Tag: Fraud

  • ಕಾರವಾರ: ‘ಡಿಜಿಟಲ್ ಅರೆಸ್ಟ್’ ಪ್ರಕರಣ; ಆರೋಪಿ ಹರ್ದೀಪ್ ಸಿಂಗ್ ಬಂಧನ

    ಕಾರವಾರ, ಜುಲೈ 15, 2025: ಉತ್ತರ ಕನ್ನಡ ಜಿಲ್ಲೆಯಲ್ಲಿ ‘ಡಿಜಿಟಲ್ ಅರೆಸ್ಟ್’ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಹರ್ದೀಪ್ ಸಿಂಗ್ (39) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಕಾರವಾರ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ವಿಶೇಷ ತಂಡ ಭಾಗವಹಿಸಿತು.

    ಆರೋಪಿಗಳು ದಿನಾಂಕ 23-10-2024ರಂದು ರಾಫೇಲ್ ತಂದೆ ಮ್ಯಾಥ್ಯೂವ್ಸ್ ಫರ್ನಾಂಡಿಸ್ ಅವರ ಸಹೋದರ ವಿಲ್ಸನ್ ಫರ್ನಾಂಡಿಸ್ ಅವರಿಗೆ ಫೋನ್ ಮಾಡಿ, ಡಿ.ಎಚ್‌.ಎಲ್ ಕೋರಿಯರ್ ಸರ್ವಿಸ್ ಪ್ರತಿನಿಧಿಯಾಗಿ ಮಾತನಾಡಿ, ಅವರ ಹೆಸರಿನಲ್ಲಿ ಪಾರ್ಸಲ್‌ನಲ್ಲಿ ಮಾದಕ ದ್ರವ್ಯ (1.4 ಕೆ.ಜಿ), 7 ಪಾಸ್‌ಪೋರ್ಟ್‌ಗಳು, 5 ಕ್ರೆಡಿಟ್ ಕಾರ್ಡ್‌ಗಳು ಮತ್ತು 3.5 ಕೆ.ಜಿ ಬಟ್ಟೆ ಇರುವುದಾಗಿ ಹೇಳಿ ಆನ್‌ಲೈನ್ ದೂರು ದಾಖಲಿಸುವಂತೆ ಒತ್ತಾಯಿಸಿದ್ದರು. ಇದೀಗ ಮುಂಬಯಿ ಪೊಲೀಸರ ಭಾಷ್ಯದಲ್ಲಿ ವಾಟ್ಸ್‌ಅಪ್ ವಿಡಿಯೋ ಕಾಲ್ ಮೂಲಕ ಭಯಭೀತರನ್ನಾಗಿ ಮಾಡಿ ₹35,80,100 ರಷ್ಟು ಹಣ ವಂಚಿಸಿದ್ದರು. ಈ ಸಂಬಂಧ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 35/2024 ದಾಖಲಾಗಿ ತನಿಖೆ ಆರಂಭವಾಗಿತ್ತು.

    ಪೊಲೀಸ್ ಅಧೀಕ್ಷಕ ಎಂ. ನಾರಾಯಣ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗದೀಶ ಎಂ.ರವರ ಮಾರ್ಗದರ್ಶನದಲ್ಲಿ, ಪೊಲೀಸ್ ಉಪಾಧೀಕ್ಷಕ ಐ. ಅಶ್ವಿನಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಈ ತಂಡವು ಬಿಹಾರ ರಾಜ್ಯಕ್ಕೆ ತೆರಳಿ ಜುಲೈ 12, 2025ರಂದು ಹರ್ದೀಪ್ ಸಿಂಗ್ ಅವನನ್ನ ಪಾಟ್ನಾ, ಬಿಹಾರದಿಂದ ವಶಕ್ಕೆ ಪಡೆದು ಕಾರವಾರಕ್ಕೆ ಕರೆತಂದಿದ್ದಾರೆ. ತನಿಖೆಯಲ್ಲಿ ಆರೋಪಿ ಮೇಲೆ ದೇಶಾದ್ಯಂತ 29 ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿರುವುದು ಬಯಲಾಗಿದ್ದು, ಇದರಲ್ಲಿ ತಮಿಳುನಾಡು (₹2,02,17,100), ಆಂಧ್ರಪ್ರದೇಶ (₹2,47,15,500), ಬೆಂಗಳೂರು (₹80,00,000 ಮತ್ತು ₹74,60,047) ಸೇರಿ ಒಟ್ಟು ₹40,28,71,710 ರಷ್ಟು ಹಣ ವಂಚನೆ ಮಾಡಿರುವುದು ಗೊತ್ತಾಗಿದೆ. ಆರೋಪಿ 8 ಉಳಿತಾಯ ಖಾತೆ ಮತ್ತು 2 ಚಾಲ್ತ ಖಾತೆಗಳನ್ನು ಹೊಂದಿರುವುದೂ ತಿಳಿದುಬಂದಿದೆ.

    ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರಿಸಿ ಪೊಲೀಸ್ ಕಸ್ಟಡಿಯಲ್ಲಿ ತನಿಖೆ ಮುಂದುವರಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಅಂಕೋಲಾ ಪೊಲೀಸ್ ಠಾಣೆಯ ಪಿ.ಎಸ್‌.ಐ ಉದ್ದಪ್ಪ ಧರೆಪ್ಪ, ಸಿಬ್ಬಂದಿ ನಾಮದೇವ ನಾಂದ್ರೆ, ಮತ್ತು ಕಾರವಾರ ಟೆಕ್ನಿಕಲ್ ಸೆಲ್‌ನ ಉದಯ ಗುನಗಾ, ಬಬನ್ ಕದಂ ಭಾಗವಹಿಸಿದ್ದಾರೆ. ಈ ಯಶಸ್ವೀ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಪೊಲೀಸ್ ಇಲಾಖೆ ಅಭಿನಂದಿಸಿದೆ.

  • ಸಂಘಟನೆಯ ಅಧ್ಯಕ್ಷೆ ಎಂದು ಸಾಲ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂ. ವಂಚನೆ

    ಕೋಟ, ಜುಲೈ 15, 2025: ತಾನು ಚಾಲೆಂಜಿಗ್‌ ಪೌಂಡೇಶನ್‌ ಸಂಸ್ಥೆಯ ಸದಸ್ಯೆಯಾಗಿದ್ದು ಹಾಗೂ ದಲಿತ ಸಂಘ (ಭೀಮ ಘರ್ಜನೆ) ಸಂಘಟನೆಯ ಅಧ್ಯಕ್ಷೆಯಾಗಿದ್ದಾಳೆ ಎಂದು ದಾವೆ ಎತ್ತಿ ಇಬ್ಬರು ಮಹಿಳೆಯರಿಂದ ಹಣ ಮತ್ತು ಚಿನ್ನಾಭರಣ ಪಡೆದು ವಾಪಸ್ ನೀಡದೇ ವಂಚನೆ ಮಾಡಿರುವ ಘಟನೆ ಬ್ರಹ್ಮಾವರದ ಬಿಲ್ಲಾಡಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಆರೋಪಿ ಸುಶೀಲ ಎಂಬ ಮಹಿಳೆ, ತನ್ನ ಪಕ್ಕದ ಮನೆಯ ಜಲಜ ಎಂಬವರ ಬಳಿ ತಾನು ಚಾಲೆಂಜಿಗ್‌ ಪೌಂಡೇಶನ್‌ ಸದಸ್ಯೆಯಾಗಿದ್ದು ಮತ್ತು ದಲಿತ ಸಂಘದ ಅಧ್ಯಕ್ಷೆಯೂ ಆಗಿದ್ದು, ಹಣದ ಅವಶ್ಯಕತೆ ಇದೆ ಎಂದು ಹೇಳಿ 15 ಗ್ರಾಂ ತೂಕದ ಎರಡು ಚಿನ್ನದ ಬಳೆಗಳು, 10 ಗ್ರಾಂ ತೂಕದ ಒಂದು ಕಿವಿ ಓಲೆ ಮತ್ತು ಮಾಟೆಯನ್ನು ಪಡೆದಿದ್ದಾಳೆ. ಇದಲ್ಲದೇ, 5 ಗ್ರಾಂ ತೂಕದ ಚಿನ್ನದ ಸರವನ್ನು ಶಿರೂರು ಮೂರು ಕೈಯಲ್ಲಿರುವ ಮಲ್ಲಿಕಾರ್ಜುನ ಕೋ-ಆಪರೇಟಿವ್ ಸೊಸೈಟಿಯಲ್ಲಿ ಅಡಮಾನ ಮಾಡಿಸಿ ₹36,000, ಜಲಜರ ವಿಜಯ ಬ್ಯಾಂಕ್ ಖಾತೆಯಿಂದ ₹60,000 ಮತ್ತು ಪೋಸ್ಟ್ ಆಫೀಸ್ ಖಾತೆಯಿಂದ ₹80,000 ಸೇರಿ ಒಟ್ಟು ₹1,76,000 ನಗದು ಹಣವನ್ನು ವಂಚನೆಯ ಮೂಲಕ ಪಡೆದಿದ್ದಾಳೆ. ಮೇ 17, 2024ರಂದು ಜಲಜ ಅವರ ಮಗಾಳು ಜ್ಯೋತಿ ಸುಶೀಲನ ಬಳಿ ತಾಯಿಯ ಒಡವೆ ಮತ್ತು ಹಣ ಕೇಳಿದಾಗ, ಆಕೆ ತನ್ನ ಸ್ನೇಹಿತರ ಹೆಸರಿನಲ್ಲಿ ಬ್ರಹ್ಮಾವರದ ರಾಮಕೃಷ್ಣ ಮತ್ತು ಎಂಸಿಸಿ ಸೊಸೈಟಿಗಳಲ್ಲಿ ಅಡಮಾನ ಮಾಡಿದ್ದು ಎಂದು ಸಮರ್ಥಿಸಿಕೊಂಡು, ದಲಿತ ಮಹಿಳೆ ಎಂದು ಜಾತಿ ನಿಂದನೆಯ ಆರೋಪ ಎತ್ತಿ ಕೇಸ್ ದಾಖಲಿಸುವ ಬೆದರಿಕೆಯಿಂದ ₹1,20,000 ಮೌಲ್ಯದ ಚಿನ್ನಾಭರಣ ಮತ್ತು ಹಣವನ್ನು ವಾಪಸ್ ನೀಡಲು ನಿರಾಕರಿಸಿದ್ದಾಳೆ.

