Category: Uncategorized

  • ಭಟ್ಕಳ: ಹೋಟೆಲ್‌ ಬಳಿ ಹೊಡೆದಾಟ; ಪ್ರಕರಣ ದಾಖಲು

    ಭಟ್ಕಳ : ಇಲ್ಲಿನ ಹೋಟೆಲೊಂದರ ಬಳಿ ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದ ನಾಲ್ವರ ವಿರುದ್ಧ ಭಟ್ಕಳ ಶಹರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಭಟ್ಕಳದ ಸಫಾ ಸ್ಟ್ರೀಟ್‌ ನಿವಾಸಿ ಮಹ್ಮದ್ ಇಮ್ರಾನ್ ಸಯ್ಯದ್ ಅಬು ಮಹ್ಮದ್ (27), ಮಗ್ದುಂ ಕಾಲೋನಿಯ ಅಬು ತಾಹೀರ್ ತಬ್ರೇಜ್ ಭಾಷಾ (25) ಮತ್ತು ಹೊನ್ನಾವರ ತಾಲೂಕಿನ ಕರ್ಕಿ ನಿವಾಸಿಗಳಾದ  ಮಹ್ಮದ್ ಅಲ್ತಾಫ್ ಅಬ್ದುಲ್ ರೆಹಮಾನ್ (35),  ಅಲ್ತಾಫ್‌ ಅಬ್ದುಲ್ ಖಾದರ್ ಸಾಬ್ (27) ಪರಸ್ಪರ ಹೊಡೆದಾಡಿಕೊಂಡು ಗಾಯಗೊಂಡಿದ್ದರು. ನಾಲ್ವರ ವಿರುದ್ಧ ಭಟ್ಕಳ ಶಹರ ಪೊಲೀಸ್‌ ಠಾಣೆಯ ಪಿಎಸೈ ನವೀನ್‌ ಎಸ್‌.ನಾಯ್ಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಹೆಬ್ರಿ: ಹೂಡಿಕೆ ಆಮಿಷಕ್ಕೆ ಬಲಿಯಾದ ವೃದ್ಧ, 31 ಲಕ್ಷಕ್ಕೂ ಹೆಚ್ಚು ರೂ.ಗೆ ಮೋಸ

    ಹೆಬ್ರಿ, ಜೂನ್ 11, 2025: ಹೆಬ್ರಿ ತಾಲೂಕಿನ ಶಿವಪುರ ಗ್ರಾಮದ ವಾಸುದೇವ ಪುತ್ತಿ (65) ಎಂಬ ವೃದ್ಧರಿಗೆ ಹೂಡಿಕೆಯ ಆಮಿಷ ತೋರಿಸಿ 31,58,452 ರೂ. ಮೊತ್ತಕ್ಕೆ ಮೋಸ ಮಾಡಿರುವ ಆರೋಪದಡಿ ಐವರ ವಿರುದ್ಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ವಾಸುದೇವ ಪುತ್ತಿ ಅವರು 1995 ರಿಂದ 2020 ರವರೆಗೆ ಬೆಂಗಳೂರಿನ ಜಿಗಣಿಯ ಎ.ಎಫ್.ಡಿ.ಸಿ ಕಂಪೆನಿಯಲ್ಲಿ ಮೆಟೀರಿಯಲ್ ಮ್ಯಾನೇಜರ್ ಆಗಿ ಕೆಲಸ ಮಾಡಿ 2020 ರಲ್ಲಿ ನಿವೃತ್ತರಾಗಿದ್ದರು. ನಿವೃತ್ತಿಯ ನಂತರ, ಬೆಂಗಳೂರಿನ ಮೈಲಾರಿ ಆಗ್ರೋ ಪ್ರೊಡಕ್ಟ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ರೋಹಿತ್ ಕೆ. ಎಂಬಾತನ ಪರಿಚಯದ ಮೇರೆಗೆ 14/09/2021 ರಿಂದ 28/01/2022 ರವರೆಗೆ 5.5 ಲಕ್ಷ ರೂ. ಹೂಡಿಕೆ ಮಾಡಿದ್ದರು. ಈ ಹೂಡಿಕೆಗೆ 2.5 ಲಕ್ಷ ರೂ. ಬಡ್ಡಿಯನ್ನು ಪಡೆದಿದ್ದರೂ, ಕಂಪೆನಿ ಮುಚ್ಚಿಹೋಗಿತ್ತು.

    2024 ರ ಸೆಪ್ಟೆಂಬರ್‌ನಲ್ಲಿ ರೋಹಿತ್ ಮತ್ತೆ ವಾಸುದೇವ ಅವರನ್ನು ಸಂಪರ್ಕಿಸಿ, ಕಂಪೆನಿಯಿಂದ ಹೂಡಿಕೆದಾರರಿಗೆ ಹಣ ವಾಪಸ್ ನೀಡಲು ದೊಡ್ಡ ಮೊತ್ತದ ಹಣ ಸಿಕ್ಕಿದೆ ಎಂದು ಆಮಿಷ ತೋರಿಸಿದ್ದಾನೆ. ಆದಾಯ ತೆರಿಗೆ ಅಧಿಕಾರಿಗಳಿಗೆ ಮತ್ತು ಇತರ ಖರ್ಚುಗಳಿಗೆ ಹಣ ಬೇಕೆಂದು ತಿಳಿಸಿ, ತನ್ನ ಚಾಲಕರಾದ ನಾಗರಾಜ ಮತ್ತು ಜಗದೀಶ, ಹಾಗೂ ತಮ್ಮನಾದ ಪ್ರದೀಪನ ಖಾತೆಗಳಿಗೆ ಹಣ ವರ್ಗಾಯಿಸುವಂತೆ ಕೇಳಿದ್ದಾನೆ. ಈ ರೀತಿಯಾಗಿ 17/09/2024 ರಿಂದ 05/06/2025 ರವರೆಗೆ ಹಂತಹಂತವಾಗಿ ಫೋನ್‌ಪೇ, ಗೂಗಲ್‌ ಪೇ, ಮತ್ತು NEFT ಬ್ಯಾಂಕಿಂಗ್ ಮೂಲಕ 31,58,452 ರೂ. ವರ್ಗಾಯಿಸಿಕೊಂಡಿದ್ದಾನೆ. ಆದರೆ, ಹಣ ವಾಪಸ್ ಕೇಳಿದಾಗ ರೋಹಿತ್ ಬೆದರಿಕೆ ಹಾಕಿ, ನಂತರ ಸಂಪರ್ಕಕ್ಕೆ ಸಿಗದೆ ಮೋಸ ಮಾಡಿದ್ದಾನೆ.

    ಈ ಘಟನೆಗೆ ಸಂಬಂಧಿಸಿದಂತೆ ರೋಹಿತ್, ಪ್ರದೀಪ, ಲಕ್ಷ್ಮೀ, ನಾಗರಾಜ, ಮತ್ತು ಜಗದೀಶ ಎಂಬ ಐವರ ವಿರುದ್ಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 39/2025 ರಡಿಯಲ್ಲಿ ಕಲಂ 316(2), 318(4), 351(2), 351(3), 190 BNS ರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.

  • ಮಲ್ಪೆ ಬೀಚ್ ನಲ್ಲಿ ಪಾನಿ ಪೂರಿ ಅಂಗಡಿಯವರ ಹಾಗೂ ಪ್ರವಾಸಿಗರ ನಡುವೆ ಹೊಡೆದಾಟ

    ಮಲ್ಪೆ : ಉಡುಪಿ ಜಿಲ್ಲೆಯ ಮಲ್ಪೆ ಬೀಚ್ ನಲ್ಲಿ ಪಾನಿ ಪೂರಿ ಅಂಗಡಿಯವರ ಮತ್ತು ಪ್ರವಾಸಕ್ಕೆ ಬಂದ ಪ್ರವಾಸಿಗರ ನಡುವೆ ಜಗಳ ನಡೆದು ನಂತರ ಹೊಡೆದಾಟ ಸಂಭವಿಸಿದೆ.

    ಈ ಘಟನೆ ಬಗ್ಗೆ ದೂರು ಪ್ರತಿದೂರು ದಾಖಲಾಗಿದೆ. ಮಲ್ಪೆ ಪೊಲೀಸರು ವಿಚಾರಣೆ ನಡೆಸಿದ್ದಾರೆ.

    ಘಟನೆ ವಿವರ : ದಿನಾಂಕ : 10/06/2025ರಂದು ರಾತ್ರಿ 08:30 ಗಂಟೆಗೆ ಮಲ್ಪೆ ಬೀಚ್‌ ಬಳಿಯ ಪಾನಿ ಪೂರಿ ಅಂಗಡಿಯಲ್ಲಿ ಹೆಚ್ಚುವರಿಯಾಗಿ ಒಂದು ಪಾನಿ ಪೂರಿ ನೀಡುವ ವಿಷಯವಾಗಿ ಪ್ರವಾಸಕ್ಕೆ ಬಂದ ಮಂಡ್ಯ ಜಿಲ್ಲೆಯ ಪ್ರವಾಸಿಗರಿಗೆ ಮತ್ತು ಸ್ಥಳೀಯ ಪಾನಿ ಪುರಿ ಅಂಗಡಿಯವರಿಗೆ ಗಲಾಟೆಯಾಗಿ, ಬೈದಾಡಿಕೊಂಡಿದ್ದು, ಎರಡೂ ಕಡೆಯಿಂದ ಹಲ್ಲೆ ನಡೆಸಿರುತ್ತಾರೆ. ಈ ಬಗ್ಗೆ ದೂರು ಪ್ರತಿದೂರು ನೀಡಲಾಗಿದ್ದು ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 71/2025 ಕಲಂ: 189(2), 191(2), 191(3), 115(2), 118(1), 352, 351 (2) ಜೊತೆಗೆ 190 BNS ಮತ್ತು 72/2025, ಕಲಂ: 189(2),191(2), 191(3), 115(2), 118(1), 352, 351 (2) ಜೊತೆಗೆ 190 BNS ರಂತೆ ಪ್ರಕರಣ ದಾಖಲಾಗಿರುತ್ತದೆ.

    ಈ ಎರಡು ಪ್ರಕರಣಗಳು ಕೇಸ್‌ ಕೌಂಟರ್‌ ಕೇಸ್‌ ಆಗಿದ್ದು, ಮೊದಲ ಪ್ರಕರಣದ ಆರೋಪಿಗಳಾದ

    1. ಸುದೀಪ
    2. ಸಂಪತ್
    3. ಪುನೀತ
    4. ಮಹೇಶ
    5. ಕನ್ನ ವೈಜಿ
    6. ಅರವಿಂದ

    ಹಾಗೂ ಎರಡನೇ ಪ್ರಕರಣದ ಆರೋಪಿಗಳಾದ

    1. ರಮೇಶ
    2. ಮೋನು
    3. ವಿನೋದ

    ನನ್ನು ‌ದಸ್ತಗಿರಿ ಮಾಡಲಾಗಿರುತ್ತದೆ.

  • Tragic Drowning at Karinja Temple Lake Claims College Student’s Life

    Bantwal, June 07, 2025: A heartbreaking incident occurred on Saturday morning when a college student drowned in Gada Theertha Lake near the sacred Karinja Temple in Bantwal taluk.

    The victim, Chethan (19), son of Sridhar Mulya from Kangitthilu near Wagga Karinja Cross, was a student at B Mooda Government Pre-University College, Bantwal. Known for his devotion, Chethan visited the Karinja Temple every Saturday to offer prayers. On the day of the incident, he had gone to the temple with his friend Prashvit. While descending the steps to wash his feet in the temple’s lake, Chethan slipped and fell into the water.

    Prashvit, unable to swim, raised an alarm for help. Local residents, including Shravan Jain and Udaya Mangaje, responded swiftly and dove into the lake to rescue him. Despite their efforts to locate and retrieve Chethan, he was unresponsive by the time he was brought out of the water and was declared deceased.

    The Bantwal Rural police have visited the site and are conducting an investigation into the incident.

    Chethan’s untimely death has left the local community, particularly his fellow students and temple devotees, in deep sorrow.

  • ಹೆಬ್ರಿ: ಸಹಕಾರಿ ಸಂಘದಲ್ಲಿ ಆರ್ಥಿಕ ದುರುಪಯೋಗ: ಪ್ರಕರಣ ದಾಖಲು

    ಹೆಬ್ರಿ, ಜೂನ್ 07, 2025: ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘ (ನಿ)ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿನ್ ದಾಖಲಿಸಿದ ದೂರಿನ ಆಧಾರದ ಮೇಲೆ, ಸಂಘದ ಸಿಬ್ಬಂದಿಯಾದ ಶಂಕರ್ ವಿರುದ್ಧ ಆರ್ಥಿಕ ದುರುಪಯೋಗ ಮತ್ತು ವಿಶ್ವಾಸ ದ್ರೋಹದ ಆರೋಪದಡಿ ಪ್ರಕರಣ ದಾಖಲಾಗಿದೆ.

    ದೂರಿನ ಪ್ರಕಾರ, ಶಂಕರ್ ರವರು ಸಂಘದ 88,150 ರೂಪಾಯಿಗಳನ್ನು ಸುಂದರ ಕುಲಾಲ ಎಂಬವರಿಗೆ ಕೂಲಿ ಬಾಬ್ತು ನೀಡಲಾಗಿದೆ ಎಂದು ಸುಳ್ಳು ಮಾಹಿತಿ ನೀಡಿ, ಆ ಮೊತ್ತವನ್ನು ದುರುಪಯೋಗ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕೃತ್ಯದಿಂದ ಸಂಘಕ್ಕೆ ಮೋಸ ಮತ್ತು ವಿಶ್ವಾಸಭಂಗವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

    ಈ ಸಂಬಂಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 409 ಮತ್ತು 420ರ ಅಡಿಯಲ್ಲಿ ಅಪರಾಧ ಕ್ರಮಾಂಕ 37/2025 ರಂತೆ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.

  • ಗೋಕರ್ಣ:ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ – 10 ಜನ ಆರೋಪಿತರ ಬಂಧನ

    ಗೋಕರ್ಣ, ಜೂನ್ 07, 2025: ಪೊಲೀಸ್ ಠಾಣಾ ವ್ಯಾಪ್ತಿಯ ತೊರ್ಕೆ ಗ್ರಾಮ ಪಂಚಾಯತ್‌ಗೆ ಸೇರಿದ ಹೊಸಕಟ್ಟಾ-ಸಿದ್ದೇಶ್ವರ ನಡುವಿನ ಖಾರ್ಲ್ಯಾಂಡ್‌ನಲ್ಲಿ ಮೀನುಗಾರಿಕೆಗೆ ಸಂಬಂಧಿಸಿದ ವಿವಾದದಿಂದ ಉಂಟಾದ ಜಗಳದ ಹಿನ್ನೆಲೆಯಲ್ಲಿ, ದಿನಾಂಕ 05/06/2025 ರಂದು ರಾತ್ರಿ 9:30 ಗಂಟೆಗೆ ಸ್ಥಳಕ್ಕೆ ಭೇಟಿ ನೀಡಿದ ERSS-112 ವಾಹನದ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.

    ಈ ಘಟನೆಗೆ ಸಂಬಂಧಿಸಿದಂತೆ, ಹೊಸಕಟ್ಟಾ ಮತ್ತು ಮಸಾಕಲ್ ಗ್ರಾಮಗಳ 10 ಜನ ಆರೋಪಿತರ ವಿರುದ್ಧ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಗುನ್ನಾ ಸಂಖ್ಯೆ 58/2025ರಡಿ, ಭಾರತೀಯ ನ್ಯಾಯ ಸಂಹಿತೆ-2023ರ ಕಲಂ 189(2), 191(2), 191(3), 194(2), 115(2), 118(1), 121(1), 132, 352, 351(2), ಮತ್ತು 190ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ತಕ್ಷಣ ಕ್ರಮ ಕೈಗೊಂಡ ಪೊಲೀಸರು, ಆರೋಪಿತರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿತರಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಬಂಧಿತರನ್ನು ಕಾರವಾರ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿದೆ.

    ಈ ಘಟನೆಯಿಂದ ಸ್ಥಳೀಯವಾಗಿ ತೀವ್ರ ಆತಂಕ ಉಂಟಾಗಿದ್ದು, ಪೊಲೀಸರು ಶಾಂತಿ ಕಾಪಾಡಲು ಕಟ್ಟೆಚ್ಚರಿಕೆ ವಹಿಸಿದ್ದಾರೆ.

  • ಕಾರವಾರ: ದೇವಸ್ಥಾನಗಳಲ್ಲಿ ಕಳ್ಳತನ ಮಾಡುವ ಕುಖ್ಯಾತ ಅಂತರ ರಾಜ್ಯ ಕಳ್ಳರ ಬಂಧನ

    ಕಾರವಾರ, ಜೂನ್ 06, 2025: ಕಾರವಾರ ನಗರದ ಕೋಡಿಬಾಗ ನಾಯಿಕಟ್ಟಾದ ಶ್ರೀ ಸಾಯಿಮಂದಿರದಲ್ಲಿ ದಿನಾಂಕ 15.04.2025 ರಂದು ರಾತ್ರಿ ಬಾಗಿಲಿನ ಕೊಂಡಿಯನ್ನು ಮುರಿದು ಒಳನುಗ್ಗಿ, ಮೂರ್ತಿಯ ಮೇಲಿನ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳ್ಳಿಯ ಆಭರಣಗಳನ್ನು ಕಳ್ಳರು ಕದ್ದ ಘಟನೆಗೆ ಸಂಬಂಧಿಸಿದಂತೆ ಕಾರವಾರ ಶಹರ ಪೊಲೀಸ್ ಠಾಣೆಯಲ್ಲಿ ಶ್ರೀ ಸಂತೋಷ ರಾಘೋಬಾ ನಾಯ್ಕ ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿತ್ತು.

    ಕಾರವಾರ ಶಹರ ಪೊಲೀಸ್ ಠಾಣೆಯ ತನಿಖಾ ತಂಡವು ತಕ್ಷಣ ಕಾರ್ಯಪ್ರವೃತ್ತವಾಗಿ, ಈ ಗಂಭೀರ ಪ್ರಕರಣವನ್ನು ಭೇದಿಸಲು ಮಾನ್ಯ ಪೊಲೀಸ್ ಅಧೀಕ್ಷಕರು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಯಿತು. ಶಹರ ಪೊಲೀಸ್ ಠಾಣೆಯ ಆಗೀನ ಪ್ರಭಾರಿ ಪೊಲೀಸ್ ನಿರೀಕ್ಷಕ ಶ್ರೀ ಯು.ಹೆಚ್. ಸಾತೇನಹಳ್ಳಿ, ಉಪ-ನಿರೀಕ್ಷಕ ಶ್ರೀ ರವೀಂದ್ರ ಬಿರಾದರ ನೇತೃತ್ವದ ತಂಡವು ಕಾರವಾರ, ಗೋವಾ, ಮಧ್ಯಪ್ರದೇಶದ ಖೊಂಡವಾ, ದೆಹರಾದೂನ್, ಮತ್ತು ಹರಿಯಾಣದ ಫರಿದಾಬಾದ್‌ನಲ್ಲಿ ಮಾಹಿತಿ ಸಂಗ್ರಹಿಸಿ, ಆರೋಪಿಗಳನ್ನು ಪತ್ತೆಹಚ್ಚಿತು.

    ಬಂಧಿತ ಆರೋಪಿಗಳ ವಿವರ:

    1. ಕುಲವಂತ ಸಿಂಗ್ @ ರಾಜು, 40 ವರ್ಷ, ಆಟೋ ಚಾಲಕ, ಸ್ಥಳ: ಪತ್ತೆಗಂಜ್, ಗದರಪುರ (ಉದಯಸಿಂಗ್ ನಗರ, ಉತ್ತರಾಖಂಡ).
    2. ರೇಶಮ ಸಿಂಗ್ @ ರಿಂಕೂ, 34 ವರ್ಷ, ಕೃಷಿಕ, ಸ್ಥಳ: ಗೋಟಾ, ಸಿತಾರಗಂಜ್ (ಉದಂಸಿಂಗ್ ನಗರ, ಉತ್ತರಾಖಂಡ).
    3. ತ್ರಿಲೊಕ ಸಿಂಗ್, 32 ವರ್ಷ, ಆಟೋ ಚಾಲಕ, ಸ್ಥಳ: ಲತಿಶುರ, ಪಸ್ಥಿನಾಮರ, ಮೀರತ್ (ಉತ್ತರ ಪ್ರದೇಶ).

    ಈ ಆರೋಪಿಗಳನ್ನು ಬಂಧಿಸಿದ ಪೊಲೀಸರು, ಕೃತ್ಯಕ್ಕೆ ಬಳಸಿದ ವಸ್ತುಗಳು ಮತ್ತು ಕದ್ದ 6 ಕೆ.ಜಿ. ಬೆಳ್ಳಿಯ ಛತ್ರಿ (ಅಂದಾಜು ಮೌಲ್ಯ 5,50,000 ರೂ.) ಸೇರಿದಂತೆ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

    ಕುಖ್ಯಾತ ಅಂತರರಾಜ್ಯ ಕಳ್ಳರ ತಂಡ: ಬಂಧಿತ ಆರೋಪಿಗಳು ಹರಿಯಾಣ, ಪಂಜಾಬ್, ದೆಹರಾದೂನ್, ಉತ್ತರಾಖಂಡ, ಹಿಮಾಚಲ ಪ್ರದೇಶ, ಚಂಡೀಗಡ, ಉತ್ತರ ಪ್ರದೇಶ, ಮತ್ತು ಕರ್ನಾಟಕದ ಪ್ರಮುಖ ನಗರಗಳ ದೇವಸ್ಥಾನಗಳು, ಮನೆಗಳು, ಮತ್ತು ಅಂಗಡಿಗಳಲ್ಲಿ ಕಳ್ಳತನ ಮಾಡುವ ಕುಖ್ಯಾತ ಅಂತರರಾಜ್ಯ ಕಳ್ಳರ ತಂಡದ ಸದಸ್ಯರಾಗಿದ್ದಾರೆ.

    ತನಿಖಾ ತಂಡದ ಮಾರ್ಗದರ್ಶನ: ಈ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಲು ಶ್ರೀ ನಾರಾಯಣ ಎಂ., ಐ.ಪಿ.ಎಸ್., ಪೊಲೀಸ್ ಅಧೀಕ್ಷಕರು, ಉತ್ತರ ಕನ್ನಡ, ಕಾರವಾರ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಕೃಷ್ಣಮೂರ್ತಿ, ಶ್ರೀ ಜಗದೀಶ ಎಂ., ಡಿವೈ.ಎಸ್.ಪಿ. ಶ್ರೀ ಎಸ್.ವಿ. ಗಿರೀಶ, ಪೊಲೀಸ್ ನಿರೀಕ್ಷಕರಾದ ಶ್ರೀ ರಮೇಶ ಶಂ. ಹೂಗಾರ, ಶ್ರೀ ಯು.ಹೆಚ್. ಸಾತೇನಹಳ್ಳಿ, ವೈರ್‌ಲೆಸ್ ವಿಭಾಗದ ಪೊಲೀಸ್ ನಿರೀಕ್ಷಕ ಶ್ರೀ ಸತೀಶ ಕುಮಾರ ಕೆ.ವಿ., ಬೆರಳಚ್ಚು ಘಟಕದ ಶ್ರೀ ರಾಘವೇಂದ್ರ ನಾಯ್ಕ್, ಮತ್ತು ಇತರ ಸಿಬ್ಬಂದಿಗಳಾದ ಶ್ರೀ ಸುಬ್ರಮಣ್ಯ, ಅಂಗಜ್ಜ ಡಿ., ರವೀಂದ್ರ ಬಿರಾದರ, ಮಂಜುನಾಥ ಪಾಟೀಲ, ಕುಮಾರ ಕಾಂಬಳೆ, ಸೂರಣ ಕೊಠಾರಕರ, ಹಸನ ಕುಟ್ಟಿ, ಗಿರಿಶಯ್ಯ ಎಂ.ಎಸ್., ರಾಜೇಶ ನಾಯಕ, ಅರ್ಜುನ ದೇಸಾಯಿ, ಮಕ್ತುಮಸಾಬ್ ಫತ್ತೇಖಾನ್, ಪ್ರಕಾಶ ದಂಡಪ್ಪನವರ, ಪ್ರತಾಪಕುಮಾರ ಎಂ., ಸಿ.ಡಿ.ಆರ್. ವಿಭಾಗದ ಶ್ರೀ ಬಬನ್ ಕದಂ, ಮತ್ತು ಉದಯ ಗುಣಗಾ ರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

    ಪೊಲೀಸ್ ಅಧೀಕ್ಷಕರಿಂದ ಶ್ಲಾಘನೆ: ಮಾನ್ಯ ಪೊಲೀಸ್ ಅಧೀಕ್ಷಕರು, ಉತ್ತರ ಕನ್ನಡ ಜಿಲ್ಲೆ, ಕಾರವಾರ ರವರು ತಂಡದ ಕಾರ್ಯವೈಖರಿಯನ್ನು ಶ್ಲಾಘಿಸಿ, ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

  • ಹೆಬ್ರಿಯಲ್ಲಿ ಗಂಡಸು ಕಾಣೆ: ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

    ಹೆಬ್ರಿ: ಗಿಲ್ಲಾಳಿ ಗ್ರಾಮದ ವಸಂತಿ (40) ಎಂಬುವವರು ತಮ್ಮ ಗಂಡ ಪ್ರಭಾಕರ (46) ಕಾಣೆಯಾದ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಭಾಕರ ಕೂಲಿ ಕೆಲಸ ಮಾಡುತ್ತಿದ್ದು, ಮಧ್ಯಪಾನದ ಚಟ ಹೊಂದಿದ್ದರು. ಇವರು ಈ ಹಿಂದೆ 5-6 ಬಾರಿ ಕೆಲಸಕ್ಕೆಂದು ಮನೆಯಿಂದ ಹೊರಟು 2-3 ತಿಂಗಳು ಬಿಟ್ಟು ಮರಳಿದ್ದರು.

    ಆದರೆ, 2023ರ ಡಿಸೆಂಬರ್‌ನಲ್ಲಿ ಮನೆಯಿಂದ ಹೊರಟ ಪ್ರಭಾಕರ ಈವರೆಗೆ ವಾಪಸ್ ಬಂದಿಲ್ಲ. ಸಂಬಂಧಿಕರು ಮತ್ತು ಗ್ರಾಮದ ಸುತ್ತಮುತ್ತಲಿನ ವಿಚಾರಣೆಯಲ್ಲೂ ಯಾವುದೇ ಪತ್ತೆಯಾಗಿಲ್ಲ. ಈ ಸಂಬಂಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 34/2025ರಂತೆ ಕಾಣೆಯಾದ ವ್ಯಕ್ತಿಯ ಪ್ರಕರಣ ದಾಖಲಾಗಿದೆ.

  • ಬ್ರಹ್ಮಾವರ: ಬಕ್ರೀದ್ ಹಬ್ಬದ ಪೂರ್ವಭಾವಿಯಾಗಿ ಶಾಂತಿ ಸಭೆ

    ಬ್ರಹ್ಮಾವರ, ಜೂನ್ 4, 2025: ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಧಾರ್ಮಿಕ ಮುಖಂಡರನ್ನು ಠಾಣೆಗೆ ಕರೆಯಿಸಿ ಶಾಂತಿ ಸಭೆ ನಡೆಸಿ ಹಬ್ಬದ ಸಮಯದಲ್ಲಿ ಶಾಂತಿ ಹಾಗೂ ಸೌಹಾರ್ದತೆಯಿಂದ ಕಾನೂನು ಸುವ್ಯವಸ್ಥೆಗೆ ದಕ್ಕೆ ಬಾರದಂತೆ ಆಚರಣೆ ಮಾಡುವಂತೆ ತಿಳಿಸಲಾಯಿತು.

  • ಗೌಡ ಸಾರಸ್ವತ್ ಬ್ರಾಹ್ಮಣ ಸಮಾಜ ಕಲ್ಯಾಣ ಭಟ್ಕಳ (GSS ಭಟ್ಕಳ) ಉನ್ನತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ

    ಭಟ್ಕಳ, ಜೂನ್ 2, 2025 : ಗೌಡ ಸಾರಸ್ವತ್ ಬ್ರಾಹ್ಮಣ ಸಮಾಜ ಕಲ್ಯಾಣ ಭಟ್ಕಳ (GSS ಭಟ್ಕಳ) ಸಂಸ್ಥೆಯು ಉನ್ನತ ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಉದ್ದೇಶದಿಂದ ಇತ್ತೀಚೆಗೆ ಭವ್ಯ ಸಮಾರಂಭವನ್ನು ಆಯೋಜಿಸಿದೆ. ಈ ಸಮಾರಂಭವು ಸಮುದಾಯದ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಮತ್ತು ಶೈಕ್ಷಣಿಕ ಉನ್ನತಿಗೆ ಪ್ರೇರಣೆ ನೀಡುವ ಉದ್ದೇಶವನ್ನು ಒಳಗೊಂಡಿದೆ.

    ಈ ಸಂದರ್ಭದಲ್ಲಿ ಸಮುದಾಯದ ಸದಸ್ಯರು ಮತ್ತು ಪೋಷಕರು ಉಪಸ್ಥಿತರಿದ್ದು, ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿದರು. GSS ಭಟ್ಕಳ ಸಂಸ್ಥೆಯು ಭವಿಷ್ಯದಲ್ಲೂ ಇಂತಹ ಕಾರ್ಯಕ್ರಮಗಳ ಮೂಲಕ ಶೈಕ್ಷಣಿಕ ಅಭಿವೃದ್ಧಿಗೆ ಮುಂದುವರಿಯುವ ಉದ್ದೇಶವನ್ನು ತಿಳಿಸಿದೆ.