Category: Sirsi

  • Sirsi: Missing Schoolgirls from Kasturba Nagar Found Safe in Mumbai

    Sirsi, August 17, 2025 – A distressing case involving two minor schoolgirls from Kasturba Nagar, Sirsi, who went missing on August 16, 2025, has concluded successfully due to prompt police action. The students, one in 8th grade and the other in 6th grade, left their homes around 4:00 PM, stating they were attending an art class. When they failed to return, their parents, after an extensive search, lodged a complaint with the Sirsi Market Police Station.

    Police Operation

    The police treated the case with utmost seriousness, launching an immediate investigation. Analysis of CCTV footage from the Sirsi Central Bus Stand revealed that the girls inquired about a bus to Chitradurga. As the Chitradurga bus was scheduled for 8:00 PM, they boarded a bus to Hubballi instead. From Hubballi, they traveled via Belagavi to Pune and eventually reached Mumbai, where they were spotted by local police. The Sirsi police, divided into two teams, traced the girls’ route through Hubballi and Belagavi, ultimately locating them in Mumbai.

    Investigation Details

    The operation was led by PSI Ratnakuri under the guidance of DYSP Geeta Patil and CPI Shashikant Varma, with police personnel working diligently to ensure the girls’ safe recovery. The exact reasons for the girls’ decision to leave home are still under investigation, with further details expected to emerge.

  • Weather Alert for August 18, 2025: Heavy Rainfall Expected in Karnataka, School Closures Announced

    Bengaluru, August 17, 2025 – The India Meteorological Department (IMD) has forecasted extremely heavy rainfall in Karnataka’s coastal and south interior districts on August 18, 2025, prompting a red alert for Uttara Kannada, Dakshina Kannada, Udupi, Chikkamagaluru, and Shivamogga. An orange alert has been issued for north interior districts, including Hassan, Kodagu, Haveri, and Belagavi, while a yellow alert covers Bidar, Kalaburagi, Koppal, Raichur, Vijayapura, Vijayanagara, Yadgir, Chikkaballapura, Chitradurga, Davanagere, Kolar, and Mysuru. Rainfall is expected to persist across the state until August 23, with the Tunga River flowing above danger levels, raising concerns about flooding and landslides.

    School Closures

    • Chikkamagaluru District: Due to torrential rains in the Malenadu region, the district administration has declared a holiday for anganwadis and schools on August 18 in Mudigere, Kalasa, Sringeri, Koppa, Narasimharajapura, and specific hoblis in Chikkamagaluru taluk (Jagar, Khandya, Aldur, Vastare, Avathi). District Collector Meena Nagaraj issued the order as a precautionary measure.
    • Uttara Kannada District: With a red alert in place, the district administration has announced a holiday for primary and high schools across Karwar, Ankola, Kumta, Honnavar, Bhatkal, Sirsi, Siddapur, Yellapur, Dandeli, and Joida taluks. District Collector Lakshmipriya issued the directive to ensure safety.

    Public Advisory

    The Udupi District Disaster Management Authority has urged residents, tourists, and fishermen to avoid rivers, water bodies, and the sea due to high waves and strong winds expected in the Arabian Sea. People are advised to stay indoors during rain, wind, or lightning, avoid agricultural activities, and steer clear of unstable trees, power lines, or weak structures. Residents in landslide-prone areas should contact tahsildar offices or gram panchayats for relocation to care centers. Emergency contacts include the toll-free number 1077 and the Udupi District Control Room at 0820-2574802.

    The public is requested to adhere to these safety measures to mitigate risks during this period of intense weather activity.

