Tag: Bengaluru

  • Rahul Gandhi exposed widespread vote theft in LS polls with evidence: Siddaramaiah

    Bengaluru, August 8, 2025: Karnataka Chief Minister Siddaramaiah has backed Congress Leader of Opposition in Lok Sabha, Rahul Gandhi, in alleging widespread electoral fraud in the recent Lok Sabha elections. Siddaramaiah claimed that Gandhi presented “hard evidence” on Thursday, revealing systematic vote theft across India, enabling Prime Minister Narendra Modi to retain power.

    In a media statement, Siddaramaiah asserted, “Despite massive public discontent, Narendra Modi secured power through electoral fraud. The documents released by Rahul Gandhi provide undeniable proof.” He further demanded Modi’s resignation, stating, “Modi has no moral right to remain in office. He must resign and dissolve the government immediately.”

    The Congress Party, under Gandhi’s leadership, conducted a six-month investigation into voter records in the Mahadevapura Assembly segment of Bengaluru Central Lok Sabha constituency. The probe allegedly uncovered evidence of systematic vote theft, with the Bharatiya Janata Party (BJP) accused of illegally securing 1,00,250 votes in a constituency of approximately 3.25 lakh voters.

    Siddaramaiah highlighted five methods of alleged electoral malpractice in Mahadevapura:

    1. Fake Voters: Approximately 11,965 fake voters reportedly cast votes, with some individuals voting in multiple polling booths and even outside Karnataka, indicating deliberate misuse of the electoral process.
    2. Voters with Fake Addresses: Around 40,009 voters were registered with non-existent addresses, including “House Number 0” or random, invalid entries for names and addresses.
    3. Multiple Voters at Single Addresses: A total of 10,452 voters were registered under a few addresses, including 80 voter IDs linked to a single-bedroom house and 68 to a private club, with none of the listed voters residing at these locations.
    4. Unidentifiable Voter Photographs: About 4,132 voter ID cards had missing or unclear photos, yet these voters were allowed to cast ballots, breaching electoral protocols.
    5. Elderly “First-Time Voters”: An astonishing 33,692 voters aged 60 to 90 were registered as first-time voters via Form 6, including individuals as old as 89 and 98, raising suspicions of fraudulent registrations.

    Siddaramaiah accused the Election Commission of complicity, alleging it altered rules to suppress information and withhold electronic data and CCTV footage requested by Gandhi. “Had the Election Commission acted impartially, this scam could have been exposed within days,” he said, adding that similar tactics were likely employed nationwide by the BJP to retain power.

    The Congress Party vowed to escalate its campaign, promising to raise awareness of the alleged fraud across the country.

  • ಮಗನ ಆನ್​​ಲೈನ್ ಬೆಟ್ಟಿಂಗ್ ಗೀಳಿಗೆ ಅಪ್ಪನ ಆಸ್ತಿ ಮಾರಾಟ: ಸರಗಳ್ಳತನ ಮಾಡುತ್ತಿದ್ದ ಬಿಸಿಎ ಪದವೀಧರ ಅರೆಸ್ಟ್

    ಬೆಂಗಳೂರು, ಜೂಲೈ 9, 2025ಆನ್​​ಲೈನ್ ಬೆಟ್ಟಿಂಗ್ ಆಡಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದ ಆರೋಪಿಯನ್ನು ಮಾಗಡಿ ರೋಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

    ಕೆ. ಎನ್. ಮೂರ್ತಿ (27) ಬಂಧಿತ. ಈತನಿಂದ 17 ಲಕ್ಷ ಬೆಲೆಯ 245 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಶಿವಮೊಗ್ಗ ಮೂಲದ ಆರೋಪಿ ಬಿಸಿಎ ಪಧವೀಧರನಾಗಿದ್ದು, ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿ ಬೇಗೂರಿನ ಹೊಂಗಸಂದ್ರದಲ್ಲಿ ವಾಸವಾಗಿದ್ದ.

    ಕ್ರಿಕೆಟ್ ಬೆಟ್ಟಿಂಗ್ ಸೇರಿದಂತೆ ಆನ್​​ಲೈನ್ ಬೆಟ್ಟಿಂಗ್ ದಾಸನಾಗಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿದ್ದ. ಸಾಲಗಾರರು ಈತನ ಬೆನ್ನುಬಿದ್ದಿದ್ದರು. ಸಾಲ ತೀರಿಸಲು ಹಾಗೂ ಬೆಟ್ಟಿಂಗ್ ಆಡಲು ಮನೆಗಳ್ಳತನ ಹಾಗೂ ಸರಗಳ್ಳತನ ಕೃತ್ಯವೆಸಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಅಪ್ಪನ ಆಸ್ತಿ ಮಾರಿದರೂ ಬುದ್ಧಿ ಕಲಿಯದ ಮಗ : ಆರೋಪಿ ತಂದೆ ಅಣ್ಣಪ್ಪ ಶಿವಮೊಗ್ಗದಲ್ಲಿ ನೆಲೆಸಿದ್ದು, ಮಗ ಮಾಡಿಕೊಂಡ ಎಡವಟ್ಟಿನಿಂದ ಊರಿನಲ್ಲಿ ಜಮೀನು ಮಾರಿ ಸುಮಾರು 25 ಲಕ್ಷದವರೆಗೂ ಸಾಲ ತೀರಿಸಿದ್ದರು. ಇನ್ನಷ್ಟು ಸಾಲ ತೀರಿಸಲು ನಗರಕ್ಕೆ ಬಂದು ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದರು.

    ಇಷ್ಟಾದರೂ ಮಗನ ಆನ್​​ಲೈನ್ ಬೆಟ್ಟಿಂಗ್ ವ್ಯಾಮೋಹ ಕಡಿಮೆಯಾಗಿರಲಿಲ್ಲ. ಸುಲಭ ಹಾಗೂ ಅಕ್ರಮವಾಗಿ ಹಣ ಸಂಪಾದನೆ ಮಾಡಲು ಅಪರಾಧ ಎಸಗುವುದನ್ನ ಆರೋಪಿ ರೂಢಿಗತ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಮಹಿಳೆಯ ಸರ ಕದ್ದ ಪ್ರಕರಣದಲ್ಲಿ ಮತ್ತೆ ಬಂಧಿತನಾದಾಗ ಕಳಚಿತು ಮುಖವಾಡ: ಬಿನ್ನಿಮಿಲ್ ಅಂಗಾಳಪರಮೇಶ್ವರಿ ದೇವಸ್ಥಾನದ ಬಳಿ ದೇವರ ದರ್ಶನಕ್ಕಾಗಿ ಸರದಿ ಸಾಲಿನಲ್ಲಿರುವಾಗ ಮಹಿಳೆ ಸರ ಕಸಿದುಕೊಂಡು ಈತ ಪರಾರಿಯಾಗಿದ್ದ. ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಇನ್​​ಸ್ಪೆಕ್ಟರ್ ಜಿ. ಪಿ. ರಾಜು ನೇತೃತ್ವದ ತಂಡವು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ 2022ರಿಂದಲೂ ರಾಜಗೋಪಾಲನಗರ, ಸುದ್ದುಗುಂಟೆಪಾಳ್ಯ, ಆವಲಹಳ್ಳ ಹಾಗೂ ಕೋಣನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಗಳ್ಳತನ ಹಾಗೂ ಸರಗಳ್ಳತನ ಪ್ರಕರಣಗಳಲ್ಲಿ ಆರೋಪಿಯಾಗಿರುವುದು ತಿಳಿದುಬಂದಿದೆ ಎಂದರು.

    ಕದ್ದ ಚಿನ್ನಾಭರಣವನ್ನ ಮಡಿವಾಳ, ಪರಪ್ಪನ ಅಗ್ರಹಾರ ಏರಿಯಾ ಹಾಗೂ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಜ್ಯುವೆಲ್ಲರಿ ಶಾಪ್​​ಗಳಲ್ಲಿ ಅಡವಿಟ್ಟು ಹಣ ಸಂಪಾದಿಸಿ ಬೆಟ್ಟಿಂಗ್ ಆಡುತ್ತಿದ್ದ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

  • Karnataka: NIA Arrests 3 Key Accused in LeT Prison Radicalisation Case

    New Delhi, July 9, 2025: The National Investigation Agency (NIA) on Tuesday arrested three key individuals, including a prison psychiatrist and a City Armed Reserve policeman, following extensive searches in two districts of Karnataka in connection with the Lashkar-e-Taiba (LeT) terror group’s 2023 prison radicalisation case.

    The arrests were made at five locations in Bengaluru and Kolar districts, leading to the detention of Dr. Nagaraj, a psychiatrist at Central Prison, Parappana Agrahara, Bengaluru, Assistant Sub-Inspector (ASI) Chan Pasha, and Anees Fathima, the mother of an absconding accused. During the searches, various digital devices, cash, gold, and incriminating documents were seized from the houses of the arrested accused and other suspects.

    The case (RC-28/2023/NIA/DLI) relates to the recovery of arms, ammunition, explosives, and digital devices, including two walkie-talkies, from habitual offenders who were conspiring to unleash terror activities in Bengaluru city with the aim of furthering the nefarious agenda of the proscribed terrorist organization LeT.

    According to the investigation, Dr. Nagaraj was smuggling mobile phones for use by prison inmates, including Tadiyandaveed Naseer, a life-time convict lodged in terror cases at Central Prison, Bengaluru. Nagaraj was supported by Pavithra in this activity. Besides searching the houses of Nagaraj and Pavithra, the NIA also searched the house of Anees Fathima, where instructions from Naseer to her son, absconder Junaid Ahmed, for raising funds were found and handed over to T Naseer in prison.

    As per NIA investigations, ASI Chan Pasha had, in 2022, been involved in passing information related to T Naseer’s escort from prison to various courts in exchange for money. The NIA has already chargesheeted nine accused, including absconder Junaid Ahmed, under various sections of the IPC and UA(P) Act, Arms Act, and Explosive Substances Act in the case. Investigations and efforts to track the absconder are continuing.

  • ಬೆಂಗಳೂರು: ಪರಿಶಿಷ್ಟ ಜಾತಿ ಗಣತಿಯಲ್ಲಿ ವಿವಾದ; ಮೂವರು ಸಿಬ್ಬಂದಿ ಅಮಾನತು

    ಬೆಂಗಳೂರು, ಜುಲೈ 6, 2025: ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ (SC) ಮನೆಗಳ ಗಣತಿಗೆ ಸಂಬಂಧಿಸಿದ ದ್ವಾರ-ದ್ವಾರ ಸಮೀಕ್ಷೆಯಲ್ಲಿ ವಿವಾದ ಭುಗಿಲೇಳಿದೆ. ಸಮೀಕ್ಷಾ ಸಿಬ್ಬಂದಿ ಯಾವುದೇ ವಿವರಗಳನ್ನು ಸಂಗ್ರಹಿಸದೆ ಮನೆಗಳ ಮೇಲೆ “ಸಮೀಕ್ಷೆ ಸಂಪೂರ್ಣ” ಸ್ಟಿಕ್ಕರ್‌ಗಳನ್ನು ಅಂಟಿಸಿದ್ದಾರೆ ಎಂಬ ಆರೋಪದಿಂದ ನಿವಾಸಿಗಳು ಕೋಪಗೊಂಡಿದ್ದಾರೆ.

    ಕೆಲವರು ಈ ಪರಿಶಿಷ್ಟ ಜಾತಿ ಸಮೀಕ್ಷೆಯನ್ನು ಕರ್ನಾಟಕದ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯೊಂದಿಗೆ ಗೊಂದಲಕ್ಕೀಡಾಗಿದ್ದಾರೆ. ರಾಜ್ಯ ಸರ್ಕಾರವು ಈ ಸಾಮಾಜಿಕ-ಆರ್ಥಿಕ ಸಮೀಕ್ಷೆಯ ಮರುಗಣತಿಗೆ ಇನ್ನೂ ಗಡುವು ನಿಗದಿಪಡಿಸಿಲ್ಲ. ಕೆಲವು ಸಿಬ್ಬಂದಿಗಳು ಇದು ಕೇವಲ “ಜಾತಿ ಗಣತಿ” ಎಂದು ಹೇಳಿದ್ದರಿಂದ, ಇದು ಪರಿಶಿಷ್ಟ ಜಾತಿ ಸಮೀಕ್ಷೆ ಎಂದು ಸ್ಪಷ್ಟಪಡಿಸದೆ ಗೊಂದಲಕ್ಕೆ ಕಾರಣವಾಗಿದೆ.

    ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ಸಮೀಕ್ಷಾ ಪ್ರಕ್ರಿಯೆಯನ್ನು ಟೀಕಿಸುವ ಪೋಸ್ಟ್‌ಗಳು ಹರಿದಾಡುತ್ತಿವೆ. ಸಮೀಕ್ಷಕರು ವೈಯಕ್ತಿಕ ವಿವರಗಳನ್ನು ಸಂಗ್ರಹಿಸದೆ ಸ್ಟಿಕ್ಕರ್‌ ಅಂಟಿಸಿರುವ ಬಗ್ಗೆ ಅನೇಕ ಘಟನೆಗಳು ವರದಿಯಾಗಿವೆ.

    ಜುಲೈ 3 ರಂದು ಬೆಂಗಳೂರಿನಲ್ಲಿ ಸಮೀಕ್ಷಕರು ಒಬ್ಬ ನಿವಾಸಿಯ ಮೇಲೆ ಕುಟುಂಬದ ಮುಂದೆ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಈ ಹಲ್ಲೆಯ ಸಿಸಿಟಿವಿ ದೃಶ್ಯಾವಳಿಗಳು ಬಹಿರಂಗವಾದ ಬಳಿಕ, ಕರ್ನಾಟಕ ಸರ್ಕಾರವು ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಿ ತನಿಖೆಗೆ ಆದೇಶಿಸಿದೆ. ದೃಶ್ಯಾವಳಿಗಳು ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಕಾರ್ಮಿಕರೊಬ್ಬರು, ರಸ್ತೆ ಗುಡಿಸುವ ಕೆಲಸಕ್ಕೆ ನಿಯೋಜಿತರಾಗಿದ್ದವರು, ಸಮೀಕ್ಷಾ ಸ್ಟಿಕ್ಕರ್‌ಗಳನ್ನು ಅಂಟಿಸುತ್ತಿರುವುದನ್ನು ತೋರಿಸಿವೆ.

    ಹಲವು ನಿವಾಸಿಗಳು ಖಾಲಿ ಮನೆಗಳಿಗೂ ಸ್ಟಿಕ್ಕರ್‌ಗಳನ್ನು ಅಂಟಿಸಲಾಗಿದೆ ಎಂದು ದೂರಿದ್ದಾರೆ. ಯಾವುದೇ ಸಮೀಕ್ಷಾ ಸಿಬ್ಬಂದಿಯೊಂದಿಗೆ ಸಂಪರ್ಕವಿಲ್ಲದೆ ಸಮೀಕ್ಷೆ ಪೂರ್ಣವಾಗಿದೆ ಎಂದು ಸರ್ಕಾರ ಹೇಗೆ ಹೇಳಬಹುದು ಎಂದು ಜನರು ಪ್ರಶ್ನಿಸಿದ್ದಾರೆ.

