Tag: SDPI

  • Mangaluru: SDPI Ullal Constituency to Hold Leaders’ Meeting with Ilyas Thumbe and Riaz Farangipete as Chief Guests

    Mangaluru, September 1, 2025: The Social Democratic Party of India (SDPI) Mangaluru (Ullal) Constituency Committee has announced a leaders’ meeting scheduled for Tuesday, September 2, 2025, at Unity Hall near Thokkottu, Kallapu. The event, themed “Contribution for Change,” will be chaired by SDPI Mangaluru constituency president Zahid Malar and aims to inspire party leaders to promote social justice, equality, and transformation. Chief guests include SDPI National General Secretary Ilyas Muhammad Thumbe, National Secretary Riaz Farangipete, and District President Jaleel Krishnapura. The announcement was made by constituency committee secretary Ubaid Ammembala in a press release.

    SDPI, known for its advocacy of social justice, has been active in the region, previously contesting elections in Ullal and securing significant vote shares. The meeting is part of SDPI’s ongoing efforts to strengthen its organizational presence and mobilize leaders for societal change.

  • Bhatkal: SDPI Protests ‘Unscientific’ NH-66 Construction After Fatal Accidents

    Bhatkal, August 27, 2025 – The Bhatkal unit of the Social Democratic Party of India (SDPI) staged a protest on Tuesday, August 26, 2025, near Noor Masjid, condemning IRB Infrastructure’s “unscientific” and negligent work on the four-laning of National Highway 66 (NH-66). The demonstrators accused the contractor and the National Highways Authority of India (NHAI) of failing to install essential safety features like streetlights, pedestrian crossings, barricades, and warning signs, resulting in multiple accidents, including the fatal incident involving Murdeshwar resident Ishwar Naik on August 22, 2025.

    SDPI submitted a memorandum to the Bhatkal Tahsildar, addressed to the Assistant Commissioner and copied to senior state officials, including the Governor, demanding immediate action against IRB, an independent probe into safety violations, and stricter oversight of highway projects statewide. SDPI district president Taufiq Beary highlighted the decade-long delay in the NH-66 project, stalled for the past 18 months, and issued a 10-day ultimatum for resuming work and implementing safety measures, threatening escalated protests if ignored.

    The protesters initially demanded that the Assistant Commissioner or Tahsildar receive the memorandum at the site, but when officials did not appear, they marched to the Taluka Administration Office. The demonstration saw participation from SDPI leaders, including district secretary Waseem Manegar, district council member Zainuddin, assembly secretary Saqib, and others like Suhail and Abdul Sami.

    Following the protest, Bhatkal Tahsildar Nagendr Kolashetty inspected the hazardous stretch near Noor Masjid and assured that repair work would begin soon. Circle Police Inspector Divakar, PSI Naveen, and other officers, supervised by DySP Mahesh, ensured order during the event.

  • SDPI Delegation Visits Ujire Hospital to Meet YouTubers Attacked in Dharmasthala

    Belthangady, August 7, 2025: A delegation from the Social Democratic Party of India (SDPI) visited Benaka Hospital in Ujire, where four YouTubers, assaulted by miscreants in Dharmasthala, are receiving treatment. The visit was in response to the violent attack on the YouTubers, which occurred on August 6 near Pangala Cross while they were interviewing a person in connection with the ongoing Special Investigation Team (SIT) probe into the alleged mass burial case.

    The SDPI delegation was led by State Secretary Riyaz Kadambu and included Mangaluru Rural District President Anwar Sadath Bajattur, Mangaluru Urban District President Abdul Jaleel K, Mangaluru Rural District Vice-President and Bantwal Municipal Vice-President Moonish Ali, District Committee members Haneef Poonjal Katte and Aboobakkar Madd, Belthangady Constituency President Akbar Belthangady, and other party leaders.

    The delegation expressed solidarity with the victims and condemned the attack, which has sparked widespread concern and protests in the region. The YouTubers, identified as Ajay Anchan of Kudla Rampage, Abhishek of United Media, Vijay of Sanchari Studio, and a cameraman, sustained injuries, with one reported to be in critical condition. The incident has led to heightened tensions, prompting police to deploy additional security in Dharmasthala.

  • ಪುತ್ತೂರು: ಲವ್ ಸೆಕ್ಸ್ ದೋಖಾ ಪ್ರಕರಣದ ಸಂತ್ರಸ್ತೆಯ ಮನೆಗೆ ಭೇಟಿ ನೀಡಿದ ಎಸ್ ಡಿಪಿಐ ಹಾಗೂ ವಿಮೆನ್ ಇಂಡಿಯಾ ಮೂವ್ ಮೆಂಟ್ ನಿಯೋಗ

    ಪುತ್ತೂರು: ಪುತ್ತೂರಿನಲ್ಲಿ ಲವ್ ಸೆಕ್ಸ್ ದೋಖಾ ಪ್ರಕರಣಕ್ಕೆ ಸಂಬಂಧಿಸಿ ಇಂದು ಸಂತ್ರಸ್ತೆಯ ಮನೆಗೆ ಎಸ್ ಡಿಪಿಐ ಹಾಗೂ ವಿಮೆನ್ ಇಂಡಿಯಾ ಮೂವ್ ಮೆಂಟ್ ನಿಯೋಗವು ಭೇಟಿ ನೀಡಿದರು.

    ಈ ವೇಳೆ ಸಂತ್ರಸ್ತೆ ಹಾಗೂ ಮಗುವನ್ನು ನೋಡಿದ ಬಳಿಕ ನಿಮಗೆ ನ್ಯಾಯ ಸಿಗುವ ವರೆಗೂ ನಿಮ್ಮ ಜೊತೆ ಎಸ್ ಡಿಪಿಐ ಇರುವುದಾಗಿ ಸಂತ್ರಸ್ತೆಯ ತಾಯಿಗೆ ಧೈರ್ಯ ಹೇಳಿದರು. ಬಳಿಕ ಮಾಧ್ಯಮದ ಜೊತೆ ಎಸ್ ಡಿಪಿಐ ರಾಜ್ಯ ಉಪಾಧ್ಯಕ್ಷೆ ಶಾಹಿದ ತಸ್ಲೀಮ್ ಅವರು ಮಾತನಾಡಿ ಬೇಟಿ ಬಚಾವೋ ಬೇಟಿ ಪಡಾವೋ ಅಂತೆಲ್ಲ ಹೇಳ್ತಾರೆ. ಆದ್ರೆ ಮಹಿಳೆಗೆ ಅನ್ಯಾವಾದಾಗ ನ್ಯಾಯದ ಪರವಾಗಿ ಇರದೆ ಪ್ರಭಾವಿಗಳ ಪರ ನಿಂತು ಬೆಂಬಲ ನೀಡೋದು ಈಗಿನ ಕೆಲ ವರ್ಷಗಳಿಂದ ನಡೀತಾ ಬರ್ತಾ ಇದೆ. ಆರೋಪಿಗಳ ಪರವಾಗಿ ಬಿಜೆಪಿ ಸಂಘಪರಿವಾರ ನಿಲ್ಲೋದ್ರಿಂದ ಇಂತಹ ಘಟನೆಗಳು ಮರಕಳುಹಿಸುತ್ತಾ ಇದೆ ಎಂದು ಅವರು ಕಿಡಿಕಾರಿದರು.