    Heavy rain forecast | Maravanthe | Photo:Waqqas Kazi
  • ಪಿಎಸ್‌ಐ ಕೀರಪ್ಪ ಘಟಕಾಂಬ್ಳೆ ಆತ್ಮಹತ್ಯೆ

    ಬಂಟ್ವಾಳ/ಶಿರಸಿ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಉಪನಿರೀಕ್ಷಕರಾಗಿ (ಪಿಎಸ್‌ಐ) ಸೇವೆ ಸಲ್ಲಿಸುತ್ತಿದ್ದ ಕೀರಪ್ಪ ಘಟಕಾಂಬ್ಳೆ ಅವರು ತಾವು ತಂಗಿದ್ದ ವಸತಿಗೃಹದ ಕೊಠಡಿಯಲ್ಲೇ ನೇಣು ಬಿಗಿದು ಆತ್ಮಹ*ತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಅವರ ಈ ದಿಢೀರ್ ನಿರ್ಧಾರಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

    ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದವರಾದ 45 ವರ್ಷದ ಕೀರಪ್ಪ ಘಟಕಾಂಬ್ಳೆ ಅವರು ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದರು. ಪೊಲೀಸ್ ಇಲಾಖೆಯಲ್ಲಿ ಸುಮಾರು 20 ವರ್ಷಗಳ ಅನುಭವ ಹೊಂದಿದ್ದ ಅವರು, ಈ ಹಿಂದೆ ಮುಂಡಗೋಡ, ಶಿರಸಿ ಗ್ರಾಮೀಣ ಮತ್ತು ಶಿರಸಿ ಮಾರ್ಕೆಟ್ ಪೊಲೀಸ್ ಠಾಣೆಗಳಲ್ಲಿ ಸಹಾಯಕ ಉಪನಿರೀಕ್ಷಕರಾಗಿ (ಎಎಸ್‌ಐ) ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದರು.

    ಕಳೆದ ಎಂಟು ತಿಂಗಳ ಹಿಂದಷ್ಟೇ ಅವರಿಗೆ ಪಿಎಸ್‌ಐ ಆಗಿ ಪದೋನ್ನತಿ ದೊರೆತಿತ್ತು. ಪದೋನ್ನತಿಗೊಂಡ ನಂತರ ಅವರು ಬಂಟ್ವಾಳ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದರು. ತಮ್ಮ ಕುಟುಂಬವನ್ನು ಶಿರಸಿಯಲ್ಲಿಯೇ ಬಿಟ್ಟು, ಘಟಕಾಂಬ್ಳೆ ಅವರು ಬಂಟ್ವಾಳದಲ್ಲಿ ವಾಸವಾಗಿದ್ದರು.

    ಅವರ ಆತ್ಮಹ*ತ್ಯೆಯ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸ್ ಇಲಾಖೆ ಸೇರಿದಂತೆ ಅವರ ಕುಟುಂಬಸ್ಥರು, ಸಹೋದ್ಯೋಗಿಗಳು ಮತ್ತು ಹಳಿಯಾಳ ಹಾಗೂ ಶಿರಸಿಯಲ್ಲಿರುವ ಸ್ನೇಹಿತರ ವಲಯದಲ್ಲಿ ತೀವ್ರ ಆಘಾತ ಮತ್ತು ಶೋಕ ಮನೆ ಮಾಡಿದೆ. ಅವರು ಪತ್ನಿ, ಇಬ್ಬರು ಮಕ್ಕಳು ಮತ್ತು ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

    ಬಂಟ್ವಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತೀವ್ರ ತನಿಖೆ ಆರಂಭಿಸಿದ್ದಾರೆ

  • ಶಿರಸಿ: ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಪ್ರಶಂಸನಾ ಪತ್ರ ಪ್ರದಾನ

    ಶಿರಸಿ, ಜೂಲೈ 8, 2025: ಶಿರಸಿ ಉಪವಿಭಾಗದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣಗಳ ಪತ್ತೆ, ತನಿಖೆಯಲ್ಲಿ ಸಹಾಯಕರಾಗಿ, ಠಾಣಾ ಬರಹಗಾರರಾಗಿ, ಪ್ರೊಸೆಸ್ ಜಾರಿ, ಕೋರ್ಟ್ ಮಾನಿಟರಿಂಗ್ ಕಾರ್ಯಗಳಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಅವರ ಸಮರ್ಪಿತ ಸೇವೆಯನ್ನು ಮೆಚ್ಚಿ ಪ್ರಶಂಸನಾ ಪತ್ರವನ್ನು ಪ್ರದಾನ ಮಾಡಲಾಯಿತು.

  • ಶಿರಸಿ: 41 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆಹಚ್ಚಿದ ಶಿರಸಿ ಪೊಲೀಸರು

    ಶಿರಸಿ, ಜೂಲೈ 8, 2025: ದಕ್ಷಿಣ ಕನ್ನಡ ಜಿಲ್ಲೆಯ ಬೆಲ್ತಂಗಡಿ ತಾಲೂಕಿನ ಮಂಡೂರು ನಿವಾಸಿ ಆರೋಪಿ ಪಾಸ್ಕಲ್‌ನ ವಿರುದ್ಧ 1984ರಲ್ಲಿ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 147/1984ರ ಅಡಿಯಲ್ಲಿ ಐಪಿಸಿ ಕಲಂ 279, 337, 427 ಹಾಗೂ 116 ಐಎಂವಿ ಕಾಯ್ದೆಯಡಿ ಅಪಘಾತ ಪ್ರಕರಣ ದಾಖಲಾಗಿತ್ತು. ಶಿರಸಿ ನಗರ ಪೊಲೀಸರು ತನಿಖೆ ನಡೆಸಿ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಆದರೆ, ಬೇರೆ ಜಿಲ್ಲೆಯವನಾಗಿದ್ದ ಆರೋಪಿ ಪಾಸ್ಕಲ್, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಕಣ್ತಪ್ಪಿಸಿಕೊಂಡಿದ್ದನು. ಈ ಹಿನ್ನೆಲೆಯಲ್ಲಿ ಶಿರಸಿ ನ್ಯಾಯಾಲಯವು 1987ರಲ್ಲಿ ಎಲ್‌ಪಿಸಿ 13/1987ರಂತೆ ಆತನ ವಿರುದ್ಧ ವಾರಂಟ್ ಹೊರಡಿಸಿತ್ತು.

    ಶಿರಸಿ ನಗರ ಪೊಲೀಸರು ಆರೋಪಿಯ ಪತ್ತೆಗಾಗಿ ಬೆಲ್ತಂಗಡಿ, ಮಂಗಳೂರು, ಉಡುಪಿ, ಪುತ್ತೂರು ಸೇರಿದಂತೆ ಹಲವು ಕಡೆಗಳಲ್ಲಿ ತಿರುಗಾಡಿ ಮಾಹಿತಿ ಸಂಗ್ರಹಿಸಿದ್ದರು. ಆರೋಪಿ ಪಾಸ್ಕಲ್‌ನ ತಂದೆ ಮಾರ್ಟಿನ್ ರೊಡ್ರಿಗಸ್ ನೀಡಿದ್ದ ವಿಳಾಸವನ್ನು ಬದಲಾಯಿಸಿ, ಬೆಂಗಳೂರಿನ ಬಾಗಲಗುಂಟೆಯಲ್ಲಿ ತಲೆಮರೆಸಿಕೊಂಡಿದ್ದನು. ನಂತರ ಆತ ಮೃತಪಟ್ಟಿರುವ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಆದರೆ, ಆರೋಪಿಯ ಬೆನ್ನುಹತ್ತಿದ ಶಿರಸಿ ನಗರ ಪೊಲೀಸರು ಕೊನೆಗೂ ಆತನನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಮುಂದಿನ ಕಾನೂನು ಕ್ರಮಕ್ಕಾಗಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ.

    ಕಾರ್ಯಾಚರಣೆಯಲ್ಲಿ ಭಾಗಿಯಾದ ಅಧಿಕಾರಿಗಳು:
    ಈ ಪ್ರಕರಣದ ಯಶಸ್ವಿ ಪತ್ತೆಗೆ ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಶ್ರೀ ಎಂ. ನಾರಾಯಣ ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಕೃಷ್ಣಮೂರ್ತಿ ಜೆ. ಮತ್ತು ಶ್ರೀ ಜಗದೀಶ್ ನಾಯ್ಕ್, ಶಿರಸಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀಮತಿ ಗೀತಾ ಪಾಟೀಲ್, ಶಿರಸಿ ವೃತ್ತ ನಿರೀಕ್ಷಕರಾದ ಶ್ರೀ ಶಶಿಕಾಂತ್ ವರ್ಮಾ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ. ಶಿರಸಿ ನಗರ ಠಾಣೆಯ ಪಿಎಸ್‌ಐ ಶ್ರೀ ಕ್ರೀ. ನಾಗಪ್ಪ, ತನಿಖಾ ಪಿಎಸ್‌ಐ ಶ್ರೀ ನಾರಾಯಣ ರಾಥೋಡ್, ಎಎಸ್‌ಐ ಶ್ರೀ ನೇಲ್ಬನ್‌ಆರ್ ಮೆಂತೇರೋ, ಎಎಸ್‌ಐ ಶ್ರೀ ಹೊನ್ನಪ್ಪ ಆಗೇರ್, ಶ್ರೀ ವಿಶ್ವನಾಥ ಭಂಡಾರಿ ಸೇರಿದಂತೆ ಇತರ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

    ಪ್ರಶಂಸೆ:
    ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಪೊಲೀಸ್ ಅಧೀಕ್ಷಕರಾದ ಶ್ರೀ ಎಂ. ನಾರಾಯಣ ಐಪಿಎಸ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

  • ‘ಸರ್ಕಾರಿ ಕೆಲಸ’ಕ್ಕಾಗಿ 30 ವರ್ಷದ ಹಿಂದೆ 200 ರೂ. ಪಡೆದು ವಂಚಿಸಿದ್ದ ವ್ಯಕ್ತಿ ಸೆರೆ

    ಬೈಂದೂರು: ಸರಕಾರಿ ಕೆಲಸ ಕೊಡಿಸುತ್ತೇನೆ ಎಂದು ಭರವಸೆ ನೀಡಿ 30 ವರ್ಷಗಳ ಹಿಂದೆ 200 ರೂ. ಪಡೆದು ಮೋಸ ಮಾಡಿದ್ದ ಆರೋಪಿ ಬೈಂದೂರಿನ ಮಯ್ಯಾಡಿಯ ಬಿ.ಕೆ. ರಾಮಚಂದ್ರ ರಾವ್‌ ಎಂಬಾತನನ್ನು ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

    ಶಿರಸಿಯ ಬಿಳಿಗಿರಿ ಕೊಪ್ಪದ ವೆಂಕಟೇಶ ಅವರಿಗೆ ಪದವಿ ಓದುತ್ತಿರುವಾಗ ರಾಮಚಂದ್ರನ ಪರಿಚಯವಾಗಿತ್ತು. ಆತ ಸರಕಾರಿ ನೌಕರಿ ಕೊಡಿಸುವುದಾಗಿ 200 ರೂ. ಪಡೆದು ಕೆಲಸ ಕೊಡಿಸದೆ ವಂಚಿಸಿರುವ ಕುರಿತು ಪ್ರಕರಣ ದಾಖಲಾಗಿತ್ತು.

    ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ 30 ವರ್ಷದಿಂದ ತಲೆಮರೆಸಿಕೊಂಡಿದ್ದ. ಡಿಎಸ್ಪಿ ಗೀತಾ ಪಾಟೀಲ್‌ ಹಾಗೂ ಶಿರಸಿ ಗ್ರಾಮೀಣ ಠಾಣೆ ಪಿಐ ಮಂಜುನಾಥ್‌ ಎಂ., ಪಿಎಸ್‌ಐ ಸಂತೋಷ ಕುಮಾರ್‌ ಎಂ., ಅಶೋಕ್‌ ರಾಠೊಡ್‌ ಮಾರ್ಗದರ್ಶನದಂತೆ ಠಾಣೆಯ ರಾಘವೇಂದ್ರ ಜಿ. ಮತ್ತು ಮಾರುತಿ ಗೌಡ ಬೆಂಗಳೂರಿನ ಬಳೆಪೇಟೆಯಲ್ಲಿದ್ದ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿ ಕರೆ ತಂದಿದ್ದಾರೆ.

  • ಉತ್ತರ ಕನ್ನಡದಲ್ಲಿ ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನ: ಪೊಲೀಸರಿಂದ ವಿವಿಧ ಕಡೆ ಅರಿವು ಕಾರ್ಯಕ್ರಮ

    ಕಾರವಾರ, ಜೂನ್ 24, 2025: ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನದ ಅಂಗವಾಗಿ ಉತ್ತರ ಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ದ್ರವ್ಯ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.

    ಮಂಕಿ: ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾವಿನ ಕಟ್ಟದ ಗ್ರಾಮದ ಜನರಿಗೆ ಮಾದಕ ದ್ರವ್ಯದ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಲಾಯಿತು.

    ಹೊನ್ನಾವರ: ಕಾಸರಕೊಡದ ಟೊಂಕ ಬಂದರಿನಲ್ಲಿ ಸಾರ್ವಜನಿಕರಿಗೆ 112 ಸಹಾಯವಾಣಿಯ ಮಾಹಿತಿಯೊಂದಿಗೆ ಮಾದಕ ದ್ರವ್ಯ ವ್ಯಸನದ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.

    ಹೊನ್ನಾವರ

    ಸಿದ್ದಾಪುರ: ಹಾಳದಕಟ್ಟದ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಚೇತನ ಪದವಿ ಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯದ ದುಷ್ಪರಿಣಾಮಗಳು, ಸಂಚಾರ ನಿಯಮಗಳು ಹಾಗೂ ಸೈಬರ್ ಕ್ರೈಂ ಬಗ್ಗೆ ಮಾಹಿತಿ ನೀಡಲಾಯಿತು.

    ಸಿದ್ದಾಪುರ

    ಚಿತ್ತಾಕುಲ: ಅಸ್ನೋಟಿಯ ಶಿವಾಜಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯದಿಂದ ಆಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಯಿತು.

    ಚಿತ್ತಾಕುಲ

    ಭಟ್ಕಳ: ಅಂಜುಮನ್ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಅರಿವು ಕಾರ್ಯಕ್ರಮ ಆಯೋಜಿಸಲಾಯಿತು.

    ಭಟ್ಕಳ

    ಕಾರವಾರ: ಸಿದ್ದರ ಮಲ್ಲಿಕಾರ್ಜುನ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ವ್ಯಸನದಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಯಿತು.

    ಈ ಕಾರ್ಯಕ್ರಮಗಳು ಜಿಲ್ಲೆಯಾದ್ಯಂತ ಯುವಕರು ಮತ್ತು ಸಾರ್ವಜನಿಕರಲ್ಲಿ ಮಾದಕ ದ್ರವ್ಯದ ವಿರುದ್ಧ ಜಾಗೃತಿ ಹೆಚ್ಚಿಸುವ ಗುರಿಯನ್ನು ಹೊಂದಿದ್ದವು.

  • ಶಿರಸಿ: ಗಾಂಜಾ ಮಾರಾಟ ಭೇದಿಸಿದ ಪೊಲೀಸರು: ಇಬ್ಬರ ಬಂಧನ

    ಶಿರಸಿ, ಜೂನ್ 24, 2025: ಶಿರಸಿಯ ಯಲ್ಲಾಪುರ ನಾಕಾದಲ್ಲಿ ಅಕ್ರಮ ಗಾಂಜಾ ಮಾರಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯ ತಂಡವು ಮಂಗಳವಾರ ರಾತ್ರಿ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದೆ.

