Tag: Missing

  • Sirsi: Missing Schoolgirls from Kasturba Nagar Found Safe in Mumbai

    Sirsi, August 17, 2025 – A distressing case involving two minor schoolgirls from Kasturba Nagar, Sirsi, who went missing on August 16, 2025, has concluded successfully due to prompt police action. The students, one in 8th grade and the other in 6th grade, left their homes around 4:00 PM, stating they were attending an art class. When they failed to return, their parents, after an extensive search, lodged a complaint with the Sirsi Market Police Station.

    Police Operation

    The police treated the case with utmost seriousness, launching an immediate investigation. Analysis of CCTV footage from the Sirsi Central Bus Stand revealed that the girls inquired about a bus to Chitradurga. As the Chitradurga bus was scheduled for 8:00 PM, they boarded a bus to Hubballi instead. From Hubballi, they traveled via Belagavi to Pune and eventually reached Mumbai, where they were spotted by local police. The Sirsi police, divided into two teams, traced the girls’ route through Hubballi and Belagavi, ultimately locating them in Mumbai.

    Investigation Details

    The operation was led by PSI Ratnakuri under the guidance of DYSP Geeta Patil and CPI Shashikant Varma, with police personnel working diligently to ensure the girls’ safe recovery. The exact reasons for the girls’ decision to leave home are still under investigation, with further details expected to emerge.

  • Two Youths from Same Family Missing After Being Swept Away in Yallapur Stream

    Yallapur, August 10, 2025 – In a tragic incident on Sunday, two youths from the same family in Madanasara village, Yallapur taluk, went missing after being swept away by strong currents in Kavalagi stream while returning from a fishing trip.

    The missing individuals have been identified as Mahmad Rafeek Saab Saiyad (27) and Mahmad Haneef Saab Saiyad (25), both residents of Madanasara village. According to reports, a group of eight people had crossed Kavalagi stream to fish at Bedthi stream on Sunday morning. Around 5:30 PM, while returning and crossing Kavalagi stream, a sudden surge in water flow swept the two men away.

    A case has been registered at the Yallapur police station. Police, along with fire brigade personnel, have visited the site and initiated a search operation for the missing youths. The incident has raised concerns about safety near streams during unpredictable water flow conditions, and authorities are continuing their efforts to locate the men.

  • ನಾವುಂದ: ವ್ಯಕ್ತಿ ಕಾಣೆ

    ಬೈಂದೂರು, ಜುಲೈ 21, 2025: ಬೈಂದೂರು ತಾಲೂಕಿನ ನಾವುಂದ ಗ್ರಾಮದ 74 ವರ್ಷದ ಗಣಪ ರವರು ಜುಲೈ 19, 2025ರ ಸಂಜೆ 6:00 ಗಂಟೆಯ ಸಮಯದಲ್ಲಿ ಮನೆಯಿಂದ ಹೊರಗೆ ಹೋಗಿದ್ದು, ಇಲ್ಲಿಯವರೆಗೆ ಮನೆಗೆ ವಾಪಸ್ಸಾಗಿಲ್ಲ. ಇದರ ಬಗ್ಗೆ ತಮ್ಮ ಪುತ್ರ ಸುಬ್ರಹ್ಮಣ್ಯ (48) ರವರು ಹುಡುಕಾಟ ನಡೆಸಿದ್ದು, ನೆರೆ-ಕೆರೆ, ನಾವುಂದ ಪೇಟೆ ಮತ್ತು ಸಮುದ್ರ ತೀರದಲ್ಲಿ ಹುಡುಕಿದರೂ ಗಣಪ ರವರ ಪತ್ತೆಯಾಗಿಲ್ಲ.

    ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 138/2025ರಡಿ “ಮನುಷ್ಯ ಕಾಣೆ” ಪ್ರಕರಣ ದಾಖಲಾಗಿದೆ.

  • ಗಂಗೊಳ್ಳಿ: ಮೀನುಗಾರರ ಕಾಣೆಯಾಗಿರುವ ಪ್ರಕರಣ; ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಭೇಟಿ

    ಗಂಗೊಳ್ಳಿ, ಜುಲೈ 16, 2025: ಗಂಗೊಳ್ಳಿ ಸಮೀಪದ ಸಮುದ್ರದಲ್ಲಿ ಮೀನುಗಾರಿಕೆಯ ಸಂದರ್ಭದಲ್ಲಿ ಕಾಣೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಇಂದು ಸ್ಥಳಕ್ಕೆ ಭೇಟಿ ನೀಡಿದರು. ನಿನ್ನೆ ಬೆಳಗ್ಗೆ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಅಲೆಗಳ ಅಬ್ಬರಕ್ಕೆ ಸಿಲುಕಿ ಮಗುಚಿಬಿದ್ದ ಪರಿಣಾಮ ಮೂವರು ಮೀನುಗಾರರು ನಾಪತ್ತೆಯಾಗಿದ್ದರು. ಘಟನೆಯಲ್ಲಿ ನಾಪತ್ತೆಯಾಗಿದ್ದ ಮೂವರು ಮೀನುಗಾರರ ಪೈಕಿ ಲೋಹಿತ್ ಖಾರ್ವಿ (38) ಎಂಬಾತನ ಮೃತದೇಹ ಕುಂದಾಪುರದ ಕೋಡಿ ಲೈಟ್ ಹೌಸ್ ಬಳಿಯ ಸಮುದ್ರ ತೀರದಲ್ಲಿ ಪತ್ತೆಯಾಗಿದೆ.

    ಶಾಸಕ ಗುರುರಾಜ್ ಗಂಟಿಹೊಳೆ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿ, ರಕ್ಷಣಾ ಕಾರ್ಯಾಚರಣೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ಅನಿತಾ ಆರ್‌. ಕೆ., ಸ್ಥಳೀಯಾಡಳಿತದ ಜನಪ್ರತಿನಿಧಿಗಳು, ಮಂಡಲ ಪದಾಧಿಕಾರಿಗಳು ಮತ್ತು ಪಕ್ಷದ ಪ್ರಮುಖರು ಪ್ರಮುಖರು ಉಪಸ್ಥಿತರಿದ್ದರು. ಈ ಹಂತದಲ್ಲಿ ಸಮುದ್ರ ಮತ್ತು ತೀರದಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು, ತನಿಖೆ ಮುಂದುವರೆದಿದೆ.

  • ಗಂಗೊಳ್ಳಿ: ಮೀನುಗಾರರ ಕಾಣೆಯಾಗಿರುವ ಪ್ರಕರಣ; ಉಡುಪಿ ಎಸ್‌ಪಿ ಹರಿರಾಮ್ ಶಂಕರ್ ಭೇಟಿ

    ಗಂಗೊಳ್ಳಿ, ಜುಲೈ 15, 2025: ಗಂಗೊಳ್ಳಿ ಸಮೀಪದ ಸಮುದ್ರದಲ್ಲಿ ಮೀನುಗಾರಿಕೆಯ ಸಂದರ್ಭದಲ್ಲಿ ಕಾಣೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಹರಿರಾಮ್ ಶಂಕರ್ ಇಂದು ಸ್ಥಳಕ್ಕೆ ಭೇಟಿ ನೀಡಿದರು. ಇಂದು ಬೆಳಗ್ಗೆ ಗಂಗೊಳ್ಳಿ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಅಲೆಗಳ ಅಬ್ಬರಕ್ಕೆ ಸಿಲುಕಿ ಮಗುಚಿಬಿದ್ದ ಪರಿಣಾಮ ಮೂವರು ಮೀನುಗಾರರು ನಾಪತ್ತೆಯಾಗಿದ್ದಾರೆ.

    ಶೋಧ ಕಾರ್ಯಾಚರಣೆಗೆ ಡ್ರೋನ್‌ಗಳನ್ನು ಬಳಸಲಾಗುತ್ತಿದೆ.

    ಇಂದು ಎಸ್ಪಿ ಹರಿರಾಮ್ ಶಂಕರ್ ಗಂಗೊಳ್ಳಿಗೆ ಭೇಟಿ ನೀಡಿ ರಕ್ಷಣಾ ತಂಡಗಳೊಂದಿಗೆ ಸಮನ್ವಯ ಸಾಧಿಸಿ ಶೋಧ ಕಾರ್ಯಾಚರಣೆಯನ್ನು ಚುರುಕುಗೊಳಿಸುವಂತೆ ಸೂಚನೆ ನೀಡಿದರು. ಈ ಹಂತದಲ್ಲಿ ಸಮುದ್ರ ಮತ್ತು ತೀರದಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು, ತನಿಖೆ ಮುಂದುವರೆದಿದೆ.

  • ನಾಪತ್ತೆಯಾದ ಮೀನುಗಾರ ಪತ್ತೆಗೆ ತುರ್ತು ಕ್ರಮದ ಜೊತೆಗೆ ತುರ್ತು ಪರಿಹಾರದ ವ್ಯವಸ್ಥೆ-ಶಾಸಕ ಗುರುರಾಜ್ ಗಂಟಿಹೊಳೆ

    ಬೈಂದೂರು,ಜುಲೈ 15, 2025: ಗಂಗೊಳ್ಳಿಯಲ್ಲಿ ಇಂದು ಬೆಳಗ್ಗೆ ಸಂಭವಿಸಿದ ದೋಣಿ ದುರಂತದಲ್ಲಿ ಒರ್ವ ಮೀನುಗಾರ ಅಪಾಯದಿಂದ ಪಾರಾಗಿದ್ದು ಮೂವರು ಮೀನುಗಾರರು ನಾಪತ್ತೆಯಾಗಿರುವ ಮಾಹಿತಿ ತಿಳಿದು ಬಂದಿದೆ. ಕಾಣೆಯಾಗಿರುವ ಮೀನುಗಾರರ ಪತ್ತೆಗೆ ಅಗತ್ಯ ತುರ್ತು ಕ್ರಮಕ್ಕೆ ಈಗಾಗಲೇ ನಿರ್ದೇಶಿಸಲಾಗಿದೆ ಎಂದು ಶಾಸಕ ಗುರುರಾಜ ಗಂಟಿಹೊಳೆ ತಿಳಿಸಿದ್ದಾರೆ.

    ಮೀನುಗಾರ ಕುಟುಂಬಕ್ಕೆ ಮೀನುಗಾರಿಕೆ ಇಲಾಖೆಯ ಸಂಕಷ್ಟ ಪರಿಹಾರ ನಿಧಿಯಡಿ ಅಗತ್ಯ ಪರಿಹಾರ ಒದಗಿಸಲು ಶಾಸಕರಾದ ಯಶ್ ಪಾಲ್ ಸುವರ್ಣ ಸಹಿತ ಜಿಲ್ಲೆಯ ಶಾಸಕರ ಮೂಲಕ ಮೀನುಗಾರಿಕೆ ಇಲಾಖೆ ಸಚಿವರೊಂದಿಗೆ ಮಾತುಕತೆ ನಡೆಸಲಾಗಿದೆ. ಇಲಾಖೆಯಿಂದ ಕುಟುಂಬಕ್ಕೆ ತಲಾ 10 ಲಕ್ಷ ರೂ.ಗಳ ಪರಿಹಾರವನ್ನು ತುರ್ತಾಗಿ ಒದಗಿಸುವ ವ್ಯವಸ್ಥೆ ಆಗಿದೆ.

    ಮಳೆಗಾಲದಲ್ಲಿ ಸಮುದ್ರದ ಅಲೆಗಳ ಅಬ್ಬರವೂ ಜೋರಾಗಿರುತ್ತದೆ. ಹೀಗಾಗಿ ನಾಡದೋಣಿ, ಟ್ರಾಲ್ ದೋಣಿ ಮೀನುಗಾರರು ವಿಶೇಷ ಎಚ್ಚರಿಕೆ ವಹಿಸಬೇಕು ಮತ್ತು ಲೈಫ್ ಜಾಕೇಟ್ ಬಳಸುವುದನ್ನು ಆದಷ್ಟು ಕಡ್ಡಾಯ ಮಾಡಿಕೊಳ್ಳುವುದು ಉತ್ತಮ. ಲೈಫ್ ಜಾಕೇಟ್ ಬಳಸುವುದರಿಂದ ಜೀವ ಹಾನಿ ತಪ್ಪಿಸಲು ಸಾಧ್ಯವಿದೆ ಎಂದು ಶಾಸಕರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

    ಗಂಗೊಳ್ಳಿ ಬಂದರಿನಿಂದ ಮೀನುಗಾರಿಕೆಗೆ ತೆರಳಿದ ದೋಣಿಯು ಇಂದು ಸಮುದ್ರದ ಅಲೆಗೆ ಸಿಲುಕಿ ಮಗುಚಿ ಬಿದ್ದಿರುವ ಸುದ್ದಿ ಗಮನಕ್ಕೆ ಬಂದಿದ್ದು, ಅಧಿಕಾರಿಗಳಿಂದ ಮಾಹಿತಿ ಪಡೆದು ಅಗತ್ಯ ಕ್ರಮ ವಹಿಸಲು ಸೂಚೊಸಲಾಯಿತು.

    ಅವಘಡದಲ್ಲಿ ಒಬ್ಬ ಮೀನುಗಾರ ಸುರಕ್ಷಿತವಾಗಿ ದಡ ಸೇರಿದ್ದು, ಉಳಿದ ಮೂವರ ರಕ್ಷಣೆಗೆ ಮೀನುಗಾರರು ಸೇರಿದಂತೆ ಜಿಲ್ಲಾಡಳಿತ ಧಾವಿಸಿದ್ದು, ಎಲ್ಲರೂ ಸುರಕ್ಷಿತವಾಗಿ ಮರಳಿ ಬರಲೆಂದು ಪ್ರಾರ್ಥಿಸೋಣ. – ಕಿರಣ್ ಕುಮಾರ್ ಕೊಡ್ಗಿ

    ಗಂಗೊಳ್ಳಿ ಬಂದರಿನಿಂದ ನಾಡ ದೋಣಿ ಮೀನುಗಾರಿಕೆಗೆ ತೆರಳಿದ ದೋಣಿಯು ಇಂದು ಸಮುದ್ರದ ಅಲೆಗೆ ಸಿಲುಕಿ ಮಗುಚಿ ಬಿದ್ದಿರುವ ದುರದೃಷ್ಟಕರ ಘಟನೆ ನಡೆದಿದೆ.

    ಘಟನೆಯ ಬಗ್ಗೆ ಈಗಾಲೇ ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ ಯವರೊಂದಿಗೆ ಸಮಾಲೋಚನೆ ನಡೆಸಿ ಮೀನುಗಾರಿಕಾ ಸಚಿವರಾದ ಮಂಕಲ್ ಎಸ್ ವೈದ್ಯ ರವರಿಗೂ ಘಟನೆಯ ಬಗ್ಗೆ ಮಾಹಿತಿ ನೀಡಿದ್ದು, ಕಣ್ಮರೆಯಾಗಿರುವ ಮೀನುಗಾರರ ರಕ್ಷಣೆಗೆ ಅಗತ್ಯ ಕ್ರಮ ವಹಿಸಲು, ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇನೆ.

    ಅವಘಡದಲ್ಲಿ ಒಬ್ಬ ಮೀನುಗಾರ ಸುರಕ್ಷಿತವಾಗಿ ದಡ ಸೇರಿದ್ದು, ಉಳಿದ ಮೂವರ ರಕ್ಷಣೆಗೆ ಮೀನುಗಾರರು ಸೇರಿದಂತೆ ಜಿಲ್ಲಾಡಳಿತ ಧಾವಿಸಿದ್ದು, ಎಲ್ಲರ ಸುರಕ್ಷತೆಗೆ ಪ್ರಾರ್ಥಿಸೋಣ. – ಯಶ್ ಪಾಲ್ ಸುವರ್ಣ

  • ಕುಂದಾಪುರ: ಯುವತಿ ಕಾಣೆಯಾದ ಪ್ರಕರಣ; ಪೊಲೀಸ್ ಠಾಣೆಯಲ್ಲಿ ದೂರು ದಾಖಲು

    ಕುಂದಾಪುರ, ಜೂನ್ 14: ವಡೇರಹೋಬಳಿ ಗ್ರಾಮದ ರವಿ (38) ಎಂಬವರ 21 ವರ್ಷದ ಮಗಳು, ಮಾಬುಕಳದ ಫಾರ್ಚುನ್ ಅಕ್ಯಾಡಮಿ ಆಫ್ ಹೆಲ್ತ್ ಸೈನ್ಸ್ ಕಾಲೇಜಿನ ಎರಡನೇ ವರ್ಷದ ನರ್ಸಿಂಗ್ ವಿದ್ಯಾರ್ಥಿನಿ, ದಿನಾಂಕ 13/06/2025ರಂದು ಬೆಳಿಗ್ಗೆ 8 ಗಂಟೆಗೆ ಮಂಗಳೂರಿನಲ್ಲಿ ನಡೆಯುವ ಕ್ಯಾಂಪ್‌ಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದಾರೆ. ಆದರೆ, ಅವರು ಇದುವರೆಗೂ ಮನೆಗೆ ವಾಪಸ್ಸಾಗಿಲ್ಲ.

    ಕಾಲೇಜಿನಲ್ಲಿ ವಿಚಾರಿಸಿದಾಗ, ಯಾವುದೇ ಕ್ಯಾಂಪ್ ಆಯೋಜನೆಯಾಗಿರಲಿಲ್ಲ ಎಂದು ತಿಳಿದುಬಂದಿದೆ. ಈ ಸಂಬಂಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 79/2025ರಡಿ, ಕಾಣೆಯಾದ ಯುವತಿಯ ಬಗ್ಗೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ಕುಂದಾಪುರ: ಸೇತುವೆ ಬಳಿ ಸ್ಕೂಟರ್, ಚಪ್ಪಲಿ ಬಿಟ್ಟು ಮಹಿಳೆ ನಾಪತ್ತೆ

    ಕುಂದಾಪುರ: ನಗರದ ವಿವಾಹಿತ ಮಹಿಳೆಯೋರ್ವರು ನಾಪತ್ತೆಯಾದ ಬಗ್ಗೆ ಕುಂದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ. ಇಲ್ಲಿನ ವಿಠಲವಾಡಿ ಮೂಲದ ಹೀನಾ ಕೌಸರ್ (33) ನಾಪತ್ತೆಯಾದ ಮಹಿಳೆ.

    ಹೀನಾ ಪತಿ ವಿದೇಶದಲ್ಲಿದ್ದು ಎರಡು ಮಕ್ಕಳು ಹಾಗೂ ತಾಯಿಯೊಂದಿಗೆ ಕುಂದಾಪುರ ವಿಠಲವಾಡಿಯಲ್ಲಿ ವಾಸಿಸುತ್ತಿದ್ದರು. ಸೋಮವಾರ ಬೆಳಿಗ್ಗೆ 04-00 ಗಂಟೆ ಸುಮಾರಿಗೆ ಕುಂದಾಪುರ ಚರ್ಚ್ ರಸ್ತೆಯಿಂದ ಕೋಡಿಗೆ ಹೋಗುವ ಸೇತುವೆ ಬಳಿ ಮಹಿಳೆಯ ಸ್ಕೂಟರ್ ಹಾಗೂ ಚಪ್ಪಲಿ ಪತ್ತೆಯಾಗಿದೆ.

    ಪೊಲೀಸರು, ಅಗ್ನಿ ಶಾಮಕದಳ ಹಾಗೂ ಸ್ಥಳೀಯರು ಸೇರಿ ನದಿಯಲ್ಲಿ ಹುಡುಕಾಟ ನಡೆಸಿದ್ದು ಎಲ್ಲಿಯೂ ಪತ್ತೆ ಆಗಿರುವುದಿಲ್ಲ. ಮೊಬೈಲ್ ಸ್ವಿಚ್ ಆಫ್ ಆಗಿರುತ್ತದೆ. ಇದರಿಂದಾಗಿ ಆತ್ಮಹತ್ಯೆಯೋ ಅಥವಾ ನಾಪತ್ತೆಯೋ ಎನ್ನುವ ಅನುಮಾನ ವ್ಯಕ್ತವಾಗಿದೆ. ಕುಂದಾಪುರ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

  • ಬೈಂದೂರು: ವ್ಯಕ್ತಿ ಕಾಣೆ; ಪ್ರಕರಣ ದಾಖಲು

    ಬೈಂದೂರು, ಮೇ 29, 2025: ಬೈಂದೂರು ತಾಲೂಕಿನ ನಾಗೂರು ಕಿರಿಮಂಜೇಶ್ವರ ನಿವಾಸಿಯಾದ ಮಹಾಲಿಂಗ (55) ಎಂಬ ವ್ಯಕ್ತಿಯು ಕಾಣೆಯಾಗಿರುವ ಘಟನೆ ವರದಿಯಾಗಿದೆ. ಮಹಾಲಿಂಗ ಅವರ ಪುತ್ರ ಮಹೇಶ (20) ದೂರುದಾರರಾಗಿದ್ದಾರೆ.

    ಮಹಾಲಿಂಗ ಅವರು ಕೋಲಾಪುರದಲ್ಲಿ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 17/05/2025 ರಂದು ಬೆಳಿಗ್ಗೆ 10:00 ಗಂಟೆಗೆ ಕೋಲಾಪುರದಿಂದ ಬೈಂದೂರಿಗೆ ಬಂದಿದ್ದಾರೆ. ಆದರೆ, ಅವರು ಮನೆಗೆ ಮರಳದೆ ಕಾಣೆಯಾಗಿದ್ದಾರೆ ಎಂದು ತಿಳಿದುಬಂದಿದೆ.

    ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 112/2025ರಡಿ, ಕಾಣೆಯಾದ ವ್ಯಕ್ತಿಯ ಕುರಿತು ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ.

  • ಇರಾನ್‌ನಲ್ಲಿ 3 ಭಾರತೀಯರು ನಾಪತ್ತೆ: ಭಾರತೀಯ ದೂತಾವಾಸ

    ಪಂಜಾಬ್, ಮೇ 28, 2025: ಇರಾನ್‌ನಲ್ಲಿ ಮೂವರು ಭಾರತೀಯ ನಾಗರಿಕರು ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದ್ದು, ಭಾರತೀಯ ದೂತಾವಾಸ ತೆಹ್ರಾನ್ ಈ ಬಗ್ಗೆ ಇರಾನಿ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ, ನಾಪತ್ತೆಯಾದವರನ್ನು ತಕ್ಷಣ ಹುಡುಕಿ ಅವರ ಸುರಕ್ಷತೆಯನ್ನು ಖಚಿತಪಡಿಸುವಂತೆ ಒತ್ತಾಯಿಸಿದೆ.

    ನಾಪತ್ತೆಯಾದವರು ಒಂದೇ ಕುಟುಂಬಕ್ಕೆ ಸೇರಿದವರೆಂದು ಮಾಹಿತಿ ಲಭ್ಯವಿದ್ದು, ಕುಟುಂಬ ಸದಸ್ಯರು ದೂತಾವಾಸಕ್ಕೆ ದೂರು ಸಲ್ಲಿಸಿದ್ದಾರೆ. ದೂತಾವಾಸವು ಇರಾನಿ ಪೊಲೀಸರೊಂದಿಗೆ ಸಹಯೋಗದಲ್ಲಿ ತನಿಖೆಯಲ್ಲಿ ತೊಡಗಿದ್ದು, ಕುಟುಂಬ ಸದಸ್ಯರಿಗೆ ಸತತ ಮಾಹಿತಿ ನೀಡಲಾಗುತ್ತಿದೆ. ಆದರೆ, ಈ ಘಟನೆಯು ಅಪಹರಣ, ಅಪಘಾತ ಅಥವಾ ಇತರ ಕಾರಣಗಳಿಂದ ಉಂಟಾಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.