    ಇದೇ ರೀತಿ, ಗ್ರಾಮದ ಜಯಲಕ್ಷ್ಮೀ ಎಂಬ ಮಹಿಳೆಯನ್ನು ಗುರಿಯಾಗಿಸಿಕೊಂಡು, ಸೊಸೈಟಿಯಲ್ಲಿ ಹಣ ಡೆಪಾಜಿಟ್ ಮಾಡಿದರೆ ಹೆಚ್ಚು ಲಾಭ ಮತ್ತು ಲೋನ್ ಕೊಡಿಸುವ ಭರವಸೆ ನೀಡಿ ₹1,20,000 ಮತ್ತು ₹2,00,000 ಸೇರಿ ಒಟ್ಟು ₹3,20,000 ನಗದು ಹಣ ಪಡೆದಿದ್ದಾಳೆ. ಇದಲ್ಲದೇ, ₹16,00,000 ಲೋನ್ ಒದಗಿಸುವುದಾಗಿ ನಂಬಿಸಿ 30 ಗ್ರಾಂ ತೂಕದ ಚಿನ್ನದ ಕರಿಮಣಿ ಸರ, ಒಂದು ಜೋಡಿ ಬೆಂಡೋಲೆ ಮತ್ತು ಮಾಟೆಯನ್ನು (ಅಂದಾಜು ₹1,20,000 ಮೌಲ್ಯ) ಪಡೆದು ವಾಪಸ್ ನೀಡದೇ ವಂಚನೆ ಮಾಡಿದ್ದಾಳೆ. ಹೆಚ್ಚುವರಿ ಹಣ ಕೊಡಿಸುವಂತೆ ಒತ್ತಾಯಿಸಿ, ಚಿನ್ನಾಭರಣಗಳನ್ನು ಅಡಮಾನ ಮಾಡಿಸಿ ಲೋನ್ ಪಡೆದು ಸಂಸ್ಥೆಗೆ ಕಟ್ಟುವುದಾಗಿ ಹೇಳಿ ಬೆದರಿಕೆ ಹಾಕಿದ್ದಾಳೆ. ವಿಚಾರಣೆಯಲ್ಲಿ ಜಾತಿ ನಿಂದನೆಯ ಆರೋಪ ಎತ್ತಿ ಅವಾಚ್ಯ ಶಬ್ದಗಳಿಂದ ಬಗೆದಿದ್ದಾಳೆ.

    ಈ ಎರಡೂ ಪ್ರತ್ಯೇಕ ಪ್ರಕರಣಗಳ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.

  • ಉಡುಪಿ: ಆರೈಕೆದಾರನಿಂದ ಹಣ ಮೋಸ; ಪ್ರಕರಣ ದಾಖಲು

    ಉಡುಪಿ, ಜುಲೈ 14, 2025: ಉಡುಪಿಯ ಅಂಬಲ್ಪಾಡಿಯ ನಿವಾಸಿ ಕಾರ್ತಿಕ್ (33) ಅವರ ತಂದೆ ವಸಂತರಾಜ್ ಅವರ ಆರೋಗ್ಯ ಚಿಕಿತ್ಸೆಗಾಗಿ 2024ರ ನವೆಂಬರ್‌ ತಿಂಗಳಿಂದ 2025ರ ಮಾರ್ಚ್‌ವರೆಗೆ ಮೇಲ್ ನರ್ಸ್ ವಿನೋದ್ ಎಂಬವರನ್ನು ನೇಮಕ ಮಾಡಲಾಗಿತ್ತು. ದಿನಾಂಕ 27/02/2025ರಂದು ವಸಂತರಾಜ್ ಅವರನ್ನು ಎಸ್‌ಡಿಎಂ ಉದ್ಯಾವರ್‌ನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಆರೈಕೆಗಾಗಿ ವಿನೋದ್ ಅವರನ್ನು ನೇಮಿಸಲಾಗಿತ್ತು.

    ಆರೈಕೆಯ ಸಂದರ್ಭದಲ್ಲಿ ವಿನೋದ್ ಅವರು ಕಾರ್ತಿಕ್ ಅವರ ತಂದೆಯ ಗಮನಕ್ಕೆ ತಪ್ಪಿಸಿಕೊಂಡು, ಫೋನ್-ಪೇ ಮೂಲಕ ಒಟ್ಟು ₹68,500/-ನ್ನು ಅವರ ಬ್ಯಾಂಕ್ ಖಾತೆಯಿಂದ ವರ್ಗಾವಣೆ ಮಾಡಿದ್ದಾನೆ. ಇದರ ಬಗ್ಗೆ ವಿನೋದ್‌ರನ್ನು ವಿಚಾರಿಸಿದಾಗ, ಅವರು ಹಣ ತೆಗೆದುಕೊಂಡಿದ್ದನ್ನು ಒಪ್ಪಿಕೊಂಡಿದ್ದು, ₹12,000/-ನ್ನು ಮಾತ್ರ ಹಿಂತಿರುಗಿಸಿದ್ದಾರೆ. ಉಳಿದ ₹56,500/- ರೂಪಾಯಿಯನ್ನು ಕೊಡದೆ ಮೋಸ ಮಾಡಿರುವ ಆರೋಪದಡಿ, ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 129/2025ರಡಿ, ಕಲಂ 316(2), 318(4) BNS ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