    ಬಂಧಿತ ಆರೋಪಿಗಳು ಇಕ್ಬಾಲ್ ಷೇಖ್ (27, ಮುಸ್ಲಿಂಗಲ್ಲಿ, ಶಿರಸಿ) ಮತ್ತು ಇಮ್ರಾನ್ ಬಿಣ್ಣಿ (20, ರಾಜೀವ ನಗರ, ಶಿರಸಿ) ಎಂದು ಗುರುತಿಸಲಾಗಿದೆ. ಪೊಲೀಸರು ಆರೋಪಿಗಳಿಂದ 286 ಗ್ರಾಂ ಗಾಂಜಾ (ಮೌಲ್ಯ 14,300 ರೂ.), ಸ್ಯಾಮ್‌ಸಂಗ್ ಮತ್ತು ರಿಯಲ್‌ಮಿ ಕಂಪನಿಯ ಎರಡು ಮೊಬೈಲ್ ಫೋನ್‌ಗಳು (ಮೌಲ್ಯ 4,500 ರೂ.) ಹಾಗೂ 750 ರೂ. ನಗದು ವಶಪಡಿಸಿಕೊಂಡಿದ್ದಾರೆ.

    ಈ ಪ್ರಕರಣವನ್ನು ಸಂಖ್ಯೆ 700/2025ರಡಿ ಎನ್‌ಡಿಪಿಎಸ್ ಆಕ್ಟ್ ಕಲಂ 8(c), 20(b)(ii)(A) ಪ್ರಕಾರ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.

    ಕಾರ್ಯಾಚರಣೆಯು ಪೊಲೀಸ್ ಅಧೀಕ್ಷಕ ಶ್ರೀ ನಾರಾಯಣ (ಐಎಎಸ್), ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶ್ರೀ ಕೃಷ್ಣಮೂರ್ತಿ ಜೆ., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶ್ರೀ ಜಗದೀಶ ಎನ್., ಪೊಲೀಸ್ ಉಪಾಧೀಕ್ಷಕ ಶ್ರೀಮತಿ ಗೀತಾ ಪಾಟೀಲ ಮತ್ತು ಪೊಲೀಸ್ ವೃತ್ತ ನಿರೀಕ್ಷಕ ಶ್ರೀ ಶಶಿಕಾಂತ ವರ್ಮಾ ರವರ ಮಾರ್ಗದರ್ಶನದಲ್ಲಿ ನಡೆಯಿತು.

    ತಂಡದಲ್ಲಿ ಪಿಎಸ್‌ಐ ಕು. ರತ್ನಾ ಕುರಿ, ಎಎಸ್‌ಐ ಶ್ರೀ ಪಿ.ಜೆ. ಕಟ್ಟಿ, ಸಿಬ್ಬಂದಿಗಳಾದ ಮಹಾಂತೇಶ ಖಾರಕೇರ, ರಾಮಯ್ಯ ಪೂಜಾರಿ, ಹನುಮಂತ ಮಾಕಾಪೂರ, ಮಾರುತಿ ಮಾಳಗಿ, ಮಂಜುನಾಥ ವಾಳ ಮತ್ತು ಚಾಲಕ ಕೃಷ್ಣ ರೇವಣಕರ ಭಾಗವಹಿಸಿದ್ದರು.

    ಪೊಲೀಸ್ ಅಧೀಕ್ಷಕ ಶ್ರೀ ನಾರಾಯಣ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

  • ವಿಡಿಯೋ: ಶಿರಸಿಯಲ್ಲಿ ದನಕಳ್ಳರ ಬಂಧನ; ಐಷಾರಾಮಿ ವಾಹನದಲ್ಲಿ ಕೃತ್ಯ, ಸ್ಕಾರ್ಪಿಯೊ ವಶ

    ಶಿರಸಿ, ಜೂನ್ 03, 2025: ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆಯ ವತಿಯಿಂದ ಮಹತ್ವದ ಕಾರ್ಯಾಚರಣೆಯೊಂದರಲ್ಲಿ ದನಕಳ್ಳತನದಲ್ಲಿ ತೊಡಗಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಆರೋಪಿಗಳು ಐಷಾರಾಮಿ ಕೆಂಪು ಬಣ್ಣದ ಸ್ಕಾರ್ಪಿಯೊ ವಾಹನವನ್ನು ಬಳಸಿ ದನಕಳ್ಳತನ ಮಾಡುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

    ದಿನಾಂಕ 26/05/2025 ರಂದು ಶಿರಸಿ ಶಹರದ ವಿವೇಕಾನಂದ ನಗರದ ದೇವಕಾನ್ ಡೆವಲಪರ್ ಕಚೇರಿಯ ಮುಂಭಾಗದಲ್ಲಿ 2 ಲಕ್ಷ ರೂಪಾಯಿ ಮೌಲ್ಯದ ಹೋರಿ ಕರುವನ್ನು ಹಾಗೂ ಕೊಬಿಕೆರೆ ಗದ್ದೆ ಬಯಲಿನ ಖಾಲಿ ಜಾಗದಲ್ಲಿ 80,000 ರೂಪಾಯಿ ಮೌಲ್ಯದ ಕಂಟ್ರಿ ಜರ್ಸಿ ಆಕಳನ್ನು ಕೆಂಪು ಸ್ಕಾರ್ಪಿಯೊ ವಾಹನದಲ್ಲಿ ಹಿಂಸಾತ್ಮಕವಾಗಿ ಕಳವು ಮಾಡಿಕೊಂಡು ಹೋಗಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ:

    1. ಕ್ರಮ ಸಂಖ್ಯೆ 49/2025, ಕಲಂ 303(2) ಎನ್‌ಎಸ್-2023 ಮತ್ತು ಪ್ರಾಣಿ ಹಿಂಸೆ ನಿರ್ಮೂಲನಾ ಕಾಯ್ದೆ 1960, ಕಲಂ 11(1)(ಅ).
    2. ಕ್ರಮ ಸಂಖ್ಯೆ 852/2025, ಕಲಂ 305(2) ಎನ್‌ಎಸ್-2029.

    ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಶ್ರೀ ನಾರಾಯಣ ಎಂ. ಐ.ಪಿ.ಎಸ್‌ ರವರು ಆರೋಪಿಗಳು, ವಾಹನ ಹಾಗೂ ಕಳವಾದ ಜಾನುವಾರುಗಳನ್ನು ಪತ್ತೆಹಚ್ಚಲು ವಿಶೇಷ ತಂಡವೊಂದನ್ನು ರಚಿಸಿದ್ದರು. ಈ ತಂಡವು ಖಚಿತ ಮಾಹಿತಿಯ ಮೇರೆಗೆ ದಿನಾಂಕ 28/08/2038 ರಂದು ಬೆಳಗ್ಗೆ 8:00 ಗಂಟೆಗೆ ಶಿರಸಿಯ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದ ಸಮೀಪ ಕೆಂಪು ಸ್ಕಾರ್ಪಿಯೊ ವಾಹನವನ್ನು ತಡೆದು ತಪಾಸಣೆ ನಡೆಸಿತು. ಈ ವೇಳೆ ವಾಹನದಲ್ಲಿದ್ದ ಮೂವರು ಆರೋಪಿಗಳು ಓಡಿಹೋಗಲು ಯತ್ನಿಸಿದರಾದರೂ, ಪೊಲೀಸರು ಅವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಶಿರಸಿಯಲ್ಲಿ ದನಕಳ್ಳತನಕ್ಕಾಗಿ ಬಂದಿದ್ದುದಾಗಿಯೂ, ಈ ಹಿಂದಿನ ಕೃತ್ಯಗಳಿಗೆ ತಾವೇ ಜವಾಬ್ದಾರರು ಎಂದು ಒಪ್ಪಿಕೊಂಡಿದ್ದಾರೆ.

    ಬಂಧಿತ ಆರೋಪಿಗಳ ವಿವರ:

    1. ನದೀಮ್ ಅಹಮದ್, ಭದ್ರಾವತಿ, ಶಿವಮೊಗ್ಗ ಜಿಲ್ಲೆ.
    2. ಅಬ್ದುಲ್ ಆಜೀಜ್, ಭದ್ರಾವತಿ, ಶಿವಮೊಗ್ಗ ಜಿಲ್ಲೆ.
    3. ಇಮ್ರಾನ್, ಭದ್ರಾವತಿ, ಶಿವಮೊಗ್ಗ ಜಿಲ್ಲೆ.

    ವಶಪಡಿಸಿಕೊಂಡ ವಸ್ತುಗಳು:

    • ಕೆಂಪು ಬಣ್ಣದ ಸ್ಕಾರ್ಪಿಯೊ ವಾಹನ
    • ಎರಡು ಕತ್ತಿಗಳು
    • ಎರಡು ಹಗ್ಗಗಳು
    • ಮೂರು ಮೊಬೈಲ್ ಫೋನ್‌ಗಳು
    • 2,000 ರೂಪಾಯಿ ನಗದು
    • ಎರಡು ನಂಬರ್ ಪ್ಲೇಟ್‌ಗಳು

    ತನಿಖೆಯಿಂದ ಆರೋಪಿಗಳು ಬಕ್ರೀದ್ ಹಬ್ಬದ ಸಮಯದಲ್ಲಿ ಜಾನುವಾರು ಕಳ್ಳತನ ಮಾಡಿ ಹಣ ಸಂಪಾದನೆಗಾಗಿ ಸ್ಕಾರ್ಪಿಯೊ ವಾಹನ ಖರೀದಿಸಿ, ನಂಬರ್ ಪ್ಲೇಟ್ ಬದಲಾಯಿಸಿ ರಾತ್ರಿಯ ವೇಳೆಯಲ್ಲಿ ಕೃತ್ಯ ಎಸಗುತ್ತಿದ್ದರು ಎಂದು ತಿಳಿದುಬಂದಿದೆ. ಇತರ ಪ್ರಕರಣಗಳಲ್ಲಿ ಆರೋಪಿಗಳ ಭಾಗಿತ್ವದ ಬಗ್ಗೆ ಮುಂದಿನ ತನಿಖೆಯಿಂದ ಹೆಚ್ಚಿನ ಮಾಹಿತಿ ಸಿಗಲಿದೆ.

    ಈ ಕಾರ್ಯಾಚರಣೆಯನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ನಾರಾಯಣ ಎಂ. ಐ.ಪಿ.ಎಸ್‌, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಕೃಷ್ಣಮೂರ್ತಿ ಮತ್ತು ಶ್ರೀ ಜಗದೀಶ ಎಂ., ಶಿರಸಿ ಉಪಾಧೀಕ್ಷಕರಾದ ಶ್ರೀಮತಿ ಗೀತಾ ಪಾಟೀಲ್ ರವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಎಚ್‌ಐ ಶ್ರೀ ಮಂಜುನಾಥ ಗೌಡ, ಶಿರಸಿ ವೃತ್ತ ನಿರೀಕ್ಷಕ ಶ್ರೀ ಶಶಿಕಾಂತ ವರ್ಮಾ, ಕಂಟ್ರೋಲ್ ರೂಮ್ ಪಿಐ ಸತೀಶ ಕುಮಾರ್ ಕೆ.ವಿ., ಶ್ರೀ ರಾಜಕುಮಾರ ಉಕ್ಕಡ, ಪಿಎಸ್‌ಐ (ತನಿಖೆ) ಕು. ರತ್ನಾ ಕುರಿ, ಪಿಎಸ್‌ಐ (ಕಾನೂನು) ಶ್ರೀ ಮಹಾಂತೇಶ ಕುಂಬಾರ್ ಮತ್ತು ಅಪರಾಧ ವಿಭಾಗದ ಸಿಬ್ಬಂದಿಗಳಾದ ಮಹಾಂತೇಶ ಖಾರಕೇರ, ಪ್ರಶಾಂತ ಪಾವಸ್ಥರ, ರಾಮಯ್ಯ ಪೂಜಾರಿ, ಸಂದೀಪ ನಿಂಬಾಯಿ, ಅಶೋಕ ನಾಯ್ಡ, ಮಧುಕರ ಗಾಂವಕರ, ಕಾರವಾರ ಟೆಕ್ನಿಕಲ್ ಸೆಲ್‌ನ ಉದಯ ಗುನಗಾ, ಐಬನ ಕದಂ ಮತ್ತು ತನಿಖಾ ಸಹಾಯಕ ಮಾರುತಿ ಮಳಗಿ ರವರು ನಡೆಸಿದ್ದಾರೆ.