Tag: Ganja

  • Bhatkal: Police Seize ₹50,000 Worth of Ganja, Two Accused fled

    Bhatkal, August 13, 2025 – Bhatkal City Police, led by PSI Naveen Naik, conducted a raid on August 12, 2025, at around 6:00 PM near Tenginagundi Cross on National Highway-66, seizing approximately 1.75 kg of ganja valued at ₹50,000. The police also confiscated a white Renault Kwid car, estimated to be worth ₹5 lakh, a digital weighing machine, and other items used in the illegal transport of the narcotic.

    The accused, identified as Sayyad Gulzar (22) and Sayyad Muktiyar, both from Kasarakod, Tonka, in Honnavar taluk, fled during the operation. A manhunt has been launched to apprehend the absconding suspects. A case has been registered at Bhatkal City Police Station, and further investigations are underway to trace the source and network behind the ganja trafficking.

  • ಜಿಲ್ಲೆಯ ಯುವಕರಲ್ಲಿ ಗಾಂಜಾ ಸೇವನೆ ಹೆಚ್ಚಳ, ಮತ್ತೊಬ್ಬ ಯುವಕ ವಶಕ್ಕೆ

    ಉಡುಪಿ, ಮೇ 29, 2025: ಉಡುಪಿ ಜಿಲ್ಲೆಯಲ್ಲಿ ಯುವಕರಲ್ಲಿ ಮಾದಕ ವಸ್ತು ಸೇವನೆಯ ಪ್ರಕರಣಗಳು ಕಳೆದ ಒಂದು ತಿಂಗಳಲ್ಲಿ ಗಣನೀಯವಾಗಿ ಏರಿಕೆಯಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಈ ಹಿನ್ನೆಲೆಯಲ್ಲಿ, ಅಜ್ಜರಕಾಡಿನ ಭುಜಂಗ ಪಾರ್ಕ್‌ನ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆಯ ಆರೋಪದ ಮೇಲೆ 23 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

    ಮೂಡನಿಡಂಬೂರು ಗ್ರಾಮದ ನಿವಾಸಿ ಅಕ್ಷಯ್ (23) ಎಂಬಾತನನ್ನು ಮೇ 28, 2025 ರಂದು ಸಂಜೆ 5:00 ಗಂಟೆ ಸುಮಾರಿಗೆ ಸೆನ್ ಪೊಲೀಸ್ ಠಾಣೆಯ ಪ್ರಭಾರ ನಿರೀಕ್ಷಕ ರಾಮಚಂದ್ರ ನಾಯಕ್ ಅವರು ವಶಕ್ಕೆ ಪಡೆದಿದ್ದಾರೆ. ಆರೋಪಿಯು ಮಾದಕ ವಸ್ತು ಸೇವಿಸಿರುವ ಶಂಕೆಯ ಮೇಲೆ, ಆತನ ಸಮ್ಮತಿಯೊಂದಿಗೆ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು. ವೈದ್ಯರ ವರದಿಯ ಪ್ರಕಾರ, ಆರೋಪಿಯು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ.

    ಉಡುಪಿ ಜಿಲ್ಲಾ ಪೊಲೀಸರಿಂದ ಜಾಗೃತಿ ಅಭಿಯಾನ – ಮೇ 15, 2025

    ಈ ಸಂಬಂಧ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕ್ರಮಾಂಕ 23/2025ರ ಅಡಿಯಲ್ಲಿ ಕಲಂ 27(b) ಎನ್‌.ಡಿ.ಪಿ.ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ. ಯುವಕರಲ್ಲಿ ಗಾಂಜಾ ಮತ್ತಿತರ ಮಾದಕ ವಸ್ತುಗಳ ಸೇವನೆಯ ಈ ಚಟುವಟಿಕೆಯು ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ಉಡುಪಿ ಜಿಲ್ಲಾ ಪೊಲೀಸರು ಜಿಲ್ಲೆಯಾದ್ಯಂತ ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಿದ್ದಾರೆ.

    • ಮಾದಕ ವ್ಯಸನದಿಂದ ಮುಕ್ತರಾಗಲು ಸಹಾಯ ಬಯಸುವವರು ರಾಷ್ಟ್ರೀಯ ಟೋಲ್-ಫ್ರೀ ಹೆಲ್ಪ್‌ಲೈನ್ ಸಂಖ್ಯೆ 14446ಗೆ ಸಂಪರ್ಕಿಸಿ ಸಲಹೆ ಪಡೆಯಬಹುದು. – ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
  • ಹೆಬ್ರಿ: ಗಾಂಜಾ ಮಾರಾಟ ಮತ್ತು ಕ್ರಿಕೆಟ್ ಬೆಟ್ಟಿಂಗ್ ದಂಧೆ; ದಾಳಿ

    ಹೆಬ್ರಿ, ಮೇ 20, 2025: ದಿನಾಂಕ 19-05-2025ರ ರಾತ್ರಿ, ಹೆಬ್ರಿ ಪೊಲೀಸ್ ಠಾಣೆಯ ಉಪನಿರೀಕ್ಷಕರು (ತನಿಖೆ) ಅಶೋಕ ಮಾಳಬಾಗಿ ಅವರಿಗೆ ಬೆಳ್ಳಂಜೆ ಗ್ರಾಮದ ತುಂಬೆಜಡ್ಡು ಎಂಬಲ್ಲಿ ಮೋಹನ್ ದಾಸ್ ಎಂಬವರ ಮನೆ ಪಕ್ಕದ ಕಟ್ಟಡದಲ್ಲಿ ಗಾಂಜಾ ಮಾರಾಟ ನಡೆಯುತ್ತಿದೆ ಎಂಬ ಮಾಹಿತಿ ಬಂದಿತ್ತು. ಇದರಂತೆ ಸಿಬ್ಬಂದಿಗಳ ಸಹಾಯದೊಂದಿಗೆ ಬೆಳಿಗ್ಗೆ ಜಾವದಲ್ಲಿ ದಾಳಿ ನಡೆಸಲಾಗಿದೆ.

    ದಾಳಿಯಲ್ಲಿ ಕಟ್ಟಡದಲ್ಲಿ ತೇಜಸ್, ಪ್ರಜ್ವಲ್ ಮತ್ತು ಪ್ರವೀಣ್ ಎಂಬವರು ಲಾಭದ ಉದ್ದೇಶದಿಂದ ಗಾಂಜಾ ಮಾರಾಟ ಹಾಗೂ ಸಂಘಟಿತವಾಗಿ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದರು. ಸ್ಥಳದಲ್ಲಿ 89,000 ರೂಪಾಯಿ ನಗದು, 8 ಮೊಬೈಲ್ ಫೋನ್‌ಗಳು, 7 ಎಟಿಎಂ ಕಾರ್ಡ್‌ಗಳು, 3 ಸಿಮ್ ಕಾರ್ಡ್‌ಗಳು, 2 ನೋಟ್ ಪುಸ್ತಕಗಳು ಮತ್ತು 21 ಗ್ರಾಂ ಗಾಂಜಾ ಸಿಕ್ಕಿದೆ.

    ಈ ಸಂಬಂಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 29/2025, ಕಲಂ 112 BNS, ಕಲಂ 78 ಕೆಪಿ ಕಾಯ್ದೆ ಮತ್ತು 8(c), 20(b) NDPS ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.

  • ಬೈಂದೂರು: ಶಿರೂರು ಮಾರ್ಕೆಟ್‌ ಬಳಿ ಗಾಂಜಾ ಸೇವನೆ; ಯುವಕನ ವಿರುದ್ಧ ಪ್ರಕರಣ ದಾಖಲು

    ಬೈಂದೂರು, ಮೇ 17, 2025: ಶಿರೂರು ಮಾರ್ಕೆಟ್‌ನ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸಿ ಅಮಲಿನ ಸ್ಥಿತಿಯಲ್ಲಿದ್ದ 23 ವರ್ಷದ ಯುವಕನ ವಿರುದ್ಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಮೇ 15, 2025 ರಂದು ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ಬೈಂದೂರು ಪೊಲೀಸ್ ಠಾಣೆಯ ಉಪನಿರೀಕ್ಷಕ ತಿಮ್ಮೇಶ್ ಬಿ.ಎನ್. ಅವರಿಗೆ ಶಿರೂರು ಮಾರ್ಕೆಟ್‌ನಲ್ಲಿ ಓರ್ವ ವ್ಯಕ್ತಿ ಅಮಲಿನ ಸ್ಥಿತಿಯಲ್ಲಿ ಕುಳಿತಿರುವ ಬಗ್ಗೆ ಮಾಹಿತಿ ಲಭಿಸಿತು. ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಒಬ್ಬ ವ್ಯಕ್ತಿ ಕುಳಿತಿರುವುದು ಕಂಡುಬಂದಿತು. ಆತನೊಂದಿಗೆ ಮಾತನಾಡಿದಾಗ, ತೊದಲುವ ರೀತಿಯಲ್ಲಿ ಮಾತನಾಡಿದ್ದು, ಅವನು ಯಾವುದೋ ಅಮಲು ಪದಾರ್ಥ ಸೇವಿಸಿರುವ ಶಂಕೆಯಾಯಿತು.

    ಸೂಕ್ಷ್ಮ ಪರಿಶೀಲನೆಯಿಂದ ಆತ ಮಾದಕ ವಸ್ತು ಸೇವಿಸಿರುವ ಅನುಮಾನ ಬಂದಿದ್ದು, ಆತನ ಹೆಸರು ವಿಚಾರಿಸಿದಾಗ ಬಾತ್ಯಾ ಸುಪೇಲ್ (23) ಎಂದು ತಿಳಿಸಿದ. ಆತನನ್ನು ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ವೈದ್ಯಾಧಿಕಾರಿಗಳು ಆತ ಗಾಂಜಾ ಸೇವಿಸಿರುವುದನ್ನು ದೃಢಪಡಿಸಿ ವರದಿ ನೀಡಿದ್ದಾರೆ.

    ಈ ಘಟನೆಯ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 100/2025ರಡಿ ಕಲಂ 27(b) NDPS ರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

    ಕಳೆದ ವಾರ ಶಿರೂರು, ಮಾರ್ವಂತೆ ಮತ್ತು ನೆಜಾರ್ ಪ್ರದೇಶಗಳಲ್ಲಿ ಯುವಕರಲ್ಲಿ ಗಾಂಜಾ ದುರುಪಯೋಗದ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ.

    ಮಾದಕ ವಸ್ತು ಸೇವನೆಯ ಸಮಸ್ಯೆಯಿಂದ ಬಿಡುಗಡೆಗೆ ಸಹಾಯ ಬೇಕಿದ್ದರೆ, ಹತ್ತಿರದ ನಶಾ ಮುಕ್ತಿ ಕೇಂದ್ರವನ್ನು ಸಂಪರ್ಕಿಸಿ.

  • ಮರವಂತೆ: ಗಾಂಜಾ ಸೇವನೆ, ಇಬ್ಬರು ಪೊಲೀಸ್ ವಶಕ್ಕೆ

    ಮರವಂತೆ, ಮೇ.10: ಮರವಂತೆ ಕಡಲ ತೀರದಲ್ಲಿ ಗಾಂಜಾ ಸೇವನೆ ಮಾಡಿದ ಇಬ್ಬರು ಯುವಕರ ಮೇಲೆ ಪ್ರಕರಣ ದಾಖಲಾಗಿದೆ.

    10ರಂದು ಬೆಳಿಗ್ಗೆ ಗಂಗೊಳ್ಳಿ ಠಾಣೆ  ಪೊಲೀಸ್ ಉಪನಿರೀಕ್ಷಕರಾದ ಬಸವರಾಜ ಕನಶೆಟ್ಟಿ ಅವರು ರೌಂಡ್ಸ್ ಕರ್ತವ್ಯದಲ್ಲಿರುವಾಗ ಮರವಂತೆ ಗ್ರಾಮದ ಮರವಂತೆ ಬೀಚ್ ಬಳಿ ಇಬ್ಬರು ಯುವಕರು ಗಾಂಜಾ ಸೇವಿಸುತ್ತಿರುವುದಾಗಿ ಮಾಹಿತಿ ಬಂದಂತೆ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಇಬ್ಬರೂ ಯುವಕರು ತೊದಲುತ್ತಾ ಮಾತನಾಡುತ್ತಿದ್ದು, ಅಮಲಿನಲ್ಲಿರುವುದು ಕಂಡುಬಂದಿದೆ.

    ಶರ್ಪುದ್ದೀನ್ (22ವ), ಮಹಮ್ಮದ್ ಸುಹೇಬ್ (21ವ) ಈ ಯುವಕರು ಗಾಂಜಾದಂತಹ ಅಮಲು ಪದಾರ್ಥ ಸೇವನೆ ಮಾಡಿರುವ ಬಗ್ಗೆ ಅನುಮಾನ ಬಂದಿದ್ದು ಅವರನ್ನು ಕುಂದಾಪುರ ಶ್ರೀ ಮಾತಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಅವರು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಈ ಬಗ್ಗೆ ಗಂಗೊಳ್ಳಿ  ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.