  • ಗೂಗಲ್ ಪೇ ಮೂಲಕ 1ರೂ. ಕಳುಹಿಸಿದ ವ್ಯಕ್ತಿಗೆ 38 ಸಾವಿರ ರೂ. ಆನ್‌ಲೈನ್ ವಂಚನೆ

    ಮಣಿಪಾಲ, ಜು.13: ಗೂಗಲ್ ಪೇ ಮೂಲಕ ವ್ಯಕ್ತಿಯೊಬ್ಬರಿಗೆ ಸಾವಿರಾರು ರೂ. ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪದ್ಮನಾಭ(56) ಎಂಬವರಿಗೆ ಜು.10ರಂದು ಆರ್ಮಿ ಆಫೀಸರ್ ಎಂದು ಹೇಳಿ ಕರೆದು ಮಾಡಿದ ವ್ಯಕ್ತಿ, ತನಗೆ ಮನೆ ಬಾಡಿಗೆ ಬೇಕು ಎಂದು ಕೇಳಿದ್ದಾನೆ. ಅದಕ್ಕೆ ಪದ್ಮನಾಭ 25,000ರೂ. ಮುಂಗಡ ಮತ್ತು 13,000ರೂ. ಬಾಡಿಗೆ ಎಂದು ತಿಳಿಸಿದ್ದನು. ಅದಕ್ಕೆ ಆತನು 1 ರೂ. ಗೂಗಲ್ ಪೇ ಮಾಡುವಂತೆ ತಿಳಿಸಿದ್ದರು. ಅದರಂತೆ ಪದ್ಮನಾಭ ಕೂಡಲೇ 1 ರೂ. ಗೂಗಲ್ ಪೇ ಮಾಡಿದ್ದರು. ಬಳಿಕ ಅವರು ಆತನ ಜೊತೆ ಪೋನ್‌ನಲ್ಲಿ ಮಾತನಾಡುತ್ತಿರುವ ಅವರ ಖಾತೆಯಿಂದ 38,000ರೂ. ಆತನ ಖಾತೆಗೆ ವರ್ಗಾವಣೆ ಮಾಡಿಕೊಂಡು ನಂಬಿಸಿ ವಂಚನೆ ಮಾಡಿರುವುದಾಗಿ ದೂರಲಾಗಿದೆ

  • ಕಾರವಾರ ಜಿಲ್ಲಾ ಆಸ್ಪತ್ರೆಯ ಸರ್ಜನ್ ಶಿವಾನಂದ ಕುಡ್ತಲಕರ್ ಲೋಕಾಯುಕ್ತ ಬಲೆಗೆ

    ಕಾರವಾರ : ಆಸ್ಪತ್ರೆಗೆ ಹಾಸಿಗೆ ಸಪ್ಲೈ ಮಾಡುವ ಗುತ್ತಿಗೆದಾರರೊಬ್ಬರಿಂದ ಲಂಚ‌ ಪಡೆಯುತ್ತಿದ್ದ ವೇಳೆ ಕಾರವಾರ ಮೆಡಿಕಲ್ ಕಾಲೇಜು ಅಧೀನ ಜಿಲ್ಲಾ ಆಸ್ಪತ್ರೆಯ ಆಡಳಿತಾಧಿಕಾರಿ, ಹೆರಿಗೆ ಡಾಕ್ಟರ್ ಶಿವಾನಂದ ಕುಡ್ತಲಕರ್ ಗುರುವಾರ ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ನಡೆದಿದೆ.

    ಕಾರವಾರ ಲೋಕಾಯುಕ್ತರ ಬಲೆ ಬಿದ್ದಿರುವ ಶಿವಾನಂದ ಕುಡ್ತಲಕರ್ ಗುತ್ತಿಗೆದಾರರೊಬ್ಬರ ಬಳಿ 50,000 ರೂಪಾಯಿ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.ಆಸ್ಪತ್ರೆಯ ರೋಗಿಗಳ ಹಾಸಿಗೆ ಟೆಂಡರ್ 3.5 ಲಕ್ಷದ ಬಿಲ್ ಪಾವತಿಸಲು 75000 ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ನಿನ್ನೆ 20000 ಲಂಚ ಪಡೆದಿದ್ದರು. ಇಂದು 30 ಸಾವಿರ ಲಂಚದ (ಕಮಿಷನ್ ) ಹಣ ಪಡೆಯುವಾಗ ಲೋಕಾಯುಕ್ತ ಡಿವೈಎಸ್ ಪಿ ಧನ್ಯಾ ನಾಯ್ಕ ಹಾಗೂ ತಂಡ ದಾಳಿ ಮಾಡಿ ಕುಡ್ತಲಕರ್ ಅವರನ್ನು ಹಿಡಿದಿದ್ದಾರೆ‌.

