Tag: Bynduru

  • ಬೈಂದೂರು: ಪೊಲೀಸರಿಂದ ಜಾಗೃತಿ ಕಾರ್ಯಕ್ರಮ

    ಬೈಂದೂರು, ಜುಲೈ 8, 2025: ಬೈಂದೂರು ತಾಲೂಕು ಕಛೇರಿಯಲ್ಲಿ ನಡೆದ “ಲಿಂಗತ್ವಾಧಾರಿತ ದೌರ್ಜನ್ಯ ವಿರುದ್ಧ ರಾಷ್ಟ್ರೀಯ ಅಭಿಯಾನ” ಕಾರ್ಯಕ್ರಮದಲ್ಲಿ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (PSI) ರವರು ಮಾತನಾಡಿ, ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳು ಮತ್ತು ಸಂಚಾರ ನಿಯಮಗಳ ಸಹಿತ ಇತರ ಮಾಹಿತಿಯನ್ನು ನೀಡಿದರು. ಈ ಕಾರ್ಯಕ್ರಮ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿತ್ತು.

    ಶಿರ್ವ

    ಅದೇ ರೀತಿ, ಶಿರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳಪು ಪಾಲಿ ಟೆಕ್ನಿಕ್‌ನ ವಿದ್ಯಾರ್ಥಿಗಳಿಗೆ ಒಂದು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದರಲ್ಲಿ ಮಾದಕ ದ್ರವ್ಯ ಸೇವನೆಯಿಂದ ಉಂಟಾಗುವ ದುಷ್ಟ ಪರಿಣಾಮಗಳು, ಸೈಬರ್ ಕ್ರೈಂ, ಮತ್ತು ರಸ್ತೆ ಸುರಕ್ಷತೆ ನಿಯಮಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಈ ಕಾರ್ಯಕ್ರಮಗಳು ಯುವ ಜನಾಂಗದಲ್ಲಿ ಜವಾಬ್ದಾರಿಯ ಚಟುವಟಿಕೆಗಳನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿವೆ.

  • ಬೈಂದೂರು: ಮಳೆಗಾಲದಲ್ಲಿ ಕಳ್ಳತನ ತಡೆಗಟ್ಟಲು ಪೊಲೀಸರಿಂದ ಸುರಕ್ಷತಾ ಮಾರ್ಗಸೂಚಿಗಳು

    ಬೈಂದೂರು, ಜುಲೈ 8, 2025: ಮಳೆಗಾಲದಲ್ಲಿ ಕಳ್ಳತನದ ಸಂಭಾವ್ಯತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಬೈಂದೂರು ಪೊಲೀಸ್ ಠಾಣೆಯು ಸಾರ್ವಜನಿಕರಿಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದೆ. ಈ ಸಂದರ್ಭದಲ್ಲಿ ಪೊಲೀಸರು ನೀಡಿರುವ ಮಾರ್ಗಸೂಚಿಗಳು ಈ ಕೆಳಗಿನಂತಿವೆ:

    • ಮನೆಯ ಮುಖ್ಯ ಬಾಗಿಲಿಗೆ ಸೆಂಟರ್ ಲಾಕ್ ಅಳವಡಿಸಿ ಭದ್ರತೆಯನ್ನು ಖಚಿತಪಡಿಸಿಕೊಳ್ಳಿ.
    • ಮನೆಯ ಮುಂಭಾಗ ಮತ್ತು ಹಿಂಭಾಗದ ಬಾಗಿಲುಗಳಿಗೆ ಒಳಗಡೆಯಿಂದ ಕಬ್ಬಿಣದ ಅಡ್ಡ ಪಟ್ಟಿಗಳನ್ನು ಅಳವಡಿಸಿ.
    • ಕಾರ್ಯಕ್ರಮ ಅಥವಾ ಜಾತ್ರೆಗೆ ಹೋಗುವಾಗ ಮನೆಯಲ್ಲಿ ಕನಿಷ್ಠ ಒಬ್ಬರನ್ನಾದರೂ ಉಳಿಸಿಕೊಳ್ಳಿ.
    • ಗುಜರಿ, ಹಾಸಿಗೆ, ಬೆಡ್ ಸೆಟ್, ಸ್ಟವ್ ರಿಪೇರಿ ಸೇರಿದಂತೆ ಮನೆಗೆ ಬರುವವರಿಂದ ಆಧಾರ ಕಾರ್ಡ್‌ನ ಫೋಟೋ ಮತ್ತು ಅವರ ಫೋಟೋವನ್ನು ಮೊಬೈಲ್‌ನಲ್ಲಿ ತೆಗೆದಿಡಿ.
    • ಗ್ಯಾಸ್ ಸಿಲಿಂಡರ್ ಬದಲಾಯಿಸುವಾಗ ರಸ್ತೆ ಬದಿಯಲ್ಲಿ ಬಿಟ್ಟು ಹೋಗಬೇಡಿ.
    • ಹಗಲು ಅಥವಾ ರಾತ್ರಿ ಸಂದರ್ಭದಲ್ಲಿ ಸಂಶಯಾಸ್ಪದ ವಾಹನಗಳು ನಿಂತಿದ್ದರೆ, ನೋಂದಣಿ ಸಂಖ್ಯೆಯು ಕಾಣಿಸುವಂತೆ ಫೋಟೋ ತೆಗೆದಿಡಿ.
    • ರಸ್ತೆಗೆ ಕಾಣುವಂತೆ ಬಾಗಿಲು ಅಥವಾ ಗೇಟ್‌ಗೆ ಬೀಗ ಹಾಕಬೇಡಿ.
    • ಮನೆಯಲ್ಲಿ ಒಂಟಿಯಾಗಿರುವಾಗ ಮುಂಬಾಗಿಲನ್ನು ಲಾಕ್ ಮಾಡಿಕೊಂಡು ಕೆಲಸ ಮಾಡಿ.
    • ಮುಂಭಾಗ ಮತ್ತು ಹಿಂಭಾಗದ ಬಾಗಿಲುಗಳಿಗೆ ಸಮಾನ ಗಮನ ನೀಡಿ.
    • ಬಾಗಿಲು ತಟ್ಟಿದಾಗ ಅಥವಾ ಬೆಲ್ ಮೊದಲಿದಾಗ ತಕ್ಷಣ ತೆರೆಯದೆ, ಕಿಟಕಿಯಿಂದ ಖಚಿತಪಡಿಸಿಕೊಂಡು ವ್ಯವಹರಿಸಿ.
    • ಅಪರಿಚಿತರು ನೀರು ಅಥವಾ ವಿಳಾಸ ಕೇಳಲು ಬಂದಾಗ ಜಾಗ್ರತೆಯಿಂದ ವರ್ತಿಸಿ.
    • ನೆರೆಹೊರೆಯವರೊಂದಿಗೆ ಮಾತನಾಡಲು ಹೋಗುವಾಗ ಮನೆ ಮತ್ತು ಗೇಟ್‌ಗೆ ಬೀಗ ಹಾಕುವುದನ್ನು ಮರೆಯಬೇಡಿ.
    • ಮನೆಯಲ್ಲಿ ಅಪ್ರಾಪ್ತ ವಯಸ್ಸಿನವರನ್ನು ಅಥವಾ ವಯೋವೃದ್ಧರನ್ನು ಒಣಗುವಂತೆ ಬಿಡಬೇಡಿ.
    • ಅಂಚೆ, ಕೊರಿಯರ್, ಪಾರ್ಸೆಲ್ ಅಥವಾ ಉಡುಗೊರೆ ಪಡೆಯುವಾಗ ಖಚಿತಪಡಿಸಿಕೊಂಡು ವ್ಯವಹರಿಸಿ.
    • ಕಿಟಕಿಗೆ ಹತ್ತಿರದಲ್ಲಿ ಮೊಬೈಲ್ ಫೋನ್‌ಗಳು ಅಥವಾ ಬೆಲೆಬಾಳುವ ವಸ್ತುಗಳನ್ನು ಇಡಬೇಡಿ.
    • ಬೆಲೆಬಾಳುವ ವಸ್ತುಗಳನ್ನು ಬ್ಯಾಂಕ್ ಲಾಕರ್‌ಗಳಲ್ಲಿ ಇಡುವುದು ಉತ್ತಮ.
    • ಮನೆ ಬಾಗಿಲುಗಳಿಗೆ ಮ್ಯಾಜಿಕ್ ಅಲಾರ್ಮ್ ಸಿಸ್ಟಮ್‌ಗಳಂತಹ ಸುರಕ್ಷಾ ಸಾಧನಗಳನ್ನು ಅಳವಡಿಸಿ.
    • ಮಲಗುವ ಸಮಯದಲ್ಲಿ ಬಾಗಿಲು ಮತ್ತು ಕಿಟಕಿಗಳನ್ನು ಲಾಕ್ ಮಾಡಿರುವುದನ್ನು ಪರೀಕ್ಷಿಸಿ.
    • ಮನೆ ಬೀಗ ಹಾಕಿ ಪ್ರಯಾಣಿಸುವಾಗ ಅಕ್ಕಪಕ್ಕದವರಿಗೆ ಮತ್ತು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ.
    • ಬಾಡಿಗೆಗೆ ಇರುವವರ ಅಥವಾ ಮನೆ ಕೆಲಸದವರ ಬಗ್ಗೆ ಆಧಾರ ಕಾರ್ಡ್, ಫೋಟೋ, ರಕ್ತ ಸಂಬಂಧಿಗಳ ಮೊಬೈಲ್ ಸಂಖ್ಯೆಗಳನ್ನು ದಾಖಲಿಸಿ.
    • ಸಂಶಯಾಸ್ಪದ ವ್ಯಕ್ತಿ ಅಥವಾ ವಾಹನ ಕಂಡರೆ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಿ.
    • ಚಿನ್ನದ ಒಡವೆಗಳನ್ನು ಪಾಲಿಶ್ ಮಾಡುತ್ತೇವೆ ಎಂದು ಮನೆ ಬಳಿ ಬರುವವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ.
    • ಜನರಿಲ್ಲದ ಪ್ರದೇಶದಲ್ಲಿ ಮಹಿಳೆಯರು ಒಣಗಿ ಓಡಾಡಬೇಕು ಎಂದು ತಪ್ಪಿಸಿ.
    • ಒಣಗಿ ಓಡಾಡುವಾಗ ಅಪರಿಚಿತರು ವಿಳಾಸ ಕೇಳಿದಾಗ ಎಚ್ಚರಿಕೆಯಿಂದ ವರ್ತಿಸಿ.
    • ಬ್ಯಾಂಕ್, ಅಂಗಡಿ, ಪೋಸ್ಟ್ ಆಫಿಸ್ ಬಳಿ ಅಪರಿಚಿತರು ಹಣ ಬಿದ್ದಿದೆ ಎಂದು ತಿಳಿಸಿದಾಗ ಮೊದಲು ನಿಮ್ಮ ಹಣದ ಸುರಕ್ಷತೆ ಖಚಿತಪಡಿಸಿ.
    • ಮೋಹಕ್ಕೆ ಒಳಗಾಗಿ ಸುಲಿಗೆಗೆ ಒಳಗಾಗದಿರಲು ಎಚ್ಚರಿಕೆ ತೆಗೆದುಕೊಳ್ಳಿ; ದ್ವಿಚಕ್ರ ವಾಹನದಲ್ಲಿ ಸಮೀಪಿಸುವವರಿಂದ ದೂರ ಇರಿ.
    • ಜನನಿಬಿಡ ಪ್ರದೇಶದಲ್ಲಿ ಪಾರ್ಕ್ ಮಾಡಿ ಕುಳಿತುಕೊಳ್ಳುವ ಅಥವಾ ಕತ್ತಲೆಯಲ್ಲಿ ಇರುವ ಹವ್ಯಾಸ ತಪ್ಪಿಸಿ.
    • ಅಪರಿಚಿತರು ಅತೀಂದ್ರ ಶಕ್ತಿಗಳು ಅಥವಾ ಮಹಾನ್ ಪುರುಷರ ಬಗ್ಗೆ ಹೇಳಿ ಮೋಸ ಮಾಡುವ ಪ್ರಯತ್ನ ಮಾಡಿದಾಗ ಎಚ್ಚರಿಕೆ ಇರಿಸಿ.
    • ಸಂಶಯಾಸ್ಪದ ವ್ಯಕ್ತಿ ಕಂಡರೆ ಜೋರಾಗಿ ಕೂಗಿ ಅಕ್ಕಪಕ್ಕದವರನ್ನು ಕರೆಯಿರಿ.
    • ವಾಯುವಿಹಾರಕ್ಕೆ ಹೋಗುವಾಗ ಚಿನ್ನದ ಸರಗಳನ್ನು ಬಟ್ಟೆಯಿಂದ ಮರೆಮಾಡಿಕೊಳ್ಳಿ.
    • ಅಗತ್ಯವಿಲ್ಲದೆ ಆಭರಣಗಳನ್ನು ಧರಿಸಿ ಪ್ರದರ್ಶಿಸಬೇಡಿ.
    • ಆನ್‌ಲೈನ್ ವಂಚನೆಯಿಂದ ರಕ್ಷಿಸಿಕೊಳ್ಳಲು ಎಚ್ಚರಿಕೆ ಇರಿಸಿ.
    • ಅವಶ್ಯಕತೆಯಿದ್ದಾಗ 112 ಗೆ ಕರೆ ಮಾಡಿ ಸಹಾಯ ಆರಾಯಿಸಿ.

