Udupi: ಪರಸ್ಪರ ಹಲ್ಲೆ; ವಶಕ್ಕೆ

ಉಡುಪಿ: ಸಾರ್ವಜನಿಕ ಸ್ಥಳದಲ್ಲಿ ಪರಸ್ಪರ ಹಲ್ಲೆ ನಡೆಸುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ನಗರ ಠಾಣೆಯ ಪೊಲೀಸ್‌ ಎಚ್‌ಸಿ ಸುರೇಶ್‌ ಕರ್ತವ್ಯದಲ್ಲಿದ್ದ ವೇಳೆ ಉಡುಪಿಯ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ವಾಹನದ ಪಾರ್ಕಿಂಗ್‌ ಸ್ಥಳದಲ್ಲಿ ಆರೋಪಿಗಳಾದ ಹನುಮಪ್ಪ ಬೆಂಡ್ಯಪ್ಪ ಮಗಡಾರ್‌ (46), ನಾಗರಾಜ ಭೀಮಪ್ಪ ದೊಡ್ಡಮನಿ (27) ಮತ್ತು ನಾಗಪ್ಪ ಹನುಮಂತ ಸಿದ್ದಲಿಂಗಪ್ಪನವರ್‌ (30) ತಮ್ಮೊಳಗೆ ಜಗಳವಾಡುತ್ತ ಅವಾಚ್ಯ ಶಬ್ದಗಳಿಂದ ಬೈದು ಪರಸ್ಪರ ಹೊಡೆದಾಡಿಕೊಂಡು ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದರು. ಈ ವೇಳೆ ಅವರಿಗೆ ಎಚ್ಚರಿಕೆ ನೀಡಿದರೂ ಸುಮ್ಮನಿರಲಿಲ್ಲ. ಪರಸ್ಪರ ಬೈದಾಡುತ್ತ ಸಾರ್ವಜನಿಕ ಸ್ಥಳದಲ್ಲಿ ಭಯದ ವಾತಾವರಣ ಉಂಟುಮಾಡಿದ್ದರು ಎನ್ನಲಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *