Author: NewsDesk

  • Green Valley International School Secures 100% Results in ICSC & ISC; Pratik Prabhu Tops with 98.4%, Ranks 8th Nationally

    Shiruru: Green Valley International School has once again proven its academic excellence by achieving a 100% pass result for the academic year 2024-2025, with over 50 students securing distinctions across various subjects.

    Leading the cohort is Pratik Prasad Prabhu, who scored an impressive 98.4%, earning the 8th rank at the national level. Pratik is the son of renowned businessman Prasad Prabhu and Jhanvi Prabhu.

    Out of 92 students appeared, 29 students obtained above 90% marks, 30 students obtained above 80% and 33 students obtained above 70%

    Below are the details of students who secured distinction in their respective fields:

  • ಕೊಲ್ಲೂರು ಗಂಗೆ ಕೊರಗ ಮನೆ ಧ್ವಂಸ: ಆರೋಪಿಗಳ ಬಂಧನಕ್ಕೆ ಆಗ್ರಹ

    ಕೊಲ್ಲೂರು: ಯಾವುದೇ ಮಾಹಿತಿ ನೀಡದೇ ಬುಡಕಟ್ಟು ಜನಾಂಗದ ಗಂಗೆ ಕೊರಗ ಎಂಬ ಬಡ ಮಹಿಳೆ 40 ವರ್ಷಗಳಿಂದ ವಾಸವಾಗಿದ್ದ ಮನೆಯನ್ನು ಜೆಸಿಬಿ ತಂದು ನೆಲಸಮ ಮಾಡಿ ಧ್ವಂಸಗೊಳಿಸಿರುವ ಜಗದಾಂಭ ಟ್ರಸ್ಟ್‌ ನ ಮಾಲೀಕರಾದ ಪರಮೇಶ್ವರ ಅಡಿಗ ಅವರನ್ನು ಶೀಘ್ರವಾಗಿ ಬಂಧಿಸಬೇಕು ಎಂದು ಉಡುಪಿ ಜಿಲ್ಲೆಯ ಜಿಲ್ಲಾ ದೌರ್ಜನ್ಯ ತಡೆ ಜಾಗೃತಿ ಉಸ್ತುವಾರಿ ಸಮಿತಿ ಸದಸ್ಯರಾದ ವಾಸುದೇವ ಮುದೂರು ಆಗ್ರಹಿಸಿದ್ದಾರೆ.

    ಮಾನವಿಯತೆ ಇಲ್ಲದೇ ಮೃಗಗಳಂತೆ ವರ್ತಿಸುತ್ತಿರುವ, ಬಡವರ ಬದುಕಿನಲ್ಲಿ ಚೆಲ್ಲಾಟ ಆಡುವ ಪರಮೇಶ್ವರ ಅಡಿಗರಂತಹವರಿಗೆ ಕಾನೂನು ಭಯ ಉಂಟಾಗಬೇಕೆಂದರೆ ಅವರ ಬಂಧನ ಆಗಬೇಕು. ಆಗ ಮಾತ್ರ ಇಂತಹವರನ್ನು ಮಟ್ಟ ಹಾಕಲು ಸಾಧ್ಯ.

    ಹೀಗಾಗಿ ಶೀಘ್ರವಾಗಿ ಅವರನ್ನು ಬಂಧಿಸುವಂತೆ ಉಡುಪಿ ಜಿಲ್ಲೆಯ ಜಿಲ್ಲಾ ದೌರ್ಜನ್ಯ ತಡೆ ಜಾಗೃತಿ ಉಸ್ತುವಾರಿ ಸಮಿತಿ ಸದಸ್ಯರಾದ ವಾಸುದೇವ ಮುದೂರು, ಉಡುಪಿಯ ದಲಿತ ಮುಖಂಡರು ಹಾಗೂ ಜನಪರ ಹೋರಾಟಗಾರರು ಅದ ಜಯ ಮಲ್ಪೆ, ಉಪ್ಪೂರು ಜಿಲ್ಲಾಧ್ಯಕ್ಷರು ಪ.ಜಾತಿ/ ಪ.ಪಂಗಡ ಸಂಘ ಉಡುಪಿ ಗುತ್ತಿಗೆದಾರರರಾದ ಪರಮೇಶ್ವರ, ಅಂಬೇಡ್ಕರ್ ಯುವ ಸೇನೆ ಉಡುಪಿಯ ಜಿಲ್ಲಾಧ್ಯಕ್ಷರಾದ ಗಣೇಶ್ ನೆರ್ಗಿ , ನರಸಿಂಹ ಹಳಗೇರಿ ಕೆಡಿಪಿ ಸದಸ್ಯರು, ಮಾಜಿ ದರ್ಮದರ್ಶಿಗಳು ಕೊಲ್ಲೂರು, ನಾಗರಾಜ್ ಉಪ್ಪುಂದ ಜಿಲ್ಲಾ ಸಂಘಟನಾ ಸಂಚಾಲಕರು, ಲಕ್ಷ್ಮಣ ಸಂಚಾಲಕರು ಬೈಂದೂರು ನಾಗರಾಜ್ ಸಟ್ವಾಡಿ ಕುಂದಾಪುರ ಇವರು ಜಂಟಿ ಪತ್ರೀಕ ಹೇಳಿಯಲ್ಲಿ ಆಗ್ರಹಿಸಿದ್ದಾರೆ.

  • Karnataka offers 2 extra chances for SSLC failures to pass; announces dates for exam 2, 3

    Bengaluru, May 3: Primary and Secondary Education Minister Madhu Bangarappa has assured SSLC students who failed or scored low marks in the 2025 exams that they will have two more chances to improve their scores.

    Speaking at a press conference on Friday, May 2, following the declaration of the SSLC 2025 results, the minister stated that students who have not passed will be given another opportunity to clear their exams through SSLC Exam 2 and SSLC Exam 3.

    “The students who have not passed do not need to worry about losing a year. They will get two additional chances to appear for the exams. Until students complete all three exams, or pass, their digital marks card will carry the remark ‘in progress’ instead of ‘fail’,” Madhu Bangarappa explained.

    This year, the SSLC exams were held with strict procedures, and a significant number of students did not pass. Out of 8.96 lakh students, 66.14% were successful. However, for those who failed, the Minister assured that there would be two more attempts available to ensure that no student loses an entire academic year.

    Dates for SSLC Exam 2 & 3:

    • SSLC Exam 2: May 26 to June 2
    • SSLC Exam 3: June 23 to June 30

    The minister also stated that 79,000 students have already registered for the re-examinations and will be given another chance to clear the subjects they failed in.

    This system of three attempts was introduced to support students and allow them to improve their performance. The minister reiterated that the two additional chances would help the students catch up and secure their education without facing the threat of dropping out.

    The announcement has brought relief to the students who didn’t pass and are now looking forward to the upcoming exams.

  • ನಾವುಂದ ಸಬ್‌ಸ್ಟೇಷನ್‌ನ ತಾಂತ್ರಿಕ ದೋಷದಿಂದ ವಿದ್ಯುತ್‌ ಕಡಿತ: ಶೀಘ್ರ ಪರಿಹಾರಕ್ಕೆ ಕ್ರಮ. ಗ್ಯಾರಂಟಿ ಸಭೆಯಲ್ಲಿ ವಿವರಣೆ

    ಬೈಂದೂರು: ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಮೋಹನ್ ಪೂಜಾರಿ ಅವರ ನೇತೃತ್ವದಲ್ಲಿ ಜರುಗಿತು.

    ಸಭೆಯ ಅಧ್ಯಕ್ಷತೆ ವಹಿಸಿದ ಮೋಹನ್ ಪೂಜಾರಿ ಮಾತನಾಡಿ, ವಿದ್ಯುತ್ ಲೋಡ್ ಶೆಡ್ಡಿಂಗ್ ಸಮಸ್ಯೆಗೆ ಕಾರಣವಾದ ಮೆಸ್ಕಾಂ ಉಪಕೇಂದ್ರದ ತಾಂತ್ರಿಕ ತೊಂದರೆಯನ್ನು ಸಾರ್ವಜನಿಕರಿಗೆ ಸ್ಪಷ್ಟವಾಗಿ ತಿಳಿಸುವ ಕೆಲಸವಾಗಬೇಕು. ಜನರಿಗೆ ತೊಂದರೆಯಾಗದಂತೆ, ನಿಗದಿತ ಸಮಯದೊಳಗೆ ಅಧಿಕಾರಿಗಳು ಪರಿಹಾರ ಕಂಡುಕೊಳ್ಳಲು ಶ್ರಮಿಸಬೇಕು. ಇದರಿಂದ ಸರ್ಕಾರದ ಬಗ್ಗೆ ತಪ್ಪು ಗ್ರಹಿಕೆ ಉಂಟಾಗದಂತೆ ಎಚ್ಚರಿಕೆ ವಹಿಸಿ. ಜೊತೆಗೆ, ಜನಪ್ರತಿನಿಧಿಗಳು ವಾಸ್ತವಿಕತೆಯನ್ನು ಅರಿಯದೇ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದರು.

    ಈ ವಿಷಯದ ಬಗ್ಗೆ ಸಭೆಯಲ್ಲಿ ಸ್ಪಷ್ಟನೆ ನೀಡಿದ ಬೈಂದೂರು ಮೆಸ್ಕಾಂ ಉಪಕೇಂದ್ರದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಹರೀಶ್, ಬೈಂದೂರು ಮತ್ತು ಕೊಲ್ಲೂರು ಮೆಸ್ಕಾಂ ಉಪಕೇಂದ್ರಗಳಿಗೆ ವಿದ್ಯುತ್‌ ಪೂರೈಸುವ ನಾವುಂದದ 110 ಕೆ.ವಿ. ಸಬ್‌ಸ್ಟೇಷನ್‌ನ 20 ಎಂವಿಎ ಟ್ರಾನ್ಸ್‌ಫಾರ್ಮರ್‌ನಲ್ಲಿ ಕಳೆದ ವಾರ ತಾಂತ್ರಿಕ ದೋಷ ಕಂಡುಬಂದಿತು. ಈ ಕಾರಣದಿಂದ ಕುಂದಾಪುರ ಸಬ್‌ಸ್ಟೇಷನ್‌ನಿಂದ ವಿದ್ಯುತ್‌ ಸರಬರಾಜು ಮಾಡಲಾಗುತ್ತಿದೆ. ಹೆಚ್ಚಿನ ಲೋಡ್‌ನಿಂದ ಟ್ರಿಪ್ಪಿಂಗ್ ಸಮಸ್ಯೆ ಉಂಟಾಗಿದ್ದು, ಬೈಂದೂರು ಮತ್ತು ಕೊಲ್ಲೂರು ಪ್ರದೇಶಗಳಲ್ಲಿ ಕೆಲ ದಿನಗಳಿಂದ ವಿದ್ಯುತ್‌ ವ್ಯತ್ಯಯವಾಗುತ್ತಿದೆ. ಈಗಾಗಲೇ ಟ್ರಾನ್ಸ್‌ಫಾರ್ಮರ್ ದುರಸ್ತಿ ಕಾರ್ಯ ಪ್ರಗತಿಯಲ್ಲಿದ್ದು, ಒಂದೆರಡು ದಿನಗಳಲ್ಲಿ ಸಾಮಾನ್ಯ ಸ್ಥಿತಿಗೆ ಮರಳುವ ಸಂಭವವಿದೆ ಎಂದರು.

    ಬೈಂದೂರಿನಲ್ಲಿ ನಿರ್ಮಾಣವಾಗುತ್ತಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಕಾಮಗಾರಿ ಬಹುತೇಕ ಮುಕ್ತಾಯವಾಗಿದ್ದು, ಉಳಿದ ಕೆಲಸವನ್ನು ಪೂರ್ಣಗೊಳಿಸಿ, ಉದ್ಘಾಟನೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸೂಚಿಸಿದರು. ಜೊತೆಗೆ, ಗ್ರಾಮೀಣ ಪ್ರದೇಶಗಳಿಗೆ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ಕಲ್ಪಿಸಲು ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು.

    ಬೈಂದೂರು ತಾಲೂಕಿನಲ್ಲಿ ಪಂಚ ಗ್ಯಾರಂಟಿಗೆ 182.43 ಕೋಟಿ ರೂ. ವೆಚ್ಚ

    ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯಡಿ ಬೈಂದೂರು ತಾಲೂಕಿಗೆ ಇದುವರೆಗೆ ಸುಮಾರು 182.43 ಕೋಟಿ ರೂ. ವೆಚ್ಚವಾಗಿದೆ. ಗೃಹಲಕ್ಷ್ಮಿ ಯೋಜನೆಯಿಂದ ಜನವರಿವರೆಗೆ 96.61 ಕೋಟಿ ರೂ. ಫಲಾನುಭವಿಗಳ ಖಾತೆಗೆ ಜಮಾ ಆಗಿದೆ. 48 ಫಲಾನುಭವಿಗಳಿಗೆ ಆಧಾರ್ ಬ್ಯಾಂಕಿಂಗ್ ಮ್ಯಾಪಿಂಗ್ ಬಾಕಿಯಿದ್ದು, ತಾಂತ್ರಿಕ ಕಾರಣಗಳಿಂದ 479 ಮತ್ತು 71 ಹೊಸ ನೋಂದಣಿಗಳು ಸೇರಿ ಒಟ್ಟು 616 ಫಲಾನುಭವಿಗಳಿಗೆ ಬಾಕಿಯಿದೆ.

    ಗೃಹ ಜ್ಯೋತಿ ಯೋಜನೆಯಿಂದ ಬೈಂದೂರು ಮೆಸ್ಕಾಂ ವ್ಯಾಪ್ತಿಯ 27,942 ಕುಟುಂಬಗಳಿಗೆ 34.54 ಕೋಟಿ ರೂ., ತಲ್ಲೂರು ಮೆಸ್ಕಾಂ ವ್ಯಾಪ್ತಿಯ 1,935 ಕುಟುಂಬಗಳಿಗೆ 2.23 ಕೋಟಿ ರೂ. ಸೇರಿ ಒಟ್ಟು 36.78 ಕೋಟಿ ರೂ. ವೆಚ್ಚವಾಗಿದೆ. ಅನ್ನಭಾಗ್ಯ ಯೋಜನೆಯಡಿ 25,182 ಪಡಿತರ ಚೀಟಿಗಳಿಗೆ 1,89,26,610 ರೂ. ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾವಾಗಿದೆ. ಯುವ ನಿಧಿ ಯೋಜನೆಯಡಿ 340 ಫಲಾನುಭವಿಗಳಿಗೆ 59.34 ಲಕ್ಷ ರೂ. ಜಮಾ ಆಗಿದೆ. ಶಕ್ತಿ ಯೋಜನೆಯಡಿ 1.36 ಕೋಟಿ ಮಹಿಳೆಯರು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸಿದ್ದು, 48.44 ಕೋಟಿ ರೂ. ರಿಯಾಯಿತಿ ಪಡೆದಿದ್ದಾರೆ ಎಂದರು.

    ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ. ರವಿಕುಮಾರ್ ಹುಕ್ಕೇರಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರಾದ ಮಾಲತಿ ಶಿವಾನಂದ, ರಾಮ ಪೂಜಾರಿ, ಅನೀಶ್ ಪೂಜಾರಿ, ರಾಘವೇಂದ್ರ ಬಿಲ್ಲವ, ಗುಲಾಬಿ, ಸೂರ್ಯಕಾಂತಿ ಡಿ, ಗಣೇಶ ಗಾಣಿಗ, ಅಣ್ಣಪ್ಪ ಶೆಟ್ಟಿ, ದೇವದಾಸ್ ವಿ.ಜೆ., ಬಾಬು ದೇವಾಡಿಗ, ರಾಮಚಂದ್ರ ಖಾರ್ವಿ, ಮುಕ್ರಿ ಮೊಹಮ್ಮದ್ ಅಲ್ತಾಫ್, ಮೆಸ್ಕಾಂ, ಕೆಎಸ್‌ಆರ್‌ಟಿಸಿ, ಮಹಿಳಾ ಮತ್ತು ಮಕ್ಕಳ ಶಿಶು ಅಭಿವೃದ್ಧಿ ಇಲಾಖೆ, ಆಹಾರ ಇಲಾಖೆ ಹಾಗೂ ಯುವ ಸಬಲೀಕರಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

  • RBI revises ATM transaction charges: From today, cash withdrawals to cost more

    The Reserve Bank of India (RBI) has announced a hike in ATM transaction charges, effective from May 1, 2025. Customers exceeding the free monthly transaction limit will now be charged up to Rs 23 per transaction, an increase from the earlier cap of Rs 21.

    Key Highlights

    1. Free transactions limit:Charges beyond free limit
      • Own bank ATMs: 5 free transactions (financial + non-financial) per month.
      • Other bank ATMs:
        • Metro cities: 3 free transactions.
        • Non-metro cities: 5 free transactions.
    2. Maximum Rs 23 per transaction, applicable to both financial (e.g., withdrawals, deposits) and non-financial (e.g., balance enquiry, PIN change) services.
    3. This also applies to transactions at Cash Recycler Machines (CRMs), except for cash deposits.
    4. The new rule is applicable to all commercial banks, including regional rural banks (RRBs), co-operative banks, authorised ATM network operators, card payment network operators, and white-label ATM operators.

    ATM Interchange Fee

    The interchange fee—a charge banks pay each other for ATM usage by non-customers—remains unchanged:

    • Rs 19 per financial transaction.
    • Rs 7 per non-financial transaction.

    For instance, if you’re an HDFC customer withdrawing money from an SBI ATM in Kochi and exceed your free limit, HDFC may charge you the applicable Rs 23 fee for that transaction.

  • ದಕ್ಷಿಣ ಕನ್ನಡ, ಉಡುಪಿಯೆಲ್ಲಿ anti-communal ಟಾಸ್ಕ್ ಫೋರ್ಸ್ ಸ್ಥಾಪನೆ

    ಮಂಗಳೂರು, ಮೇ 3: ಇತ್ತೀಚಿನ ಕೋಮು ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ರಾಜ್ಯದ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಶನಿವಾರ ದಕ್ಷಿಣ ಕನ್ನಡ (ಡಿಕೆ) ಮತ್ತು ಉಡುಪಿ ಜಿಲ್ಲೆಗಳಲ್ಲಿ ಶಾಂತಿ ಕಾಪಾಡಲು ಮತ್ತು ಇಂತಹ ಘಟನೆಗಳ ಮರುಕಳಿಕೆ ತಡೆಯಲು ಕೋಮುವಾದ ವಿರೋಧಿ ಟಾಸ್ಕ್ ಫೋರ್ಸ್ (anti-communal task force) ರಚನೆಯನ್ನು ಘೋಷಿಸಿದರು.

    “ಈ ಟಾಸ್ಕ್ ಫೋರ್ಸ್ ಅನ್ನು ನಕ್ಸಲ್ ವಿರೋಧಿ ದಳದ ಮಾದರಿಯಲ್ಲಿ ರೂಪಿಸಲಾಗುವುದು,” ಎಂದು ಸಚಿವರು ತಿಳಿಸಿದ್ದು, ಒಂದು ವಾರದೊಳಗೆ ಇದನ್ನು ಸ್ಥಾಪಿಸಲಾಗುವುದು ಎಂದರು. ಈ ಘಟಕಕ್ಕೆ ಕೋಮುವಾದಿ ಚಟುವಟಿಕೆಗಳಲ್ಲಿ ಭಾಗಿಯಾದವರ ವಿರುದ್ಧ, ಒಳಸಂಚುಕಾರರು ಮತ್ತು ಬೆಂಬಲಿಗರನ್ನು ಒಳಗೊಂಡಂತೆ ಕಾನೂನು ಕ್ರಮ ಕೈಗೊಳ್ಳಲು ಪೂರ್ಣ ಕಾನೂನು ಅಧಿಕಾರ ನೀಡಲಾಗುವುದು.

    “ಕೋಮುವಾದಿ ಹಿಂಸಾಚಾರದಲ್ಲಿ ತೊಡಗುವವರು ಅಥವಾ ಅದನ್ನು ಪ್ರೋತ್ಸಾಹಿಸುವವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಟಾಸ್ಕ್ ಫೋರ್ಸ್‌ಗೆ ಸ್ಪಷ್ಟ ಆದೇಶವಿರುತ್ತದೆ. ಕಾನೂನಿನ ಎಲ್ಲ ಅಧಿಕಾರಗಳನ್ನು ಅವರಿಗೆ ನೀಡಲಾಗುವುದು,” ಎಂದು ಅವರು ಹೇಳಿದರು.

    ಡಾ. ಪರಮೇಶ್ವರ ಅವರು, ಉದ್ವಿಗ್ನ ಭಾಷಣಗಳನ್ನು ಮಾಡುವವರು ಅಥವಾ ಉದ್ದೇಶಪೂರ್ವಕ ಹೇಳಿಕೆಗಳನ್ನು ನೀಡುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಆರಂಭಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

    “ಇಂತಹ ಅಂಶಗಳನ್ನು ನಾವು ಕಬ್ಬಿಣದ ಕೈಯಿಂದ ಎದುರಿಸುತ್ತೇವೆ,” ಎಂದು ಅವರು ಎಚ್ಚರಿಕೆ ನೀಡಿ, ಸೂಕ್ಷ್ಮವಾದ ಕರಾವಳಿ ಪ್ರದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಖಾತರಿಪಡಿಸಲು ಸರ್ಕಾರ ಬದ್ಧವಾಗಿದೆ ಎಂದು ಪುನರುಚ್ಚರಿಸಿದರು.

    ಸರ್ಕಾರವು ಜಾಗರೂಕವಾಗಿದ್ದು, ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರುವ ಯಾವುದೇ ಸಾಮುದಾಯಿಕ ಶಕ್ತಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲು ಬದ್ಧವಾಗಿದೆ. “ನಮ್ಮ ಪ್ರಮುಖ ಗುರಿಯು ಈ ಪ್ರದೇಶವು ಶಾಂತಿಯುತವಾಗಿರುವುದು ಮತ್ತು ಎಲ್ಲರನ್ನೂ ಒಳಗೊಳ್ಳುವಂತಿರುವುದು. ಇಂತಹ ಸಾಮುದಾಯಿಕ ಘಟನೆಗಳ ಮರುಕಳಿಕೆಯನ್ನು ತಡೆಯಲು ನಾವು ನಿರ್ಧರಿಸಿದ್ದೇವೆ,” ಎಂದರು.

    ಉದ್ವಿಗ್ನ ಭಾಷಣಗಳಲ್ಲಿ ತೊಡಗಿರುವವರು ಅಥವಾ ವಿಭಜನೆಯ ಚಟುವಟಿಕೆಗಳಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ರಾಜಿಯಿಲ್ಲದೆ ಎತ್ತಿಹಿಡಿಯಲಾಗುವುದು ಎಂದು ಅವರು ಹೇಳಿದರು.

    ರಾಜ್ಯದಲ್ಲಿ ಪ್ರಸ್ತುತ ನಕ್ಸಲ್ ಉಪಸ್ಥಿತಿಯಿಲ್ಲದ ಕಾರಣ, ನಕ್ಸಲ್ ವಿರೋಧಿ ದಳವನ್ನು ಕ್ರಮೇಣ ಕಡಿಮೆಗೊಳಿಸುವ ಬಗ್ಗೆ ಸರ್ಕಾರ ವಿಚಾರಣೆ ನಡೆಸುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.

  • ಕುವೈತ್‌ ಅಗ್ನಿ ಅವಘಡ | 49ಕ್ಕೆ ತಲುಪಿದ ಸಾವಿನ ಸಂಖ್ಯೆ, 24 ಮಂದಿ ಮಲಯಾಳಿಗಳು

    ಕುವೈತ್‌ನ ಆರು ಅಂತಸ್ತಿನ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 49ಕ್ಕೆ ಏರಿಕೆಯಾಗಿದೆ. ಮಂಗಾಫ್ ಬ್ಲಾಕ್‌ನಲ್ಲಿರುವ ಕಟ್ಟಡವೊಂದರಲ್ಲಿ ಈ ದುರ್ಘಟನೆ ನಡೆದಿದೆ.

    ಆದರೆ, ಅಪಘಾತದಲ್ಲಿ ಮೃತಪಟ್ಟವರಲ್ಲಿ 24 ಮಂದಿ ಕೇರಳ ನಿವಾಸಿಗಳು ಎಂದು ಅನಿವಾಸಿ ಕೇರಳೀಯರ ವ್ಯವಹಾರಗಳ ಸಂಘಟನೆ ಪ್ರಕಟಿಸಿದೆ. ಆದರೆ ಅವರಲ್ಲಿ 17 ಜನರನ್ನು ಮಾತ್ರ ಗುರುತಿಸಲಾಗಿದೆ ಎಂದು ಸಂಘಟನೆ ತಿಳಿಸಿದೆ.

    ಅಲ್ ಮಂಗಾಫ್ ಕಟ್ಟಡದ ಬೆಂಕಿಯಲ್ಲಿ ಒಟ್ಟು 49 ಜನರು ಸಾವನ್ನಪ್ಪಿದ್ದು, ಅದರಲ್ಲಿ 42 ಭಾರತೀಯರು. ಉಳಿದವರಲ್ಲಿ ಪಾಕಿಸ್ತಾನಿ, ಫಿಲಿಪಿನೋ, ಈಜಿಪ್ಟ್ ಮತ್ತು ನೇಪಾಳಿಗಳು ಸೇರಿದ್ದಾರೆ. ‌

    ಮೃತರಲ್ಲಿ ಕೇರಳದ ನಿವಾಸಿಗಳಲ್ಲದೆ, ತಮಿಳುನಾಡು ಮತ್ತು ಉತ್ತರಪ್ರದೇಶದವರೂ ಸೇರಿದ್ದಾರೆ. ಪ್ರಸ್ತುತ, 35 ಜನರು ತೀವ್ರ ನಿಗಾ ಘಟಕದಲ್ಲಿದ್ದಾರೆ, ಅದರಲ್ಲಿ ಏಳು ಜನರ ಪರಿಸ್ಥಿತಿ ಗಂಭೀರವಾಗಿದೆ. ಕನಿಷ್ಠ ಐದು ಜನರು ವೆಂಟಿಲೇಟರ್ ಬೆಂಬಲದಲ್ಲಿರುವುದಾಗಿ ತಿಳಿದುಬಂದಿದೆ.

  • ಸುಹಾಸ್ ಶೆಟ್ಟಿ ಕೇಸ್‌ಗೆ ರೋಚಕ ಟ್ವಿಸ್ಟ್.. ಭಾಗಿಯಾದ 8 ಮಂದಿ ಯಾರು? ಸ್ಫೋಟಕ ಮಾಹಿತಿ ಬಯಲು

    ಮಂಗಳೂರು: ರೌಡಿ ಶೀಟರ್ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಬರ್ಬರ ಹತ್ಯೆ ಕೇಸ್‌ನಲ್ಲಿ ಪೊಲೀಸರು 8 ಮಂದಿಯನ್ನ ಅರೆಸ್ಟ್ ಮಾಡಿದ್ದಾರೆ. ಮಂಗಳೂರು ಪೊಲೀಸರು ಸುಹಾಸ್ ಶೆಟ್ಟಿ ಪ್ರಕರಣದ ಇಂಚಿಂಚೂ ಮಾಹಿತಿಯನ್ನು ಕಲೆ ಹಾಕಿದ್ದು, ಆರೋಪಿಗಳ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ.

    ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರು ಮಾಧ್ಯಮಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. 6 ಜನ ಸೇರಿ ಸುಹಾಸ್ ಶೆಟ್ಟಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಅದರಲ್ಲಿ ಪ್ರಮುಖ ಆರೋಪಿ ಸಫ್ವಾನ್.

    2023ರಲ್ಲಿ ಸಫ್ವಾನ್ ಮೇಲೆ ಮಾರಣಾಂತಿಕ ಹಲ್ಲೆ ಆಗಿರುತ್ತೆ. ಪ್ರಶಾಂತ್, ಧನರಾಜ್, ಸುಹಾಸ್ ಶೆಟ್ಟಿ ಸ್ನೇಹಿತರಿಂದ ಸಫ್ವಾನ್‌ಗೆ ಕೊಲೆ ಮಾಡುವ ಆತಂಕ ಇತ್ತು. ಈ ಹಿನ್ನೆಲೆಯಲ್ಲಿ ಸುಹಾಸ್‌ ಅನ್ನು ಕೊಲೆ ಮಾಡಲು ತೀರ್ಮಾನ
    ಮಾಡಿದ್ದಾರೆ.

    ಆರೋಪಿ ಸಫ್ವಾನ್, ಫಾಝಿಲ್‌ ತಮ್ಮನನ್ನು ಸಂಪರ್ಕಿಸಿ ಕೊಲೆ ಮಾಡೋಕೆ ತೀರ್ಮಾನ ಮಾಡಿದ್ದಾರೆ. ಸುಹಾಸ್ ಕೊಲೆಗೆ 5 ಲಕ್ಷ ರೂಪಾಯಿ ಹಣವನ್ನು ಆದಿಲ್ ಸಫ್ವಾನ್ ತಂಡಕ್ಕೆ ನೀಡಿದ್ದಾರೆ. ನಿಯಾಜ್‌ನ ಇಬ್ಬರು ಸ್ನೇಹಿತರು ನಾಗಾರಾಜ್ ಮತ್ತು ರಂಜಿತ್‌ ಅನ್ನು ಸಂಪರ್ಕ ಮಾಡಿದ್ದಾರೆ. ಈ ಇಬ್ಬರು ಸಫ್ವಾನ್ ಮನೆಯಲ್ಲಿ ಎರಡು ದಿನಗಳಿಂದ ವಾಸ ಮಾಡುತ್ತಾರೆ. ಕಳೆದ ಮೇ 1ರಂದು ಚಲನವಲನಗಳನ್ನು ಗಮನಿಸಿ ಸುಹಾಸ್ ಶೆಟ್ಟಿಯನ್ನ ಕೊಲೆ ಮಾಡಿದ್ದಾರೆ.

    8 ಮಂದಿ ಆರೋಪಿಗಳು ಯಾರು?

    ಸುಹಾಸ್ ಶೆಟ್ಟಿ ಕೇಸ್‌ನಲ್ಲಿ ಮೊದಲ ಆರೋಪಿ ಅಬ್ದುಲ್ ಸಫ್ವಾನ್, ನಿಯಾಜ್, ಮೊಹಮ್ಮದ್ ಮುಝಮಿಲ್, ಕಲಂದರ್ ಶಾಫಿ, ರಂಜಿತ್, ನಾಗರಾಜ್, ಮಹಮದ್ ರಿಜ್ವಾನ್ ಹಾಗೂ ಆದಿಲ್.

    1. ಅಬ್ದುಲ್ ಸಫ್ವಾನ್– 29 ವರ್ಷ ವಾಸ : ಶಾಂತಿಗುಡ್ಡೆ ಬಜಡೆ ಗ್ರಾಮ ಮಂಗಳೂರು ಕೆಲಸ : ಡ್ರೈವರ್
    2. ನಿಯಾಜ್ – 25 ವರ್ಷ ವಾಸ : ಶಾಂತಿಗುಡ್ಡೆ ಬಜಡೆ ಗ್ರಾಮ ಮಂಗಳೂರು
    3. ಮೊಹಮ್ಮದ್ ಮುಸ್ಸಾಮಿರ್ – 32 ವರ್ಷ ವಾಸ : ಶಾಂತಿಗುಡ್ಡೆ ಬಜಡೆ ಗ್ರಾಮ, ಮಂಗಳೂರು ಕೆಲಸ : ಸೌದಿ ಅರೇಬಿಯಾದಲ್ಲಿ ಸೇಲ್ಸ್ ಮ್ಯಾನ್
    4. ಕಲಂದರ್ ಶಾಫಿ – 29 ವರ್ಷ ತಂದೆ : ಮಹಮ್ಮದ್ ವಾಸ : ಕುರ್ಸು ಗುಡ್ಡೆ,  ಬಾಳ ಗ್ರಾಮ, ಮಂಗಳೂರು ಕೆಲಸ: ಸೇಲ್ಸ್ ಮ್ಯಾನ್ ಬೆಂಗಳೂರು
    5. ಆದಿಲ್ ಮೆಹರೂಪ್ – 27 ವರ್ಷ ವಾಸ : ಜಾಪ್ನಾ ಮಂಜಿಲ್, ಬಾಳ ಗ್ರಾಮ, ಮಂಗಳೂರು
    6. ನಾಗರಾಜ್ – 20 ವರ್ಷ ವಾಸ:  ಕೋಟೆ ಹೊಳೆ, ಮಾವಿನಕೆರೆ ಗ್ರಾಮ ಚಿಕ್ಕಮಂಗಳೂರು ಜಿಲ್ಲೆ ಕೆಲಸ: ಶಾಮಿಯಾನ ಅಂಗಡಿಯಲ್ಲಿ ಕೆಲಸ
    7. ಮೊಹಮದ್ ರಿಜ್ವಾನ್ – 28 ವರ್ಷ ವಾಸ:  ಜೋಕಟ್ಟೆ, ತೋಕುರು ಗ್ರಾಮ, ಮಂಗಳೂರು
    8. ರಂಜಿತ್  ವಾಸ:  ರುದ್ರ ಪಾದ, ಕಳಸ, ಚಿಕ್ಕಮಂಗಳೂರು ಕೆಲಸ: ಡ್ರೈವಿಂಗ್
  • ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

    ನಮ್ಮ ನಾಡ ಒಕ್ಕೂಟ (ರಿ.) ಉಡುಪಿ ಜಿಲ್ಲೆ ಪತ್ರಿಕಾ ಪ್ರಕಟಣೆ

    2024 – 25ನೇ (ಈ ವರ್ಷ) ಸಾಲಿನ SSLC ಮತ್ತು 2nd PUC ಯಲ್ಲಿ 90% ಶೇಕಡಕ್ಕಿಂತ ಅಧಿಕ ಅಂಕ ಪಡೆದಿರುವ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 90%ಕ್ಕಿಂತ ಅಧಿಕ ಅಂಕ ಪಡೆದಿರುವ ವಿದ್ಯಾರ್ಥಿಗಳು ತಕ್ಷಣ ಈ ಕೆಳಗಿನ Google form ನಲ್ಲಿ ಅರ್ಜಿ ಸಲ್ಲಿಸಬೇಕಾಗಿ ವಿನಂತಿ. 

    ನಿಬಂಧನೆಗಳು:

    1. ವಿದ್ಯಾರ್ಥಿಗಳು ಅಲ್ಪಸಂಖ್ಯಾತರಾಗಿರಬೇಕು.
    2. ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿ 90% ಕ್ಕಿಂತ ಹೆಚ್ಚಿನ ಅಂಕ ಪಡೆದಿರಬೇಕು.
    3. ವಿದ್ಯಾರ್ಥಿಗಳು ಉಡುಪಿ ಜಿಲ್ಲೆಯವರಾಗಿರಬೇಕು.
    4. ವಿದ್ಯಾರ್ಥಿಗಳು ಈ ಕೆಳಗಿನ Google form ನಲ್ಲಿ ಅರ್ಜಿ ಸಲ್ಲಿಸುವುದು ಕಡ್ಡಾಯ: https://forms.gle/6EjXiAUWjmABw7sf8
    5. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10 ಮೇ 2025

    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಝಮೀರ್ ಅಹ್ಮದ್ ರಶಾದಿ (ಸಂಚಾಲಕರು) 9880122968

    _______________💐_______________

    ಮುಷ್ತಾಕ್ ಅಹ್ಮದ್ ಬೆಳ್ವೆ

    ಜಿಲ್ಲಾಧ್ಯಕ್ಷರು 

    ಝಹೀರ್ ನಾಖುದಾ ಗಂಗೊಳ್ಳಿ

    ಪ್ರಧಾನ ಕಾರ್ಯದರ್ಶಿ 

    ನಕ್ವಾ ಯಾಹ್ಯ ಮಲ್ಪೆ

    ಕೋಶಾಧಿಕಾರಿ

  • ಮಂಗಳೂರು: ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಎಂಟು ಮಂದಿ ಬಂಧನ – ಪರಮೇಶ್ವರ

    ಮಂಗಳೂರು: ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ರೌಡಿ ಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಎಂಟು ಮಂದಿಯನ್ನು ಬಂಧಿಸುವ ಮೂಲಕ ಮಹತ್ವದ ಯಶಸ್ಸು ಸಾಧಿಸಿದ್ದಾರೆ.

