Tag: Brahmavara

  • ಬ್ರಹ್ಮಾವರ ಜನೌಷಧಿ ಕೇಂದ್ರದಲ್ಲಿ ಪರಿಸರ ದಿನಾಚರಣೆ

    ಬ್ರಹ್ಮಾವರ: ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ, ಭಾರತೀಯ ಜನ ಔಷಧಿ ಕೇಂದ್ರ, ಸುವರ್ಣ ಎಂಟರ್ಪ್ರೈಸಸ್ ಬ್ರಹ್ಮಾವರ ಮತ್ತು ನರ್ಸರಿ ಮೆನ್ ಎಸೋಸಿಯೇಷನ್ ಇದರ ಜಂಟಿ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ವಿತರಣಾ ಸಮಾರಂಭ ಬ್ರಹ್ಮಾವರ ಜನೌಷಧಿ ಕೇಂದ್ರ ವಠಾರದಲ್ಲಿ ಜೂನ್ 5ರಂದು ನಡೆಯಿತು.

    ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ, ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ನಮ್ಮಿಂದ ಪ್ಲಾಸ್ಟಿಕ್ ತ್ಯಾಜ್ಯ ಹೆಚ್ಚಾಗುತ್ತಿದೆ ಇದರಿಂದ ಪರಿಸರ ಅಸಮತೋಲನವಾಗುವುದು. ಅಲ್ಲದೆ, ಎಲ್ಲಾ ಜೀವಿಗಳಿಗೆ ತೊಂದರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ಕೆಲಸವಾಗಬೇಕು ಮತ್ತು ಆದಷ್ಟು ಗಿಡಗಳನ್ನು ಬೆಳೆಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದರು.

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬಸವರಾಜ ಹುಬ್ಬಳ್ಳಿ ಮಾತನಾಡಿ, ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರದ ಪರಿಸರಕ್ಕೆ ಸಂಬಂಧಿಸಿದ ಬಹಳಷ್ಟು ಕಾರ್ಯಕ್ರಮಗಳು ಮಾದರಿಯಾಗಿವೆ. ಗಿಡಗಳನ್ನು ಬೆಳೆಸುವುದರಿಂದ ಪರಿಸರ ಉಳಿಯಲು ಸಾಧ್ಯ ಎಂದರು.

    ಜಯಂಟ್ಸ್ ಫೆಡರೇಶನ್ ಅಧ್ಯಕ್ಷ ತೇಜಶ್ವರ್ ರಾವ್ ಶುಭ ಹಾರೈಸಿದರು. ವೇದಿಕೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯಂಟ್ಸ್ ಅಧ್ಯಕ್ಷ ಅಣ್ಣಯ್ಯ ದಾಸ್ ವಹಿಸಿ ಅತಿಥಿಗಳನ್ನು ಸ್ವಾಗತಿಸಿದರು. ಸೆಂಟ್ರಲ್ ಕಮಿಟಿ ಸದಸ್ಯ ದಿನಕರ ಅಮೀನ್, ನಿಕಟ ಪೂರ್ವ ಅಧ್ಯಕ್ಷ ಸುಂದರ ಪೂಜಾರಿ ಮುಡುಕುಕ್ಕುಡೆ, ವಿವೇಕಾನಂದ ಕಾಮತ್, ಮಿಲ್ಟನ್ ಒಲಿವೇರಾ ಸಮುದಾಯ ಕೇಂದ್ರದ ಡಾ. ಮಹೇಶ್ ಐತಾಳ ಮುಂತಾದವರು ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ನರ್ಸರಿ ಮೆನ್ ಎಸೋಸಿಯೇಷನ್ ಅಧ್ಯಕ್ಷ ಸುರೇಶ್ ಸುವರ್ಣ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಸಂಘಟಕ ಜಯಂಟ್ಸ್ ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂದನ್ ಹೇರೂರು ಪ್ರಸ್ತಾವನೆ ಗೈದರು.ರಾಘವೇಂದ್ರ ಕವಾ೯ಲು ನಿರೂಪಿಸಿದರು.

    ಶ್ರೀನಾಥ್ ಕೋಟ, ಪ್ರತಿಭಾ ರೊನಾಲ್ಡ್ ಡಯಾಸ್, ಸಚಿನ್ ಮುಂತಾದವರು ಸಹಕರಿಸಿದರು. ಸುಮಾರು 5000ಕ್ಕೂ ಮಿಕ್ಕಿ ಗಿಡಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.

  • ಬ್ರಹ್ಮಾವರ: ಬಕ್ರೀದ್ ಹಬ್ಬದ ಪೂರ್ವಭಾವಿಯಾಗಿ ಶಾಂತಿ ಸಭೆ

    ಬ್ರಹ್ಮಾವರ, ಜೂನ್ 4, 2025: ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಧಾರ್ಮಿಕ ಮುಖಂಡರನ್ನು ಠಾಣೆಗೆ ಕರೆಯಿಸಿ ಶಾಂತಿ ಸಭೆ ನಡೆಸಿ ಹಬ್ಬದ ಸಮಯದಲ್ಲಿ ಶಾಂತಿ ಹಾಗೂ ಸೌಹಾರ್ದತೆಯಿಂದ ಕಾನೂನು ಸುವ್ಯವಸ್ಥೆಗೆ ದಕ್ಕೆ ಬಾರದಂತೆ ಆಚರಣೆ ಮಾಡುವಂತೆ ತಿಳಿಸಲಾಯಿತು.

  • ಬ್ರಹ್ಮಾವರ: ಪರಿಶಿಷ್ಟ ಜಾತಿಯ ಮಹಿಳೆಯ ಮೇಲೆ ದೌರ್ಜನ್ಯ; ಪ್ರಕರಣ ದಾಖಲು

    ಬ್ರಹ್ಮಾವರ, ಮೇ 27, 2025: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಚಾಂತಾರು ಗ್ರಾಮದ ಕೃಷಿ ಕೇಂದ್ರದಲ್ಲಿ ಪರಿಶಿಷ್ಟ ಜಾತಿಯ ಮಹಿಳೆಯೊಬ್ಬರ ಮೇಲೆ ದೌರ್ಜನ್ಯ ನಡೆದ ಘಟನೆ ವರದಿಯಾಗಿದೆ. ಪಿರ್ಯಾದಿದಾರರಾದ ಶ್ರೀಮತಿ ಜ್ಯೋತಿ (39), ಶಿರಿಯಾರ ಗ್ರಾಮದ ನಿವಾಸಿಯಾಗಿದ್ದು, ದಿನಾಂಕ 23/05/2025 ರಂದು ಸಸಿ ವಿತರಣಾ ತರಬೇತಿ ಪ್ರಮಾಣಪತ್ರ ಪಡೆಯಲು ಕೃಷಿ ಕೇಂದ್ರಕ್ಕೆ ತೆರಳಿದ್ದರು.

    ವರದಿಯ ಪ್ರಕಾರ, ಸಭಾ ಕಾರ್ಯಕ್ರಮ ಮುಗಿದ ಬಳಿಕ ಆರೋಪಿ 1 ಹಾಗೂ ಆಕೆಯ ಜೊತೆಗಾರರಿಗೆ ಮಾತ್ರ ಪ್ರಮಾಣಪತ್ರ ವಿತರಿಸಲಾಗಿತ್ತು. ಈ ಬಗ್ಗೆ ಅಧಿಕಾರಿ ಆರೋಪಿ 2 ಅವರನ್ನು ಜ್ಯೋತಿ ಪ್ರಶ್ನಿಸಿದಾಗ, ಅವರು ಕೋಪಗೊಂಡು ಆರೋಪಿ 1 ಗೆ ಜ್ಯೋತಿಯನ್ನು “ನೋಡಿಕೊಳ್ಳುವಂತೆ” ಸೂಚಿಸಿದ್ದಾರೆ. ಸಂಜೆ 4 ಗಂಟೆ ಸುಮಾರಿಗೆ, ಜ್ಯೋತಿ ತರಬೇತಿ ಕೊಠಡಿಯ ಹೊರಗೆ ನಿಂತಿರುವಾಗ, ಆರೋಪಿ 1 ಮತ್ತು ಆರೋಪಿ 3 ಎಂಬುವವರು ಜ್ಯೋತಿಯನ್ನು ಕೊಠಡಿಯೊಳಗೆ ತಳ್ಳಿ, ಬಾಗಿಲಿಗೆ ಚಿಲಕ ಹಾಕಿ, “ನೀನು ಅಧಿಕಾರಿಗಳಿಗೆ ಗಾಂಚಲಿ ಮಾಡ್ತಿಯಾ?” ಎಂದು ಕೈಯಿಂದ ಹೊಡೆದು, ಕುರ್ಚಿಯಿಂದ ಹಲ್ಲೆ ಮಾಡಿ, ಕಾಲಿನಿಂದ ಹೊಟ್ಟೆಗೆ ಒದ್ದಿದ್ದಾರೆ . ಬಳಿಕ ಆರೋಪಿ 2 ಕೂಡ ಸ್ಥಳಕ್ಕೆ ಆಗಮಿಸಿ, ಬಾಗಿಲಿಗೆ ಚಿಲಕ ಹಾಕಿ ದೌರ್ಜನ್ಯಕ್ಕೆ ಸಹಕರಿಸಿದ್ದಾರೆ ಎಂದು ಆರೋಪಿಸಲಾಗಿದೆ.

    ಪಿರ್ಯಾದಿದಾರರು ಪರಿಶಿಷ್ಟ ಜಾತಿಗೆ ಸೇರಿದವರೆಂದು ತಿಳಿದಿದ್ದರೂ, ಉದ್ದೇಶಪೂರ್ವಕವಾಗಿ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 119/2025 ರ ಅಡಿಯಲ್ಲಿ ಕಲಂ 127(2), 115(2), 118(1), 352, 351(2), 114 R/W 3(5) BNS ಹಾಗೂ ಕಲಂ 3(1)(r), 3(1)(s), 3(2)(v-a) SC/ST POA Act ರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ಬ್ರಹ್ಮಾವರ: ಜಾಗದ ವಿವಾದ; ಹಲ್ಲೆ, ಕೊಲೆ ಬೆದರಿಕೆ

    ಬ್ರಹ್ಮಾವರ, ಮೇ 20, 2025: ಹೆಗ್ಗುಂಜೆ ಗ್ರಾಮದ ವಸಂತ (33) ಮತ್ತು ಅವರ ಅಣ್ಣ ಸುಧಾಕರ ಅವರ ‘ಕುಂಕಿ’ ಜಾಗಕ್ಕೆ ಸಂಬಂಧಿಸಿದಂತೆ 3 ದಿನಗಳ ಹಿಂದೆ ಧರೆ ಹಾಕಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ದಿನಾಂಕ 19-05-2025ರ ಬೆಳಿಗ್ಗೆ 8:45 ಗಂಟೆಗೆ ವಸಂತ ಮತ್ತು ಸುಧಾಕರ ಜಾಗದ ಪಕ್ಕದಲ್ಲಿ ಮೋಟಾರ್‌ಸೈಕಲ್ ನಿಲ್ಲಿಸುವ ಸ್ಥಳದಲ್ಲಿ ಇದ್ದಾಗ, ಆರೋಪಿಗಳಾದ ಸಂಜು, ಭರತ, ಕಾರ್ತಿಕ್, ಸಂತೋಷ, ಚೈತ್ರಾ, ಲಕ್ಷ್ಮೀ, ಜ್ಯೋತಿ, ದಿವ್ಯಾ ಮತ್ತು ಕಾವ್ಯಾ ತಕರಾರು ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

    ಆರೋಪಿ ಭರತ ವಸಂತ ಅವರನ್ನು ಚರಂಡಿಗೆ ದೂಡಿದ್ದು, ಚೈತ್ರಾ ಸುಧಾಕರ ಅವರ ಕುತ್ತಿಗೆ ಹಿಡಿದಿದ್ದಾಳೆ. ಭರತ ಕೈಯಿಂದ ವಸಂತ ಮತ್ತು ಸುಧಾಕರ ಅವರ ಮುಖಕ್ಕೆ ಗುದ್ದಿದ್ದಾನೆ. ಸಂಜು ಮರದ ದೊಣ್ಣೆಯಿಂದ ಸುಧಾಕರ ಅವರ ಮರ್ಮಾಂಗಕ್ಕೆ ಮತ್ತು ಬೆನ್ನಿಗೆ ಹೊಡೆದಿದ್ದಾನೆ. ಸಂತೋಷ ಕೆನ್ನೆಗೆ ಹೊಡೆದಿದ್ದಾನೆ, ಕಾರ್ತಿಕ್ ಸುಧಾಕರ ಅವರನ್ನು ಕೆಳಗೆ ದೂಡಿದ್ದಾನೆ. ಆರೋಪಿಗಳೆಲ್ಲರೂ ಸೇರಿ ಸುಧಾಕರ ಅವರನ್ನು ಒತ್ತಿ ಹಿಡಿದಿದ್ದು, ಭರತ ಕೆಂಪು ಕಲ್ಲು ತಂದು “ನಿಮ್ಮ ತಲೆಗೆ ಹಾಕಿ ಜೀವಸಹಿತ ಬಿಡುವುದಿಲ್ಲ” ಎಂದು ಕೊಲೆ ಬೆದರಿಕೆ ಹಾಕಿದ್ದಾನೆ.

    ಈ ಹಲ್ಲೆಯಿಂದ ವಸಂತ ಮತ್ತು ಸುಧಾಕರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 115/2025, ಕಲಂ 115(2), 118(1), 352, 351(2) ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.

  • ಬ್ರಹ್ಮಾವರ: ಸೈಬರ್ ಕಳ್ಳರಿಂದ 2.84 ಲಕ್ಷ ರೂ. ವಂಚನೆ

    ಬ್ರಹ್ಮಾವರ, ಮೇ 20, 2025: 30 ವರ್ಷದ ಪ್ರಶಾಂತ ಎಂಬವರಿಗೆ ದಿನಾಂಕ 22-11-2024ರಿಂದ 06-12-2024ರ ಮಧ್ಯೆ ಸೈಬರ್ ಅಪರಾಧಿಗಳು RPC ಎಂಬ ಟ್ರೇಡಿಂಗ್ ಲಿಂಕ್ ಮೂಲಕ WhatsApp ಗ್ರೂಪ್‌ನಲ್ಲಿ ವ್ಯವಹಾರ ಆಹ್ವಾನಿಸಿ, ಗೂಗಲ್ ಪೇ ಮೂಲಕ ಕಳುಹಿಸಿದ ಸ್ಕ್ಯಾನ್ ಕೋಡ್‌ಗಳ ಮೂಲಕ ಹಂತಹಂತವಾಗಿ ಒಟ್ಟು 2,84,600 ರೂಪಾಯಿ ಹಣವನ್ನು ಹೂಡಿಕೆ ಮಾಡಿಸಿಕೊಂಡು ವಂಚಿಸಿದ್ದಾರೆ.

    ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 114/2025, ಕಲಂ 66(C), 66(D) IT Act ರಂತೆ ಪ್ರಕರಣ ದಾಖಲಾಗಿದೆ.

  • ಬ್ರಹ್ಮಾವರ: ಎಸ್‌ಎಸ್‌ಎಲ್‌ಸಿ ಯಲ್ಲಿ ಉತ್ತೀರ್ಣ; ಹಾರಾಡಿ ಗ್ರಾಮ ಪಂಚಾಯಿತಿ ವತಿಯಿಂದ ಕು. ಪ್ರತೀಕ್ಷಾಗೆ ಸನ್ಮಾನ

    ಬ್ರಹ್ಮಾವರ: ತಾಲೂಕಿನ ಹಾರಾಡಿಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಶೈಕ್ಷಣಿಕ ಸಾಧನೆಯನ್ನು ಗುರುತಿಸುವ ಸಮಾರಂಭವೊಂದು ಇತ್ತೀಚೆಗೆ ನಡೆಯಿತು. ಈ ಸಂದರ್ಭದಲ್ಲಿ, ಅರಿವು ಕೇಂದ್ರ ಹಾರಾಡಿಯ ಸೌಲಭ್ಯಗಳನ್ನು ಪಡೆದು ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ 91.84 ಅಂಕಗಳೊಂದಿಗೆ ಉತ್ತೀರ್ಣರಾದ ಕು. ಪ್ರತೀಕ್ಷಾ ಅವರನ್ನು ಸನ್ಮಾನಿಸಲಾಯಿತು.

    ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು, ಸ್ಥಳೀಯ ಮುಖಂಡರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.

  • ಬ್ರಹ್ಮಾವರ: ಅರಿವು ಕೇಂದ್ರ – ಹಾರಾಡಿಯೆಲ್ಲಿ ಬೇಸಿಗೆ ಶಿಬಿರ

    ಬ್ರಹ್ಮಾವರ: ಇಲ್ಲಿನ ಹಾರಾಡಿಯೆಲ್ಲಿನ ಅರಿವು ಕೇಂದ್ರದಲ್ಲಿ ಮಕ್ಕಳಿಗೆ ಬೀಗೆ ಶಿಬಿರ ಆರಂಭವಾಗಿದ್ದು, ಮಕ್ಕಳಿಗೆ ವಿವಿಧ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

    ಬೇಸಿಗೆ ಶಿಬಿರದ ಮೊದಲನೇ ದಿನದ ಚಟುವಟಿಕೆಎಲ್ಲಿ ಗಟ್ಟಿ ಓದು, ಫನ್ನಿ ಗೇಮ್ಸ್ ಹಾಗೂ ಡ್ರಾಯಿಂಗ್ ಮಾಡಿಸಲಾಯಿತು.

    ಅರಿವು ಕೇಂದ್ರದಲ್ಲಿ ವರ್ಷ ಉದ್ದಕ್ಕೋ ಬೇರೆ ಬೇರೆ ತರಬೇತಿ ನೀಡಲಾಗುತಿತ್ತು, ಈ ವರ್ಷ ಪಕ್ಷಿಗಳ ಮಾಯಾಲೋಕ ತರಬೇತಿ ಕಾರ್ಯಕರಮ ವೀಕ್ಷಣೆ , ಚೆಸ್ ಆಟ, ಪರೀಕ್ಷೆಯ ತಯಾರಿ, ಇಂಗ್ಲಿಷ್ ಟೈಪಿಂಗ್, ಗಟ್ಟಿ ಓದು ಕಾರ್ಯಕ್ರಮ ನಡಿಯಿತು.