Tag: muslim

  • ಉಡುಪಿ: ಭಾರತ-ಪಾಕ್ ಉದ್ವಿಗ್ನತೆ; ಶಾಂತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಬಾಂಧವರು

    ಭಾರತ ಮತ್ತು ಪಾಕಿಸ್ತಾನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಮಧ್ಯೆ ಉಡುಪಿಯಾದ್ಯಂತ ಶುಕ್ರವಾರ ಮುಸ್ಲಿಂ ಬಾಂಧವರು ಮಸೀದಿಗಳಲ್ಲಿ ಶಾಂತಿ ಮತ್ತು ರಾಷ್ಟ್ರೀಯ ಯೋಗಕ್ಷೇಮಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

    ಸಾಮೂಹಿಕ ಪ್ರಾರ್ಥನೆಯ ನಂತರ, ಧಾರ್ಮಿಕ ಮುಖಂಡರು ಮತ್ತು ಸಮುದಾಯದ ಸದಸ್ಯರು ದೇಶದ ಸುರಕ್ಷತೆ ಮತ್ತು ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು.

    ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಮುದಾಯದ ಮುಖಂಡ ಇಕ್ಬಾಲ್ ಮನ್ನಾ, “ಪಹಲ್ಗಾಮ್ ದಾಳಿಯ ನಂತರ, ಭಾರತವು ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಿದೆ. ಅಗತ್ಯವಿದ್ದರೆ, ಭಾರತವು ಅರ್ಧ ಗಂಟೆಯೊಳಗೆ ಕಾರ್ಯನಿರ್ವಹಿಸಬಹುದು” ಎಂದು ಹೇಳಿದರು.

    “ಪಾಕಿಸ್ತಾನದ ಪುನರಾವರ್ತಿತ ಪ್ರಚೋದನೆಗಳನ್ನು ಸಹಿಸಲಾಗುವುದಿಲ್ಲ. ಈ ನಿರ್ಣಾಯಕ ಸಮಯದಲ್ಲಿ, ನಾವು ದೇವರಲ್ಲಿ ಪ್ರಾರ್ಥನೆ ಮಾಡುತ್ತೇವೆ. ನಮಗೆ ವಕ್ಫ್ ಮಂಡಳಿಯಿಂದಲೂ ಮಾರ್ಗದರ್ಶನ ದೊರೆತಿದೆ. ಆದರೆ ಅದಕ್ಕೂ ಮೊದಲು, ನಾವು ಶಾಂತಿ ಮತ್ತು ದೇಶದ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಲು ನಿರ್ಧರಿಸಿದ್ದೇವೆ” ಎಂದು ಅವರು ಹೇಳಿದರು.

    ಜಿಲ್ಲೆಯಾದ್ಯಂತ ಮುಸ್ಲಿಮರು ಮಸೀದಿಗಳಲ್ಲಿ ಸೇರಿ ದೇಶವು ಶೀಘ್ರವಾಗಿ ಶಾಂತಿ ಮತ್ತು ಸ್ಥಿರತೆಗೆ ಮರಳಲಿ ಎಂಬ ಸಂದೇಶವನ್ನು ನೀಡಿದರು. ಈ ಪ್ರಾರ್ಥನೆಯನ್ನು ಕೇವಲ ಸಂಘರ್ಷದಿಂದ ಸುರಕ್ಷತೆಗಾಗಿ ಮಾತ್ರವಲ್ಲದೆ, ಎಲ್ಲಾ ಸಮುದಾಯಗಳ ನಡುವಿನ ಸಾಮರಸ್ಯಕ್ಕಾಗಿ ಮಾಡಲಾಯಿತು.

  • Video – ಕೈಕಂಬ: ಆಟೋರಿಕ್ಷಾ ತಡೆದು ಮುಸ್ಲಿಂ ಮಹಿಳೆಯರ ಮೇಲೆ ಹಲ್ಲೆ ಯತ್ನ

    ಕೈಕಂಬ: ನಿನ್ನೆ ನಡೆದ ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆಯ ಬೆನ್ನಲ್ಲೇ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯೆಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದೆ, ದಕ್ಷಿಣ ಕನ್ನಡ ಜಿಲ್ಲೆಯೆಲ್ಲಿ ವಿಶ್ವ ಹಿಂದೂ ಪರಿಷದ್ ಬಂದ್ ಕೆ ಕರೆ ಕೊಟ್ಟಿದೆ, ಹಾಗೂ ಸೆಕ್ಷನ್ 144 ಜಾರಿಯೆಲ್ಲಿದೆ.

    https://youtu.be/Hjx0Fyi6Nro?si=l4TpH20aPijPRcoK

    ಅದೇ ಸಮಯದಲ್ಲಿ ಜಿಲ್ಲೆಗಳ ನಾನಾ ಭಾಗದಲ್ಲಿ ಹಲ್ಲೆ, ಕೊಲೆ ಯತ್ನದ ಸುದ್ದಿಗಳು ಬರ್ತಾ ಇವೆ.

    ಮುಸ್ಲಿಂ ಮಹಿಳೆಯರು ಆಟೋರಿಕ್ಷದಲ್ಲಿ ಪ್ರಯಾಣಿಸುತ್ತಿದ್ದಾಗ ಹಿಂದೂ ಕಾರ್ಯಕರ್ತರು ರಿಕ್ಷಾ ಅಡ್ಡಗಟ್ಟಿ ಹಲ್ಲೆಗೆ ಪ್ರಯತ್ನಿಸುತ್ತಿರುವ ದ್ರಿಶ್ಯ ವಿಡಿಯೋದಲ್ಲಿ ಕಂಡು ಬಂದಿದೆ.

    ಪೊಲೀಸ್ ಸಿಬ್ಬಂಧಿಗಳು ಹಲ್ಲೆ ತಡೆಯಲು ಪ್ರಯತ್ನಿಸುತ್ತಿರುವಾಗ ಅವರ ಮೇಲೆನೋ ಹಲ್ಲೆ ನಡೆದಿದೆ.