    ಪೊಲೀಸರು ಜನರ ಸಹಕಾರದೊಂದಿಗೆ ಮಳೆಗಾಲದಲ್ಲಿ ಸುರಕ್ಷತೆಯನ್ನು ಕಾಪಾಡಲು ಆರಾಮದಿಂದ ಇರಲು ಈ ಮಾರ್ಗಸೂಚಿಗಳನ್ನು ಪಾಲಿಸುವಂತೆ ಒತ್ತಾಯಿಸಿದ್ದಾರೆ.

  • ಬೈಂದೂರು: ಕಾಂಗ್ರೆಸ್‌ನಿಂದ ಸತ್ಯದರ್ಶನ ಪ್ರತಿಭಟನೆ; ಬಿಜೆಪಿ ವಿರುದ್ಧ ಆಕ್ರೋಶ

    ಬೈಂದೂರು, ಜುಲೈ 7, 2025: ಬೈಂದೂರು ಬ್ಲಾಕ್ ಕಾಂಗ್ರೆಸ್‌ನಿಂದ ಪಟ್ಟಣ ಪಂಚಾಯಿತಿ ಎದುರಿಗೆ ಸೋಮವಾರ, ಜುಲೈ 7 ರಂದು ಬೃಹತ್ ಪ್ರತಿಭಟನೆಯನ್ನು ಆಯೋಜಿಸಲಾಯಿತು. ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ ನೇತೃತ್ವದಲ್ಲಿ ಮತ್ತು ಕಾಂಗ್ರೆಸ್ ನಾಯಕ ಕೆ. ಗೋಪಾಲ್ ಪೂಜಾರಿ ಅವರ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪಕ್ಷದ ಎಲ್ಲಾ ನಾಯಕರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

    ಬೈಂದೂರು ಕ್ಷೇತ್ರಕ್ಕೆ ಆಘಾದವಾದ ರಾಜಕೀಯ ಹಿನ್ನೆಲೆಯಿದೆ.ಈ ಕ್ಷೇತ್ರವನ್ನು ಪ್ರತಿನಿಧಿಸಿದ ಪ್ರತಿ ಶಾಸಕರು ಒಂದಿಷ್ಟು ಬದ್ದತೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ.ಆದರೆ ಈ ಬಾರಿಯ ಬಿಜೆಪಿ ಶಾಸಕರು ಮಾತ್ರ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.ಕ್ಷೇತ್ರದ ಜನರಿಗೆ ಅನುಕೂಲವಾಗಲು ಶಾಸಕರ ಕಛೇರಿಯನ್ನು ಬೈಂದೂರಿನಲ್ಲಿ ಸ್ಥಾಪಿಸಲಾಗಿದೆ.ಆದರೆ ಶಾಸಕರು ಮಾತ್ರ ಉಪ್ಪುಂದದ ಪಕ್ಷದ ಕಛೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸುತ್ತಾರೆ.ಖಾಸಗಿ ಕಛೇರಿಯಲ್ಲಿ ಸಂಜೀವಿನಿ ಸೇರಿದಂತೆ ಸರಕಾರಿ ಅಧಿಕಾರಿಗಳ ಸಭೆ ನಡೆಸುವುದು ಸರಿಯಲ್ಲ.ಇದು ಮುಂದುವರಿದರೆ ಶಾಸಕರ ನಡೆ ವಿರುದ್ದ ಶೀಘ್ರ ಪ್ರತಿಭಟನೆ ಮಾಡಲಾಗುತ್ತದೆ ಎಂದು ಮಾಜಿ ಶಾಸಕರು ಹೇಳಿದರು.