    ಭೂಮಾತೆ, ಗೋತಾಯಿ, ಮಾತೆಯ ಸಂಸ್ಕೃತಿ ನಮ್ಮದು ಅಂತೆಲ್ಲ ಹೇಳಿ ನೈಜ ಮಾತೆಗೆ ಅನ್ಯಾವಾದಾಗ ಬೆಂಬಲವಾಗಿ ನಿಲ್ಲದೆ, ಪ್ರಭಾವಿಗಳಿಗೆ ಬೆಂಬಲ ನೀಡುತ್ತಾ ಬಂದಿದ್ದಾರೆ. ಎಲ್ಲಿಯವರೆಗೂ ಇದು ಮುಂದುವರಿದಿದೆ ಅಂದ್ರೆ ಸಂತ್ರಸ್ತೆಯ ತಾಯಿ ವಿವಿಧ ಹಿಂದುತ್ವ ನಾಯಕರ ಭೇಟಿ ಮಾಡಿದರೂ ಕೂಡ ಬೆಂಬಲ ಸಿಕ್ಕಿಲ್ಲ. ಕೊನೆಗೆ ಎಸ್ ಡಿಪಿಐ ಸಂತ್ರಸ್ತೆಯ ಪರವಾಗಿ ಪ್ರತಿಭಟಿಸಿದರ ಪರಿಣಾಮ ಎಲ್ಲರೂ ಎಚ್ಚೆತ್ತುಕೊಂಡಿದ್ದಾರೆ.

    ಆದ್ರೆ ಕೆಲವರು ಈ ವಿಚಾರವನ್ನ ರಾಜಕೀಯ ಮೈಲೇಜ್ ಪಡೆಯಲು ಬಂದಿದ್ದಾರೆ. ಎಸ್ ಡಿಪಿಐ ಇಂತಹ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ಯಾರಿಗೆ ಅನ್ಯಾಯವಾಗುತ್ತೋ ಅವರ ಪರವಾಗಿ ನಿಲ್ಲುತ್ತೆ ಎಂದು ಹೇಳಿದರು. ಇನ್ನು ಇಂತಹ ಘಟನೆಗಳು ನಡೆದಾಗ ಇಡೀ ಸಮಾಜ ಒಂದಾಗಿ ಯಾರಿಗೆ ಅನ್ಯಾಯ ಆಗಿದೋ ಅವರ ಪರವಾಗಿ ನಿಲ್ಲಬೇಕು. ಬ್ರಾಹ್ಮಣ್ಯವನ್ನ ಸಂರಕ್ಷಿಸಲು ಸಂಘ ಪರಿವಾರ ಮತ್ತು ಬಿಜೆಪಿ ಕೆಲಸ ಮಾಡುತ್ತಿದೆ.

    ಇಲ್ಲಿ ಜಾತಿ, ಧರ್ಮ ನೋಡಿಕೊಂಡು ಮೇಲ್ವರ್ಗಕ್ಕೊಂದು ನ್ಯಾಯ ಕೆಲ ವರ್ಗಕ್ಕೊಂದು ನ್ಯಾಯದ ರೀತಿ ಇದೆ. ಅದು ನಿಲ್ಲಬೇಕು. ಹಿಂದುತ್ವ ಬೇರೆ ಹಿಂದೂ ಧರ್ಮ ಬೇರೆ. ಹಿಂದೂ ಧರ್ಮ ಅಂದ್ರೆ ಸರ್ವೋ ಜನ ಸುಖಿನೋ ಭವಂತೋ, ವಸುದೈವ ಕುಟುಂಬಕಂ ಅಂತ ಹೇಳುವ ಧರ್ಮ. ಅದನ್ನ ಈ ಹಿಂದುತ್ವವಾದಿಗಳು ಜಾತಿ ನೋಡಿಕೊಂಡು ಬ್ರಾಹ್ಮಣ್ಯವನ್ನು ಸಂರಕ್ಷಿಸುವ ಸಲುವಾಗಿ ಈ ರೀತಿ ಮಾಡುತ್ತಾ ಇದ್ದಾರೆ ಎಂದು ಆರೋಪಿಸಿದರು. ನಿಜವಾಗಿ ಈ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆಯಾಗಬೇಕು. ಸಂತ್ರಸ್ತೆಗೆ ನ್ಯಾಯ ಒದಗಿಸಿಕೊಡಬೇಕು. ಇದನ್ನ ರಾಜಕೀಯವಾಗಿ ನೋಡುವುದು ಬೇಡ. ಓರ್ವ ಮಹಿಳೆಗೆ ಆದ ಅನ್ಯಾಯ ಅಂತ ತಿಳಿದುಕೊಂಡು ಎಲ್ಲರೂ ಬೆಂಬಲವಾಗಿ ನಿಂತು ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.

    ಈ ಸಂದರ್ಭದಲ್ಲಿ ಎಸ್.ಡಿ.ಪಿ.ಐ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ಸದಸ್ಯರಾದ ಹನೀಫ್ ಪುಂಜಾಲಕಟ್ಟೆ, ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಜೊತೆ ಕಾರ್ಯದರ್ಶಿ ರಹಿಮಾನ್ ಪುತ್ತೂರು, ಪುತ್ತೂರು ನಗರಸಭೆ ಸದಸ್ಯೆ ಝುಹರಾ ಬನ್ನೂರು, ವಿಮೆನ್ ಇಂಡಿಯಾ ಮೂವ್ ಮೆಂಟ್ ಮಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷೆ ಝಹನ, ವಿಮ್ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ಸದಸ್ಯೆಯರಾದ ಝೀನತ್ ಬಂಟ್ವಾಳ, ಶಿನೀರ, ಝೈನಬ ಹಾಗೂ ಫೌಝಿಯಾ ಉಪಸ್ಥಿತರಿದ್ದರು.

  • ಬಂಟ್ವಾಳ: ರೆಹಮಾನ್, ಅಶ್ರಫ್ ಕೊಲೆ ಪ್ರಕರಣಗಳ ಪ್ರಮುಖ ಆರೋಪಿಗಳ ಬಂಧನ ವಿಳಂಬ ಖಂಡಿಸಿ ಎಸ್‌ಡಿಪಿಐ ಪ್ರತಿಭಟನೆ

    ಬಂಟ್ವಾಳ, ಜುಲೈ 8, 2025: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಇಂದು ಮಂಗಳವಾರ ಸಂಜೆ ಕೈಕಂಬ-ಪೋಲಾಲಿ ಗೇಟ್ ಬಳಿ ದೊಡ್ಡ ಪ್ರತಿಭಟನೆಯೊಂದನ್ನು ಆಯೋಜಿಸಿತು. ಈ ಪ್ರತಿಭಟನೆಯಲ್ಲಿ ಅಬ್ದುಲ್ ರೆಹಮಾನ್ ಮತ್ತು ಅಶ್ರಫ್ ವಯನಾಡ್ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳ ಬಂಧನದಲ್ಲಿ ಆಗುತ್ತಿರುವ ವಿಳಂಬವನ್ನು ಖಂಡಿಸಲಾಯಿತು. “ನ್ಯಾಯ ಮರೀಚಿಕೆ, ಹುಸಿಯಾದ ಭರವಸೆ” ಎಂಬ ಘೋಷಣೆಯಡಿಯಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಸರ್ಕಾರದ ಪರಿಹಾರ ಪ್ರಕ್ರಿಯೆಯ ಕುರಿತೂ ಆಕ್ರೋಶ ವ್ಯಕ್ತವಾಯಿತು.

    ಪ್ರತಿಭಟನೆಯಲ್ಲಿ ಮಾತನಾಡಿದ SDPI ಗ್ರಾಮೀಣ ಜಿಲ್ಲಾ ಕಾರ್ಯದರ್ಶಿ ನವಾಜ್ ಶರೀಫ್ ಕಟ್ಟೆ, “ಸರ್ಕಾರ ಪರಿಹಾರ ಪ್ರಕಟಿಸುವುದು ಮತ್ತು ಪ್ರಮುಖ ಆರೋಪಿಗಳ ಬಂಧನದಲ್ಲಿ ವಿಳಂಬಯಾಗಿರುವುದರಿಂದ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ. ಬಜ್ಪೆಯಲ್ಲಿ ರೌಡಿ ಶೀಟರ್ ಸುಹಾಸ್ ಶೆಟ್ಟಿ ಕೊಲೆಯಾದ ಬಳಿಕ ಪ್ರದೇಶದಲ್ಲಿ ಹಲವು ಚಾಕು ಇರಿತ ಪ್ರಕರಣಗಳು ಸಂಭವಿಸಿದವು, ಆದರೆ ಆ ಆರೋಪಿಗಳನ್ನು ಬಂಧಿಸಲಾಗಿಲ್ಲ. ಉದಾಹರಣೆಗೆ, ನಿರ್ದೋಷಿ ಅಬ್ದುಲ್ ರೆಹಮಾನ್ ಕೊಲೆಯಾದರು” ಎಂದು ಆರೋಪಿಸಿದರು.

    ಅವರು ಭರತ್ ಕುಮ್ಮೆಲು ಅವರ ಬಗ್ಗೆ ಪ್ರಶ್ನೆ ಎತ್ತಿ, “ಅವರು ಐಷಾರಾಮಿ ಬಂಗಲೆಯಲ್ಲಿ ವಾಸಿಸುತ್ತಿದ್ದು, ದುಬಾರಿ ಕಾರುಗಳಲ್ಲಿ ಸವಾರಿ ಮಾಡುತ್ತಿದ್ದಾರೆ. ಈ ಐಷಾರಾಮಿಕ ಜೀವನಕ್ಕೆ ಆದಾಯದ ಮೂಲವೇನು? ಯಾರು ಆತನಿಗೆ ವಾಹನವನ್ನು ಕೊಟ್ಟಿದ್ದಾರೆ? ಭಾರತ್ ಚಂದಾದಾರಿಕೆ ಮೂಲಕ ಜೀವನ ನಡೆಸುತ್ತಿದ್ದು, ಕೊಲೆಗೆ ಸಂಬಂಧ ಹೊಂದಿದ್ದಾನೆ ಎಂದು ಆರೋಪ ಇದೆ. ಆತನನ್ನು ಬಂಧಿಸಿ ತೀವ್ರ ತನಿಖೆ ನಡೆಸಬೇಕು” ಎಂದು ಒತ್ತಾಯಿಸಿದರು.

    “ನ್ಯಾಯವಿಲ್ಲದ ದುರ್ಮರಣದಿಂದ ಕಳೆದ ಜೀವಕ್ಕೆ ಹಣ ಶಾಂತಿ ತಂದುಕೊಡುವುದಿಲ್ಲ. ಕೊಲೆಯಲ್ಲಿ ಸಹಾಯ ಮಾಡಿದ ಎಲ್ಲರನ್ನು ಬಂಧಿಸಿ ಶಿಕ್ಷೆ ನೀಡಬೇಕು. ಇದೇ ನಿಜವಾದ ನ್ಯಾಯ” ಎಂದು ಅವರು ಹೇಳಿದರು.

    ನವಾಜ್ ಶರೀಫ್ ಎರಡೂ ಕೊಲೆ ಪ್ರಕರಣಗಳ ಬಳಿಕ ಪ್ರತಿಭಟನೆಗಳು ಮುಂದುವರಿದ್ದು, SDPI ಇತರ ಪಕ್ಷಗಳ ಒಕ್ಕೂಟದೊಂದಿಗೆ ಸಹ ಒಗ್ಗೂಡಿ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದೆ ಎಂದು ತಿಳಿಸಿದರು. “ನ್ಯಾಯ ಆಗುವವರೆಗೆ ಮತ್ತು ದೋಷಿಗಳಿಗೆ ಶಿಕ್ಷೆ ಆಗುವವರೆಗೆ ನಾವು ಹೋರಾಟ ಮುಂದುವರಿಸುತ್ತೇವೆ” ಎಂದು ಘೋಷಿಸಿದರು.

    “SDPI ಎಲ್ಲಿಯೂ ಸಹ ಒಂದು ಧರ್ಮಕ್ಕೆ ಸೀಮಿತವಾಗಿ ಹೋರಾಡುವ ಪಕ್ಷವಲ್ಲ. ಪುತ್ತೂರು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಹ ನಾವು ನ್ಯಾಯಕ್ಕಾಗಿ ಲಢಿಸಿದೆವು. ಆ ಸಂದರ್ಭದಲ್ಲಿ ಸಂಬಂಧಪಟ್ಟ ಮಹಿಳೆಗೆ ನ್ಯಾಯ ಒದಗಿಸಲು SDPI ಗೆ ದೊಡ್ಡ ಪಾತ್ರವಿದೆ” ಎಂದು ಅವರು ಸ್ಪಷ್ಟಪಡಿಸಿದರು.

    ರಾಜ್ಯ ಸಮಿತಿ ಸದಸ್ಯ ಅತಾವುಲ್ಲಾ ಜೋಕಟ್ಟೆ ಮಾತನಾಡಿ, “ಕೊಲೆ ಆರೋಪಿಗಳು ಒಂದು ತಿಂಗಳಲ್ಲಿ ಜಾಮೀನು ಪಡೆಯಬಹುದಾದರೆ ಇಲ್ಲಿ ನ್ಯಾಯ ಎಲ್ಲಿದೆ? ಇದಕ್ಕೆ ಸರ್ಕಾರ ಉತ್ತರಿಸಬೇಕು” ಎಂದು ಪ್ರಶ್ನಿಸಿದರು.

    “SDPI ಕೇವಲ ರಾಜಕೀಯ ಪಕ್ಷವಲ್ಲ. ಬಿ.ಸಿ. ರೋಡ್ ಮುನ್ಸಿಪಲ್ ಕೌನ್ಸಿಲ್‌ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು ನಮ್ಮ ಬೆಂಬಲದಿಂದ ಮಾತ್ರ. ಅಬ್ದುಲ್ ರೆಹಮಾನ್‌ನ ಕೊಲೆಯು ಯೋಜಿತ ಕೊಲೆಯಾಗಿದೆ. ರಾಜ್ಯ ಸರ್ಕಾರ ಈ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ (SIT) ವಹಿಸಲು ಹಿಂದೇಟು ಹಾಕುತ್ತಿರುವುದು ಏಕೆ? ಇದಕ್ಕೆ ಯಾರು ವಿರೋಧಿಸುತ್ತಿದ್ದಾರೆ?” ಎಂದು ಆರೋಪಿಸಿದರು.

    ಅಮಾಯಕ ಬಲಿಪಶುಗಳಿಗೆ ಸಂಪೂರ್ಣವಾಗಿ ನ್ಯಾಯ ದೊರೆಯುವವರೆಗೆ ಎಸ್‌ಡಿಪಿಐ ನ್ಯಾಯಕ್ಕಾಗಿ ಹೋರಾಟ ಮುಂದುವರಿಯುತ್ತದೆ ಎಂದು ಅವರು ದೃಢಪಡಿಸಿದರು.

    ಪ್ರತಿಭಟನೆಯಲ್ಲಿ ಮೊಹಮ್ಮದ್ ಶರೀಫ್, ಅಖ್ತರ್ ಅಲಿ, ಅಬ್ದುಲ್ ಜಲೀಲ್, ಸಿದ್ದೀಕ್, ಮೊನೀಶ್ ಅಲಿ, ಶಹೂಲ್ ಹಮೀದ್ ಸಿದ್ದೀಕ್ ಪುತ್ತೂರ್, ಜಮಾಲ್ ಜೋಕಟ್ಟೆ, ಅಖ್ತರ್ ಬೆಳ್ತಂಗಡಿ, ಅಶ್ರಫ್ ಇಬ್ರಾಹಿಂ ಅಲಾಡಿ ಥಂಗಲ್, ಹನೀಫ್ ಪುಂಜಾಲ್ಕಟ್ಟೆ, ಅಶ್ರಫ್ ತಾಲಪಾಡಿ ಸೇರಿದಂತೆ ಹಲವಾರು ಜಿಲ್ಲಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

  • ಸಂಘ ಪರಿವಾರದ ಒತ್ತಡಕ್ಕೆ ಮಣಿದು ರಿಯಾಜ್ ಕಡಂಬು ವಿರುದ್ಧ ಪ್ರಕರಣ ದಾಖಲು: ಆಸಿಫ್ ಕೋಟೇಶ್ವರ

    ಉಡುಪಿ: ಮೊನ್ನೆ ಉಡುಪಿ ಜಿಲ್ಲೆಯ ಕುಂಜಾಲುವಿನಲ್ಲಿ ದನದ ರುಂಡ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನೈಜ ಆರೋಪಿಗಳನ್ನು ಬಂಧಿಸಿದ ಹೊರತಾಗಿಯೂ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮುಸ್ಲಿಮರ ವಿರುದ್ಧ ದ್ವೇಷವನ್ನು ಹರಡುವ ಹೇಳಿಕೆಯನ್ನು ನೀಡಿ ಗೊಂದಲವನ್ನು ನಿರ್ಮಿಸಿದ್ದರು.

    ಇದರ ವಿರುದ್ಧ ಎಸ್ ಡಿ ಪಿ ಐ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಪತ್ರಿಕಾಗೋಷ್ಠಿಯನ್ನು ಕರೆಯಲಾಗಿತ್ತು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಕಾರ್ಯದರ್ಶಿ ರಿಯಾಜ್ ಕಡಂಬು ಕುಂಜಾಲುವಿನ ಘಟನೆ ನಡೆದು ಪೊಲೀಸರು ತನಿಖೆ ಆರಂಭಿಸುವುದಕ್ಕಿಂತ ಮುಂಚೆ ಇಲ್ಲಿಯ ಶಾಸಕರು ಅದನ್ನು ಒಂದು ಸಮುದಾಯದವರ ತಲೆಗೆ ಕಟ್ಟುವ ರೀತಿಯ ಹೇಳಿಕೆಯನ್ನು ನೀಡಿದ್ದರು ಹಾಗೂ ನಂತರ ಪೊಲೀಸರು ನೈಜ ಆರೋಪಿಗಳನ್ನು ಬಂಧಿಸಿದ ಮೇಲೂ ಸಂಘ ಪರಿವಾರದ ನಾಯಕ ಇದನ್ನು ಮುಸ್ಲಿಮರ ತಲೆಗೆ ಕಟ್ಟಲು ಪ್ರಯತ್ನಿಸಿದರು.

    ಈ ಎಲ್ಲ ಬೆಳವಣಿಗೆಯನ್ನು ಗಮನಿಸುವಾಗ ಇದರ ಹಿಂದೆ ಬಿಜೆಪಿ ಹಾಗೂ ಸಂಘ ಪರಿವಾರ ಇರುವ ಶಂಕೆ ಇದೆ ಆದ್ದರಿಂದ ಪೊಲೀಸರು ಕೂಲಂಕುಶ ತನಿಖೆ ನಡೆಸಬೇಕು ಎಂದಷ್ಟೇ ಹೇಳಿದ್ದರು, ಇಲ್ಲಿ ಅವರು ಯಾವುದೇ ಧರ್ಮದ ವಿರುದ್ಧ ಹೇಳಿಕೆಯನ್ನು ನೀಡಿಲ್ಲ. ಕೇವಲ ಸಂಘ ಪರಿವಾರ ಹಾಗೂ ಬಿಜೆಪಿಯ ವಿರುದ್ಧ ಮಾತನಾಡಿದ್ದಾರೆ ಎನ್ನುವ ಒಂದೇ ಕಾರಣಕ್ಕೆ ಸಂಘ ಪರಿವಾರದ ಒತ್ತಡಕ್ಕೆ ಮಣಿದು ಸರಕಾರ ರಿಯಾಜ್ ಕಡಂಬು ವಿರುದ್ಧ ಪ್ರಕರಣವನ್ನು ದಾಖಲಿಸಿದೆ ನಾವು ಇದರ ವಿರುದ್ಧ ಕಾನೂನು ಹೋರಾಟವನ್ನು ನಡೆಸಲಿದ್ದೇವೆ ಎಂದು ಎಸ್ ಡಿ ಪಿ ಐ ಉಡುಪಿ ಜಿಲ್ಲಾಧ್ಯಕ್ಷರಾದ ಆಸಿಫ್ ಕೋಟೇಶ್ವರ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಎಸ್ ಡಿ ಪಿ ಐ ಉಡುಪಿ ನಿಯೋಗದಿಂದ ಪೊಲೀಸ್ ವರಿಷ್ಠಾಧಿಕಾರಿಗಳ ಭೇಟಿ

    ಉಡುಪಿ, ಜುಲೈ 1, 2025: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾಧ್ಯಕ್ಷರಾದ ಆಸಿಫ್ ಕೋಟೇಶ್ವರ ರವರ ನೇತೃತ್ವದಲ್ಲಿ ಜಿಲ್ಲಾ ನಿಯೋಗ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ರವರನ್ನು ಭೇಟಿಯಾಗಿ ಕುಂಜಾಲು ಪ್ರಕರಣವನ್ನು ಕಟ್ಟುನಿಟ್ಟಾಗಿ ನಿಭಾಯಿಸಿ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿದಕ್ಕೆ ಅಭಿನಂದನೆ ಸಲ್ಲಿಸಿತು.

    ಮೊನ್ನೆ ಕುಂಜಾಲುವಿನಲ್ಲಿ ದನದ ಕಳೇಬರ ಪತ್ತೆಯಾದ ಸಂದರ್ಭ ಪರಿಸರದಲ್ಲಿ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು ಹಾಗೂ ಕೆಲವು ಕಿಡಿಗೇಡಿಗಳು ಇದನ್ನು ನೆಪವಾಗಿಟ್ಟುಕೊಂಡು ಶಾಂತಿಯನ್ನು ಕದಡುವ ಪ್ರಯತ್ನವನ್ನೂ ಮಾಡಿದ್ದರು.

    ಈ ಬಗ್ಗೆ ಮಸೀದಿ ಕಮಿಟಿಯವರು ಪೊಲೀಸ್ ಠಾಣೆಗೆ ಬೇಟಿ ನೀಡಿ ಆರೋಪಿಗಳನ್ನು ಶೀಘ್ರವಾಗಿ ಬಂಧಿಸುವಂತೆ ಮನವಿ ಮಾಡಿದಾಗ ಸರಿಯಾಗಿ ಸ್ಪಂದಿಸಿದ ಪೊಲೀಸರು ಸೂಕ್ತ ಕ್ರಮ ಕೈಗೊಂಡು 4 ತಂಡಗಳನ್ನು ರಚಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರ ಈ ತ್ವರಿತ ಕ್ರಮಕ್ಕೆ ಎಸ್ ಡಿ ಪಿ ಐ ಜಿಲ್ಲಾ ಸಮಿತಿ ಅಭಿನಂದನೆ ಸಲ್ಲಿಸಿತು.

    ಈ ಸಂದರ್ಭದಲ್ಲಿ ಜಿಲ್ಲೆಗೆ ಸಂಬಂಧಿಸಿದ ಇತರ ವಿಷಯಗಳ ಬಗ್ಗೆಯೂ ಚರ್ಚೆ ನಡೆಸಲಾಯಿತು.

    ನಿಯೋಗದಲ್ಲಿ ಎಸ್ ಡಿ ಪಿ ಐ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಂಶುದ್ದೀನ್ ಹಾಗೂ ರಝಾಕ್ ವೈ ಎಸ್, ಜಿಲ್ಲಾ ಉಪಾಧ್ಯಕ್ಷರಾದ ನಝೀರ್ ಅಹ್ಮದ್, ಜಿಲ್ಲಾ ಸಮಿತಿ ಸದಸ್ಯರಾದ ಮಹಮ್ಮದ್ ಹನೀಫ್ ಹಾಗೂ ಸುಹೇಲ್ ಕಂಡ್ಲೂರ್ ಮತ್ತು ಉಡುಪಿ ಕ್ಷೇತ್ರ ಸಮಿತಿ ಉಪಾಧ್ಯಕ್ಷರಾದ ರಹೀಂ ಅದಿಉಡುಪಿ ಉಪಸ್ಥಿತರಿದ್ದರು.

  • ಎಸ್ ಡಿ ಪಿ ಐ ದಕ್ಷಿಣ ಕರ್ನಾಟಕ ಭಾಗದ ಜಿಲ್ಲಾಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳ ಸಭೆ

    ಬೆಂಗಳೂರು, ಜೂನ್ 30, 2025: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕರ್ನಾಟಕ ಭಾಗದ ಜಿಲ್ಲಾಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳ ವಿಶೇಷ ಸಭೆಯು,ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ರವರ ಅಧ್ಯಕ್ಷತೆಯಲ್ಲಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಜಾಹಿದ್ ಪಾಷಾ ಮತ್ತು ರಾಜ್ಯ ಕಾರ್ಯದರ್ಶಿ ಅಪ್ಸರ್ ಕೆ ಆರ್ ನಗರ ರವರುಗಳ ಉಪಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ನಡೆಯಿತು.

    ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ರವರು, ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅಲ್ಪಸಂಖ್ಯಾತ ಮುಸ್ಲಿಮರ ವಿರೋಧಿ ಹೇಳಿಕೆ ನೀಡಿದ್ದು, ಇದನ್ನು ವಿರೋಧಿಸಿ ಪಕ್ಷದ ವತಿಯಿಂದ ರಾಜ್ಯಾದ್ಯಂತ ಹೋರಾಟ ಪ್ರತಿಭಟನೆ ಮಾಡಿದರೂ ಸಹ, ಮುಸ್ಲಿಮರ ವೋಟು ಪಡೆದು ಬೀಗುತ್ತಿರುವ ಕಾಂಗ್ರೆಸ್ ಸರ್ಕಾರ ಮತ್ತು ಕಾಂಗ್ರೆಸ್ ನಾಯಕರು ಕನಿಷ್ಠ ಖಂಡಿಸಿಲ್ಲ ಮತ್ತು ಶಾಸಕನ ವಿರುದ್ಧ ಯಾವುದೇ ರೀತಿಯ ಕ್ರಮ ಜರುಗಿಸಿಲ್ಲ, ಇದು ಅಲ್ಪಸಂಖ್ಯಾತ ಸಮುದಾಯಕ್ಕೆ ಕಾಂಗ್ರೆಸ್ ಮಾಡಿದ ದ್ರೋಹವಾಗಿದೆ.

    ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದ ವರ್ಗಗಳು ಒಂದಾಗಿ ರಾಜಕೀಯ ಅಧಿಕಾರ ಪಡೆದರೆ ಮಾತ್ರ ಗೌರವಯುತವಾಗಿ ಜೀವಿಸಲು ಸಾಧ್ಯವಾಗಿದೆ. ಇದಕ್ಕಾಗಿ ಅವಿರತ ಶ್ರಮದ ಅಗತ್ಯವಿದೆ. .

    ಹಸಿವು ಮುಕ್ತ ಸ್ವಾತಂತ್ರ, ಭಯ ಮುಕ್ತ ಸ್ವಾತಂತ್ರ ದ್ಯೇಯದೊಂದಿಗೆ ಕಾರ್ಯನಿರ್ವಹಿಸುವ ನಾವು ಜನಪರ ಹೋರಾಟ,ಪ್ರತಿಭಟನೆ, ಆಂದೋಲನಗಳ ಜೊತೆಗೆ ಚುನಾವಣೆಗಳು ಕೂಡ ನಮ್ಮ ಮುಖ್ಯ ಧ್ಯೇಯವಾಗಿರಬೇಕು. ಹೋರಾಟ, ಪ್ರತಿಭಟನೆ, ಮತ್ತು ಜನಾಂದೋಲನ ಮೂಲಕ ವಂಚಿತರ ಹಕ್ಕುಗಳನ್ನು ತಕ್ಕಮಟ್ಟಿಗೆ ಕೊಡಿಸಬಹುದಾಗಿದೆ ಆದರೆ ರಾಜಕೀಯ ಪ್ರತಿನಿಧಿತ್ವದಿಂದ ಅದನ್ನು ಸುಲಭಗೊಳಿಸಬಹುದಾಗಿದೆ. ಆದ್ದರಿಂದ

    ಮುಂಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಸ್ಥಳೀಯ ನಗರಡಾಳಿತಗಳ ಚುನಾವಣೆಗಳು ನಮ್ಮ ಗುರಿಯಾಗಿರಬೇಕು. ಈ ನಿಟ್ಟಿನಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಸಿದ್ಧತೆ ನಡೆಯಬೇಕು, ಪಕ್ಷದ ನಾಯಕರು ತಳಮಟ್ಟದಲ್ಲಿ ಮತ್ತು ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಬೇಕು ಈ ಎಂದು ಕರೆ ಕೊಟ್ಟರು.

    ದಕ್ಷಿಣ ಕರ್ನಾಟಕ ಭಾಗದ ಎಲ್ಲಾ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

  • SDPI 17ನೇ ಸಂಸ್ಥಾಪನ ದಿನಾಚರಣೆ: ದಮನಿತರ ಧ್ವನಿಯಾಗಿ ಹೋರಾಟ

    ಗಂಗೊಳ್ಳಿ, ಜೂನ್ 21, 2025: ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ತನ್ನ 17ನೇ ಸಂಸ್ಥಾಪನ ದಿನಾಚರಣೆಯನ್ನು ಇಂದು ಗಂಗೊಳ್ಳಿಯಲ್ಲಿ ಆಚರಿಸಿತು. 2008ರ ಜೂನ್ 21ರಂದು ದಮನಿತರ ರಾಜಕೀಯ ಧ್ವನಿಯಾಗಿ ಹುಟ್ಟಿದ SDPI, ಅಲ್ಪಸಂಖ್ಯಾತರು, ದಲಿತರು ಮತ್ತು ಶೋಷಿತರಿಗಾಗಿ ನಿರಂತರವಾಗಿ ಹೋರಾಡುತ್ತಿದೆ. ಕಾರ್ಯಕ್ರಮವನ್ನು ಗಫೂರ್ ಮೌಲಾನಾ ಸಂಚಾಲನೆ ಮಾಡಿದರು, ಮತ್ತು SDPI ಬೈಂದೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸಿದ್ದಿಕ್ ಬುಡ್ಡಾ ಅವರು ಮಾತನಾಡಿದರು.

    ಕಾರ್ಯಕ್ರಮದಲ್ಲಿ ಗಣ್ಯ ಅತಿಥಿಗಳು

    ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದವರು: ಅಬು ಬಕರ್, ತಬ್ರೇಜ್, ಖಲೀಲ್, ಸಮೀರ್ ಜಿ, ಅತೀಕ್ ಹಾಜಿ ಮತ್ತು ರಿಯಾಜ್ ಮೌಲಾನಾ. ಈ ಗಣ್ಯರು ಕಾರ್ಯಕ್ರಮಕ್ಕೆ ಮೆರಗು ತಂದರು.

    ಪಕ್ಷದ ಉದ್ದೇಶ ಮತ್ತು ಹೋರಾಟ

    ಸಿದ್ದಿಕ್ ಬುಡ್ಡಾ ಮಾತನಾಡಿ, “SDPIಯ ಉಗಮದ ಹಿಂದಿನ ಕಾರಣ, ರಾಜಕೀಯವಾಗಿ ದಮನಿತರಿಗೆ ಕೇವಲ ಓಟ್‌ಗಾಗಿ ಬಳಕೆಯಾಗದೆ, ಅವರಿಗೆ ನ್ಯಾಯ ಒದಗಿಸುವುದೇ ಆಗಿದೆ. ಯಾವುದೇ ಜಾತಿ ಅಥವಾ ಸಮುದಾಯಕ್ಕೆ ಅನ್ಯಾಯವಾದಾಗ, SDPI ಬೀದಿಗಿಳಿದು ಹೋರಾಟದ ಮೂಲಕ ನ್ಯಾಯ ಕೊಡಿಸುವ ಗುರಿಯನ್ನು ಹೊಂದಿದೆ. ನಾವು ಕೇವಲ ಒಂದು ಪಕ್ಷವಲ್ಲ, ದಮನಿತರಿಗೆ ಆಸರೆಯಾಗಿದ್ದೇವೆ,” ಎಂದು ಘೋಷಿಸಿದರು.

    ಫಾಸಿಸ್ಟ್ ಶಕ್ತಿಗಳ ವಿರುದ್ಧ ಖಂಡನೆ

    ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ. ಫೈಝಿ ಅವರನ್ನು ಇಡಿ (ED) ಬಂಧಿಸಿ, ತಿಹಾರ್ ಜೈಲಿನಲ್ಲಿ ಇರಿಸಿರುವುದನ್ನು ಸಿದ್ದಿಕ್ ಬುಡ್ಡಾ ತೀವ್ರವಾಗಿ ಖಂಡಿಸಿದರು. “ಫೈಝಿ ಅವರನ್ನು ಯಾವುದೇ ಅಪರಾಧಕ್ಕಾಗಿ ಬಂಧಿಸಿಲ್ಲ, ಬದಲಿಗೆ ಸತ್ಯವನ್ನು ಮಾತನಾಡಿದ ಧೈರ್ಯಕ್ಕಾಗಿ ಜೈಲಿಗೆ ಕಳುಹಿಸಲಾಗಿದೆ. ಒಂದು ಕಾಲದಲ್ಲಿ ಜವಾಬ್ದಾರಿಯ ಸಂಸ್ಥ ಇಡಿ ಈಗ ಫಾಸಿಸ್ಟ್ ಸರಕಾರದ ರಾಜಕೀಯ ಆಯುಧವಾಗಿದೆ,” ಎಂದು ಆರೋಪಿಸಿದರು.

    ಅಘೋಷಿತ ತುರ್ತು ಪರಿಸ್ಥಿತಿ

    “ಇಂದಿನ ಸಂಸ್ಥಾಪನ ದಿನಾಚರಣೆ ಕೇವಲ ಆಚರಣೆಗೆ ಸೀಮಿತವಾಗಿಲ್ಲ, ಬದಲಿಗೆ ದೇಶದಲ್ಲಿ ಚಾಲ್ತಿಯಲ್ಲಿರುವ ಅಘೋಷಿತ ತುರ್ತು ಪರಿಸ್ಥಿತಿಯನ್ನು ಖಂಡಿಸಲು ಒಂದು ವೇದಿಕೆಯಾಗಿದೆ. ಗೋರಕ್ಷಣೆಯ ಹೆಸರಿನಲ್ಲಿ ಗುಂಪು ಹತ್ಯೆ, ಮುಸ್ಲಿಮರ ಮನೆಗಳ ಮೇಲೆ ಬುಲ್ಡೋಜರ್ ದಾಳಿ, ಮಸೀದಿ-ಮದರಸಗಳ ಮೇಲಿನ ದಾಳಿಗಳು ಒಂದು ಸಮುದಾಯವನ್ನು ಅವಮಾನಿಸುವ ವ್ಯವಸ್ಥಿತ ಪ್ರಯತ್ನವಾಗಿದೆ,” ಎಂದು ಸಿದ್ದಿಕ್ ಬುಡ್ಡಾ ಟೀಕಿಸಿದರು. “ಇದು ಸಬ್ ಕಾ ಸಾತ್, ಸಬ್ ಕಾ ವಿಕಾಸ್ ಅಲ್ಲ, ಬದಲಿಗೆ ಸಬ್ ಕಾ ಶೋಷಣ, ಸಿರ್ಫ್ ಬಿಜೆಪಿ ಕಾ ವಿಕಾಸ್,” ಎಂದು ಕಿಡಿಕಾರಿದರು.

    16 ವರ್ಷಗಳ ಸಾಧನೆ

    ಕಳೆದ 16 ವರ್ಷಗಳಲ್ಲಿ SDPI ದಮಿತರ ದನಿಯಾಗಿ ಬೀದಿಗಳಲ್ಲಿ, ನ್ಯಾಯಾಲಯಗಳಲ್ಲಿ ಮತ್ತು ಪ್ರತಿಭಟನಾ ಸ್ಥಳಗಳಲ್ಲಿ ಕಾರ್ಯನಿರ್ವಹಿಸಿದೆ. ಬಂಧನಗಳು, ದಾಳಿಗಳು ಮತ್ತು ಅಪಪ್ರಚಾರದ ಹೊರತಾಗಿಯೂ, ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ತಮ್ಮ ಕೆಲಸವನ್ನು ಮುಂದುವರಿಸಿದ್ದಾರೆ. “ನಾವು ಎಂ.ಕೆ. ಫೈಝಿ ಅವರೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತೇವೆ. 17 ವರ್ಷಗಳ ಹಿಂದೆ ನಾವು ಒಂದು ದೀಪವನ್ನು ಬೆಳಗಿಸಿದೆವು, ಆ ದೀಪ ಇಂದು ಕತ್ತಲೆಯಿಂದ ಪ್ರಕಾಶಮಾನವಾಗಿ ಉರಿಯುತ್ತಿದೆ,” ಎಂದು ಸಿದ್ದಿಕ್ ಬುಡ್ಡಾ ಹೇಳಿದರು.

    ಅಂಬೇಡ್ಕರ್ ಸ್ಫೂರ್ತಿ

    ಡಾ. ಬಿ.ಆರ್. ಅಂಬೇಡ್ಕರ್ ಅವರ ಮಾತುಗಳನ್ನು ಸ್ಮರಿಸಿದ ಸಿದ್ದಿಕ್, “ಸಂವಿಧಾನವನ್ನು ದುರುಪಯೋಗ ಮಾಡಿಕೊಂಡರೆ, ಅದನ್ನು ಸುಡುವ ಮೊದಲ ವ್ಯಕ್ತಿ ನಾನೇ ಎಂದು ಅಂಬೇಡ್ಕರ್ ಹೇಳಿದ್ದರು. ಇಂದು ರಾಷ್ಟ್ರವನ್ನೇ ಅಪಹರಿಸಲಾಗುತ್ತಿದೆ. ನಾವು ಅದನ್ನು ಮರಳಿ ಪಡೆಯುವ ಮೊದಲಿಗರಾಗುತ್ತೇವೆ,” ಎಂದು ಘೋಷಿಸಿದರು.

    ಧನ್ಯವಾದ ಸೂಚನೆ

    ಕಾರ್ಯಕ್ರಮದಲ್ಲಿ ಮಾತನಾಡಲು ಅವಕಾಶ ನೀಡಿದ SDPI ಗಂಗೊಳ್ಳಿ ಪಂಚಾಯತ್ ಸಮಿತಿಗೆ ಸಿದ್ದಿಕ್ ಬುಡ್ಡಾ ಧನ್ಯವಾದ ಸೂಚಿಸಿದರು. ಗಫೂರ್ ಮೌಲಾನಾ ಅವರ ಸಂಚಾಲನೆ ಕಾರ್ಯಕ್ರಮಕ್ಕೆ ವಿಶೇಷ ಆಕರ್ಷಣೆ ತಂದಿತು. “ಜೈ ಹಿಂದ್, ಜೈ ಸಂವಿಧಾನ, ಜೈ SDPI” ಎಂಬ ಘೋಷಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

  • ಎಸ್ ಡಿ ಪಿ ಐ ಕಾಪು ಕ್ಷೇತ್ರ ಸಮಿತಿ ವತಿಯಿಂದ ಸಾರ್ವಜನಿಕ ರಕ್ತದಾನ ಶಿಬಿರ

    ಕಾಪು, ಜೂನ್ 2, 2025: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾಪು ಕ್ಷೇತ್ರ ಸಮಿತಿ ವತಿಯಿಂದ ಜಿಲ್ಲಾ ಆಸ್ಪತ್ರೆ ರಕ್ತ ನಿಧಿ ಸಂಗ್ರಹ, ಉಡುಪಿ ಇದರ ಸಹಯೋಗದೊಂದಿಗೆ ಮಜೂರು ಪಂಚಾಯತ್ ಸಭಾಂಗಣದಲ್ಲಿ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.

    ರಕ್ತದಾನಕ್ಕಿಂತ ಮುಂಚೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಕಾಪು ಕ್ಷೇತ್ರ ಸಮಿತಿ ಅಧ್ಯಕ್ಷರಾದ ಸಾಧಿಕ್ ಕೆ ಪಿ ಯವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಜಿಲ್ಲಾಸ್ಪತ್ರೆ ರಕ್ತ ನಿಧಿ ಸಂಗ್ರಹಣಾ ವೈದ್ಯಾಧಿಕಾರಿ ವೀಣಾ ಕುಮಾರಿ ಆಗಮಿಸಿ ಉಡುಪಿ ಜಿಲ್ಲೆಯಲ್ಲಿ ರಕ್ತದ ತೀವ್ರ ಕೊರತೆ ಇದ್ದು ಸಂಘ ಸಂಸ್ಥೆಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳುವ ಮೂಲಕ ರಕ್ತದ ಕೊರತೆಯನ್ನು ನೀಗಿಸಲು ಶ್ರಮಿಸಬೇಕು ಎಂದು ಮನವಿ ಮಾಡಿದರು.

    ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಶುದ್ದೀನ್, T.I.Y.A ಮಲ್ಲಾರ್ ಇದರ ಉಪಾಧ್ಯಕ್ಷರಾದ ಅಬ್ದುಲ್ ರಝಾಕ್, ರವಿ ಕರಂದಾಡಿ,ಮಾಲಕರು ಪೂಜಾ ಶಾಮಿಯಾನ, ಮುನೀರ್ ಕಲ್ಮಾಡಿ, ಸಮಾಜ ಸೇವಕರು ಉಡುಪಿ, ಎಸ್ ಡಿ ಪಿ ಐ ಕಾಪು ಪುರಸಭೆ ಸದಸ್ಯರಾದ ನೂರುದ್ದೀನ್, ಎಸ್ ಡಿ ಪಿ ಐ ಮುಖಂಡರಾದ ಅಬೂಬಕ್ಕರ್ ಪಾದೂರ್ ಮತ್ತು ಎಸ್ ಡಿ ಪಿ ಐ ಮಜೂರ್ ಪಂಚಾಯತ್ ಸಮಿತಿ ಅಧ್ಯಕ್ಷರಾದ ಶಂಶುದ್ದೀನ್ ಕರಂದಾಡಿ ಆಗಮಿಸಿದ್ದರು.

    ಈ ಶಿಬಿರದಲ್ಲಿ ಸುಮಾರು 94 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು.