Tag: robbery

  • Mangaluru: Kerala Gold Trader Kidnapped, 350 Grams of Gold Worth ₹35 Lakh Looted

    Mangaluru, August 16, 2025: In a daring incident, a Kerala-based gold trader, Srihari, was kidnapped in Mangaluru on August 13, 2025, and robbed of 350 grams of gold valued at approximately ₹35 lakh. The owner of a jewellery shop in Kerala, Srihari lodged a complaint with the Pandeshwar police station after being released by the culprits.

    The incident occurred around 7 a.m. when Srihari arrived at Mangaluru Central Railway Station from Kerala, carrying a 350-gram gold bar. While waiting near Kairali Hotel for an auto-rickshaw, a group arrived in an Innova car, claiming to be customs officials. When Srihari resisted their demand to enter the vehicle for an inspection, he was forcibly pushed inside. The gang drove him through Udupi towards Kumta-Sirsi, where they stole the gold bar before abandoning him in Antravalli village, Sirsi. Shocked but unharmed, Srihari returned to Mangaluru and reported the crime.

    Pandeshwar police have launched an investigation, securing strong evidence about the gang and expressing confidence in apprehending the culprits soon. Authorities suspect that individuals familiar with Srihari’s business dealings and travel plans may have orchestrated the robbery, and investigations are focusing on this angle.

    The robbers used a vehicle with a BH (Bharat Series) registration, which has raised suspicions. BH registration, introduced by the Government of India, allows seamless vehicle movement across states without re-registration, typically used by government employees or businesses with multi-state operations. Police are probing whether the number plate was genuine or fake and are working to identify the vehicle’s owner to trace the perpetrators.

  • ಭಟ್ಕಳ: ಸುಲಿಗೆ ಯತ್ನ, ಇಬ್ಬರು ಆರೋಪಿಗಳ ಬಂಧನ; 4 ಲಕ್ಷ ಮೌಲ್ಯದ ಚಿನ್ನಾಭರಣ ವಶ

    ಭಟ್ಕಳ, ಜುಲೈ 10, 2025: ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಿನಾಂಕ 02-07-2025ರ ಸಂಜೆ 4:30 ಗಂಟೆಯ ಸಮಯದಲ್ಲಿ ಸುಲಿಗೆ ಯತ್ನದ ಘಟನೆಯಲ್ಲಿ ಎರಡು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಫಿರ್ಯಾದಿದಾರರಾದ ಸೈಯದ್ ಮೊಸೀನ್, ತಮ್ಮ ಮೇಲೆ ಆರೋಪಿಗಳಾದ ಹರೀಶ (ತೆಂಗಿನಗುಂಡಿ, ಭಟ್ಕಳ) ಮತ್ತು ಹೇಮಾ (ಹೆಬಳೆ, ಭಟ್ಕಳ) ಸುಲಿಗೆ ಯತ್ನ ಮಾಡಿದ ಆರೋಪ ಮಾಡಿದ್ದಾರೆ.

    ಘಟನೆಯ ಪ್ರಕಾರ, ಫಿರ್ಯಾದಿದಾರರು ಕೆ.ಎಚ್.ಬಿ. ಕಾಲೋನಿಯಲ್ಲಿ ನಡೆಯುತ್ತಿದ್ದಾಗ ಆರೋಪಿಗಳು ತಮ್ಮ ಕಿಸೆಯಲ್ಲಿದ್ದ ಸುಮಾರು 10,000 ರೂಪಾಯಿ ಮೌಲ್ಯದ ರೆಡ್‌ಮೀ ನೋಟ್ 12 ಮೊಬೈಲ್ ಫೋನ್ ಅನ್ನು ಸುಲಿಗೆ ಮಾಡಲು ಯತ್ನಿಸಿದರು. ಆರೋಪಿಗಳನ್ನು ಸ್ಥಳದಲ್ಲೇ ಹಿಡಿದು ಪೊಲೀಸರಿಗೆ ಹಸ್ತಾಂತರ ಮಾಡಲಾಯಿತು. ಈ ಸಂಬಂಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುತ್ತಿಗೆ ಸಂಖ್ಯೆ 79/2025ರಡಿ ಕಲಂ 309(5) ಜೆ.ಎನ್.ಎಸ್. 2022 ಧಾರೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.

    ತನಿಖೆಯಲ್ಲಿ ಆರೋಪಿಗಳಾದ ಹರೀಶ ಮತ್ತು ಹೇಮಾಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರಿಸಲಾಯಿತು. ಮಾನ್ಯ ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನವನ್ನು ಆದೇಶಿಸಿದೆ.

    ಪೊಲೀಸರು ವಶಪಡಿಸಿಕೊಂಡ ಸ್ವತ್ತು

    1. 40.360 ಗ್ರಾಂ ಬಂಗಾರದ ಆಭರಣಗಳು (ಮೌಲ್ಯ: 3,24,800 ರೂ)
    2. 228.77 ಗ್ರಾಂ ಬೆಳ್ಳಿಯ ಆಭರಣಗಳು (ಮೌಲ್ಯ: 74,376 ರೂ)

    ಈ ಕಾರ್ಯಾಚರಣೆಯಲ್ಲಿ ಪೊಲೀಸ್ ನಿರೀಕ್ಷಕ ಮಂಜುನಾಥ ಅಂಗಾರೆಡ್ಡಿ, ಪಿ.ಎಸ್‌.ಐ ಭರಮಪ್ಪ ಬೆಳಗಲಿ ಮತ್ತು ಸಿಬ್ಬಂದಿಗಳಾದ ಮಂಜುನಾಥ ಗೊಂಡ, ನಿಂಗಣಗೌಡ ಪಾಟೀಲ, ಶಾರದಾ ಗೌಡ, ಮದಾರ ಸಾಬ, ಈರಣ್ಣ ಪೂಜೇರಿ, ಮಂಜುನಾಥ ಖಾರ್ವಿ, ಸಾವಿತ್ರಿ ಜಿ ಮತ್ತು ಮಂಜುನಾಥ ಪಟಗಾರ ಭಾಗವಹಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಅಧೀಕ್ಷಕರು ಮತ್ತು ಭಟ್ಕಳ ಉಪವಿಭಾಗದ ಉಪಾಧೀಕ್ಷಕರು ತಂಡದ ಸೇವೆಯನ್ನು ಶ್ಲಾಘಿಸಿದ್ದಾರೆ.

  • ಉಡುಪಿ: ಕೊಡಂಕೂರಿನ ಎರಡು ಮನೆಗಳಲ್ಲಿ ಕಳ್ಳತನ; ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲೆ

    ಉಡುಪಿ, ಜುಲೈ 7, 2025: ಉಡುಪಿ ತಾಲೂಕಿನ ಕೊಡಂಕೂರು ಗ್ರಾಮದಲ್ಲಿ ಎರಡು ಪ್ರತ್ಯೇಕ ಕಳ್ಳತನದ ಘಟನೆಗಳು ಜುಲೈ 5 ರಿಂದ 6 ರವರೆಗೆ ನಡೆದಿದ್ದು, ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ.

    ಮೊದಲ ಘಟನೆ: ಸುಧಾಕರ (30), ಈಶ್ವರನಗರ, ಮಣಿಪಾಲ ಇವರ ಅತ್ತೆ ಕಲಾವತಿ, ಕೊಡಂಕೂರು ವಾರ್ಡಿನ ಎರಡನೇ ಅಡ್ಡ ರಸ್ತೆಯಲ್ಲಿ ವಾಸಿಸುತ್ತಿದ್ದಾರೆ. ಜುಲೈ 5, 2025 ರಂದು ರಾತ್ರಿ 10:00 ಗಂಟೆಗೆ ಕಲಾವತಿ ತಮ್ಮ ಗಂಡ ಗಿರೀಶ್ ಜೊತೆ ಬೆಂಗಳೂರಿಗೆ ತೆರಳಿದ್ದರು. ಜುಲೈ 6 ರಂದು ಬೆಳಿಗ್ಗೆ 11:00 ಗಂಟೆಗೆ ಸುಕೇಶ್ ಎಂಬವರು ಕಲಾವತಿಗೆ ಫೋನ್ ಮಾಡಿ, ಮನೆಯ ಬೀಗವನ್ನು ಒಡೆಯಲಾಗಿದೆ ಎಂದು ತಿಳಿಸಿದರು. ಸುಧಾಕರ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಕಳ್ಳರು ಮನೆಯ ಎದುರಿನ ಬಾಗಿಲಿನ ಬೀಗವನ್ನು ಯಾವುದೋ ಆಯುಧದಿಂದ ಒಡೆದು, ಒಳಗಿನ ಗೋಡ್ರೆಜ್‌ನನ್ನು ಒಡೆದಿರುವುದು ಕಂಡುಬಂದಿತು. ಕಲಾವತಿ ಬೆಂಗಳೂರಿನಿಂದ ವಾಪಸ್ ಬಂದ ಬಳಿಕ ಕಳವಾದ ಸೊತ್ತಿನ ವಿವರ ನೀಡಲಿದ್ದಾರೆ. ಈ ಘಟನೆಗೆ ಸಂಬಂಧಿಸಿ, ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 127/2025, ಕಲಂ 331(3), 331(4), 305 BNS ರಂತೆ ಪ್ರಕರಣ ದಾಖಲಾಗಿದೆ.

    ಎರಡನೇ ಘಟನೆ: ಅಶ್ವತ್ (31), ಪುತ್ತೂರು ಗ್ರಾಮ, ಕೊಡಂಕೂರಿನ ನ್ಯೂ ಕಾಲೋನಿಯ ನಿವಾಸಿಯಾಗಿದ್ದು, ಕಳೆದ ಮೂರು ವರ್ಷಗಳಿಂದ ಶಿಕಾರಿಪುರದಲ್ಲಿ ಟೈಲ್ಸ್ ಉದ್ಯಮದಲ್ಲಿದ್ದಾರೆ. ಅವರ ತಾಯಿ ಗಿರಿಜಾ ಕೊಡಂಕೂರಿನ ಮನೆಯಲ್ಲಿ ವಾಸವಾಗಿದ್ದು, ವಾರಕ್ಕೊಮ್ಮೆ ಅವರ ತಂಗಿಯ ಮಗಳು ಚೈತ್ರಾ ಮನೆಗೆ ಭೇಟಿ ನೀಡುತ್ತಿದ್ದರು. 15 ದಿನಗಳ ಹಿಂದೆ ಅಶ್ವತ್ ತಾಯಿಯನ್ನು ಶಿಕಾರಿಪುರಕ್ಕೆ ಕರೆದೊಯ್ದಿದ್ದರು. ಜುಲೈ 5, 2025 ರಂದು ರಾತ್ರಿ ಚೈತ್ರಾ ಮನೆಗೆ ಬಂದಾಗ ಯಾರೂ ಇಲ್ಲದ ಕಾರಣ ಬೀಗ ಹಾಕಿ ಗೆಳತಿಯ ಮನೆಗೆ ತೆರಳಿದ್ದರು. ಜುಲೈ 6 ರಂದು ಬೆಳಿಗ್ಗೆ 7:15 ಗಂಟೆಗೆ ಮನೆಗೆ ವಾಪಸ್ ಬಂದಾಗ, ಮುಂಭಾಗದ ಬಾಗಿಲು ಮುರಿದಿದ್ದು, ಸೊತ್ತುಗಳು ಚೆಲ್ಲಾಪಿಲ್ಲಿಯಾಗಿದ್ದವು. ಕಳ್ಳರು ಜುಲೈ 5 ರಾತ್ರಿ 12:00 ಗಂಟೆಯಿಂದ ಜುಲೈ 6 ಬೆಳಿಗ್ಗೆ 7:15 ಗಂಟೆಯ ನಡುವೆ ಮನೆಗೆ ನುಗ್ಗಿ, ಬೆಡ್‌ರೂಮ್‌ನ ವಾಲ್ಡ್ರೋಬ್‌ನಿಂದ 5 ಗ್ರಾಂ ಚಿನ್ನದ ಕಿವಿಓಲೆ, 2 ಗ್ರಾಂ ಚಿನ್ನದ ಪೆಂಡೆಂಟ್ ಮತ್ತು 20,000 ರೂ. ನಗದು ಕಳವು ಮಾಡಿದ್ದಾರೆ. ಈ ಘಟನೆಗೆ ಸಂಬಂಧಿಸಿ, ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 128/2025, ಕಲಂ 331(3), 331(4), 305 BNS ರಂತೆ ಪ್ರಕರಣ ದಾಖಲಾಗಿದೆ.

    ಪೊಲೀಸರು ಎರಡೂ ಘಟನೆಗಳ ಬಗ್ಗೆ ತನಿಖೆಯನ್ನು ಮುಂದುವರೆಸಿದ್ದಾರೆ.

  • ಕೋಟ: ಕಳ್ಳತನ ಆರೋಪಿಯ ಬಂಧನ, ಸ್ವತ್ತು ವಶ

    ಕೋಟ, ಜೂನ್ 30, 2025: ಶಿರಿಯಾರ ಗ್ರಾಮದ ಶೀರ್ಣ ಕ್ರಾಸ್‌ ಬಳಿಯ ನಂದಿಕೇಶ್ವರ ಫಾಸ್ಟ್‌ ಫುಡ್‌ ಅಂಗಡಿಯ ಮಾಲೀಕ ಚೇತನ್‌ ದೇವಾಡಿಗ ಎಂಬವರು ತಮ್ಮ ಅಂಗಡಿಯಲ್ಲಿ ದಿನಾಂಕ 14.05.2025 ರಂದು ರಾತ್ರಿ 9:30 ಗಂಟೆಗೆ ಬೀಗ ಹಾಕಿ ಮನೆಗೆ ತೆರಳಿದ್ದರು. ಮರುದಿನ ಬೆಳಿಗ್ಗೆ 8:30 ಗಂಟೆಗೆ ಅಂಗಡಿಗೆ ಬಂದಾಗ, ಕಳ್ಳರು ಹಿಂಬದಿಯ ಶೀಟನ್ನು ಕತ್ತರಿಸಿ ಒಳಗಿನ ಸ್ವತ್ತುಗಳನ್ನು ಕಳವು ಮಾಡಿಕೊಂಡಿರುವುದು ಕಂಡುಬಂದಿತು. ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಅ.ಕೃ. 97/25, ಕಲಂ 305, 331(4) ಬಿಎನ್‌ಎಸ್‌ ರಂತೆ ಪ್ರಕರಣ ದಾಖಲಾಗಿದೆ.

    ಪೊಲೀಸ್‌ ಉಪಾಧೀಕ್ಷಕ ಶ್ರೀ ಪ್ರಭು ಡಿ.ಟಿ. ಹಾಗೂ ಬ್ರಹ್ಮಾವರ ವೃತ್ತ ನಿರೀಕ್ಷಕ ಶ್ರೀ ಗೋಪಿಕೃಷ್ಣ ರವರ ಮಾರ್ಗದರ್ಶನದಲ್ಲಿ, ಕೋಟಾ ಪೊಲೀಸ್‌ ಠಾಣೆಯ ಪೊಲೀಸ್‌ ಉಪ-ನಿರೀಕ್ಷಕ ರಾಘವೇಂದ್ರ ಸಿ., ಪಿಎಸ್‌ಐ (ಕಾನೂನು ಮತ್ತು ಸುವ್ಯವಸ್ಥೆ) ಸುಧಾಪ್ರಭು, ಪಿಎಸ್‌ಐ (ತನಿಖೆ) ಹಾಗೂ ಸಿಬ್ಬಂದಿಗಳಾದ ಕೃಷ್ಣ ಶೇರೆಗಾರ, ವಿಜಯೇಂದ್ರ, ಮತ್ತು ದುಂಡಪ್ಪ ರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿ, ಆರೋಪಿ ರಾಕೇಶ್‌ ಎಂಬಾತನನ್ನು ಬಂಧಿಸಿದ್ದಾರೆ. ಆತನಿಂದ ಸುಮಾರು 70,000 ರೂ. ಮೌಲ್ಯದ ಕಳವುಗೊಂಡ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕ ಶ್ರೀ ಹರಿರಾಮ ಶಂಕರ್‌, ಐಪಿಎಸ್‌, ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ಶ್ರೀ ಸುಧಾಕರ ನಾಯ್ಕ್‌ ಮತ್ತು ಶ್ರೀ ಪರಮೇಶ್ವರ ಹೆಗಡೆ ರವರು ಅಭಿನಂದಿಸಿದ್ದಾರೆ.

  • ಭಟ್ಕಳ: ಮನೆ ಕಳ್ಳತನ ಯತ್ನ ವಿಫಲ, ಆರೋಪಿಯ ಬಂಧನ

    ಭಟ್ಕಳ, ಜೂನ್ 29, 2025: ಭಟ್ಕಳ ತಾಲೂಕಿನ ವೆಂಕಟಾಪುರದ ಐಸ್ ಫ್ಯಾಕ್ಟರಿ ಮೀನಾ ರಸ್ತೆಯಲ್ಲಿ ಮನೆಯ ಬಾಗಿಲು ಮುರಿದು ಒಳನುಗ್ಗಲು ಯತ್ನಿಸುತ್ತಿದ್ದ ಆರೋಪಿಯೊಬ್ಬನನ್ನು ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರು ಶಂಕಿತ ಚಲನವಲನ ಕಂಡು ತಕ್ಷಣ ಬೆನ್ನಟ್ಟಿ ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಉಡುಪಿಯ ಆಕೀಫ್ ಮೊಹ್ಮದ್ ಅಬ್ದುಲ್ ಅಜೀಮ್ ಬುಡಾನ್ ಬಾಷಾ (19) ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಬೈಂದೂರು ಮತ್ತು ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈಗಾಗಲೇ ವಿವಿಧ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಬೈಂದೂರಿನ ಕಾರು ಕಳ್ಳತನ ಪ್ರಕರಣವೊಂದರಲ್ಲಿ ಈತ ಬಂಧಿತನಾಗಿ ಕೇವಲ ಎರಡು ದಿನಗಳ ಹಿಂದೆ ಬಿಡುಗಡೆಗೊಂಡಿದ್ದ ಎಂದು ತಿಳಿದುಬಂದಿದೆ.

    ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ, ನ್ಯಾಯಾಧೀಶರು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಪ್ರಕರಣದ ತನಿಖೆಯನ್ನು ಸಿಪಿಐ ಮಂಜುನಾಥ ಮತ್ತು ಎಸ್‌ಐ ಭರಮಪ್ಪ ಬೆಳಗಲಿ ನೇತೃತ್ವದಲ್ಲಿ ಪೊಲೀಸರು ಕೈಗೆತ್ತಿಕೊಂಡಿದ್ದಾರೆ. ಆರೋಪಿಯ ಹಿನ್ನೆಲೆಯಲ್ಲಿ ಇತರ ಯಾವ ಪ್ರಕರಣಗಳ ಸಂಬಂಧವಿದೆ ಎಂಬುದನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ಈ ಸಂಬಂಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಭಟ್ಕಳ: ಗ್ರಾಮೀಣ ಪೊಲೀಸರಿಂದ “ಗರುಡ ಗ್ಯಾಂಗ್” ದರೋಡೆಕೋರರ ಬಂಧನ

    ಭಟ್ಕಳ, 28 ಮೇ 2025: ಇಂದು ಬೆಳಿಗ್ಗೆ 3:00 ಗಂಟೆಗೆ, ಬಿಲಾಲಖಂಡ ಗ್ರಾಮದ ಸಾಗರ ರಸ್ತೆಯ ರಾಜ್ಯ ಹೆದ್ದಾರಿಯಲ್ಲಿ, ದರೋಡೆಗೆ ಸಿದ್ಧತೆ ನಡೆಸುತ್ತಿದ್ದ 3 ಆರೋಪಿಗಳನ್ನು ಭಟ್ಕಳ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ. 2 ಆರೋಪಿಗಳು ಪರಾರಿಯಾಗಿದ್ದಾರೆ. ಆರೋಪಿಗಳು ಟೊಯೊಟಾ ಇನ್ನೋವಾ ಕಾರಿನಲ್ಲಿ , ಚಾಕು, ಖಾರಪುಡಿ, ಮಂಕಿ ಕ್ಯಾಪ್, ಬೆಲ್ಟ್, ತಾಡಪತ್ರ ಮುಂತಾದ ದರೋಡೆಗೆ ಬೇಕಾದ ಸಾಮಗ್ರಿಗಳೊಂದಿಗೆ ಗುಳ್ಮೆ ರಸ್ತೆ ಕ್ರಾಸ್ ಬಳಿಯ ಕತ್ತಲೆಯಲ್ಲಿ ಕಾದು ಕುಳಿತಿದ್ದರು.

    ಪಿಎಸ್‌ಐ ಶ್ರೀ ರನ್ನಗೌಡ ಪಾಟೀಲ್ ಅವರು ತಪಾಸಣೆಗೆ ತೆರಳಿದಾಗ, ಆರೋಪಿಗಳು ತಪ್ಪಿಸಿಕೊಳ್ಳಲು ಕಾರನ್ನು ಹಿಂದಕ್ಕೆ ಚಲಾಯಿಸಿ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದರು. “ಗರುಡ ಗ್ಯಾಂಗ್”ನ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ಸಂಖ್ಯೆ: 56/2025, BNS-2023ರ ಸೆಕ್ಷನ್ 310(4), 310(5) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

    ಬಂಧಿತ ಆರೋಪಿಗಳ ವಿವರ:

    1. ಜಲೀಲ್ ಹುಸೇನ್, ತಂದೆ: ಪಿ.ಕೆ. ಮೈಯದ್, ವಯಸ್ಸು: 39, ವೃತ್ತಿ: ಚಾಲಕ, ವಿಳಾಸ: ಮಂಗಳೂರು. ಈತನ ವಿರುದ್ಧ ಈಗಾಗಲೇ 11 ಪ್ರಕರಣಗಳು ದಾಖಲಾಗಿವೆ. ಜಿಲ್ಲಾಂತರ ಕುಖ್ಯಾತ ಕಳ್ಳನಾಗಿದ್ದು
    2. ನಾಸಿರ್ ಹಕೀಂ, ತಂದೆ: ಮೊಹಿದ್ದೀನ್ ಅಬುಲ್ ಖಾದರ್, ವಯಸ್ಸು: 26, ವೃತ್ತಿ: ಚಾಲಕ, ವಿಳಾಸ: ಗಾಂಧಿನಗರ, ಹೆಬಲೆ, ಭಟ್ಕಳ. ಈತನ ವಿರುದ್ಧ 2 ಪ್ರಕರಣಗಳು ದಾಖಲಾಗಿವೆ. ಜಿಲ್ಲಾಂತರ ಕುಖ್ಯಾತ ಕಳ್ಳ.
    3. ಕಾನೂನಿಗೆ ಸಂಘರ್ಷಕ್ಕೆ ಒಳಗಾದ ಬಾಲಕ, ಈತನ ವಿರುದ್ಧ ಒಂದು ಪ್ರಕರಣ ದಾಖಲಾಗಿದೆ.

    ಪರಾರಿಯಾದ ಆರೋಪಿಗಳು:

    1. ಜಿಶಾನ್, ಮುಗ್ಧುಂ ಕಾಲೋನಿ, ಭಟ್ಕಳ.
    2. ನಬೀಲ್, ಬಟ್ಟಾಗಾಂವ್ , ಭಟ್ಕಳ.

    ಪರಾರಿಯಾದ ಆರೋಪಿಗಳನ್ನು ಪತ್ತೆಹಚ್ಚಲು ವಿಶೇಷ ತಂಡವೊಂದನ್ನು ರಚಿಸಲಾಗಿದೆ.

    ವಶಪಡಿಸಿಕೊಂಡ ವಸ್ತುಗಳು:

    1. ನೋಕಿಯಾ ಕೀಪ್ಯಾಡ್ ಮೊಬೈಲ್-1
    2. ನಥಿಂಗ್ 2A ಮೊಬೈಲ್-1
    3. ನಗದು ರೂ. 1500/-
    4. ಚಾಕುಗಳು-2
    5. ಖಾರಪುಡಿ
    6. ಮಂಕಿ ಕ್ಯಾಪ್
    7. ಸೊಂಟದ ಬೆಲ್ಟ್
    8. ನೀಲಿ ತಾಡಪತ್ರ-1
    9. ಬಿಳಿ ಪಾಲಿಥೀನ್ ಬ್ಯಾಗ್-1
    10. ಟೊಯೊಟಾ ಇನ್ನೋವಾ ಕಾರು

    ಕಾರ್ಯಾಚರಣೆಯ ಮಾರ್ಗದರ್ಶನ:
    ಈ ಕಾರ್ಯಾಚರಣೆಯನ್ನು ಶ್ರೀ ಎಂ. ನಾರಾಯಣ್, ಪೊಲೀಸ್ ಅಧೀಕ್ಷಕರು, ಯು.ಕೆ. ಕಾರವಾರ, ಶ್ರೀ ಕೃಷ್ಣಮೂರ್ತಿ ಜಿ., ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1, ಶ್ರೀ ಜಗದೀಶ ಎಂ., ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2, ಶ್ರೀ ಮಹೇಶ್ ಎಂ.ಕೆ., ಉಪ ವಿಭಾಗಾಧಿಕಾರಿ, ಭಟ್ಕಳ, ಹಾಗೂ ಶ್ರೀ ದಿವಾಕರ್ ಪಿ.ಎಂ., ಪೊಲೀಸ್ ಇನ್ಸ್‌ಪೆಕ್ಟರ್, ಭಟ್ಕಳ ನಗರ ಠಾಣೆ, ಪಿಎಸ್‌ಐ ರನ್ನಗೌಡ ಪಾಟೀಲ್, ಭಟ್ಕಳ ಗ್ರಾಮೀಣ ಠಾಣೆ, ಮತ್ತು ಇತರ ಸಿಬ್ಬಂದಿಗಳಾದ ವಿನಾಯಕ್ ಪಾಟೀಲ್, ಅಂಬರೀಶ ಕುಂಬಾರಿ, ವಿನೋದ್ ಜಿ.ಬಿ., ಲೋಕೇಶ ಕಟ್ಟಿ, ನಿಂಗನಗೌಡ ಪಾಟೀಲ್, ಜಗದೀಶ ನಾಯಕ್, ವಿಜಯ ಜಾಧವ್, ದುರ್ಗೇಶ ನಾಯಕ್, ದೇವರಾಜ ಮೊಗೇರ ಅವರು ಪಾಲ್ಗೊಂಡಿದ್ದರು.

  • ಹೆಬ್ರಿ: ಕಳ್ಳತನ; ಚಿನ್ನ, ಬೆಳ್ಳಿ, ನಗದು ಕಳವು

    ಹೆಬ್ರಿ, ಮೇ 28: ಕಳ್ತೂರು ಗ್ರಾಮದ ಚಂದ್ರಶೇಖರ (56) ಎಂಬುವವರ ಮನೆಯಲ್ಲಿ ಕಳ್ಳತನವಾಗಿರುವ ಘಟನೆ ದಿನಾಂಕ 27/05/2025 ರಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಚಂದ್ರಶೇಖರ ಅವರು ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಹೋಟೆಲ್ ಉದ್ಯಮಿಯಾಗಿದ್ದು, ಇವರ ಪತ್ನಿ ಮತ್ತು ಮಕ್ಕಳು ಕಳ್ತೂರಿನಲ್ಲಿ ವಾಸವಾಗಿದ್ದಾರೆ.

    ದಿನಾಂಕ 08/05/2025 ರಂದು ಚಂದ್ರಶೇಖರ ಅವರ ಪತ್ನಿ ಮತ್ತು ಮಗಳು ಮನೆಗೆ ಬೀಗ ಹಾಕಿ ಕಿತ್ತೂರಿಗೆ ತೆರಳಿದ್ದರು. ದಿನಾಂಕ 25/05/2025 ರಂದು ಚಂದ್ರಶೇಖರ ಅವರ ಮಗ ಮತ್ತು ಮಾವ ಕಳ್ತೂರಿನ ಮನೆಗೆ ಭೇಟಿ ನೀಡಿ ಮನೆಯನ್ನು ಸ್ವಚ್ಛಗೊಳಿಸಿ ವಾಪಸಾಗಿದ್ದರು. ಆದರೆ, ದಿನಾಂಕ 27/05/2025 ರಂದು ಬೆಳಿಗ್ಗೆ 4:00 ಗಂಟೆಗೆ ಚಂದ್ರಶೇಖರ ಅವರು ಕುಟುಂಬದೊಂದಿಗೆ ಮನೆಗೆ ವಾಪಸಾದಾಗ, ಕಳ್ಳರು ಅಡುಗೆಮನೆಯ ಗೋಡೆಯ ವೆಂಟಿಲೇಟರ್‌ಗೆ ಒಡದಲು ಇಟ್ಟಿದ್ದ ಮರದ ಹಲಗೆಯ ಮೂಲಕ ಮನೆಯೊಳಗೆ ಪ್ರವೇಶಿಸಿರುವುದು ಕಂಡುಬಂದಿದೆ.

    ಕಳ್ಳರು ಮಲಗುವ ಕೋಣೆಯ ಮರದ ಕಪಾಟಿನ ಡ್ರಾಯರ್‌ ಒಡೆದು, 60,000 ರೂ. ಮೌಲ್ಯದ ಚಿನ್ನದ ಬಳೆಗಳು (2), ಉಂಗುರ (1), ಚಿನ್ನದ ಪಾಟಿ (2), 20,000 ರೂ. ನಗದು, 5,000 ರೂ. ಮೌಲ್ಯದ ವಾಚ್‌, 4,000 ರೂ. ಮೌಲ್ಯದ ಬೆಳ್ಳಿಯ ಕಾಲು ಚೈನ್‌ ಮತ್ತು ನೇವಲ, ಹಾಗೂ ದೇವರ ಕೋಣೆಯಿಂದ 32,000 ರೂ. ಮೌಲ್ಯದ ಬೆಳ್ಳಿಯ ಚೊಂಬು (1), ದೊಡ್ಡ ಬೆಳ್ಳಿಯ ದೀಪ (2), ಮತ್ತು ಸಣ್ಣ ಬೆಳ್ಳಿಯ ದೀಪಗಳು (3) ಕಳವುಗೊಳಿಸಿಕೊಂಡು ಪರಾರಿಯಾಗಿದ್ದಾರೆ.

    ಈ ಬಗ್ಗೆ ಚಂದ್ರಶೇಖರ ಅವರು ಹೆಬ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅಪರಾಧ ಕ್ರಮಾಂಕ 31/2025 ರ ಅಡಿಯಲ್ಲಿ ಕಲಂ 305, 331(3), 331(4) BNS ರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ಕೊಲ್ಲೂರು ಮತ್ತು ಕಾಪುವಿನಲ್ಲಿ ಕಳ್ಳತನ: ಇತರೆ ಪ್ರಕರಣಗಳು

    ಕೊಲ್ಲೂರಿನಲ್ಲಿ 80,000 ರೂ. ಮೌಲ್ಯದ ಚಿನ್ನ ಕಳವು

    ಕೊಲ್ಲೂರು, ಮೇ 19, 2025: ಇಡೂರು ಕುಂಜ್ಞಾಡಿ ಗ್ರಾಮದ 60. ವರ್ಷದ ಮಹಿಳೆಯೊಬ್ಬರು ದಿನಾಂಕ 16-05-2025ರ ಸಂಜೆ 4:00 ಗಂಟೆಗೆ ಮನೆಗೆ ಬೀಗ ಹಾಕಿ ತೆರಳಿದ್ದರು. 19-05-2025ರ ಬೆಳಿಗ್ಗೆ 8:30 ಗಂಟೆಗೆ ಮನೆಗೆ ವಾಪಸ್ ಬಂದು ತಪಾಸಿದಾಗ, ಅಡುಗೆ ಕೋಣೆಯ ರೂಮ್‌ನಲ್ಲಿ ಮನೆಯ ಸ್ವತ್ತುಗಳು ಚೆಲ್ಲಾಪಿಲ್ಲಿಯಾಗಿದ್ದವು.

    ಗೋದ್ ರೇಜ್‌ನಲ್ಲಿ ಇರಿಸಿದ್ದ 16 ಗ್ರಾಂ ತೂಕದ 2 ಚಿನ್ನದ ಬಳೆಗಳು ಮತ್ತು ದೇವರ ಚಿಲ್ಲರೆ ಹಣ ಕಳವಾಗಿತ್ತು. 16-05-2025ರ ಸಂಜೆ 4:00 ಗಂಟೆಯಿಂದ 19-05-2025ರ ಬೆಳಿಗ್ಗೆ 8:30 ಗಂಟೆಯವರೆಗಿನ ಅವಧಿಯಲ್ಲಿ ಕಳ್ಳರು ಹಂಚು ತೆಗೆದು ಒಳಪ್ರವೇಶಿಸಿ ಕಳ್ಳತನ ಮಾಡಿದ್ದಾರೆ. ಕಳವಾದ ಸ್ವತ್ತಿನ ಅಂದಾಜು ಮೌಲ್ಯ 80,000 ರೂಪಾಯಿ. ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 39/2025, ಕಲಂ 331(3), 331(4), 305 BNS ರಂತೆ ಪ್ರಕರಣ ದಾಖಲಾಗಿದೆ.

    ಕಾಪುವಿನಲ್ಲಿ 3.84 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

    ಕಾಪು, ಮೇ 19, 2025: ಪಡು ಗ್ರಾಮದ 74 ವರ್ಷದ ಮಹಿಳೆಯೊಬ್ಬರು 18-05-2025ರ ಮಧ್ಯಾಹ್ನ 3:30 ಗಂಟೆಗೆ ಮಗ ಮಗನ ಮನೆಯಲ್ಲಿ ಕಾರ್ಯಕ್ರಮಕ್ಕಾಗಿ ಮನೆಗೆ ಬೀಗ ಹಾಕಿ ತೆರಳಿ, ರಾತ್ರಿ ಅಲ್ಲಿ ಉಳಿದುಕೊಂಡಿದ್ದರು. 19-05-2025ರ ಬೆಳಿಗ್ಗೆ 8:30 ಗಂಟೆಗೆ ಮನೆಗೆ ವಾಪಸ್ ಬಂದು ನೋಡಿದಾಗ, ಕಳ್ಳರು ಬಾಗಿಲಿನ ಲಾಕ್ ಅನ್ನು ಮುರಿದು ಒಳನುಗ್ಗಿ, ಬೆಡ್‌ರೂಂ ಕಪಾಟಿನ ಬಟ್ಟೆಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದರು.

    ಪರ್ಸ್‌ನಲ್ಲಿ ಇದ್ದ 64 ಗ್ರಾಂ ತೂಕದ ಚಿನ್ನಾಭರಣಗಳು—2.5 ಪವನ್ ಮುತ್ತಿನ ಹಾರ, 2.5 ಪವನ್ ಬಳೆ, 1 ಪವನ್ ತೂಕದ 4 ಉಂಗುರುಗಳು, 0.5 ಪವನ್ ಕಿವಿಯೋಲೆ, 0.5 ಪವನ್ ಒಡೆಗೆ ಹೂ, 3 ಗ್ರಾಂ ಕಿವಿಯ ಟಿಕ್ಕಿ (3 ಜೊತೆ), 4 ಗ್ರಾಂ ಮಗುವಿನ ಚೈನ್, 1 ಗ್ರಾಂ ಕಿವಿಯ ರಿಂಗ್ (1 ಜೊತೆ)—ಕಳವಾಗಿವೆ. ಒಟ್ಟು ಮೌಲ್ಯ 3,84,000 ರೂಪಾಯಿ. ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 74/2025, ಕಲಂ 331(3), 331(4), 305 BNS ರಂತೆ ಪ್ರಕರಣ ದಾಖಲಾಗಿದೆ.

  • ಬೈಂದೂರು: ಹೋಟೆಲ್ ಕೊಠಡಿಯಿಂದ 100 ಗ್ರಾಂ ಚಿನ್ನದ ಸರ ಕಳವು

    ಬೈಂದೂರು, ಮೇ 19: ಬೈಂದೂರು ತಾಲೂಕಿನ ನಂದನವನ ಗ್ರಾಮದ ಪರಿಚಯ ಹೋಟೆಲ್‌ನ ಕೊಠಡಿ ಸಂಖ್ಯೆ 101ರಲ್ಲಿ ವಾಸವಾಗಿದ್ದ ಮಾಲತಿ ಎಂಬ ಮಹಿಳೆಯ 10 ತೊಲೆ (100 ಗ್ರಾಂ) ಚಿನ್ನದ ಕರಿಮಣಿ ಸರವನ್ನು ಕಳ್ಳರು ಕದ್ದಿರುವ ಘಟನೆ ನಡೆದಿದೆ.

    ಪಿರ್ಯಾದಿದಾರರಾದ ಉದಯ (36), ಬಿಜೂರು ಗ್ರಾಮ, ಬೈಂದೂರು ಇವರ ಹೆಂಡತಿಯ ಅಕ್ಕ, ಮೇ 8, 2025ರಂದು ಬೆಳಿಗ್ಗೆ 8:30ಕ್ಕೆ ತಮ್ಮ ತಾಯಿಯ ಮನೆಯಾದ ಬಿಜೂರಿನ ಹೊಳೆತೋಟಕ್ಕೆ ತೆರಳಿದ್ದರು. ಆಗ ಕೊಠಡಿಗೆ ಬೀಗ ಹಾಕದೇ ಬಾಗಿಲು ಮಾತ್ರ ಹಾಕಿ ಹೋಗಿದ್ದರು. ಮಧ್ಯಾಹ್ನ 3:30ಕ್ಕೆ ಮರಳಿ ಬಂದಾಗ ಕೊಠಡಿಯ ಬಾಗಿಲು ತೆರೆದಿರುವುದನ್ನು ಕಂಡು, ಒಳಗೆ ಪರಿಶೀಲಿಸಿದಾಗ ಕಪಾಟಿನಲ್ಲಿದ್ದ 100 ಗ್ರಾಂ ಚಿನ್ನದ ಕರಿಮಣಿ ಸರ ಕಾಣೆಯಾಗಿರುವುದು ಗೊತ್ತಾಯಿತು.

    ಹೋಟೆಲ್‌ನ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ, ಅದೇ ಹೋಟೆಲ್‌ನ 2ನೇ ಮಹಡಿಯ ಕೊಠಡಿ ಸಂಖ್ಯೆ 201ರಲ್ಲಿ ವಾಸವಾಗಿದ್ದ ವ್ಯಕ್ತಿಯೊಬ್ಬರು ಮಧ್ಯಾಹ್ನ 2:20ಕ್ಕೆ ಮಾಲತಿಯವರ ಕೊಠಡಿ ಸಂಖ್ಯೆ 101ಕ್ಕೆ ಪ್ರವೇಶಿಸಿ ಹೊರಬಂದಿರುವ ದೃಶ್ಯ ಕಂಡುಬಂದಿದೆ.

    ಈ ಬಗ್ಗೆ ಉದಯಯವರು ನೀಡಿದ ದೂರಿನ ಆಧಾರದ ಮೇಲೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 104/2025, ಕಲಂ 305 BNS ರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ಬೆಳ್ತಂಗಡಿ : ಮನೆಯೊಳಗೆ ನುಗ್ಗಿ ನಗನಗದು ಕಳವು ಪ್ರಕರಣ – ಇಬ್ಬರು ಆರೋಪಿಗಳ ಬಂಧನ

    ಬೆಳ್ತಂಗಡಿ: ಮನೆಯೊಳಗೆ ನುಗ್ಗಿ ಲಕ್ಷಾಂತರ ರೂ ಮೌಲ್ಯದ ನಗನಗದು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪುಂಜಾಲಕಟ್ಟೆ ಪೋಲೀಸರ ತಂಡ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಹಾಸನ ಜಿಲ್ಲೆಯ ಮಾಲೂರು ತಾಲೂಕಿನ ಅಂಗಡಿಹಳ್ಳಿ ನಿವಾಸಿ ಶಿವರಾಜ್ ಯಾನೆ ಶಿವಕೇರಿ ( 32) ಹಾಗೂ ಮಂಗಳೂರು ಕಣ್ಣೂರು ನಿವಾಸಿ ಸಂತೋಷ್ ( 26) ಎಂಬಾತನನ್ನು ಬಂಧಿಸಲಾಗಿದೆ.

    ಬೆಳ್ತಂಗಡಿ ತಾಲೂಕು, ಮಾಲಾಡಿ ಗ್ರಾಮದ ಕೊಲ್ಪೆದಬೈಲು ವಸಂತಿ ಹೆಗ್ಡೆ ಎಂಬವರ ಮನೆಯಲ್ಲಿ ಎ. 20 ರಂದು ಕಳ್ಳರು ಬೀಗ ಮುರಿದು ಮನೆಯೊಳಗೆ ಪ್ರವೇಶಿಸಿ ಕೋಣೆಯ ಕಪಾಟಿನಲ್ಲಿದ್ದ ರೂ 13,72,000/- ರೂ ಮೌಲ್ಯದ 160.5 ಗ್ರಾಂ ತೂಕದ ಚಿನ್ನಾಭರಣಗಳು ಹಾಗೂ ರೂ 30,000 ನಗದು ಹಣವನ್ನು ಕಳವು ಮಾಡಿದ್ದರು.

    ಈ ಬಗ್ಗೆ ವಸಂತಿ ಹೆಗ್ಡೆಯವರು ನೀಡಿದ ದೂರಿನಂತೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಪೋಲೀಸರ ತಂಡ ಮೇ.4 ರಂದು ಸಂಜೆ ಕಳ್ಳತನ ಮಾಡಿದ ಆರೋಪಿಗಳನ್ನು ದಸ್ತಗಿರಿ ಮಾಡಿ ಆರೋಪಿಗಳಿಂದ 106 ಗ್ರಾಂ ತೂಕದ ಚಿನ್ನಾಭರಣವನ್ನು ಸ್ವಾದೀನಪಡಿಸಿಕೊಂಡಿದ್ದಾರೆ.