Tag: Lions Club

  • ಕುಂದಾಪುರ :ಹಂಗಳೂರು ಲಯನ್ಸ್ ಕ್ಲಬ್ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ

    ಕುಂದಾಪುರ :ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ 85% ಕ್ಕಿಂತ ಅಧಿಕ ಅಂಕಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಆದ ಕುಂದಾಪುರದ ಆಸುಪಾಸಿನ ಸರಕಾರಿ ಹಾಗೂ ಅನುದಾನಿತ ಏಳು ಪ್ರೌಢ ಶಾಲೆಗಳ ನೂರಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ಸುಮಾರು ಎರಡು ಲಕ್ಷ ವಿದ್ಯಾರ್ಥಿ ವೇತನ ವಿತರಿಸಲಾಯಿತು.

    ಕುಂದಾಪುರದ ಹೊಟೇಲ್ ಶಾರೋನ್ ಸಭಾಂಗಣದಲ್ಲಿ ಲಯನ್ ರೋವನ್ ಡಿ’ ಕೋಸ್ತ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಪ್ರಥಮ ಉಪಜಿಲ್ಲಾ ರಾಜ್ಯಪಾಲೆ ಲಯನ್ ಸಪ್ನಾ ಸುರೇಶ್, ದ್ವಿತೀಯ ಉಪರಾಜ್ಯಪಾಲ ಲಯನ್ ರಾಜೀವ್ ಕೋಟ್ಯಾನ್, ಜಿಲ್ಲಾ ಶಿಕ್ಷಣ ಕೋ ಆರ್ಡಿನೇಟರ್ ಲಯನ್ ಸುಜಯ ಜತ್ತನ್ನ್, ಲಯನ್ ಉದಯಕುಮಾರ್ ಶೆಟ್ಟಿ, ಲಯನ್ ಬಾಲಕೃಷ್ಣ ಶೆಟ್ಟಿ, ಲಯನ್ ಶಂಕರ್ ಶೆಟ್ಟಿ, ಲಯನ್ ಜೋಸೆಫ್ ಮಾರ್ಟಿಸ್ ಉಪಸ್ಥಿತರಿದ್ದರು.

    ವಲಯಾಧ್ಯಕ್ಷ ಲಯನ್ ಬಾಲಕೃಷ್ಣ ಶೆಟ್ಟಿ ಪ್ರಾಸ್ತಾವಿಕ. ಮಾತುಗಳನ್ನಾಡಿದರು

    ಲಯನ್ ಎಲ್. ಜೆ. ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಲಯನ್ ಮ್ಯಾಥ್ಯೂ ಜೋಸೆಫ್ ವಂದಿಸಿದರು.

  • ಲಯನ್ಸ್ ಕ್ಲಬ್ ಉಡುಪಿಯಿಂದ ಬ್ರಹತ್ ರಕ್ತದಾನ, ನೇತ್ರ, ಸಾಮಾನ್ಯ ಅರೋಗ್ಯ, ಕೀಲು ಮತ್ತು ಎಲುಬು ತಪಾಸಣಾ ಶಿಬಿರ

    ಉಡುಪಿ: ಲಯನ್ಸ್ ಕ್ಲಬ್ ಉಡುಪಿ, ಸಿ. ಎಸ್. ಐ. ಲಾಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆ, ಉಡುಪಿ ಸರಕಾರಿ ರಕ್ತ ನಿಧಿ ಘಟಕ ಅಜ್ಜರಕಾಡು, ಉಡುಪಿ ಗಿರಿಜಾ ಹೆಲ್ತ್ ಕೇರ್ ಹಾಗೂ ಸರ್ಜಿಕಲ್ಸ್ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಬ್ರಹತ್ ರಕ್ತದಾನ, ನೇತ್ರ, ಸಾಮಾನ್ಯ ಅರೋಗ್ಯ ಕೀಲು ಮತ್ತು ಎಲುಬು ತಪಾಸಣಾ ಶಿಬಿರ ದಿನಾಂಕ 11-05-2025 ಭಾನುವಾರ ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 1:00 ಗಂಟೆ ವರೆಗೆ ಉಡುಪಿಯ ಮಿಷನ್ ಆಸ್ಪತ್ರೆಯ ಬಳಿಯ ಮಲ್ಟಿ ಪರ್ಪಸ್ ಹಾಲ್ (LMH) ನಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

    ಇದರಲ್ಲಿ ಉಡುಪಿ ಜಿಲ್ಲಾ ಆಸ್ಪತ್ರೆಯ ಬ್ಲಡ್ ಸೆಂಟರ್ ವಿಭಾಗದ ಡಾ. ವೀಣಾ ಕುಮಾರಿ ಎಂ. , ಕೀಲು ಮತ್ತು ಎಲುಬು ತಜ್ಞರಾದ ಡಾ. ಅರ್ಜುನ್ ಬಲ್ಲಾಳ್, ನೇತ್ರ ತಜ್ಞರಾದ ಡಾ. ಅಭಿನವ್ ಅಶೋಕ್ ಹಾಗು ಸಾಮಾನ್ಯ ಆರೋಗ್ಯ ತಜ್ಞರಾದ ಡಾ. ಸುಮನ್ ಆರ್. ಶೆಟ್ಟಿ ಯವರಿಂದ ಸಂಬಂಧಪಟ್ಟ ರೋಗದ ಬಗ್ಗೆ ಮಾಹಿತಿ ನೀಡಲಾಗುದು.

    ಸಾರ್ವಜನಿಕರಿಂದ ಈ ಸುವರ್ಣಾವಕಾಶದ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ವಿನಂತಿಸಿದ್ದಾರೆ.

    ಸಹಭಾಗಿ ಸಂಘಟನೆಗಳು :

    ಕ್ಯಾಥೊಲಿಕ್ ಸಭಾ (ರಿ.) ಉಡುಪಿ ವಲಯ

    ICYM (ರಿ.) ಉಡುಪಿ ವಲಯ

    ಭಾರತೀಯ ಕ್ರೈಸ್ತ ಒಕ್ಕೂಟ (ರಿ) ಉಡುಪಿ

    ಉಡುಪಿ ರನ್ನರ್ಸ್ ಕ್ಲಬ್ (ರಿ) ಉಡುಪಿ

    ಜಮೈತುಲ್ ಅಲ್ ಫಲಾಹ್ (ರಿ) ಉಡುಪಿ