಡ ಜಿಲ್ಲೆಗೆ ಎಸ್‌ಪಿ ನಾರಾಯಣ ರಿಂದ ಭಾವಪೂರ್ಣ ವಿದಾಯ

ಕಾರವಾರ, ಜುಲೈ 16, 2025: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಿಂದ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ ಎಂ. ನಾರಾಯಣ್ (ಐಪಿಎಸ್) ಅವರು ಸರ್ಕಾರದ ವರ್ಗಾವಣೆ ಆದೇಶದಂತೆ ಇಂದು ಕರ್ತವ್ಯದಿಂದ ನಿರ್ಗಮಿಸಿದ್ದಾರೆ.

ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ್ದು ತಮ್ಮ ಸೌಭಾಗ್ಯ ಎಂದು ಬಣ್ಣಿಸಿದ ಅವರು, ಕರ್ತವ್ಯ ನಿರ್ವಹಣೆಯಲ್ಲಿ ಸಹಕರಿಸಿದ ಅಧಿಕಾರಿ ಸಿಬ್ಬಂದಿ, ಮಾಧ್ಯಮ ಮಿತ್ರರು ಮತ್ತು ಪ್ರೀತಿಯ ಸಾರ್ವಜನಿಕರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ದೀಪನ್ ಎಂ.ಎನ್.

ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ದೀಪನ್ ಎಂ.ಎನ್. ಅವರಿಗೆ ಶುಭ ಹಾರೈಸಿದ ನಾರಾಯಣ, ಜಿಲ್ಲೆಯ ಜನರ ಸಹಕಾರ ಹೀಗೆ ಮುಂದುವರೆಯಲಿ ಎಂದು ಆಶಿಸಿದ್ದಾರೆ.

Comments

Leave a Reply

Your email address will not be published. Required fields are marked *