    ಅಂಕೋಲಾ ಮೂಲದ ಗುತ್ತಿಗೆದಾರ ಮೌಸೀನ್ ಅಹ್ಮದ್ ಶೇಖ್ ಎಂಬುವವರು ಲೋಕಾಯುಕ್ತಕ್ಕೆ ಈ ಸಂಬಂಧ ದೂರು‌ ನೀಡಿದ್ದರು. ನಿನ್ನೆ ರಾತ್ರಿ 20,ಸಾವಿರ ಹಣ ನೀಡಲಾಗಿತ್ತು. ಇಂದು 30 ಸಾವಿರ ರೂಪಾಯಿ ಕೇಳಿದ್ದು, ಈ‌‌ ವೇಳೆ‌ ವೈದ್ಯನ ಕಾಟ ತಾಳಲಾರದೆ, ಉಳಿದ 30 ಸಾವಿರ ರೂಪಾಯಿ ಹಣವನ್ನು ಭ್ರಷ್ಟ ವೈದ್ಯ , ಕುಡ್ತಲಕರ್ ಗೆ ನೀಡಿದರು‌. ಲಂಚದ ಹಣ ಸ್ವಿಕರಿಸುವಾಗ ರೆಡ್ ಹ್ಯಾಂಡ್ ಆಗಿ ಡಾ. ಶಿವಾನಂದ ಕುಡಲ್ತಕರ್ ಸಿಕ್ಕಿಬಿದ್ದಿದ್ದಾರೆ.
    ಕಾರವಾರ ಲೋಕಾಯುಕ್ತ ಡಿವೈಎಸ್ಪಿ ಧನ್ಯಾ ನಾಯ್ಕ್ ನೇತೃತ್ವದಲ್ಲಿ , ಅವರ ಸಿಬ್ಬಂದಿ ಈ‌ ದಾಳಿ ನಡೆಸಿದರು‌ .
    ಪ್ರಕರಣ ದಾಖಲಿಸುವ ಪ್ರಕ್ರಿಯೆ ಮುಂದುವರಿದಿದೆ‌.

  • ಭಟ್ಕಳ: ಸುಲಿಗೆ ಯತ್ನ, ಇಬ್ಬರು ಆರೋಪಿಗಳ ಬಂಧನ; 4 ಲಕ್ಷ ಮೌಲ್ಯದ ಚಿನ್ನಾಭರಣ ವಶ

    ಭಟ್ಕಳ, ಜುಲೈ 10, 2025: ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಿನಾಂಕ 02-07-2025ರ ಸಂಜೆ 4:30 ಗಂಟೆಯ ಸಮಯದಲ್ಲಿ ಸುಲಿಗೆ ಯತ್ನದ ಘಟನೆಯಲ್ಲಿ ಎರಡು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಫಿರ್ಯಾದಿದಾರರಾದ ಸೈಯದ್ ಮೊಸೀನ್, ತಮ್ಮ ಮೇಲೆ ಆರೋಪಿಗಳಾದ ಹರೀಶ (ತೆಂಗಿನಗುಂಡಿ, ಭಟ್ಕಳ) ಮತ್ತು ಹೇಮಾ (ಹೆಬಳೆ, ಭಟ್ಕಳ) ಸುಲಿಗೆ ಯತ್ನ ಮಾಡಿದ ಆರೋಪ ಮಾಡಿದ್ದಾರೆ.

    ಘಟನೆಯ ಪ್ರಕಾರ, ಫಿರ್ಯಾದಿದಾರರು ಕೆ.ಎಚ್.ಬಿ. ಕಾಲೋನಿಯಲ್ಲಿ ನಡೆಯುತ್ತಿದ್ದಾಗ ಆರೋಪಿಗಳು ತಮ್ಮ ಕಿಸೆಯಲ್ಲಿದ್ದ ಸುಮಾರು 10,000 ರೂಪಾಯಿ ಮೌಲ್ಯದ ರೆಡ್‌ಮೀ ನೋಟ್ 12 ಮೊಬೈಲ್ ಫೋನ್ ಅನ್ನು ಸುಲಿಗೆ ಮಾಡಲು ಯತ್ನಿಸಿದರು. ಆರೋಪಿಗಳನ್ನು ಸ್ಥಳದಲ್ಲೇ ಹಿಡಿದು ಪೊಲೀಸರಿಗೆ ಹಸ್ತಾಂತರ ಮಾಡಲಾಯಿತು. ಈ ಸಂಬಂಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುತ್ತಿಗೆ ಸಂಖ್ಯೆ 79/2025ರಡಿ ಕಲಂ 309(5) ಜೆ.ಎನ್.ಎಸ್. 2022 ಧಾರೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.

    ತನಿಖೆಯಲ್ಲಿ ಆರೋಪಿಗಳಾದ ಹರೀಶ ಮತ್ತು ಹೇಮಾಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರಿಸಲಾಯಿತು. ಮಾನ್ಯ ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನವನ್ನು ಆದೇಶಿಸಿದೆ.

    ಪೊಲೀಸರು ವಶಪಡಿಸಿಕೊಂಡ ಸ್ವತ್ತು

    1. 40.360 ಗ್ರಾಂ ಬಂಗಾರದ ಆಭರಣಗಳು (ಮೌಲ್ಯ: 3,24,800 ರೂ)
    2. 228.77 ಗ್ರಾಂ ಬೆಳ್ಳಿಯ ಆಭರಣಗಳು (ಮೌಲ್ಯ: 74,376 ರೂ)

    ಈ ಕಾರ್ಯಾಚರಣೆಯಲ್ಲಿ ಪೊಲೀಸ್ ನಿರೀಕ್ಷಕ ಮಂಜುನಾಥ ಅಂಗಾರೆಡ್ಡಿ, ಪಿ.ಎಸ್‌.ಐ ಭರಮಪ್ಪ ಬೆಳಗಲಿ ಮತ್ತು ಸಿಬ್ಬಂದಿಗಳಾದ ಮಂಜುನಾಥ ಗೊಂಡ, ನಿಂಗಣಗೌಡ ಪಾಟೀಲ, ಶಾರದಾ ಗೌಡ, ಮದಾರ ಸಾಬ, ಈರಣ್ಣ ಪೂಜೇರಿ, ಮಂಜುನಾಥ ಖಾರ್ವಿ, ಸಾವಿತ್ರಿ ಜಿ ಮತ್ತು ಮಂಜುನಾಥ ಪಟಗಾರ ಭಾಗವಹಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಅಧೀಕ್ಷಕರು ಮತ್ತು ಭಟ್ಕಳ ಉಪವಿಭಾಗದ ಉಪಾಧೀಕ್ಷಕರು ತಂಡದ ಸೇವೆಯನ್ನು ಶ್ಲಾಘಿಸಿದ್ದಾರೆ.

  • Alia Bhatt’s ex assistant arrested for cheating her of Rs 77 lakh

    Bengaluru, July 9, 2025: Alia Bhatt’s former personal assistant has been arrested for cheating the actor of Rs 77 lakh. Vedika Prakash Shetty, 32, is accused of committing irregularities worth Rs 76.9 lakh in Ms Bhatt’s production company, Eternal Sunshine Productions Private Limited, and her personal accounts.

    This fraud, police have said, was committed between May 2022 and August 2024. The matter came to light after Alia Bhatt’s mother, actor-director Soni Razdan, filed a complaint with Juhu police on January 23. Thereafter, a case was registered under sections relating to criminal breach of trust and cheating and police started looking for Vedika Shetty.

    According to police sources, Vedika Shetty worked as Ms Bhatt’s personal assistant from 2021 to 2024. During this time, she handled the actor’s financial documents and payments and planned her schedule.

    The investigation has revealed that Vedika Shetty allegedly prepared fake bills, got Ms Bhatt to sign them and siphoned off the money, police sources have said. She told the actor that the expenses were for her travel, meetings and other related arrangements.

    Vedika Shetty, the probe has found, used professional tools to make these fake bills look authentic. After Ms Bhatt signed them, the amounts were transferred to the account of her friend, who would then route the money back to Vedika Shetty.

    After Ms Razdan filed a police complaint, Vedika Shetty was on the run and kept changing her location. She was tracked down to Rajasthan, then to Karnataka, then to Pune and then to Bengaluru. Eventually, Juhu police caught up with her in Bengaluru and arrested her. She was then brought to Mumbai on a transit demand.

  • ಉಡುಪಿ: ಆನ್‌ಲೈನ್ ಮೋಸದಿಂದ 1.59 ಲಕ್ಷ ರೂ. ಕಳೆದುಕೊಂಡ ವಿದ್ಯಾರ್ಥಿ

    ಉಡುಪಿ: ಕಿನ್ನಿಮುಲ್ಕಿಯ ಸಂದೇಶ್ (25) ಐರ್ಲೆಂಡ್‌ನ ಡಬ್ಲಿನ್‌ನಲ್ಲಿ ಎಂ.ಎಸ್. ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ದಿನಾಂಕ 30/06/2025ರಂದು ಸಂಜೆ 6:05ಕ್ಕೆ ಅಪರಿಚಿತ ವ್ಯಕ್ತಿಯೊಬ್ಬ +3530120***** ಸಂಖ್ಯೆಯಿಂದ ಸಂದೇಶ್‌ಗೆ ಕರೆ ಮಾಡಿ, “ನಾನು ಭಾರತೀಯ ರಾಯಭಾರಿ ಕಚೇರಿಯಿಂದ ಮಾತನಾಡುತ್ತಿದ್ದೇನೆ. ನೀವು ಐರ್ಲೆಂಡ್‌ನಲ್ಲಿ ಸಲ್ಲಿಸಿದ IRP ಅರ್ಜಿಯಲ್ಲಿ ಜನ್ಮ ದಿನಾಂಕ ತಪ್ಪಾಗಿದೆ. ತಕ್ಷಣ ಸರಿಪಡಿಸದಿದ್ದರೆ, ನಿಮ್ಮ ಪಾಸ್‌ಪೋರ್ಟ್‌ನ್ನು YELLOW ಗ್ರೂಪ್‌ಗೆ ಸೇರಿಸಿ ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಸಿದ್ದಾನೆ.

    ಆರೋಪಿಯು ನೀಡಿದ rakeshcons.dublin@***.***.** ಇ-ಮೇಲ್‌ಗೆ ಸಂದೇಶ್ ತಮ್ಮ ಆಧಾರ್ ಕಾರ್ಡ್, ಜನ್ಮ ದಿನಾಂಕ ಪ್ರಮಾಣಪತ್ರ ಹಾಗೂ ಮತದಾರರ ಗುರುತಿನ ಚೀಟಿಯ ನಕಲುಗಳನ್ನು ಕಳುಹಿಸಿದ್ದಾರೆ. ಬಳಿಕ ಆರೋಪಿಯು, ಭದ್ರತೆಗಾಗಿ ಹಣವನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಲು ತಿಳಿಸಿ, “ಜನ್ಮ ದಿನಾಂಕ ಪರಿಶೀಲನೆಯ ನಂತರ ಹಣ ಹಿಂದಿರುಗಿಸಲಾಗುವುದು” ಎಂದು ನಂಬಿಸಿದ್ದಾನೆ. ಇದನ್ನು ನಂಬಿದ ಸಂದೇಶ್ ತಮ್ಮ ಪೇಟಿಎಂ ಖಾತೆಯಿಂದ ಆಕ್ಸಿಸ್ ಬ್ಯಾಂಕ್ ಖಾತೆಗೆ 58,533.07 ರೂ. ವರ್ಗಾಯಿಸಿದ್ದಾರೆ.

    ಪೇಟಿಎಂ ಖಾತೆಯ ವರ್ಗಾವಣೆ ಮಿತಿ ಮುಗಿದ ಕಾರಣ, ಸಂದೇಶ್ ತಮ್ಮ ತಂದೆ ಶ್ರೀಕಾಂತ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಶ್ರೀಕಾಂತ್ ಕಿನ್ನಿಮುಲ್ಕಿಯ ವೀರಭದ್ರೇಶ್ವರ ದೇವಾಸ್ಥಾನದ ಹಿಂಭಾಗದ ನಿವಾಸಿಯಾಗಿದ್ದು, ತಮ್ಮ ಪೇಟಿಎಂ ಮತ್ತು ಗೂಗಲ್ ಪೇ ಖಾತೆಗಳಿಂದ ಆರೋಪಿಯ ಖಾತೆಗಳಿಗೆ ಕ್ರಮವಾಗಿ 33,588.11 ರೂ. ಮತ್ತು 67,075.64 ರೂ. ಸೇರಿ ಒಟ್ಟು 1,00,663.75 ರೂ. ವರ್ಗಾಯಿಸಿದ್ದಾರೆ.

    ಆನಂತರ ಆರೋಪಿಯು ಮತ್ತೆ ಹೆಚ್ಚಿನ ಹಣ ಕೇಳಿದಾಗ, ಸಂದೇಶ್‌ಗೆ ಮೋಸದ ಅನುಮಾನ ಬಂದಿದೆ. ಆರೋಪಿಯು ಆನ್‌ಲೈನ್ ಮೂಲಕ ಹಣ ವರ್ಗಾಯಿಸಿಕೊಂಡು ಮೋಸ ಮಾಡಿರುವುದು ದೃಢಪಟ್ಟಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 124/2025, ಕಲಂ 318(2) BNS, 66(D) IT ಆಕ್ಟ್‌ನಡಿ ಪ್ರಕರಣ ದಾಖಲಾಗಿದೆ.

  • ‘ಸರ್ಕಾರಿ ಕೆಲಸ’ಕ್ಕಾಗಿ 30 ವರ್ಷದ ಹಿಂದೆ 200 ರೂ. ಪಡೆದು ವಂಚಿಸಿದ್ದ ವ್ಯಕ್ತಿ ಸೆರೆ

    ಬೈಂದೂರು: ಸರಕಾರಿ ಕೆಲಸ ಕೊಡಿಸುತ್ತೇನೆ ಎಂದು ಭರವಸೆ ನೀಡಿ 30 ವರ್ಷಗಳ ಹಿಂದೆ 200 ರೂ. ಪಡೆದು ಮೋಸ ಮಾಡಿದ್ದ ಆರೋಪಿ ಬೈಂದೂರಿನ ಮಯ್ಯಾಡಿಯ ಬಿ.ಕೆ. ರಾಮಚಂದ್ರ ರಾವ್‌ ಎಂಬಾತನನ್ನು ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

    ಶಿರಸಿಯ ಬಿಳಿಗಿರಿ ಕೊಪ್ಪದ ವೆಂಕಟೇಶ ಅವರಿಗೆ ಪದವಿ ಓದುತ್ತಿರುವಾಗ ರಾಮಚಂದ್ರನ ಪರಿಚಯವಾಗಿತ್ತು. ಆತ ಸರಕಾರಿ ನೌಕರಿ ಕೊಡಿಸುವುದಾಗಿ 200 ರೂ. ಪಡೆದು ಕೆಲಸ ಕೊಡಿಸದೆ ವಂಚಿಸಿರುವ ಕುರಿತು ಪ್ರಕರಣ ದಾಖಲಾಗಿತ್ತು.

    ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ 30 ವರ್ಷದಿಂದ ತಲೆಮರೆಸಿಕೊಂಡಿದ್ದ. ಡಿಎಸ್ಪಿ ಗೀತಾ ಪಾಟೀಲ್‌ ಹಾಗೂ ಶಿರಸಿ ಗ್ರಾಮೀಣ ಠಾಣೆ ಪಿಐ ಮಂಜುನಾಥ್‌ ಎಂ., ಪಿಎಸ್‌ಐ ಸಂತೋಷ ಕುಮಾರ್‌ ಎಂ., ಅಶೋಕ್‌ ರಾಠೊಡ್‌ ಮಾರ್ಗದರ್ಶನದಂತೆ ಠಾಣೆಯ ರಾಘವೇಂದ್ರ ಜಿ. ಮತ್ತು ಮಾರುತಿ ಗೌಡ ಬೆಂಗಳೂರಿನ ಬಳೆಪೇಟೆಯಲ್ಲಿದ್ದ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿ ಕರೆ ತಂದಿದ್ದಾರೆ.

  • ಬೈಂದೂರು: ಜಮೀನು ಕ್ರಯ ವಿಷಯದಲ್ಲಿ ಕೋಟಿಗಟ್ಟಲೆ ವಂಚನೆ ಆರೋಪ – ಪ್ರಕರಣ ದಾಖಲು

    ಬೈಂದೂರು, ಜೂನ್ 9, 2025: ತೆಗ್ಗರ್ಸೆ ಗ್ರಾಮದ ಸುಭಾಶ (32) ಎಂಬವರು ಗುತ್ತಿಗೆ ವ್ಯವಹಾರದಲ್ಲಿ ತೊಡಗಿದ್ದು, ತಮ್ಮ ವಾಹನಗಳನ್ನು ನಿಲ್ಲಿಸಲು ಯಡ್ತರೆ ಗ್ರಾಮದಲ್ಲಿ ಸೂಕ್ತ ಜಾಗವನ್ನು ಹುಡುಕುತ್ತಿದ್ದ ವೇಳೆ ದೊಡ್ಡಪ್ಪನ ಮಗನಾದ ಶಂಕರ (2ನೇ ಆರೋಪಿ) ಜಮೀನು ಒಡಮಾಡಿಕೊಡುವುದಾಗಿ ಭರವಸೆ ನೀಡಿ, ರೊಕಿ ಡಯಾಸ್ (1ನೇ ಆರೋಪಿ) ಎಂಬಾತನನ್ನು ಪರಿಚಯಿಸಿದ್ದಾನೆ. ರೊಕಿ ಡಯಾಸ್, ಯಡ್ತರೆ ಗ್ರಾಮದ ಸರ್ವೆ ನಂಬರ್ 30/3 A1 ರಲ್ಲಿ 0.40 ಎಕ್ರೆ, 30/3A2 ರಲ್ಲಿ 0.14 ಎಕ್ರೆ ಮತ್ತು 30/9 ರಲ್ಲಿ 0.26 ಎಕ್ರೆ ಜಮೀನನ್ನು ತೋರಿಸಿ, ಸೆಂಟ್‌ಗೆ 3.5 ಲಕ್ಷ ರೂ. ದರದಂತೆ ಒಟ್ಟು 2.66 ಕೋಟಿ ರೂ.ಗೆ ಕರಾರು ಪತ್ರ ಮಾಡಿಕೊಂಡಿದ್ದಾನೆ.

    ಸುಭಾಶ ಅವರು 1.80 ಕೋಟಿ ರೂ. ಬ್ಯಾಂಕ್ ಖಾತೆ ಮೂಲಕ ಮತ್ತು 1 ಲಕ್ಷ ರೂ. ನಗದಾಗಿ ಆರೋಪಿಗೆ ಪಾವತಿಸಿದ್ದು, ಉಳಿದ ಮೊತ್ತವನ್ನು ಕ್ರಯಪತ್ರದ ವೇಳೆ ನೀಡಲು ಒಪ್ಪಿಗೆ ಮಾಡಿಕೊಂಡಿದ್ದರು. ಆದರೆ, 15 ದಿನಗಳ ಬಳಿಕ ಶಂಕರ, ಜಮೀನಿನ ದಾಖಲೆಗಳಲ್ಲಿ ದೋಷಗಳಿರುವುದಾಗಿ ತಿಳಿಸಿ, ಅವುಗಳನ್ನು ಸರಿಪಡಿಸಿ ಕ್ರಯಪತ್ರ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾನೆ.

    ದಾಖಲೆ ಪರಿಶೀಲನೆಯಲ್ಲಿ 0.14 ಎಕ್ರೆ ಮತ್ತು 0.26 ಎಕ್ರೆ ಜಮೀನು ಪ್ರಾನ್ಸಿಸ್ ಪೀಟರ್ ರೆಬೆಲ್ಲೋ ಹೆಸರಿನಲ್ಲಿರುವುದು ಕಂಡುಬಂದಿದೆ. ಈ ಬಗ್ಗೆ ವಿಚಾರಿಸಿದಾಗ, ಆರೋಪಿಗಳು ಜಮೀನನ್ನು 1ನೇ ಆರೋಪಿಯ ಹೆಸರಿಗೆ ನೊಂದಣಿ ಮಾಡಿ ಕ್ರಯಪತ್ರ ನೀಡುವುದಾಗಿ ನಂಬಿಸಿದ್ದಾರೆ. ಆದರೆ, ನಂತರ ಕರಾರು ಪತ್ರವನ್ನು ರದ್ದುಗೊಳಿಸಿ ಸುಭಾಶ ಅವರಿಗೆ ನೋಟೀಸ್ ನೀಡಿದ್ದಾರೆ.

    ಮತ್ತೊಮ್ಮೆ ದಾಖಲೆಗಳನ್ನು ಸರಿಪಡಿಸಿ ಕ್ರಯಪತ್ರ ಮಾಡಿಕೊಡುವುದಾಗಿ ಆರೋಪಿಗಳು ಭರವಸೆ ನೀಡಿದರೂ, ಜಮೀನಿನ ಸರ್ವೆ ನಂಬರ್ 30/3 A1 ರಲ್ಲಿ ಬೈಂದೂರು ಸಾಗರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಿಂದ 1 ಕೋಟಿ ರೂ. ಸಾಲ ಪಡೆದಿರುವುದು ಬೆಳಕಿಗೆ ಬಂದಿದೆ. ಜೂನ್ 7, 2025 ರಂದು ಈ ಬಗ್ಗೆ ವಿಚಾರಿಸಿದಾಗ, ಆರೋಪಿಗಳು ಸುಭಾಶ ಅವರಿಗೆ ಬೆದರಿಕೆ ಹಾಕಿ, ವಂಚಿಸಿರುವುದಾಗಿ ದೂರು ದಾಖಲಾಗಿದೆ.

    ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 118/2025ರಡಿ ಕಲಂ 316(2), 318(2),