Tag: Bynduru

  • Madgaon-Ernakulam Superfast Express Now Stops at Mookambika Road Station in Byndoor

    Byndoor, September 1, 2025: To facilitate easier access for devotees visiting the Kollur Mookambika Temple, the Madgaon-Ernakulam Superfast Express, operating between Madgaon in Goa and Ernakulam in Kerala, has been authorized to stop at Mookambika Road Railway Station in Byndoor. This new stop is expected to provide significant convenience for pilgrims traveling to the temple.

    The train made its first stop at Mookambika Road Railway Station on August 31, 2025. The event was attended by members of the Byndoor Rickshaw and Taxi Union, along with railway officials, including Commercial Supervisor S. K. Bhat from Udupi and Surendra Kumar, who welcomed the train. Railway authorities stated that this stop will enhance travel convenience for both devotees and local residents.

  • Byndoor: Theft at Kanchika Durgaparameshwari Temple, Gold and Silver Ornaments Stolen

    Byndoor, August 23, 2025 – A theft was reported at the Kanchika Durgaparameshwari Temple in Bada village, Byndoor, where unknown culprits stole valuable ornaments from the deity. The complainant, Subramanya Bhat, the temple priest, stated that on August 22, 2025, he completed the morning puja by 9:00 AM and left for the nearby Nagaraban to perform additional rituals, leaving the main temple door ajar. Upon returning at 10:45 AM, he found the door open and discovered that a 2-gram gold nose ring and a 1-gram gold pendant attached to a silver Karimanisara necklace, adorning the deity, were missing. The stolen items are estimated to be worth ₹30,000.

    The Byndoor police registered a case under Crime No. 154/2025, invoking Sections 331(3) and 305 of the Bharatiya Nyaya Sanhita (BNS) 2023. Section 331(3) addresses theft in a sacred place, punishable by up to seven years imprisonment and a fine, while Section 305 covers theft, with penalties up to two years imprisonment, a fine, or both.

  • Byndoor: Passenger Drugged with Chocolate, Robbed of ₹4.86 Lakh Worth of Gold and Cash on Train

    Byndoor, August 20, 2025: A theft incident involving a passenger drugged with a laced chocolate was reported at Byndoor Police Station in Udupi district. The complainant, Harish from Bantwal, was traveling by train from Karwar to Mangaluru on August 10, 2025, when an unidentified man, approximately 35 years old, boarded at Bhatkal. After introducing himself, the stranger offered Harish a chocolate, which caused him to fall asleep. Upon waking the next morning, Harish discovered that valuables worth ₹4.86 lakh were missing.

    The stolen items include a 28-gram gold chain valued at ₹2,35,000, an 8-gram gold ring worth ₹70,000, a Fast Track watch priced at ₹3,500, a OnePlus mobile phone (SIM: 96866*****) valued at ₹28,000, ₹5,000 cash from his shirt pocket, and ₹1,45,000 cash from his bag, totaling ₹4,86,500. Harish filed a complaint detailing the theft, and the Byndoor police have registered a case under relevant sections of the Bharatiya Nyaya Sanhita (BNS) for theft and cheating. The investigation is ongoing to identify and apprehend the suspect.

  • ಉಡುಪಿ-ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಸ್‌ ಡಿ ಪಿ ಐ ಪಕ್ಷದ ಚುನಾಯಿತ ಜನಪ್ರತಿನಿಧಿಗಳ ಮೇಲುಸ್ತುವಾರಿಗಳ ಸಭೆ

    ಬೈಂದೂರು, 14 ಜುಲೈ 2025: ರಾಜ್ಯ ಚುನಾವಣಾ ಉಸ್ತುವಾರಿ ಹಾಗೂ ರಾಜ್ಯ ಪ್ರದಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಹಾಗೂ ರಾಜ್ಯ ERM ರಾಜ್ಯ ಉಸ್ತುವಾರಿ ಅಬ್ರಾರ್ ಅಹ್ಮದ್ ರವರ ಸಮ್ಮುಖದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚುನಾಯಿತ ಜನಪ್ರತಿನಿಧಿಗಳ ಮೇಲುಸ್ತುವಾರಿಗಳ (ERM) ಸಭೆಯು ನಡೆಯಿತು. ಪ್ರಾಸ್ತಾವಿಕವಾಗಿ ಮಾತನಾಡಿದ ಅಫ್ಸರ್ ಕೊಡ್ಲಿಪೇಟೆ ಅವರು “ಪಕ್ಷದ ರಾಜಕೀಯ ಶಕ್ತಿ ಮತ್ತು ಸಾರ್ವತ್ರಿಕ ಪ್ರಭಾವವನ್ನು ಮತ್ತಷ್ಟು ಬಲಪಡಿಸಲು, ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಪ್ರಮುಖ ಹಂತವಾಗಿವೆ. ಈ ಹಿನ್ನಲೆಯಲ್ಲಿ, ಪಕ್ಷದ ಪರವಾಗಿ ಆಯ್ಕೆಯಾದ ಪ್ರತಿನಿಧಿಗಳ ಜವಾಬ್ದಾರಿ ಬಹಳ ಹೆಚ್ಚಾಗಿದೆ. ರಾಜಕೀಯ ಬದ್ಧತೆ ಮತ್ತು ಕಾರ್ಯಕ್ಷಮತೆ ಮೂಲಕ, ಪಕ್ಷವನ್ನು ‘Emerging to Power’ ದಿಕ್ಕಿಗೆ ನಯವಾಗಿ ಮುನ್ನಡೆಸುವ ಮಹತ್ವದ ಪಾತ್ರ ಇವರು ನಿಭಾಯಿಸಬೇಕಿದೆ,” ಎಂದು ಸಲಹೆ ನೀಡಿದರು.

    ಸಭೆಯಲ್ಲಿ ಮಾತನಾಡಿದ ಅಬ್ರಾರ್ ಅಹ್ಮದ್ ಅವರು, “ಪಕ್ಷದ ಪರವಾಗಿ ಆಯ್ಕೆಯಾದ ಜನಪ್ರತಿನಿಧಿಗಳು ಕಾರ್ಯಕ್ಷಮತೆ ಹೆಚ್ಚಿಸುವ ನಿಟ್ಟಿನಲ್ಲಿ ಪಕ್ಷದ ವತಿಯಿಂದ ಕಾಲಕಾಲಕ್ಕೆ ತಕ್ಕಂತೆ ವಿಶೇಷ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗುತಿದ್ದು, ಇದರ ಸದುಪಯೋಗ ಪಡಿಸಿಕೊಂಡು ಉತ್ತಮ ಕೆಲಸಕಾರ್ಯಗಳನ್ನು ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

    ಸಭೆಯಲ್ಲಿ ಪಾಲ್ಗೊಂಡಿದ್ದ ಕಾವ್ರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೌಶೀನ್, ಗಂಗೊಳ್ಳಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ತಬ್ರೇಜ್ ಹಾಗೂ ವಿವಿಧ ಪಂಚಾಯಿತಿ ಸದಸ್ಯರುಗಳು ತಮ್ಮ ಅನುಭವವನ್ನು ಹಂಚಿಕೊಂಡರು.
    ಅವರು ಕಾರ್ಯನಿರ್ವಹಿಸುತ್ತಿರುವ ಪಂಚಾಯಿತಿಗಳಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳು, ಸರಕಾರದ ಯೋಜನೆಗಳ ಅನುಷ್ಠಾನ, ಮತ್ತು ಜನರ ಪೈಕಿ ಪಕ್ಷದ ಭದ್ರತೆ ಹೆಚ್ಚಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು.

    ಪಕ್ಷದ ಜನಪರ ರಾಜಕೀಯ ಭದ್ರತೆಯ ರೂಪರೇಖೆಗಾಗಿ ಈ ಸಭೆ ಒಂದು ದಿಕ್ಕು ತೋರುವ ಹೆಜ್ಜೆಯಾಗಿದೆ.
    ಈ ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಹನೀಫ್ ಮೂಳೂರು , ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಜಾಕ್ ವೈ. ಎಸ್, ಜಿಲ್ಲಾ ಸಮಿತಿ ಸದಸ್ಯ ಮಹಮ್ಮದ್ ಹನೀಫ್, ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಸಮೀರ್ ಉಪಸ್ಥಿತರಿದ್ದರು.

  • ಮೂಕಾಂಬಿಕಾ ರೈಲು ನಿಲ್ದಾಣದ ರಸ್ತೆ ಬಳಿಯ ಹೋಟೆಲ್ ಬಾಡಿಗೆಯ ವಿವರಗಳನ್ನು ಒದಗಿಸಲು ಕೇಂದ್ರ ಮಾಹಿತಿ ಆಯೋಗದ ಆದೇಶ.

    ನವದೆಹಲಿ, ಜುಲೈ 13, 2025: ಉಡುಪಿ ಜಿಲ್ಲೆಯ ಬೈಂದೂರಿನ ಮೂಕಾಂಬಿಕಾ ರಸ್ತೆ ರೈಲ್ವೆ ಸ್ಟೇಷನ್ ಸಮೀಪದ ಹೋಟೆಲ್‌ಗೆ ಸಂಬಂಧಿಸಿದ ಬಾಡಿಗೆ ಪಾವತಿ ವಿವರಗಳನ್ನು ಕೊಂಕಣ ರೈಲ್ವೆ ನಿಗಮ (KRCL) ಒದಗಿಸಬೇಕೆಂದು ಕೇಂದ್ರೀಯ ಮಾಹಿತಿ ಆಯೋಗ (CIC) ಆದೇಶಿಸಿದೆ. ಈ ತೀರ್ಪು ಮಾಹಿತಿ ಆಯುಕ್ತ ವಿನೋದ್ ಕುಮಾರ್ ತಿವಾರಿ ಅವರಿಂದ ಜುಲೈ 7, 2025ರಂದು, ಜುಲೈ 1ರಂದು ನಡೆದ ವಿಚಾರಣೆಯ ನಂತರ ಪ್ರಕಟಿಸಲಾಯಿತು.

    ಕೆರಕಟ್ಟೆ ವೆಂಕಟೇಶ್ ಕರ್ನಾಥ್ ಎಂಬವರು ಆಕ್ಟೋಬರ್ 7, 2023ರಂದು RTI ಅರ್ಜಿ ಸಲ್ಲಿಸಿ, ಮೂಕಾಂಬಿಕಾ ರೆಸ್ಟೋರೆಂಟ್ ಮತ್ತು ಹೋಟೆಲ್ ಅಂಬಿಕಾ ಇಂಟರ್‌ನ್ಯಾಷನಲ್‌ಗೆ ಸಂಬಂಧಿಸಿದ ಫ್ರಾಂಚೈಸಿ ಶುಲ್ಕ ಮತ್ತು ಅನುಮತಿ ವಿವರಗಳನ್ನು ಕೇಳಿದ್ದರು. ಇವು ಕೊಂಕಣ ರೈಲ್ವೆಯ ಭೂಮಿಗೆ ಸಂಪರ್ಕ ಹೊಂದಿರುವ ಭೂಮಿಯ ಮೇಲೆ ನಿರ್ಮಾಣವಾಗಿವೆ ಎಂದು ಅವರು ತಿಳಿಸಿದರು. ಶುಲ್ಕ ಪಾವತಿ ಮಾಡಿದವರ ಹೆಸರು, ಪಾವತಿ ವಿವರಗಳು ಮತ್ತು ಶುಲ್ಕದ ಅವಧಿ (ವಾರ್ಷಿಕ ಅಥವಾ ಅರ್ಧ-ವಾರ್ಷಿಕ) ತಿಳಿಯಲು ಅವರು ಬಯಸಿದರು. ಪೂರ್ಣ ಮಾಹಿತಿ ಸಿಗದೆ, ಅವರು ಮೊದಲ ಮತ್ತು ಎರಡನೇ ಮನವಿಗಳನ್ನು ಸಲ್ಲಿಸಿದ್ದು, ಎರಡನೇ ಮನವಿ ಫೆಬ್ರವರಿ 14, 2024ರಂದು ದಾಖಲಾಗಿತ್ತು.

    KRCL ಅವರು ಮೂಕಾಂಬಿಕಾ ರೆಸ್ಟೋರೆಂಟ್‌ಗೆ ಸಂಬಂಧಿಸಿದ ವಿವರಗಳನ್ನು ಒದಗಿಸಿದ್ದರು ಎಂದು ತಿಳಿಸಿದರು. ಆದರೆ ಹೋಟೆಲ್ ಅಂಬಿಕಾ ಇಂಟರ್‌ನ್ಯಾಷನಲ್ KRCL ಭೂಮಿಯ ಮೂಲಕ ಸಂಪರ್ಕ ಹೊಂದಿಲ್ಲ ಎಂದು ಕಾರಣ ನೀಡಿ, ಶುಲ್ಕ ಸಂಬಂಧಿ ದಾಖಲೆಗಳಿಲ್ಲ ಎಂದರು. ಆದರೆ ಇತ್ತೀಚಿನ ಪರಿಶೀಲನೆಯಲ್ಲಿ, ಆ ಹೋಟೆಲ್ KRCL ಸ್ಟೇಷನ್ ಪ್ರವೇಶ ರಸ್ತೆಯನ್ನು ಬಳಸುತ್ತಿದೆ ಎಂದು ಗೊತ್ತಾಗಿದೆ. ಹೋಟೆಲ್ ಮಾಲೀಕ ಜೂನ್ 21, 2025ರಂದು ಬಾಡಿಗೆ ಪಾವತಿಸಲು ಒಪ್ಪಿದ್ದು, KRCL ಆ ಶುಲ್ಕ ಸಂಗ್ರಹಿಸಲು ಕ್ರಮ ಕೈಗೊಂಡಿದೆ.

    CIC ವೆಂಕಟೇಶ್‌ನ ಪ್ರಯತ್ನಗಳನ್ನು ಪ್ರಶಂಸಿಸಿದ್ದು, ಇದು ಸುದ್ದಿಗೊಳಿಸಿದ ಘಟನೆಯು KRCLಗೆ ಆದಾಯ ತರಬಹುದು ಎಂದು ತಿಳಿಸಿದೆ. ಒಬ್ಬ ಅಧಿಕಾರಿ ಈ ಬಳಕೆಯ ಬಗ್ಗೆ ತಿಳಿದಿದ್ದರೂ ಕ್ರಮ ತೆಗೆದುಕೊಂಡಿರಲಿಲ್ಲ ಎಂದು ಗಮನಿಸಿದೆ. KRCL ವೆಂಕಟೇಶ್‌ಗೆ ಜೂನ್ 21ರ ಲೆಟರ್‌ನ ಪ್ರಮಾಣೀಕೃತ ಪ್ರತಿ ಒಂದು ವಾರದೊಳಗೆ ಉಚಿತವಾಗಿ ಒದಗಿಸಬೇಕು, ಇದರಿಂದ ಅವರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮುಂದುವರಿಯಬಹುದು. ಮೊದಲ ಮನವಿ ಅಧಿಕಾರಿಗಳು ಈ ಆದೇಶ ಪಾಲನೆ ಮಾಡಬೇಕು ಮತ್ತು ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು CIC ಆದೇಶಿಸಿದೆ.

  • ಬೈಂದೂರು ರೈಲ್ವೆ ನಿಲ್ಡಾಣದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ ಒಮಿನಿ ಕಾರು ಕಳವು

    ಬೈಂದೂರು: ಬೈಂದೂರು ಮೂಕಾಂಬಿಕ ರೈಲ್ವೆ ನಿಲ್ಡಾಣದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ ಮಾರುತಿ ಸುಜುಕಿ ಒಮಿನಿ ಕಾರು ಕಳವು ಮಾಡಲಾಗಿದೆ.

    ಬೈಂದೂರು ಗಂಗನಾಡಿನ ಥಾಮಸ್ ವಿ ಎಮ್ ಇವರು ಬಾಡಿಗೆ ಮಾಡಲು ತನ್ನ KA-20-C-3590 ನೇ ಮಾರುತಿ ಸುಜುಕಿ ಒಮಿನಿ ಕಾರನ್ನು ಬೈಂದೂರು ಮೂಕಾಂಬಿಕ ರೈಲ್ವೆ ನಿಲ್ಡಾಣದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದು ಜು. 9 ರಂದು ರಾತ್ರಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೈಂದೂರು: ದನ ಕಳ್ಳತನ; ಇಬ್ಬರ ಬಂಧನ

    ಬೈಂದೂರು, ಜುಲೈ 12, 2025: ಬೈಂದೂರು ಠಾಣೆಯಲ್ಲಿ ನಡೆದ ದನ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 

    ಮೊಹಮ್ಮದ ಕೈಪ್‌ ಸಾಸ್ತಾನ ಮತ್ತು ಕಾಪುವಿನ ಉಚ್ಚಿಲದ ಮೊಹಮ್ಮದ ಸುಹೇಲ್‌ ಖಾದರ ಬಂಧಿತ ಆರೋಪಿಗಳು.

    ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ 3 ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹಾಗೂ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ 4 ದನಗಳನ್ನು ರಕ್ಷಿಸಿ ಗೋಶಾಲೆಗೆ ಬಿಡಲಾಗಿದೆ ಎಂದು ತಿಳಿದು ಬಂದಿದೆ.

    ಬೈಂದೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪದೇ ಪದೇ ದನ ಕಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದುದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಗಳ ಪತ್ತೆಗೆ 3 ವಿಶೇಷ ತಂಡವನ್ನು ರಚಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  

    ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಎಸ್‌ಪಿ ಎಸ್. ಸುಧಾಕರ್ ನಾಯಕ್ ಮತ್ತು ಕುಂದಾಪುರ ಉಪವಿಭಾಗದ ಡಿವೈಎಸ್‌ಪಿ ಹೆಚ್.ಡಿ. ಕುಲಕರ್ಣಿ ಅವರ ಮೇಲ್ವಿಚಾರಣೆಯಲ್ಲಿ ಬೈಂದೂರು ವೃತ್ತ ನಿರೀಕ್ಷಕ ಸವಿತಾ ತೇಜ್ ಅವರ ನೇತೃತ್ವದಲ್ಲಿ ವಿಶೇಷ ಕಾಯಾಛರಣೆ ನಡೆಸಲಾಯಿತು.

    ಪ್ರಕರಣದ ತನಿಖೆಗೆ ಮೂರು ತನಿಖಾ ತಂಡಗಳನ್ನು ರಚಿಸಲಾಗಿತ್ತು. ಪಿಎಸ್‌ಐ ತಿಮ್ಮೇಶ್ ಬಿ.ಎನ್., ಪಿಎಸ್‌ಐ ನವೀನ್ ಬೋರಾಕರ್ (ಬೈಂದೂರು ಠಾಣೆ), ಪಿಎಸ್‌ಐ ವಿನಯ್ (ಕೊಲ್ಲೂರು ಠಾಣೆ), ಮತ್ತು ಪಿಎಸ್‌ಐ ಬಸವರಾಜ್ (ಗಂಗೊಳ್ಳಿ ಠಾಣೆ) ಅವರು ಈ ತಂಡಗಳ ನೇತೃತ್ವ ವಹಿಸಿದ್ದರು. ಪೊಲೀಸ್ ಸಿಬ್ಬಂದಿಗಳಾದ ನಾಗೇಂದ್ರ, ಮೋಹನ್, ಸುರೇಶ್, ಚೇತನ್, ಜಯರಾಮ್, ಸತೀಶ್, ಚಿದಾನಂದ, ಮಲ್ಲಪ್ಪ ದೇಸಾಯಿ, ಶ್ರೀಧರ್ ಪಾಟೀಲ್ ಮತ್ತು ಪರಯ್ಯ ಮಾತಾಪತಿ ಅವರು ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

  • ಬೈಂದೂರು ಪೊಲೀಸ್ ಠಾಣೆಗೆ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಭೇಟಿ

    ಉಡುಪಿ, ಜುಲೈ 10, 2025: ಇಂದು ಪಶ್ಚಿಮ ವಲಯ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ (ಐಜಿಪಿ) ಅಮಿತ್ ಸಿಂಗ್ ಐಪಿಎಸ್ ರವರು ಉಡುಪಿ ಜಿಲ್ಲೆಯ ಬೈಂದೂರು ಪೊಲೀಸ್ ಠಾಣೆಯ ಪರಿಶೀಲನೆ ನಡೆಸಿದರು.

    ಠಾಣೆಯ ಕಡತಗಳನ್ನು ವಿವರವಾಗಿ ಪರಿಶೀಲಿಸಿ, ಸಿಬ್ಬಂದಿಗಳಿಗೆ ಸೂಕ್ತ ಸಲಹೆ ಮತ್ತು ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಮತ್ತು ಇತರ ಅಧಿಕಾರಿ-ಸಿಬ್ಬಂದಿಗಳು ಉಪಸ್ಥಿತರಿದ್ದರು.

  • ಬೈಂದೂರು: ದನ ಸಾಗಾಟ ಮಾಡುತ್ತಿದ್ದ ಕಾರು ವಶ

    ಬೈಂದೂರು, ಜೂಲೈ 9, 2025: ಕಾರಿನಲ್ಲಿ ಹಿಂಸಾತ್ಮಕವಾಗಿ ದನ ಸಾಗಾಟ ಮಾಡುತ್ತಿದ್ದ ವಾಹನವನ್ನು ಬೈಂದೂರು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.ಇಲ್ಲಿನ ಒತ್ತಿನೆಣೆ ಬಳಿ ಮುಂಜಾನೆ ವಾಹನ ತಪಾಸಣೆ ಮಾಡುವ ವೇಳೆ ಬ್ರಿಜಾ ಕಾರಿನ ಡಿಕ್ಕಿಯಲ್ಲಿ ನಾಲ್ಕು ದನಗಳನ್ನು ಸಾಗಿಸುತ್ತಿದ್ದು ಪೊಲೀಸರನ್ನು ನೋಡುತ್ತಿದ್ದಂತೆ ಆರೋಪಿಗಳು ಕಾರು ಬಿಟ್ಟು ಪರಾರಿಯಾಗಿದ್ದಾರೆ.ಬೈಂದೂರು ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬಿಜೆಪಿ ಬೈಂದೂರು ಮಂಡಲದ ಪ್ರಧಾನ ಕಾರ್ಯದರ್ಶಿಯಾಗಿ ಕರಣ್ ಪೂಜಾರಿ ನೇಮಕ

    ಬೈಂದೂರು, ಜುಲೈ 8, 2025: ಭಾರತೀಯ ಜನತಾ ಪಕ್ಷ ಬೈಂದೂರು ಮಂಡಲದ ನೂತನ ಕಾರ್ಯದರ್ಶಿಯಾಗಿ ಕರಣ್ ಪೂಜಾರಿ ತಲ್ಲೂರು ನೇಮಕಗೊಂಡಿದ್ದಾರೆ.

    ಇವರನ್ನು ನೇಮಕ ಮಾಡಿ ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ತಿಳಿಸಿದ್ದಾರೆ.