    ಕರ್ನಾಟಕ ಬಿಜೆಪಿಯು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವನ್ನು ಈ ದೋಷಪೂರಿತ ಸಮೀಕ್ಷೆಗಾಗಿ ತೀವ್ರವಾಗಿ ಟೀಕಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿಯು, “ಕರ್ನಾಟಕದ ಪರಿಶಿಷ್ಟ ಜಾತಿ ಗಣತಿಯು ಕನ್ನಡಿಗರ ತೆರಿಗೆ ಹಣದ ದುರ್ಬಳಕೆಯಾಗಿದೆ. ‘ಲಾಟರಿ ಸಿಎಂ’ ತಮ್ಮ ತಂಡಕ್ಕೆ ಮನೆಗಳಿಗೆ ಭೇಟಿಯಿಲ್ಲದೆ, ಖಾಲಿ ಮನೆಗಳಿಗೂ ‘ಸಮೀಕ್ಷೆ ಪೂರ್ಣ’ ಸ್ಟಿಕ್ಕರ್‌ ಅಂಟಿಸಲು ಸೂಚಿಸಿದ್ದಾರೆ” ಎಂದು ಟೀಕಿಸಿದೆ. “ಬೀಗಿಟ್ಟ ಮನೆಗಳಲ್ಲಿ ಸಮೀಕ್ಷೆಗೆ ಯಾರೊಂದಿಗೆ ಮಾತನಾಡಿದರು?” ಎಂದು ಬಿಜೆಪಿಯು ಪ್ರಶ್ನಿಸಿದೆ.

    ಮುಖ್ಯಮಂತ್ರಿ ಸಿದ್ದರಾಮಯ್ಯನವರು, 101 ಉಪಜಾತಿಗಳಿಗೆ ಆಂತರಿಕ ಮೀಸಲಾತಿಗಾಗಿ ದ್ವಾರ-ದ್ವಾರ ಸಮೀಕ್ಷೆ ಘೋಷಿಸಿದ್ದು, ನಿಖರ ಡೇಟಾ ಅಗತ್ಯ ಎಂದಿದ್ದಾರೆ. ಜಸ್ಟೀಸ್ ನಾಗಮೋಹನ್ ದಾಸ್ ಆಯೋಗವು ಈ ಡೇಟಾ ಸಂಗ್ರಹಕ್ಕೆ 65,000 ಶಿಕ್ಷಕರನ್ನು ಬಳಸಿಕೊಂಡು ಸಿದ್ಧತೆ ನಡೆಸಿದೆ.

    ಕರ್ನಾಟಕ ಬಿಜೆಪಿಯು ಆಗಸ್ಟ್ 1 ರಿಂದ ರಾಜ್ಯವ್ಯಾಪಿ ಪ್ರತಿಭಟನೆ ಆರಂಭಿಸಿ, ಆಂತರಿಕ ಮೀಸಲಾತಿಯನ್ನು ಜಾರಿಗೊಳಿಸುವಂತೆ ಒತ್ತಾಯಿಸಲಿದೆ.

  • ಬೆಂಗಳೂರು ಕಾಲ್ತುಳಿತ: ಪೊಲೀಸ್ ಕಮಿಷನರ್ ಸೇರಿ ಹಲವು ಅಧಿಕಾರಿಗಳ ಅಮಾನತು

    ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಬುಧವಾರ (ಜೂನ್ 4, 2025) ನಡೆದ ಕಾಲ್ತುಳಿತ ದುರಂತದಲ್ಲಿ 11 ಜನರು ಸಾವನ್ನಪ್ಪಿ, 47ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ರಾಜ್ಯ ಸರ್ಕಾರವು ತಕ್ಷಣವೇ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ್, ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ವಿಕಾಸ್, ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಎಚ್.ಟಿ., ಒಬ್ಬ ಎಸಿಪಿ ಹಾಗೂ ಕಬ್ಬನ್ ಪಾರ್ಕ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಗಿರೀಶ್ ಎ.ಕೆ. ಅವರನ್ನು ಅಮಾನತುಗೊಳಿಸಿದೆ.

    ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ, ಉಪ ಮುಖ್ಯಮಂತ್ರಿ, ಹಿರಿಯ ಸಚಿವರು, ಮುಖ್ಯಮಂತ್ರಿಯ ಕಾನೂನು ಸಲಹೆಗಾರ, ಅಡ್ವೊಕೇಟ್ ಜನರಲ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕರೊಂದಿಗೆ ಸುದೀರ್ಘವಾಗಿ ಸಮಾಲೋಚನೆ ನಡೆಸಿದ ಬಳಿಕ ತುರ್ತು ಪತ್ರಿಕಾಗೋಷ್ಠಿಯನ್ನುದ್ದೇಶಿ ಅವರು ಮಾತನಾಡಿದರು.

    ಸತ್ತವರ ಹೆಸರುಗಳ ಪಟ್ಟಿ

    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸಚಿವ ಸಂಪುಟ ಸಭೆಯ ನಂತರ ವಿಧಾನಸೌಧದ ಸಮ್ಮೇಳನ‌ ಸಭಾಂಗಣದಲ್ಲಿ ನಡೆಸಿದ ಸುದ್ದಿಗೋಷ್ಠಿಯ ಮುಖ್ಯಾಂಶಗಳು:

    • ಆರ್‌ಸಿಬಿ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಘಟನೆ ದು:ಖಕರವಾಗಿದ್ದು, ಮೃತಪಟ್ಟವರಿಗೆ ಮತ್ತೊಮ್ಮೆ ಸಂತಾಪ ಸೂಚಿಸುತ್ತಿದ್ದೇನೆ. ಇಂದು ಎಂದಿನಂತೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯದ ಕುರಿತು ಗಂಭೀರ ಚರ್ಚೆ ನಡೆಸಲಾಗಿದೆ. ನಿನ್ನೆ ನಡೆದ ಅಹಿತಕರ ಘಟನೆ ಬಗ್ಗೆ ಚರ್ಚಿಸಿ ಕೆಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.
    • ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶರಾದ ಜಸ್ಟೀಸ್ ಮೈಕೆಲ್ ಕುನ್ಹಾ ಅವರ ನೇತೃತ್ವದಲ್ಲಿ ಏಕಸದಸ್ಯ ಆಯೋಗವನ್ನು ರಚಿಸಿ, ತನಿಖೆ ನಡೆಸಲಾಗುತ್ತದೆ.
    • ಆರ್.ಸಿ.ಬಿ ಸಂಸ್ಥೆ ಹಾಗೂ ಕಾರ್ಯಕ್ರಮ ಆಯೋಜಕರಾದ ಡಿಎನ್‌ಎ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಈ ಮೂರು ಸಂಸ್ಥೆಗಳ ಪ್ರತಿನಿಧಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡು, ಬಂಧಿಸಲು ಸೂಚನೆ ನೀಡಲಾಗಿದೆ. ಇವರ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ.
    • ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಷನ್ ಪೊಲೀಸ್ ಇನ್ಸ್‌ಪೆಕ್ಟರ್ ಸೇರಿದಂತೆ ಆ ಭಾಗದ ಎಸಿಪಿ, ಸೆಂಟ್ರಲ್ ಡಿಸಿಪಿ, ಕ್ರೀಡಾಂಗಣದ ಉಸ್ತುವಾರಿ ವಹಿಸಿದ್ದ ಹೆಚ್ಚುವರಿ ಪೊಲೀಸ್ ಆಯುಕ್ತರು ಮತ್ತು ಬೆಂಗಳೂರು ನಗರದ ಪೊಲೀಸ್ ಕಮೀಷನರ್ ರನ್ನು ತಕ್ಷಣದಿಂದ ಅಮಾನತ್ತುಗೊಳಿಸಲು ತೀರ್ಮಾನಿಸಲಾಗಿದೆ. ಈ ದುರಂತಕ್ಕೆ ಸಂಬಂಧಪಟ್ಟ ಚರ್ಚೆಯ ನಂತರ ತೆಗೆದುಕೊಂಡ ತೀರ್ಮಾನಗಳಾಗಿವೆ. ಉಪಮುಖ್ಯಮಂತ್ರಿಗಳು, ಗೃಹಸಚಿವರು, ಸಚಿವರಾದ ಎಚ್.ಕೆ.ಪಾಟೀಲ್, ಸುಧಾಕರ್, ಮಹಾದೇವಪ್ಪ ಸೇರಿದಂತೆ ಹಿರಿಯ ಅಧಿಕಾರಿಗಳು ಚರ್ಚೆಯಲ್ಲಿ ಭಾಗವಹಿಸಿದ್ದರು.
    • ಮೇಲ್ನೋಟಕ್ಕೆ ಈ ಅಧಿಕಾರಿಗಳ ಬೇಜವಾಬ್ದಾರಿತನ, ಅಲಕ್ಷ್ಯ ಕಂಡುಬರುತ್ತಿದ್ದು, ಇವರುಗಳನ್ನು ಅಮಾನತ್ತುಗೊಳಿಸಲು ತೀರ್ಮಾನಿಸಲಾಗಿದೆ.
    • ನಾನು ಶಾಸಕರು, ಸಚಿವ, ಡಿಸಿಎಂ ಹಾಗೂ ಮುಖ್ಯಮಂತ್ರಿಯಾದ ನಂತರ ಇಂತಹ ಘಟನೆ ನಡೆದಿರಲಿಲ್ಲ. ಈ ಘಟನೆ ನನ್ನನ್ನು ಘಾಸಿಗೊಳಿಸಿದೆ. ದುರಂತದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರುತ್ತಾ, ಕುಟುಂಬದವರ ಜೊತೆ ಸರ್ಕಾರವಿದೆ ಎನ್ನುವ ಭರವಸೆಯನ್ನು ಕೂಡ ನೀಡಬಯಸುತ್ತೇನೆ.

    ನಿನ್ನೆ ಆದೇಶ ನೀಡಿದಂತೆ ಮ್ಯಾಜಿಸ್ಟ್ರೇಟ್ ತನಿಖೆ ಪ್ರಾರಂಭವಾಗಿದೆ. ಈ ಮಹಾದುರಂತದ ಬಗ್ಗೆ ಕೆಲವು ಮಾಹಿತಿಗಳು ದೊರೆತ ನಂತರ, ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಮೂರು ಸಂಸ್ಥೆಗಳ ವಿರುದ್ಧದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ.

  • ಬೆಂಗಳೂರು: ಬೂಕರ್ ಪ್ರಶಸ್ತಿ ವಿಜೇತರಾದ ಬಾನು ಮುಷ್ತಾಕ್, ದೀಪಾ ಭಾಸ್ತಿಗೆ ಅಭಿನಂದನಾ ಸಮಾರಂಭ

    ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಆಯೋಜಿಸಿದ್ದ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಬಾನು ಮುಷ್ತಾಕ್ ಹಾಗೂ ಶ್ರೀಮತಿ ದೀಪಾ ಭಾಸ್ತಿ ಅವರ ಅಭಿನಂದನಾ ಸಮಾರಂಭ ದಿನಾಂಕ 02/06/2025ರಂದು ಬೆಂಗಳೂರಿನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪಾಲ್ಗೊಂಡು ಮಾತನಾಡಿದರು.

    ಶ್ರೀಮತಿ ಬಾನು ಮುಷ್ತಾಕ್ ಅವರು ತಮ್ಮ ಕನ್ನಡ ಕೃತಿಯ ಮೂಲಕ ಬೂಕರ್ ಪ್ರಶಸ್ತಿಯನ್ನು ಗೆದ್ದು, ಕನ್ನಡ ಭಾಷೆಯ ಜ್ಯೋತಿಯನ್ನು ಜಗತ್ತಿಗೆ ಬೆಳಗಿದ್ದಾರೆ. ಇವರ ಕೃತಿಯನ್ನು ಅನುವಾದಿಸಿದ ಶ್ರೀಮತಿ ದೀಪಾ ಭಾಸ್ತಿ ಅವರು ದೇಶಕ್ಕೆ ಕೀರ್ತಿಯ ಆರತಿಯಾಗಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಅವರು ಹೆಮ್ಮೆಯಿಂದ ತಿಳಿಸಿದರು. ಈ ಇಬ್ಬರು ಸಾಧಕರು ಸಪ್ತಸಾಗರದಾಚೆ ಕರ್ನಾಟಕಕ್ಕೆ ಗೌರವ ತಂದಿದ್ದಾರೆ ಎಂದು ಅವರು ಶ್ಲಾಘಿಸಿದರು.

    “ಪ್ರತಿಯೊಬ್ಬರಿಗೂ ತಮ್ಮ ಭಾಷೆ ಮತ್ತು ಸಂಸ್ಕೃತಿ ಮುಖ್ಯವಾಗಿದೆ. ಕನ್ನಡ ಭಾಷೆ ಮತ್ತು ನಾಡಿನ ಗೌರವವನ್ನು ಜಾಗತಿಕವಾಗಿ ಹೆಚ್ಚಿಸಿದ ಬಾನು ಮುಷ್ತಾಕ್ ಮತ್ತು ದೀಪಾ ಭಾಸ್ತಿ ಅವರಿಗೆ ತುಂಬು ಹೃದಯದ ಅಭಿನಂದನೆಗಳು,” ಎಂದು ಶಿವಕುಮಾರ್ ಹೇಳಿದರು. ಈ ಸಂದರ್ಭದಲ್ಲಿ ಸರ್ಕಾರದ ವತಿಯಿಂದ ಇಬ್ಬರಿಗೂ ತಲಾ 10 ಲಕ್ಷ ರೂಪಾಯಿಗಳ ಗೌರವ ಧನವನ್ನು ಘೋಷಿಸಲಾಯಿತು

  • ನಿವೃತ್ತ ಡಿಜಿಪಿ ಓಂ ಪ್ರಕಾಶ್ ಕೊಲೆ ಪ್ರಕರಣ: ಕೃತಿಯ ಜಾಮೀನು ಅರ್ಜಿ ತಿರಸ್ಕೃತ, ಗಂಭೀರ ಸಾಕ್ಷ್ಯ ಬಹಿರಂಗ

    ಬೆಂಗಳೂರು, ಜೂನ್ 01, 2025: ಕರ್ನಾಟಕದ ನಿವೃತ್ತ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಓಂ ಪ್ರಕಾಶ್ ಅವರ ಕೊಲೆ ಪ್ರಕರಣದ ಮರಣೋತ್ತರ ಪರೀಕ್ಷಾ ವರದಿಯು ಆಘಾತಕಾರಿ ಸತ್ಯವನ್ನು ಬಹಿರಂಗಪಡಿಸಿದೆ. ಅವರ ದೇಹದ ಮೇಲೆ 34 ಗಾಯಗಳು ಕಂಡುಬಂದಿದ್ದು, ಅವುಗಳಲ್ಲಿ 4-5 ಗಂಭೀರವಾದ ಕತ್ತು, ತಲೆಯ ಹಿಂಭಾಗ ಮತ್ತು ಬೆನ್ನುಮೂಳೆಗೆ ಚೂಪಾದ ಆಯುಧದಿಂದ ಇರಿತದ ಗಾಯಗಳು ಸೇರಿವೆ.

    ಕರ್ನಾಟಕದ ಕಾನೂನು ಸುವ್ಯವಸ್ಥೆಯ ವಲಯದಲ್ಲಿ ಭಾರೀ ಆಘಾತವನ್ನುಂಟುಮಾಡಿರುವ ಈ ಕೊಲೆ ಪ್ರಕರಣದ ತನಿಖೆಯನ್ನು ಕೇಂದ್ರೀಯ ಕ್ರೈಂ ಬ್ರಾಂಚ್ (ಸಿಸಿಬಿ) ನಡೆಸುತ್ತಿದ್ದು, ಓಂ ಪ್ರಕಾಶ್ ಅವರ ಪತ್ನಿ ಪಲ್ಲವಿ ಮತ್ತು ಪುತ್ರಿ ಕೃತಿಯನ್ನು ಮುಖ್ಯ ಆರೋಪಿಗಳಾಗಿ ಗುರುತಿಸಲಾಗಿದೆ.

    ಬೆರಳಚ್ಚು ತಜ್ಞರು ಕೃತಿಯ ಎಡಗೈ ಬೆರಳಚ್ಚುಗಳು ರೆಫ್ರಿಜರೇಟರ್‌ನ ಕೆಳಭಾಗದಲ್ಲಿ ಕಂಡುಬಂದಿರುವುದನ್ನು ದೃಢೀಕರಿಸಿದ್ದಾರೆ, ಇದು ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯವಾಗಿದೆ. ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ನಲ್ಲಿ ಕೃತಿಯ ನಿರೀಕ್ಷಣಾ ಜಾಮೀನು ಅರ್ಜಿಗೆ ಸಿಸಿಬಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಓಂ ಪ್ರಕಾಶ್ ಅವರು ದೀರ್ಘಕಾಲದಿಂದ ಗೃಹ ಹಿಂಸೆಗೆ ಒಳಗಾಗಿದ್ದರು ಎಂದು ತಿಳಿಸಿದೆ.

    ಸಿಸಿಬಿಯ ವಾದದ ಪ್ರಕಾರ, ನಾಲ್ಕು ವರ್ಷಗಳ ಹಿಂದೆ ಪಲ್ಲವಿ ಅವರು ಓಂ ಪ್ರಕಾಶ್ ಅವರ ಮೇಲೆ ಕುಟ್ಟಣಿ (ಗ್ರೈಂಡಿಂಗ್ ಸ್ಟೋನ್) ಬಳಸಿ ದಾಳಿ ಮಾಡಿದ್ದರು, ಇದರಿಂದ ಅವರಿಗೆ ತಲೆಗೆ ಗಾಯಗಳಾಗಿದ್ದವು. ಇದಕ್ಕಿಂತ ಆಘಾತಕಾರಿಯಾಗಿ, ಕೊಲೆಗೆ ಹತ್ತು ದಿನಗಳ ಮೊದಲು ಪಲ್ಲವಿ ಅವರು ಓಂ ಪ್ರಕಾಶ್ ನಿದ್ದೆಯಲ್ಲಿರುವಾಗ ಅವರ ಕಿವಿಗೆ ಟಾಯ್ಲೆಟ್ ಕ್ಲೀನರ್ ಸುರಿದಿದ್ದರು ಎಂದು ಆರೋಪಿಸಲಾಗಿದೆ. ತಮ್ಮ ಜೀವಕ್ಕೆ ಭಯಗೊಂಡು ಓಂ ಪ್ರಕಾಶ್ ಅವರು ತಮ್ಮ ಸಹೋದರಿಯ ಮನೆಗೆ ಆಶ್ರಯ ಪಡೆದಿದ್ದರು. ಆದರೆ, ಕೃತಿ ಅವರನ್ನು ಬಲವಂತವಾಗಿ ಮನೆಗೆ ಕರೆತಂದಿದ್ದರು ಎಂದು ಆರೋಪಿಸಲಾಗಿದೆ, ಮತ್ತು ಎರಡು ದಿನಗಳ ನಂತರ ಅವರ ಕೊಲೆ ನಡೆದಿದೆ.

    ಸಿಸಿಬಿಯ ಪ್ರಕಾರ, ಮೇ 5 ರಂದು ಕೃತಿ ತನಿಖೆಗೆ ಸಹಕರಿಸದೇ ಇದ್ದುದ್ದರಿಂದಲೇ ಅಲ್ಲದೆ, ಕೋರ್ಟ್‌ನಿಂದ ಜಾರಿಯಾದ ವಾರಂಟ್‌ನ್ನು ಹರಿದುಹಾಕಿದ್ದಾರೆ. ಕೃತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸದಿದ್ದರೆ ಈ ಪಿತೂರಿಯ ಸಂಪೂರ್ಣ ವಿವರಗಳನ್ನು ಕಂಡುಹಿಡಿಯಲು ಸಾಧ್ಯವಿಲ್ಲ ಎಂದು ಸಿಸಿಬಿ ವಾದಿಸಿದೆ.

    ಕೃತಿ ತನ್ನ ಜಾಮೀನು ಅರ್ಜಿಯಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಿಕೊಂಡಿದ್ದರೂ, ನಿಮ್ಹಾನ್ಸ್‌ನ ಎರಡು ದಿನಗಳ ಮೌಲ್ಯಮಾಪನದಲ್ಲಿ ಅವರಿಗೆ ಯಾವುದೇ ಪ್ರಮುಖ ಮಾನಸಿಕ ರೋಗವಿಲ್ಲ ಎಂದು ದೃಢೀಕರಿಸಲಾಗಿದ್ದು, ಹಿಂದಿನ ಯಾವುದೇ ಸಮಸ್ಯೆಯಿಂದ ಅವರು ಚೇತರಿಸಿಕೊಂಡಿದ್ದಾರೆ ಎಂದು ತಿಳಿಸಲಾಗಿದೆ.

    ತನಿಖಾಧಿಕಾರಿಗಳು ಪರಿಶೀಲಿಸಿದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕೃತಿ ಮನೆಯ ಹೊರಗೆ ಪುಸ್ತಕಗಳು ಮತ್ತು ಪ್ಯಾಕೆಟ್‌ಗಳನ್ನು ಎಸೆಯುತ್ತಿರುವುದು ಕಂಡುಬಂದಿದ್ದು, ಇದನ್ನು ಸಾಕ್ಷ್ಯ ನಾಶಪಡಿಸುವ ಪ್ರಯತ್ನವೆಂದು ಸಿಸಿಬಿ ಭಾವಿಸಿದೆ. ಕೃತಿ ಬಳಸಿದ ಸ್ನಾನಗೃಹದ ವಾಶ್ ಬೇಸಿನ್ ಸಮೀಪ ಕಂಡುಬಂದ ರಕ್ತದ ಕಲೆಗಳನ್ನು ಡಿಎನ್‌ಎ ವಿಶ್ಲೇಷಣೆಗೆ ಕಳುಹಿಸಲಾಗಿದೆ.

    ಏಪ್ರಿಲ್ 24 ಮತ್ತು 29 ರಂದು ಕೃತಿಗೆ ನೋಟಿಸ್ ಜಾರಿಯಾಗಿದ್ದರೂ, ಅವರು ತನಿಖಾಧಿಕಾರಿಗಳ ಮುಂದೆ ಹಾಜರಾಗಿರಲಿಲ್ಲ. ಮೇ 3 ರಂದು ವಿಚಾರಣೆಗೆ ಬರುವುದಾಗಿ ತಿಳಿಸಿದ್ದರೂ, ಅವರು ಗೈರಾಗಿದ್ದಾರೆ ಮತ್ತು ಮೇ 5 ರಂದು ಜಾರಿಯಾದ ಅಂತಿಮ ಸಮನ್ಸ್‌ನ್ನು ಕೂಡ ನಿರ್ಲಕ್ಷಿಸಿದ್ದಾರೆ.

    ಇದರ ಜೊತೆಗೆ, ಕೃತಿಯ ಫೋನ್ ದಾಖಲೆಗಳು ಓಂ ಪ್ರಕಾಶ್ ಮತ್ತು ಅವರ ಮಗನ ನಡುವಿನ ಸಂಭಾಷಣೆಯನ್ನು ಬಹಿರಂಗಪಡಿಸಿದ್ದು, ಮಗನು ಆಸ್ತಿ ವಿವಾದದ ಬಗ್ಗೆ ಈ ಹಿಂದೆ ದೂರು ದಾಖಲಿಸಿದ್ದನು. ಕೃತೆಗೆ ಜಾಮೀನು ನಿರಾಕರಿಸಿದ್ದಾರೆ. ಕೊಲೆಯ ರಾತ್ರಿ, ಫೋನ್ ಸ್ಥಳ ದಾಖಲೆಗಳು ಕೃತಿ ಮತ್ತು ಪಲ್ಲವಿ ಇಬ್ಬರೂ ಓಂ ಪ್ರಕಾಶ್ ಅವರ ನಿವಾಸದಲ್ಲಿದ್ದರು ಎಂದು ದೃಢೀಕರಿಸಿವೆ.

    ಪ್ರಕರಣದ ವಿವರಗಳು ಮತ್ತು ಎರಡೂ ಕಡೆಯ ವಾದಗಳನ್ನು ಪರಿಶೀಲಿಸಿದ ನಂತರ, 53ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ನ ನ್ಯಾಯಾಧೀಶೆ ಅನಿತಾ ಜಿ. ಅವರು ಕೃತಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ, ಇದು ಈ ಗೌರವಾನ್ವಿತ ಕೊಲೆ ತನಿಖೆಯಲ್ಲಿ ಪ್ರಮುಖ ಬೆಳವಣಿಗೆಯಾಗಿದೆ.

  • ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣವೆಂದು ಮರುನಾಮಕರಣ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಣೆ

    ಬೆಂಗಳೂರು, ಮೇ 22, 2025: ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬುಧವಾರ, ಮೇ 21ರಂದು ರಾಮನಗರ ಜಿಲ್ಲೆಯನ್ನು ಶೀಘ್ರದಲ್ಲಿಯೇ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲಾಗುವುದು ಎಂದು ಘೋಷಿಸಿದ್ದಾರೆ. ರಾಮನಗರವೇ ಈ ಜಿಲ್ಲೆಯ ಆಡಳಿತ ಕೇಂದ್ರವಾಗಿ ಮುಂದುವರಿಯಲಿದೆ.

    ರಾಜ್ಯ ಸಂಪುಟದಲ್ಲಿ ಈ ವಿಷಯವನ್ನು ಚರ್ಚಿಸಲಾಗಿದ್ದು, ಶೀಘ್ರದಲ್ಲಿಯೇ ಅಧಿಕೃತ ಅಧಿಸೂಚನೆಯ ಮೂಲಕ ಈ ನಿರ್ಧಾರವನ್ನು ಔಪಚಾರಿಕಗೊಳಿಸಲಾಗುವುದು.

    “ಇದರಿಂದ ಯಾವುದೇ ಆರ್ಥಿಕ ಹೊರೆಯಾಗುವುದಿಲ್ಲ. ಸಂಪುಟವು ಕಾನೂನು ಅಂಶಗಳನ್ನು ಪರಿಶೀಲಿಸಿದೆ ಮತ್ತು ಶೀಘ್ರದಲ್ಲಿಯೇ ಅಧಿಸೂಚನೆ ಹೊರಡಿಸಲಾಗುವುದು,” ಎಂದು ಶಿವಕುಮಾರ್ ಅವರು ಸಂಪುಟ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿದರು.

    ರಾಮನಗರ ಜಿಲ್ಲೆಯನ್ನು ಮರುನಾಮಕರಣ ಮಾಡುವ ಪ್ರಸ್ತಾವವು ಸುಮಾರು ಒಂದು ವರ್ಷದಿಂದ ಚರ್ಚೆಯಲ್ಲಿತ್ತು. 2024ರ ಜುಲೈನಲ್ಲಿ ಶಿವಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಈ ಕುರಿತು ಔಪಚಾರಿಕ ವಿನಂತಿಯನ್ನು ಸಲ್ಲಿಸಿದ್ದರು. ಈ ಮರುನಾಮಕರಣವು ಪ್ರದೇಶಕ್ಕೆ ಹೆಚ್ಚಿನ ಅಭಿವೃದ್ಧಿ ಮತ್ತು ಗುರುತನ್ನು ತರುವುದು ಎಂದು ಅವರು ವಾದಿಸಿದ್ದರು.

    ರಾಜ್ಯ ಸರ್ಕಾರವು ಕಳೆದ ವರ್ಷ ಈ ಪ್ರಸ್ತಾವಕ್ಕೆ ಅನುಮೋದನೆ ನೀಡಿತ್ತು. ಆದರೆ, 2025ರ ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರವು ರಾಜ್ಯದ ಈ ವಿನಂತಿಯನ್ನು ತಿರಸ್ಕರಿಸಿತ್ತು, ಇದರಿಂದ ಪ್ರಕ್ರಿಯೆಯು ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಆದಾಗ್ಯೂ, ರಾಜ್ಯ ಸಂಪುಟವು ಈಗ ಮರುನಾಮಕರಣವನ್ನು ಮುಂದುವರಿಸಲು ತೀರ್ಮಾನಿಸಿದೆ.

    ಕಾನೂನು ಚೌಕಟ್ಟಿನೊಳಗೆ ಜಿಲ್ಲೆಯ ಮರುನಾಮಕರಣ
    ಶಿವಕುಮಾರ್ ಅವರು, ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣವೆಂದು ಮರುನಾಮಕರಣ ಮಾಡುವ ನಿರ್ಧಾರವು ರಾಜ್ಯ ಸರ್ಕಾರದ ಕಾನೂನು ಅಧಿಕಾರದ ಒಳಗಿದ್ದು, ಇದರಿಂದ ಯಾವುದೇ ಆರ್ಥಿಕ ಹೊರೆಯಾಗುವುದಿಲ್ಲ ಎಂದು ಪುನರುಚ್ಚರಿಸಿದರು.

    “ಶೀಘ್ರದಲ್ಲಿಯೇ ಅಧಿಸೂಚನೆ ಹೊರಡಿಸಲಾಗುವುದು. ಇದಕ್ಕೆ ಯಾವುದೇ ವೆಚ್ಚವಿಲ್ಲ. ಈ ಹಿಂದೆ, ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ರಾಮನಗರ, ಕಾನಕಪುರ, ಮಾಗಡಿಗಳು ಬೆಂಗಳೂರು ಜಿಲ್ಲೆಯ ಭಾಗವಾಗಿದ್ದವು. ನಾನೇ ಬೆಂಗಳೂರು ಗ್ರಾಮೀಣ ಜಿಲ್ಲಾ ಪಂಚಾಯಿತಿಯ ಅಧ್ಯಕ್ಷನಾಗಿದ್ದೆ. ಇದು ಆ ಐತಿಹಾಸಿಕ ಗುರುತನ್ನು ಪುನಃಸ್ಥಾಪಿಸುವ ವಿಷಯವಾಗಿದೆ,” ಎಂದು ಶಿವಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ತಿಳಿಸಿದರು.

    ಕೇಂದ್ರ ಸರ್ಕಾರವು ಈ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿತೇ ಎಂದು ಕೇಳಿದಾಗ, “ಇದರಲ್ಲಿ ಕೇಂದ್ರಕ್ಕೆ ಯಾವುದೇ ಪಾತ್ರವಿಲ್ಲ. ಇದು ರಾಜ್ಯದ ವಿಷಯ. ನಾವು ಕೇವಲ ಮಾಹಿತಿಗಾಗಿ ಪ್ರಸ್ತಾವವನ್ನು ಕಳುಹಿಸಿದ್ದೆವು. ರಾಮನಗರ, ಗದಗ್ ಅಥವಾ ಚಾಮರಾಜನಗರ ಜಿಲ್ಲೆಗಳನ್ನು ರಚಿಸುವಾಗಲೂ ಅನುಮತಿ ಕೇಳಿರಲಿಲ್ಲ. ಈಗ ಎಲ್ಲಾ ಅಧಿಕೃತ ದಾಖಲೆಗಳಲ್ಲಿ ಬೆಂಗಳೂರು ದಕ್ಷಿಣ ಎಂಬ ಹೆಸರು ಕಾಣಿಸಿಕೊಳ್ಳಲಿದೆ, ಮತ್ತು ಎಲ್ಲರೂ ಈ ಹೆಸರನ್ನು ಬಳಸಲು ಆರಂಭಿಸಬೇಕೆಂದು ನಾನು ನಿರೀಕ್ಷಿಸುತ್ತೇನೆ,” ಎಂದು ಅವರು ಸ್ಪಷ್ಟಪಡಿಸಿದರು.

    ರಾಮನಗರದ ಇತಿಹಾಸ
    ರಾಮನಗರ ಜಿಲ್ಲೆಯನ್ನು 2007ರ ಆಗಸ್ಟ್‌ನಲ್ಲಿ ಆಗಿನ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಬೆಂಗಳೂರು ಗ್ರಾಮೀಣ ಜಿಲ್ಲೆಯಿಂದ ಕೆತ್ತಿಕೊಂಡು ರಚಿಸಿದರು. ಇದು ರಾಮನಗರ, ಚನ್ನಪಟ್ಟಣ, ಹಾರೋಹಳ್ಳಿ, ಕಾನಕಪುರ ಮತ್ತು ಮಾಗಡಿ ಎಂಬ ಐದು ತಾಲೂಕುಗಳನ್ನು ಒಳಗೊಂಡಿದೆ.

    ಐತಿಹಾಸಿಕವಾಗಿ, ಬೆಂಗಳೂರು ಜಿಲ್ಲೆಯು ದೊಡ್ಡಬಳ್ಳಾಪುರ, ದೇವನಹಳ್ಳಿ, ಯಲಹಂಕ, ನೆಲಮಂಗಲ, ಅನೇಕಲ್ ಮತ್ತು ಈಗಿನ ರಾಮನಗರ ಪ್ರದೇಶಗಳನ್ನು ಒಳಗೊಂಡಿತ್ತು. 1986ರಲ್ಲಿ, ಒಂದು ಪ್ರಮುಖ ಆಡಳಿತಾತ್ಮಕ ಸುಧಾರಣೆಯಿಂದ ಇವುಗಳನ್ನು ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮೀಣ ಜಿಲ್ಲೆಗಳಾಗಿ ವಿಭಾಗಿಸಲಾಯಿತು, ಇದರಲ್ಲಿ ಗ್ರಾಮೀಣ ಜಿಲ್ಲೆಯು ಈಗಿನ ರಾಮನಗರದ ಹಲವು ತಾಲೂಕುಗಳನ್ನು ಒಳಗೊಂಡಿತ್ತು.

    ಮೆಟ್ರೋ ಫೇಸ್ 2ಗೆ ಹಸಿರು ನಿಶಾನೆ, ತ್ಯಾಜ್ಯ ನಿರ್ವಹಣೆಗೆ ಹೊಸ ಯೋಜನೆ
    ರಾಮನಗರ ಜಿಲ್ಲೆಯ ಮರುನಾಮಕರಣದ ಜೊತೆಗೆ, ಕರ್ನಾಟಕ ಸಂಪುಟವು ಬುಧವಾರ ಎರಡು ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ಅನುಮೋದನೆ ನೀಡಿದೆ—ನಮ್ಮ ಮೆಟ್ರೋದ ಎರಡನೇ ಹಂತ ಮತ್ತು ನಗರದ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯ ಒಂದು ಪ್ರಮುಖ ಸುಧಾರಣೆ.

    ಶಿವಕುಮಾರ್ ಅವರು, ಸಂಪುಟವು ಸುಮಾರು 40,424 ಕೋಟಿ ರೂಪಾಯಿಗಳ ಅಂದಾಜು ವೆಚ್ಚದೊಂದಿಗೆ ಮೆಟ್ರೋ ಯೋಜನೆಯ ಎರಡನೇ ಹಂತಕ್ಕೆ ಅನುಮೋದನೆ ನೀಡಿದೆ ಎಂದು ಘೋಷಿಸಿದರು. “ಟೆಂಡರ್ ಪ್ರಕ್ರಿಯೆಯು ಶೀಘ್ರದಲ್ಲಿಯೇ ಆರಂಭವಾಗಲಿದೆ,” ಎಂದು ಅವರು ಹೇಳಿದರು, ಪ್ರಸ್ತಾವಿತ ಟನಲ್ ರಸ್ತೆ ಯೋಜನೆಗೆ ಮಾದರಿಯನ್ನು ಅಂತಿಮಗೊಳಿಸಲು ಚರ್ಚೆಗಳು ನಡೆಯುತ್ತಿವೆ ಎಂದು ಸೇರಿಸಿದರು.

    “ನಾವು ಹೈಬ್ರಿಡ್ ಮಾದರಿಯನ್ನು ಅಳವಡಿಸಿಕೊಳ್ಳಬೇಕೆ ಎಂದು ಪರಿಗಣಿಸುತ್ತಿದ್ದೇವೆ. ಇದು ಜಾಗತಿಕ ಟೆಂಡರ್ ಆಗಿರುತ್ತದೆ,” ಎಂದು ಅವರು ತಿಳಿಸಿದರು.

    ಹೊಸ ತ್ಯಾಜ್ಯ ವಿಲೇವಾರಿ ಮಾದರಿ
    ಸಂಪುಟವು ಮುಂದಿನ ಏಳು ವರ್ಷಗಳಿಗೆ 4,790 ಕೋಟಿ ರೂಪಾಯಿಗಳ ಘನ ತ್ಯಾಜ್ಯ ನಿರ್ವಹಣೆ ಯೋಜನೆಗೆ ಅನುಮೋದನೆ ನೀಡಿದೆ. “ಬಿಜೆಪಿ ಆಡಳಿತದಲ್ಲಿ ಜಾರಿಗೊಂಡ 98-ಪ್ಯಾಕೇಜ್ ಟೆಂಡರ್‌ಗೆ ಬದಲಾಗಿ, ನಾವು 33 ಪ್ಯಾಕೇಜ್‌ಗಳನ್ನು ಪರಿಚಯಿಸುತ್ತಿದ್ದೇವೆ—ಪ್ರತಿ ಕ್ಷೇತ್ರಕ್ಕೆ ಒಂದು ಮತ್ತು ದೊಡ್ಡ ಕ್ಷೇತ್ರಗಳಲ್ಲಿ ಎರಡು,” ಎಂದು ಶಿವಕುಮಾರ್ ಹೇಳಿದರು.

    ಹಿಂದಿನ ಟೆಂಡರ್‌ಗಳಿಗೆ ಸವಾಲೊಡ್ಡಿದ್ದ ಅರ್ಜಿಗಳನ್ನು ನ್ಯಾಯಾಲಯವು ತಿರಸ್ಕರಿಸಿತ್ತು ಆದರೆ ನಾಲ್ಕು ತಿಂಗಳೊಳಗೆ ಅಂತಿಮ ನಿರ್ಧಾರ ಕೈಗೊಳ್ಳುವಂತೆ ಸೂಚಿಸಿತ್ತು ಎಂದು ಅವರು ಗಮನಿಸಿದರು. “ಹೊಸ ವ್ಯವಸ್ಥೆಯು ತ್ಯಾಜ್ಯ ವಿಂಗಡಣೆ, ವಾಹನ ನಿರ್ವಹಣೆ ಮತ್ತು ನಿರ್ಮಾಣ ಭಗ್ನಾವಶೇಷಗಳಿಗೆ ಸ್ಪಷ್ಟ ಜವಾಬ್ದಾರಿಗಳನ್ನು ನಿಯೋಜಿಸುವ ಮೂಲಕ ಗಮನಾರ್ಹ ಬದಲಾವಣೆಗಳನ್ನು ತರಲಿದೆ,” ಎಂದು ಅವರು ಸೇರಿಸಿದರು.

  • ಬೆಂಗಳೂರು: ಮೆಟ್ರೋದಲ್ಲಿ ರಹಸ್ಯವಾಗಿ ಚಿತ್ರೀಕರಿಸಿದ ಮಹಿಳೆಯರ ವಿಡಿಯೋ: ಎಫ್‌ಐಆರ್ ದಾಖಲು

    ಬೆಂಗಳೂರು, ಮೇ 21, 2025: ಬೆಂಗಳೂರು ಮೆಟ್ರೋದಲ್ಲಿ ಮಹಿಳೆಯರನ್ನು ರಹಸ್ಯವಾಗಿ ಚಿತ್ರೀಕರಿಸಿ ಇನ್‌ಸ್ಟಾಗ್ರಾಮ್ ಖಾತೆಯೊಂದರಲ್ಲಿ ವಿಡಿಯೋಗಳನ್ನು ಪೋಸ್ಟ್ ಮಾಡಲಾಗಿತ್ತು. ಇದೇ ವಿಡಿಯೋಗಳನ್ನು ಒಂದು ಟೆಲಿಗ್ರಾಮ್ ಚಾನೆಲ್‌ನಲ್ಲಿ ಸಹ ಹಂಚಿಕೊಳ್ಳಲಾಗಿತ್ತು. ಪ್ರಸ್ತುತ, ಟೆಲಿಗ್ರಾಮ್ ಚಾನೆಲ್‌ನನ್ನು ತೆಗೆದುಹಾಕಲಾಗಿದ್ದು, ಇನ್‌ಸ್ಟಾಗ್ರಾಮ್‌ನ ಎಲ್ಲಾ ಪೋಸ್ಟ್‌ಗಳನ್ನೂ ಅಳಿಸಲಾಗಿದೆ.

    ಈ ಘಟನೆಯ ಕುರಿತು ಬೆಂಗಳೂರು ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

  • ಕನ್ನಡಿಗರ ಬಗ್ಗೆ ಹೋಟೆಲ್​ ಡಿಸ್​ಪ್ಲೇನಲ್ಲಿ ಅವಾಚ್ಯ ಪದ ಬಳಕೆ.. ಮ್ಯಾನೇಜರ್ ವಶಕ್ಕೆ

    ಬೆಂಗಳೂರು: ಹೊಟೇಲ್​ನ ಡಿಸ್ಪ್ಲೇ ಬೋರ್ಡ್​ವೊಂದರಲ್ಲಿ ಕನ್ನಡಿಗರಿಗೆ ಅಪಮಾನ ಮಾಡಲಾಗಿದೆ. ಕೋರಮಂಗಲದ ಹೊಟೇಲ್​ನ ಡಿಸ್ಪ್ಲೇ ಬೋರ್ಡ್​ನಲ್ಲಿ ಅವಹೇಳನಕಾರಿಯಾಗಿ ಬರೆದು ಅತಿರೇಕದ ಉದ್ಧಟತನ ಮೆರೆದಿದ್ದಾರೆ.

    ಕೋರಮಂಗಲದ ನೆಕ್ಸಸ್ ಮಾಲ್ ಸಮೀಪದ HOTEL GS SUITEನ ಡಿಸ್ಪ್ಲೇ ಬೋರ್ಡ್ ನಲ್ಲಿ ಕನ್ನಡಿಗರಿಗೆ ಅಪಮಾನ ಆಗುವಂತಹ ಬರಹ ಹಾಕಲಾಗಿದೆ. ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಹೋಟೆಲ್​ಗೆ ತೆರಳಿ ಪೊಲೀಸರು ಪರಿಶೀಲನೆ ಮಾಡಿದ್ದಾರೆ.

    ಪೊಲೀಸರು ಹೊಟೇಲ್‌ನ ಸಿಬ್ಬಂದಿಯನ್ನು ವಶಕ್ಕೆ ಪಡೆದಿದ್ದಾರೆ. ಮತ್ತು ಬೋರ್ಡನ್ನು ಕಿತ್ತು ಹಾಕಿದ್ದಾರೆ. ಇನ್ನೂ, ಈ ಘಟನೆ ಬಗ್ಗೆ ಆಗ್ನೇಯ ವಿಭಾಗ ಡಿಸಿಪಿ ಸಾರಾಫಾತೀಮಾ, ಮಡಿವಾಳ ಠಾಣೆಯಲ್ಲಿ ಸುಮೋಟೊ ಕೇಸ್ ದಾಖಲಿಸಿದ್ದೇವೆ. ಕೆಲಸ ಮಾಡ್ತಿದ್ದ ಮ್ಯಾನೇಜರ್ ಸೇರಿ ಐವರನ್ನ ವಶಕ್ಕೆ ಪಡೆದಿದ್ದೇವೆ. ಹೋಟೆಲ್ ಮಾಲೀಕ ವಿದೇಶದಲ್ಲಿ ಇದ್ದಾನೆ. ಆತನಿಗೂ ನೋಟಿಸ್ ಕೊಟ್ಟಿದ್ದೀವಿ. ಕಳೆದ ಎಂಟನೇ ತಾರೀಖಿನಂದು ಬೋರ್ಡ್ ಅಳವಡಿಸಿದ್ದಾರೆ. ಈ ರೀತಿ ಪದ ಯಾವಾಗಿಂದ ಡಿಸ್ಪ್ಲೆ ಮಾಡಿದ್ದಾರೆ ಅನ್ನೋದು ತನಿಖೆ ಮಾಡ್ತಿದ್ದೀವಿ. ಯಾವಾಗ ಘಟನೆ ಆಗಿದೆ ಅನ್ನೋದು ತನಿಖೆ ಮಾಡ್ತಿದ್ದೇವೆ ಎಂದು ಹೇಳಿದ್ದಾರೆ.