    ಶನಿವಾರ, ಮೇ 03 ರಂದು ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ, ಶಂಕಿತರನ್ನು ಮಂಗಳೂರು ಜಿಲ್ಲೆಯ ವಿವಿಧ ಭಾಗಗಳಿಂದ ವಶಕ್ಕೆ ಪಡೆಯಲಾಗಿದ್ದು, ಪ್ರಸ್ತುತ ಅವರನ್ನು ವಿಚಾರಣೆಗೊಳಪಡಿಸಲಾಗುತ್ತಿದೆ ಎಂದು ತಿಳಿಸಿದರು.

    8 ಮಂದಿ ಆರೋಪಿಗಳು ಯಾರು?

    ಸುಹಾಸ್ ಶೆಟ್ಟಿ ಕೇಸ್‌ನಲ್ಲಿ ಮೊದಲ ಆರೋಪಿ ಅಬ್ದುಲ್ ಸಫ್ವಾನ್, ನಿಯಾಜ್, ಮೊಹಮ್ಮದ್ ಮುಝಮಿಲ್, ಕಲಂದರ್ ಶಾಫಿ, ರಂಜಿತ್, ನಾಗರಾಜ್, ಮಹಮದ್ ರಿಜ್ವಾನ್ ಹಾಗೂ ಆದಿಲ್.

    1. ಅಬ್ದುಲ್ ಸಫ್ವಾನ್– 29 ವರ್ಷ ವಾಸ : ಶಾಂತಿಗುಡ್ಡೆ ಬಜಡೆ ಗ್ರಾಮ ಮಂಗಳೂರು ಕೆಲಸ : ಡ್ರೈವರ್
    2. ನಿಯಾಜ್ – 25 ವರ್ಷ ವಾಸ : ಶಾಂತಿಗುಡ್ಡೆ ಬಜಡೆ ಗ್ರಾಮ ಮಂಗಳೂರು
    3. ಮೊಹಮ್ಮದ್ ಮುಸ್ಸಾಮಿರ್ – 32 ವರ್ಷ ವಾಸ : ಶಾಂತಿಗುಡ್ಡೆ ಬಜಡೆ ಗ್ರಾಮ, ಮಂಗಳೂರು ಕೆಲಸ : ಸೌದಿ ಅರೇಬಿಯಾದಲ್ಲಿ ಸೇಲ್ಸ್ ಮ್ಯಾನ್
    4. ಕಲಂದರ್ ಶಾಫಿ – 29 ವರ್ಷ ತಂದೆ : ಮಹಮ್ಮದ್ ವಾಸ : ಕುರ್ಸು ಗುಡ್ಡೆ,  ಬಾಳ ಗ್ರಾಮ, ಮಂಗಳೂರು ಕೆಲಸ: ಸೇಲ್ಸ್ ಮ್ಯಾನ್ ಬೆಂಗಳೂರು
    5. ಆದಿಲ್ ಮೆಹರೂಪ್ – 27 ವರ್ಷ ವಾಸ : ಜಾಪ್ನಾ ಮಂಜಿಲ್, ಬಾಳ ಗ್ರಾಮ, ಮಂಗಳೂರು
    6. ನಾಗರಾಜ್ – 20 ವರ್ಷ ವಾಸ:  ಕೋಟೆ ಹೊಳೆ, ಮಾವಿನಕೆರೆ ಗ್ರಾಮ ಚಿಕ್ಕಮಂಗಳೂರು ಜಿಲ್ಲೆ ಕೆಲಸ: ಶಾಮಿಯಾನ ಅಂಗಡಿಯಲ್ಲಿ ಕೆಲಸ
    7. ಮೊಹಮದ್ ರಿಜ್ವಾನ್ – 28 ವರ್ಷ ವಾಸ:  ಜೋಕಟ್ಟೆ, ತೋಕುರು ಗ್ರಾಮ, ಮಂಗಳೂರು
    8. ರಂಜಿತ್  ವಾಸ:  ರುದ್ರ ಪಾದ, ಕಳಸ, ಚಿಕ್ಕಮಂಗಳೂರು ಕೆಲಸ: ಡ್ರೈವಿಂಗ್

    ಪೊಲೀಸರು ಈ ಪ್ರಕರಣದ ತನಿಖೆಗಾಗಿ ವಿಶೇಷ ತಂಡಗಳನ್ನು ರಚಿಸಿದ್ದರು. ಘಟನೆಯ ನಿರ್ಣಾಯಕ ವೀಡಿಯೊ ದೃಶ್ಯಾವಳಿಗಳು ಶಂಕಿತರನ್ನು ಗುರುತಿಸಿ ಟ್ರ್ಯಾಕ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ವರದಿಯಾಗಿದೆ.

    ಹೆಚ್ಚಿನ ವಿವರಗಳಿಗಾಗಿ ಕಾಯಲಾಗುತ್ತಿದೆ.