Tag: Kundapur

  • ಮೆಡಿಕಲ್ ಶಾಪ್‌ನಲ್ಲಿ ಚಿಲ್ಲರೆ ಕೇಳಿದ್ದಕ್ಕೆ ಯುವತಿ ಮೇಲೆ ಮಹಿಳೆಯಿಂದ ಹಲ್ಲೆ. ಪ್ರಕರಣ ದಾಖಲು, ಎಸ್ಪಿ ಭೇಟಿ

    ಕುಂದಾಪುರ, ಜೂನ್ 10, 2025: ಕುಂದಾಪುರ ತಾಲೂಕಿನ ಗುಲ್ವಾಡಿ ಗ್ರಾಮದ ಒಬ್ಬ ಯುವತಿ (22) ಕಳೆದ ಒಂದು ವರ್ಷದಿಂದ ಗುಲ್ವಾಡಿ ಗ್ರಾಮದ ಮಾವಿನಕಟ್ಟೆ ಜಂಕ್ಷನ್ ಬಳಿಯ ಹೆಲ್ತ್ ಕೇರ್ ಮೆಡಿಕಲ್ ಶಾಪ್‌ನಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ದಿನಾಂಕ 09/06/2025 ರಂದು ಬೆಳಿಗ್ಗೆ 11:30 ಗಂಟೆಗೆ, ಯುವತಿ ಕೆಲಸದಲ್ಲಿ ನಿರತರಾಗಿದ್ದಾಗ, ಯಾಸ್ಮಿನ್ ಎಂಬಾತರು ಮೆಡಿಕಲ್ ಶಾಪ್‌ಗೆ ಬಂದು ಸಿರ್ಲ್ಯಾಕ್ ಬೇಬಿ ಪೌಡರ್ ಕೇಳಿದ್ದಾರೆ.

    ಯುವತಿ ವಸ್ತುವನ್ನು ಯಾಸ್ಮಿನ್‌ಗೆ ನೀಡಿ, 330 ರೂಪಾಯಿ ಪಾವತಿಸುವಂತೆ ಕೇಳಿದ್ದಾರೆ. ಯಾಸ್ಮಿನ್ 500 ರೂಪಾಯಿ ನೋಟು ನೀಡಿದಾಗ, ಯುವತಿ ಚಿಲ್ಲರೆ ಇಲ್ಲವೆಂದು ತಿಳಿಸಿ, ಪಕ್ಕದ ಅಂಗಡಿಯಿಂದ ಚಿಲ್ಲರೆ ತರಲು ಹೊರಗೆ ಹೋದರು. ಈ ವೇಳೆ ಯಾಸ್ಮಿನ್ ಯುವತಿಯ ಮೇಲೆ ದೈಹಿಕವಾಗಿ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು, ಜಾತಿನಿಂದನೆ ಮಾಡಿ ಸಾರ್ವಜನಿಕವಾಗಿ ಅವಮಾನಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

    ಈ ಘಟನೆಯ ಬಗ್ಗೆ ಯುವತಿ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ, ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ ಅ.ಕೃ 34/2025, ಕಲಂ 352,115(2) BNS, 3(1)(R), 3(2)(VA) SC/ST ACT 03 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ

    ಅಪ್ಡೇಟ್:

    ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಾವಿನಕಟ್ಟೆಯಲ್ಲಿ ಮೆಡಿಕಲ್ ಶಾಪ್ ನಲ್ಲಿ ಚಿಲ್ಲರೆ ವಿಷಯಕ್ಕಾಗಿ ಇಬ್ಬರು ಮಹಿಳೆಯರ ನಡುವೆ ಮಾತಿನ ಚಕಮಕಿ ನಡೆದು ಆರೋಪಿ ಮಹಿಳೆಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.

    ಸದರಿ ಪ್ರಕರಣದ ಸಂತ್ರಸ್ತೆ ಮಹಿಳೆಯನ್ನು ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಐಪಿಎಸ್ ರವರು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿ ಮಾಹಿತಿಯನ್ನು ಪಡೆದುಕೊಂಡಿರುತ್ತಾರೆ.

    ದಲಿತ ಮುಖಂಡರಿಂದ ಪೊಲೀಸ್ ಠಾಣೆಗೆ ಭೇಟಿ

  • ಕುಂದಾಪುರದಲ್ಲಿ ಕಾನೂನುಬಾಹಿರ ಕೆಂಪು ಕಲ್ಲು ಸಾಗಾಟ: ಎರಡು ಪ್ರಕರಣಗಳು ದಾಖಲು

    ಕುಂದಾಪುರ, ಜೂನ್ 07, 2025: ಕುಂದಾಪುರ ತಾಲೂಕಿನ ಗೋಪಾಡಿ ಗ್ರಾಮದ ಶಾಂತಿನಗರ ಜಂಕ್ಷನ್‌ನ ಚೆಕ್‌ಪೋಸ್ಟ್‌ನಲ್ಲಿ ದಿನಾಂಕ 06-06-2025 ರಂದು ರಾತ್ರಿ ಕಾನೂನುಬಾಹಿರವಾಗಿ ಕೆಂಪು ಕಲ್ಲು ಸಾಗಾಟ ಮಾಡುತ್ತಿದ್ದ ಎರಡು ಟಿಪ್ಪರ್ ವಾಹನಗಳನ್ನು ಕುಂದಾಪುರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಎರಡು ಪ್ರತ್ಯೇಕ ಘಟನೆಗಳಲ್ಲಿ ಒಟ್ಟು ಎರಡು ಚಾಲಕರನ್ನು ವಶಕ್ಕೆ ಪಡೆದು, ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ.

    ಮೊದಲ ಘಟನೆ: ರಾತ್ರಿ 11:00 ಗಂಟೆಗೆ, ಪೊಲೀಸ್ ಉಪನಿರೀಕ್ಷಕ ನಂಜಾನಾಯ್ಕ ಎನ್. ರವರು ಇಲಾಖಾ ವಾಹನ (KA 20 G 0741)ದೊಂದಿಗೆ ಸಿಬ್ಬಂದಿಯೊಂದಿಗೆ ಗಸ್ತು ಕರ್ತವ್ಯದಲ್ಲಿದ್ದಾಗ, ವಕ್ವಾಡಿ ಕಡೆಯಿಂದ ಬಂದ KA 20 AA 3057 ನೋಂದಣಿಯ 407 ಮಿನಿ ಟಿಪ್ಪರ್ ವಾಹನವನ್ನು ತಪಾಸಣೆಗಾಗಿ ನಿಲ್ಲಿಸಿದರು. ವಾಹನದಲ್ಲಿ ಕೆಂಪು ಕಲ್ಲುಗಳಿರುವುದು ಕಂಡುಬಂದಿತು. ಚಾಲಕ ಸಚ್ಚಿದಾನಂದ ರವರು ಮಂದರತಿಯ ಮರಿಯ ಎಂಬವರ ಮನೆಯ ಅಂಗಡಿಯಿಂದ ಸುಮಾರು 200 ಕೆಂಪು ಕಲ್ಲುಗಳನ್ನು ತುಂಬಿಸಿಕೊಂಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಯಾವುದೇ ಪರವನಗಿರುವುದಿಲ್ಲದೇ ಕಾನೂನುಬಾಹಿರವಾಗಿ ಕೆಂಪು ಕಲ್ಲು ಸಾಗಾಟ ಮಾಡುತ್ತಿದ್ದ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಕೆಂಪು ಕಲ್ಲಿನ ಅಂದಾಜು ಮೌಲ್ಯ 5,000 ರೂ. ಮತ್ತು ಟಿಪ್ಪರ್ ವಾಹನದ (KA 20 AA 3057) ಅಂದಾಜು ಮೌಲ್ಯ 2,00,000 ರೂ. ಆಗಿದೆ. ಈ ಸಂಬಂಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ BNS ಕಲಂ 303(2), 112 ಮತ್ತು ಗಣಿ ಮತ್ತು ಖನಿಜಗಳ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯಿದೆಯ ಕಲಂ 4, 4(1)(a), 21 ರ ಅಡಿಯಲ್ಲಿ ಅಪರಾಧ ಕ್ರಮಾಂಕ 70/2025 ರಂತೆ ಪ್ರಕರಣ ದಾಖಲಿಸಲಾಗಿದೆ.

    ಎರಡನೇ ಘಟನೆ: ಅದೇ ದಿನ ಬೆಳಿಗ್ಗೆ 10:45 ಗಂಟೆಗೆ, ಉಪನಿರೀಕ್ಷಕ ನಂಜಾನಾಯ್ಕ ಎನ್. ರವರು ಶಾಂತಿನಗರ ಜಂಕ್ಷನ್‌ನ ಚೆಕ್‌ಪೋಸ್ಟ್‌ನಲ್ಲಿ ಗಸ್ತು ಕರ್ತವ್ಯದಲ್ಲಿದ್ದಾಗ, ವಕ್ವಾಡಿ ಕಡೆಯಿಂದ ಬಂದ KA 19 AA 9930 ನೋಂದಣಿಯ ಟಿಪ್ಪರ್ ವಾಹನವನ್ನು ತಪಾಸಣೆಗೆ ನಿಲ್ಲಿಸಿದರು. ವಾಹನದಲ್ಲಿ ಕೆಂಪು ಕಲ್ಲುಗಳಿರುವುದು ಕಂಡುಬಂದಿತು. ಚಾಲಕ ಸೋಮಪ್ಪ ರವರು ಬಜ್ಪೆಯ ಸುಂಕಲಪದವಿನ ದಿವೇಶ್ ಎಂಬವರ ಜಾಗದ ಕಲ್ಲು ಕೋರೆಯಿಂದ 450 ಕೆಂಪು ಕಲ್ಲುಗಳನ್ನು ತುಂಬಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಆರೋಪಿತರು ಯಾವುದೇ ಪರವಾನಗಿಯಿಲ್ಲದೇ ಕೆಂಪು ಕಲ್ಲು ಕಳವು ಮಾಡಿ ಸಾಗಾಟ ಮಾಡಿದ್ದಾರೆ. ಕೆಂಪು ಕಲ್ಲಿನ ಅಂದಾಜು ಮೌಲ್ಯ 19,000 ರೂ. ಮತ್ತು ಟಿಪ್ಪರ್ ವಾಹನದ (KA 19 AA 9930) ಅಂದಾಜು ಮೌಲ್ಯ 5,00,000 ರೂ. ಆಗಿದೆ. ಈ ಸಂಬಂಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ BNS ಕಲಂ 303(2), 112 ಮತ್ತು ಗಣಿ ಮತ್ತು ಖನಿಜಗಳ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯಿದೆಯ ಕಲಂ 4, 4(1)(a), 21 ರ ಅಡಿಯಲ್ಲಿ ಅಪರಾಧ ಕ್ರಮಾಂಕ 71/2025 ರಂತೆ ಪ್ರಕರಣ ದಾಖಲಿಸಲಾಗಿದೆ.

    ಪೊಲೀಸರು ಎರಡೂ ವಾಹನಗಳನ್ನು ಸ್ವಾಧೀನಪಡಿಸಿಕೊಂಡಿದ್ದು, ತನಿಖೆಯನ್ನು ಮುಂದುವರೆಸಿದ್ದಾರೆ.