Tag: Fight

  • ಮಣಿಪಾಲ: ಕುಟುಂಬ ಕಲಹ; ಕಬ್ಬಿಣದ ರಾಡ್ ನಿಂದ ಹಲ್ಲೆ, ಆರೋಪಿಗಳ ವಿರುದ್ಧ ಪ್ರಕರಣ ದಾಖಲು

    ಮಣಿಪಾಲ, ಮೇ 8, 2025: ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಕುಟುಂಬ ವಿವಾದದಿಂದ ಉಂಟಾದ ಘರ್ಷಣೆಯೊಂದರಲ್ಲಿ ಯುವಕನೊಬ್ಬನ ಮೇಲೆ ಕಬ್ಬಿಣದ ರಾಡ್‌ನಿಂದ ದಾಳಿ ನಡೆದಿದ್ದು, ಆರೋಪಿಗಳ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಿರ್ಯಾದಿದಾರ ಮೊಹಮ್ಮದ್ ಇರ್ಫಾನ್ (27, ಹೆಜಮಾಡಿ, ಕಾಪು) ತಮ್ಮ ದೂರಿನಲ್ಲಿ ತಿಳಿಸಿರುವಂತೆ, ಆರೋಪಿ ರಫೀಕ್‌ನ ಅಕ್ಕನ ಮಗನಾದ ಇವರಿಗೆ ಆರೋಪಿಗಳೊಂದಿಗೆ ಕುಟುಂಬ ವಿಷಯದಲ್ಲಿ ಹಿಂದಿನಿಂದಲೂ ದ್ವೇಷವಿತ್ತು. ಮೇ 7, 2025ರ ಸಂಜೆ 4:45ರ ಸುಮಾರಿಗೆ, ಇರ್ಫಾನ್ ತಮ್ಮ ಪತ್ನಿ ರೆಹನಾ, ತಂಗಿ ಇಶ್ಮಿನ್ ಮತ್ತು ಮಾವನ ಮಗ ಮಾಝ್‌ನೊಂದಿಗೆ ಉಡುಪಿ ತಾಲೂಕಿನ ಹೆರ್ಗ ಗ್ರಾಮದ ಶೆಟ್ಟಿಬೆಟ್ಟಿನಲ್ಲಿರುವ ಮಾವನ ಮನೆಗೆ ತೆರಳಿದ್ದರು. ಈ ವೇಳೆ ಆರೋಪಿಗಳಾದ ರಫೀಕ್, ಸಲ್ಮಾ ಮತ್ತು ರಿಫಾಜ್‌ ಮನೆಗೆ ಬಂದು ಇರ್ಫಾನ್‌ರನ್ನು ಗದರಿಸಿದ್ದಾರೆ.

    ದೂರಿನ ಪ್ರಕಾರ, ರಫೀಕ್‌, “ನೀನು ನಮಗೆ ಭಾರಿ ಮಾತನಾಡುತ್ತೀಯಾ?” ಎಂದು ಕೂಗಿ, ಕಬ್ಬಿಣದ ರಾಡ್‌ನಿಂದ ಇರ್ಫಾನ್‌ರ ಎಡ ತೊಡೆ ಮತ್ತು ಎಡ ಕೈಗೆ ಗಾಯಗೊಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಸಲ್ಮಾ ಚಪ್ಪಲಿಯಿಂದ ಇರ್ಫಾನ್‌ಗೆ ಹೊಡೆದು ಅವಮಾನಿಸಿದ್ದಾರೆ, ಜೊತೆಗೆ ರಿಫಾಜ್‌ ಕೈಯಿಂದ ಹಲ್ಲೆ ನಡೆಸಿದ್ದಾರೆ. ಘರ್ಷಣೆಯ ಸಂದರ್ಭದಲ್ಲಿ ಇರ್ಫಾನ್‌ರ ಪತ್ನಿ, ತಂಗಿ ಮತ್ತು ಮಾಝ್‌ ಜಗಳವನ್ನು ತಡೆಯಲು ಮಧ್ಯಪ್ರವೇಶಿಸಿದಾಗ, ಆರೋಪಿಗಳು ಮಾಝ್‌ನ ಮೇಲೂ ಕೈಯಿಂದ ಹಲ್ಲೆ ಮಾಡಿದ್ದಾರೆ. ರಫೀಕ್‌, “ಇನ್ನು ಮುಂದೆ ನಮ್ಮ ವಿಷಯದ ಬಗ್ಗೆ ಮಾತನಾಡಿದರೆ ಈ ರಾಡ್‌ನಿಂದ ಕೊಂದುಹಾಕುತ್ತೇನೆ,” ಎಂದು ಜೀವ ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

    ಘಟನೆಯ ಬಳಿಕ ಗಾಯಗೊಂಡ ಇರ್ಫಾನ್ ಮತ್ತು ಮಾಝ್ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 79/2025ರಡಿಯಲ್ಲಿ ಕಲಂ 118(1), 115(2), 133, 352, 351(1) ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.

  • Udupi: ಪರಸ್ಪರ ಹಲ್ಲೆ; ವಶಕ್ಕೆ

    ಉಡುಪಿ: ಸಾರ್ವಜನಿಕ ಸ್ಥಳದಲ್ಲಿ ಪರಸ್ಪರ ಹಲ್ಲೆ ನಡೆಸುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ನಗರ ಠಾಣೆಯ ಪೊಲೀಸ್‌ ಎಚ್‌ಸಿ ಸುರೇಶ್‌ ಕರ್ತವ್ಯದಲ್ಲಿದ್ದ ವೇಳೆ ಉಡುಪಿಯ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ವಾಹನದ ಪಾರ್ಕಿಂಗ್‌ ಸ್ಥಳದಲ್ಲಿ ಆರೋಪಿಗಳಾದ ಹನುಮಪ್ಪ ಬೆಂಡ್ಯಪ್ಪ ಮಗಡಾರ್‌ (46), ನಾಗರಾಜ ಭೀಮಪ್ಪ ದೊಡ್ಡಮನಿ (27) ಮತ್ತು ನಾಗಪ್ಪ ಹನುಮಂತ ಸಿದ್ದಲಿಂಗಪ್ಪನವರ್‌ (30) ತಮ್ಮೊಳಗೆ ಜಗಳವಾಡುತ್ತ ಅವಾಚ್ಯ ಶಬ್ದಗಳಿಂದ ಬೈದು ಪರಸ್ಪರ ಹೊಡೆದಾಡಿಕೊಂಡು ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದರು. ಈ ವೇಳೆ ಅವರಿಗೆ ಎಚ್ಚರಿಕೆ ನೀಡಿದರೂ ಸುಮ್ಮನಿರಲಿಲ್ಲ. ಪರಸ್ಪರ ಬೈದಾಡುತ್ತ ಸಾರ್ವಜನಿಕ ಸ್ಥಳದಲ್ಲಿ ಭಯದ ವಾತಾವರಣ ಉಂಟುಮಾಡಿದ್ದರು ಎನ್ನಲಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.