    ಕಾಂಗ್ರೆಸ್ ನಾಯಕರು ಮಾತನಾಡಿ, “ಸತ್ಯವನ್ನು ಮರೆಮಾಚಿ, ಜನರನ್ನು ದಾರಿತಪ್ಪಿಸುವ ಪ್ರಯತ್ನಗಳನ್ನು ಬಿಜೆಪಿ ನಡೆಸುತ್ತಿದೆ. ಇದಕ್ಕೆ ಜನತೆಯೇ ಉತ್ತರ ನೀಡಲಿದ್ದಾರೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

  • ಬೈಂದೂರು: ಬಕ್ರೀದ್ ಹಬ್ಬ ಪ್ತಯುಕ್ತ ಶಾಂತಿ ಸಭೆ

    ಬೈಂದೂರು, ಜೂ.02,2025: ಮುಂಬರುವ ಬಕ್ರೀದ್ ಹಬ್ಬದ ಪ್ರಯುಕ್ತ ಬೈಂದೂರು ಪೊಲೀಸ್ ಠಾಣೆಯಲ್ಲಿ ದಿನಾಂಕ 02/06/2025ರಂದು ಧಾರ್ಮಿಕ ಮುಖಂಡರೊಂದಿಗೆ ಶಾಂತಿ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯಲ್ಲಿ ಬಕ್ರೀದ್ ಹಬ್ಬವನ್ನು ಸಾಮರಸ್ಯ ಮತ್ತು ಸೌಹಾರ್ದತೆಯಿಂದ ಆಚರಿಸುವಂತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ದಕ್ಕೆ ಬಾರದಂತೆ ಕ್ರಮ ಕೈಗೊಳ್ಳುವಂತೆ ಧಾರ್ಮಿಕ ಮುಖಂಡರಿಗೆ ಸೂಕ್ತ ಸಲಹೆ-ಸೂಚನೆಗಳನ್ನು ನೀಡಲಾಯಿತು.

    ಸ್ಥಳೀಯ ಧಾರ್ಮಿಕ ಮುಖಂಡರು ಈ ಕಾರ್ಯಕ್ರಮವನ್ನು ಸ್ವಾಗತಿಸಿದ್ದು, ಶಾಂತಿಯುತವಾಗಿ ಹಬ್ಬವನ್ನು ಆಚರಿಸಲು ಸಹಕರಿಸುವ ಭರವಸೆ ನೀಡಿದ್ದಾರೆ.

  • ಬೈಂದೂರು: ರೈಲ್ವೆ ಹಳಿಯಲ್ಲಿ ಯುವಕನ ಶವ ಪತ್ತೆ; ಸಹಾಯ

    ಬೈಂದೂರು, ಫೆಬ್ರವರಿ 3, 2025: ಬೈಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ನಾವುಂದ ಅರೆಹೊಳೆಯಲ್ಲಿ ರೈಲ್ವೆ ಹಳಿಯಲ್ಲಿ ಸುಮಾರು 30 ವರ್ಷದ ಯುವಕನ ಶವ ದೊರಕಿದ ಘಟನೆ ನಡೆದಿದೆ. ಶವದ ಅವಶೇಷಗಳು ಸುಮಾರು ಅರ್ಧ ಕಿಲೋಮೀಟರ್ ತನಕ ಚದರಿವೆಯಾಗಿದ್ದವು.

    ತಕ್ಷಣ ಸ್ಥಳಕ್ಕೆ ಧಾವಿಸಿದ ಗಂಗೊಳ್ಳಿಯ 24×7 ಆಂಬ್ಯುಲೆನ್ಸ್ ತಂಡದ ಸದಸ್ಯರಾದ ಇಬ್ರಾಹಿಂ, ಮೌಲಾನ ಶಕೀಲ್, ಸಮೀ ಉಲ್ಲಾ ಕಾಝೀ ಮತ್ತು ಮಗ್ದೂಮ್ ಅರೆಹೊಳೆ ಅವರು ಶವದ ಅವಶೇಷಗಳನ್ನು ಗುರುತಿಸಿ, ಸಂಗ್ರಹಿಸಿ ಶವಾಗಾರಕ್ಕೆ ಒಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದರು