Tag: Sand

  • ಕುಂದಾಪುರ: ಪಂಚಗಂಗಾವಳಿ ಹೊಳೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ, ಒಬ್ಬ ಆರೋಪಿ ವಶಕ್ಕೆ

    ಕುಂದಾಪುರ, ಜೂನ್ 01, 2025: ಕುಂದಾಪುರ ತಾಲೂಕಿನ ವಡೇರಹೋಬಳಿ ಗ್ರಾಮದ ಪಂಚಗಂಗಾವಳಿ ಹೊಳೆಯಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ಮಾಡುತ್ತಿದ್ದ ಆರೋಪದ ಮೇಲೆ ಒಬ್ಬ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ದಿನಾಂಕ 01-06-2025 ರಂದು ಬೆಳಗ್ಗೆ 6:15 ಗಂಟೆಗೆ, ಕುಂದಾಪುರ ಪೊಲೀಸ್ ಠಾಣೆಯ ಠಾಣಾ ಬೀಟ್ ಸಿಬ್ಬಂದಿಯಾದ ಹೆಚ್.ಸಿ ಸೂರ್ಯ ರವರು, ವಡೇರಹೋಬಳಿ ಗ್ರಾಮದ ನಾನಾ ಸಾಹೇಬ್ ರಸ್ತೆಯ ಕೊನೆಯಲ್ಲಿ ರಿಂಗ್ ರೋಡ್ ಸಮೀಪದ ಪಂಚಗಂಗಾವಳಿ ಹೊಳೆಯಲ್ಲಿ ಕೆಲವರು ಮರಳನ್ನು ದೋಣಿಯಲ್ಲಿ ತುಂಬಿಸುತ್ತಿರುವ ಬಗ್ಗೆ ಮಾಹಿತಿ ನೀಡಿದರು. ಈ ಮಾಹಿತಿಯ ಮೇರೆಗೆ ಪೊಲೀಸ್ ಉಪನಿರೀಕ್ಷಕ ನಂಜಾನಾಯ್ಕ್ ಎನ್. ರವರು ಠಾಣಾ ಸಿಬ್ಬಂದಿಯೊಂದಿಗೆ ಬೆಳಗ್ಗೆ 7:00 ಗಂಟೆಗೆ ಸ್ಥಳಕ್ಕೆ ಭೇಟಿ ನೀಡಿ ದಾಳಿ ನಡೆಸಿದರು.

    ದಾಳಿಯ ವೇಳೆ ಆರೋಪಿತ ಉದಯ ಮೆಂಡನ್ ವಶಕ್ಕೆ ಸಿಕ್ಕಿದ್ದು, ಇನ್ನೊಬ್ಬ ವ್ಯಕ್ತಿ ಸುನಿಲ್ ಎಂಬಾತ ಓಡಿಹೋಗಿದ್ದಾನೆ. ಸ್ಥಳದಲ್ಲಿ ಒಂದು ಫೈಬರ್ ದೋಣಿಯಲ್ಲಿ ಸುಮಾರು 1 ½ ಯುನಿಟ್ ಮರಳು (ಅಂದಾಜು ಮೌಲ್ಯ ₹5,000/-) ತುಂಬಿಸಿಟ್ಟಿರುವುದು ಹಾಗೂ KA20 C 6070 ಸಂಖ್ಯೆಯ 407 ಟಿಪ್ಪರ್ ವಾಹನ (ಅಂದಾಜು ಮೌಲ್ಯ ₹5,00,000/-) ನಿಂತಿರುವುದು ಕಂಡುಬಂದಿತು. ಆರೋಪಿತ ಉದಯ ಮೆಂಡನ್, ಪಂಚಗಂಗಾವಳಿ ಹೊಳೆಯಿಂದ ಮರಳನ್ನು ತೆಗೆದು ಟಿಪ್ಪರ್ ವಾಹನದಲ್ಲಿ ಸಾಗಾಟಕ್ಕೆ ತಂದಿರಿಸಿರುವುದಾಗಿ ತಿಳಿಸಿದ್ದಾನೆ.

    ಆರೋಪಿತರು ಯಾವುದೇ ಪರವಾನಗಿ ಇಲ್ಲದೇ ಸಂಘಟಿತವಾಗಿ ಮರಳು ಕಳವು ಮಾಡಿ ಸಾಗಾಟಕ್ಕೆ ಶೇಖರಿಸಿದ್ದಾರೆ ಎಂದು ಕಂಡುಬಂದಿದೆ. ಪೊಲೀಸರು ಸ್ಥಳದಲ್ಲಿ ದೋಣಿ (ಅಂದಾಜು ಮೌಲ್ಯ ₹15,000/-), 1 ½ ಯುನಿಟ್ ಮರಳು, ಟಿಪ್ಪರ್ ವಾಹನ, ಕಬ್ಬಿಣದ ಹಾರೆ-1, ಮತ್ತು ಫೈಬರ್ ಬುಟ್ಟಿಗಳು-2 ಅನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

    ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 66/2025ರ ಅಡಿಯಲ್ಲಿ ಕಲಂ 303(2), 112 BNS ಮತ್ತು ಕಲಂ 4, 4(1)(a), 21 Mines and Minerals (Regulation and Development) Actನಂತೆ ಪ್ರಕರಣ ದಾಖಲಾಗಿದೆ. ಮುಂದಿನ ತನಿಖೆ ನಡೆಯುತ್ತಿದೆ.

  • ಕಾರ್ಕಳ: ಅಕ್ರಮ ಮರಳು ಸಾಗಾಟ ಪ್ರಕರಣ; ಮೂವರು ವಶಕ್ಕೆ

    ಕಾರ್ಕಳ, ಮೇ 14, 2025: ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಮುಂಡ್ಕೂರು ಗ್ರಾಮದ ಜಾರಿಗೆಕಟ್ಟೆ ಚೆಕ್‌ಪೋಸ್ಟ್‌ನಲ್ಲಿ ದಿನಾಂಕ 13/05/2025 ರಂದು ರಾತ್ರಿ 11:30 ಗಂಟೆಗೆ ಅಕ್ರಮ ಮರಳು ಸಾಗಾಟ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪಿರ್ಯಾದಿದಾರರಾದ ಸುಂದರ್ ಪಿ.ಎಸ್.ಐ., ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ, ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರ ಮಾಹಿತಿಯಂತೆ ಕರ್ತವ್ಯದಲ್ಲಿದ್ದಾಗ ಈ ಘಟನೆ ನಡೆದಿದೆ.

    ಪೊಲೀಸ್ ಸಿಬ್ಬಂದಿ ಸೋಮಶೇಖರ್ ಅವರೊಂದಿಗೆ ರೌಂಡ್ಸ್‌ನಲ್ಲಿದ್ದ ವೇಳೆ, ಪಟ್ಟೆಕ್ರಾಸ್‌ನಿಂದ ಶಿರ್ವ ಕಡೆಗೆ ಎರಡು ಟಿಪ್ಪರ್ ಲಾರಿಗಳಲ್ಲಿ (KA-19-AE-3583 ಮತ್ತು KA-05-AB-6460) ಅಕ್ರಮವಾಗಿ ಮರಳು ಸಾಗಿಸುತ್ತಿರುವುದನ್ನು ಪತ್ತೆಹಚ್ಚಲಾಗಿದೆ. ಈ ಟಿಪ್ಪರ್‌ಗಳ ಚಾಲಕರಾದ ಕಲ್ಲಪ್ಪ ಹಡಪದ್, ಫಿರೋಜ್ ಸಿರಾಜ್ ಸಾಹೇಬ್ ಹಾಗೂ ಒಂದು ಟಿಪ್ಪರ್‌ನ ಮಾಲೀಕ ಶೇಖ್ ಅಲ್ಪಾಝ್ ಅಹಮ್ಮದ್ ಇವರು ಸಂಘಟಿತವಾಗಿ, ಸಂಬಂಧಿತ ಇಲಾಖೆಯಿಂದ ಪರವಾನಗಿ ಪಡೆಯದೆ ಉಳೆಪ್ಪಾಡಿಯ ಪಟ್ಟೆಕ್ರಾಸ್‌ನಿಂದ ಅಂದಾಜು ₹16,000 ಮೌಲ್ಯದ 2½ ಯುನಿಟ್ ಮರಳನ್ನು ಕಳವು ಮಾಡಿ ಸಾಗಾಟ ಮಾಡುತ್ತಿದ್ದರು.

    ಪೊಲೀಸರು ಆರೋಪಿಗಳಾದ ಕಲ್ಲಪ್ಪ ಹಡಪದ್, ಫಿರೋಜ್ ಸಿರಾಜ್ ಸಾಹೇಬ್ ಮತ್ತು ಶೇಖ್ ಅಲ್ಪಾಝ್ ಅಹಮ್ಮದ್ ಅವರನ್ನು ವಶಕ್ಕೆ ಪಡೆದಿದ್ದು, ಎರಡು ಟಿಪ್ಪರ್ ಲಾರಿಗಳು ಹಾಗೂ ಅವುಗಳಲ್ಲಿದ್ದ ಮರಳನ್ನು ಜಪ್ತಿ ಮಾಡಿದ್ದಾರೆ.

    ಈ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 66/2025ರಡಿ ಕಲಂ 303(2), 112(1) R/w 3(5) ಭಾರತೀಯ ನ್ಯಾಯ ಸಂಹಿತೆ 2023, ಕಲಂ 166 R/W 192(A) IMV ಆಕ್ಟ್, ಕಲಂ 4(1-A), 21(4) Mines and Minerals Regulation Act 1957 ರಂತೆ ಪ್ರಕರಣ ದಾಖಲಾಗಿದೆ.