Tag: Shiroor

  • Shiruru: Launch of Guarantee Scheme Convention and Adalat Program

    Shiruru, September 18, 2025 – The five guarantee schemes of the Congress government are designed with women at the center, recognizing the continuous labor of women, said Udupi District Guarantee Schemes Implementation Committee President Ashok Kumar Kodavoor. He inaugurated the Guarantee Scheme Convention and Adalat program organized by the Byndoor Taluk Panchayat, Byndoor Taluk Guarantee Schemes Implementation Committee, and Shiruru Gram Panchayat at the Venkataramana Temple hall in Shiruru Pete on Thursday.

    Kodavoor emphasized that the guarantee schemes have not caused any setback to the state’s welfare programs. “Governments allocate funds for development from time to time, and these schemes have boosted per capita income, increased economic transactions, and benefited the public,” he added.

    Byndoor Taluk Guarantee Schemes Implementation Committee President Mohan Poojari Uppunda presided over the event. Attendees included Byndoor Constituency Akrama Sakrama Committee President and former MLA K. Gopal Poojari, District Guarantee Committee Member Aravinda Poojari, Shiruru Gram Panchayat President Nagarathna Acharya, Vice President Noor Mohammad, Taluk Panchayat EO Rajakumar, Guarantee Committee members, and officials from various departments.

    Mohan Poojari delivered the introductory remarks, and Ganesh Poojari moderated the program.

  • Shiroor: Shiroor Association Donates Computers to Government PU College

    Shiroor, August 31, 2025 – The Shiroor Association, in collaboration with M.M. Foundation, donated eight computers to Shiroor Government Pre-University College to bolster its newly launched computer science program. The Shiroor Association contributed three computers, while M.M. Foundation provided five.

    Speaking at the event, Shiroor Association President Munaf emphasized the college’s legacy as a historic educational institution that has educated thousands of students. Noting a recent decline in enrollment, he stated, “To provide better facilities in rural areas, we are donating computers with the help of donors. We urge rural students to make the most of this opportunity.”

    Present at the event were college Principal Mallikarjun, Kawa Riyaz, Busi Rahmatulla, Neji Khalid, Abdul Khalik, journalist Arun Kumar Shiroor, Buddu Ubaidulla, Makle Yaseen, and college faculty members.

  • Shiroor: Youth Killed in Tragic Bike-Lorry Collision Near Police Checkpost

    Shiroor, August 31, 2025 – A tragic accident occurred near the Shiroor border police checkpost on the night of August 29, 2025, when Gopal J. Mesta (25), a resident of Hadavinakone, Shirur, was killed after a bike he was on collided with a lorry.

    The incident took place around 11:00 PM as Gopal, an active member of the Ganesh Seva Sangha and various local organizations, was heading to eat after participating in a Ganesh Chaturthi program. The collision caused the lorry to run over him, leading to his untimely death. A case has been registered at Byndoor police station, and investigations are underway.

  • ಶಿರೂರು: ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ

    ಶಿರೂರು: ರಾಜ್ಯ ಪೊಲೀಸ್ ಇಲಾಖೆಯ ವಿನೂತನ ಕಾರ್ಯಕ್ರಮವಾದ ಮನೆ ಮನೆಗೆ ಪೊಲೀಸ್ -2025 ಕಾರ್ಯಕ್ರಮ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಶಿರೂರು ಗ್ರಾಮದಲ್ಲಿ ನಡೆಯಿತು.

    ಬೈಂದೂರು ಆರಕ್ಷಕ ಇಲಾಖೆಯ ಠಾಣಾಧಿಕಾರಿ ತಿಮ್ಮೇಶ್ ಬಿ.ಎನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ಈ ಸಂದರ್ಭದಲ್ಲಿ ಶಿರೂರು ಗ್ರಾ.ಪಂ ಅಧ್ಯಕ್ಷೆ ನಾಗರತ್ನ ಆಚಾರ್ಯ,ಉಪಾಧ್ಯಕ್ಷ ಕಾಪ್ಸಿ ನೂರ್‌ಮಹ್ಮದ್,ಗ್ರಾ.ಪಂ ಸದಸ್ಯರು,ಸಿಬ್ಬಂದಿಗಳಾದ ಚಿದಾನಂದ,ಮಾಳಪ್ಪ ದೇಸಾಯಿ ಹಾಜರಿದ್ದರು.

  • ಶಿರೂರು: ಕಾಂಗ್ರೆಸ್‌ ಸತ್ಯದರ್ಶನ ಪ್ರತಿಭಟನೆ,ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಪಕ್ಷದ ಕುರಿತು ಮಾತನಾಡುವ ನೈತಿಕತೆ ಇಲ್ಲಾ – ಕೆ.ಗೋಪಾಲ ಪೂಜಾರಿ

    ಶಿರೂರು: ಬ್ಲಾಕ್ ಕಾಂಗ್ರೆಸ್ ಬೈಂದೂರು ಇದರ ವತಿಯಿಂದ 9/11, ಆಕ್ರಮ -ಸಕ್ರಮ ಅರ್ಜಿ ತಿರಸ್ಕಾರ,ಪಿಂಚಣಿ ರದ್ದತಿ,ವಿದ್ಯುತ್ ದರ ಏರಿಕೆ ಕುರಿತು ಬಿಜೆಪಿ ಸುಳ್ಳಿನ ಪ್ರತಿಭಟನೆಗೆ ಕಾಂಗ್ರೆಸ್‌ ಸತ್ಯದರ್ಶನ ಪ್ರತಿಭಟನೆ ಸೋಮವಾರ ಶಿರೂರು ಗ್ರಾಮ ಪಂಚಾಯತ್ ಎದುರು ನಡೆಯಿತು.

    ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ ಕೇಂದ್ರದಲ್ಲಿ ಬಿಜೆಪಿ ಸರಕಾರ ದೇಶವನ್ನು ಕೊಳ್ಳೆ ಹೊಡೆಯುತ್ತಿದೆ.ಹಿಂದೂತ್ವದ ಹೆಸರಿನಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಬಿಜೆಪಿಗರ ನಿಜ ಬಣ್ಣ ಕರಾವಳಿ ಜನರಿಗೆ ಸತ್ಯದರ್ಶನವಾಗಿದೆ.ಆಕ್ರಮ ಗೋ ಸಾಗಾಟದಲ್ಲಿ ಬಿಜೆಪಿ ನಾಯಕರು ಶಾಮೀಲಾಗುವ ಜೊತೆಗೆ ಬಿಜೆಪಿ ಮುಖಂಡರ ನಂಗಾನಾಚ್ ಬಗ್ಗೆ ತುಟಿಬಿಚ್ಚುತ್ತಿಲ್ಲ. ಅಭಿವೃದ್ದಿ ಕಾರ್ಯಗಳಿಗೆ ಕಾಂಗ್ರೆಸ್ ಹಸ್ತಕ್ಷೇಪ ಮಾಡಿಲ್ಲ.ಜಿ.ಎಸ್.ಟಿ ತೆರಿಗೆ ಮೂಲಕ ರಾಜ್ಯವನ್ನು ಕೊಳ್ಳೆ ಹೊಡೆಯಲಾಗಿದೆ.ಬಡವರ ಪರ ಇರುವ ಆಶ್ರಯ ಯೋಜನೆ,ಆರಾಧನ,ಆಕ್ರಮ -ಸಕ್ರಮ,94/c, ಪಿಂಚಣಿ  ಮುಂತಾದ ಯೋಜನೆಗಳು ಕಾಂಗ್ರೆಸ್ ಅವಧಿಯಲ್ಲಿ ಜಾರಿಗೆ ಬಂದಿದೆ.ಬಿಜೆಪಿ ನಾಯಕರು ಕಾಂಗ್ರೆಸ್ ಕುರಿತು ಮಾತನಾಡುವ ನೈತಿಕತೆ ಇಲ್ಲಾ ಎಂದು ಹೇಳಿದರು.

    ಶಾಸಕರ ನಡೆ ವಿರುದ್ದ ಶೀಘ್ರದಲ್ಲಿ ಪ್ರತಿಭಟನೆ: ಬೈಂದೂರು ಕ್ಷೇತ್ರಕ್ಕೆ ಆಘಾದವಾದ ರಾಜಕೀಯ ಹಿನ್ನೆಲೆಯಿದೆ.ಈ ಕ್ಷೇತ್ರವನ್ನು ಪ್ರತಿನಿಧಿಸಿದ ಪ್ರತಿ ಶಾಸಕರು ಒಂದಿಷ್ಟು ಬದ್ದತೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ.ಆದರೆ ಈ ಬಾರಿಯ ಬಿಜೆಪಿ ಶಾಸಕರು ಮಾತ್ರ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.ಕ್ಷೇತ್ರದ ಜನರಿಗೆ ಅನುಕೂಲವಾಗಲು ಶಾಸಕರ ಕಛೇರಿಯನ್ನು ಬೈಂದೂರಿನಲ್ಲಿ ಸ್ಥಾಪಿಸಲಾಗಿದೆ.ಆದರೆ ಶಾಸಕರು ಮಾತ್ರ ಉಪ್ಪುಂದದ ಪಕ್ಷದ ಕಛೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸುತ್ತಾರೆ.ಖಾಸಗಿ ಕಛೇರಿಯಲ್ಲಿ ಸಂಜೀವಿನಿ ಸೇರಿದಂತೆ ಸರಕಾರಿ ಅಧಿಕಾರಿಗಳ ಸಭೆ ನಡೆಸುವುದು ಸರಿಯಲ್ಲ.ಇದು ಮುಂದುವರಿದರೆ ಶಾಸಕರ ನಡೆ ವಿರುದ್ದ ಶೀಘ್ರ ಪ್ರತಿಭಟನೆ ಮಾಡಲಾಗುತ್ತದೆ ಎಂದು ಮಾಜಿ ಶಾಸಕರು ಹೇಳಿದರು.

    ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ಸದಸ್ಯರಾದ ಪ್ರಕಾಶ್ಚಂದ್ರ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಎಸ್.ರಾಜು ಪೂಜಾರಿ,ಶೇಖರ ಪೂಜಾರಿ ಉಪ್ಪುಂದ,ಶಿರೂರು ಗ್ರಾ.ಪಂ ಅಧ್ಯಕ್ಷೆ ನಾಗರತ್ನ ಆಚಾರ್ಯ,ಉಪಾಧ್ಯಕ್ಷ ಕಾಪ್ಸಿ ನೂರ್‌ಮಹ್ಮದ್,ಗೌರಿ ದೇವಾಡಿಗ,ಯುವ ಕಾಂಗ್ರೆಸ್‌ಅಧ್ಯಕ್ಷ ಭರತ್ ದೇವಾಡಿಗ,ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮೋಹನ ಪೂಜಾರಿ,ಮುಖಂಡರಾದ ರಘುರಾಮ ಶೆಟ್ಟಿ,ಮುಖಂಡರಾದ ರಘುರಾಮ ಕೆ.ಪೂಜಾರಿ,ಉದಯ ಪೂಜಾರಿ,ಪ್ರಸನ್ನ ಕುಮಾರ್ ಶೆಟ್ಟಿ,ಮುಕ್ರಿ ಅಲ್ತಾಫ್,ಮಹ್ಮದ್ ಗೌಸ್,ದಿಲ್‌ಶಾದ ಬೇಗಂ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಜರಿದ್ದರು.

    ಬೈಂದೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮದನ್ ಕುಮಾರ್ ಉಪ್ಪುಂದ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬೈಂದೂರು ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಅರವಿಂದ ಪೂಜಾರಿ ನಾಡ ಕಾರ್ಯಕ್ರಮ ನಿರೂಪಿಸಿದರು.ಜಗದೀಶ ದೇವಾಡಿಗ ವಂದಿಸಿದರು.

  • ಶಿರೂರು ಗ್ರಾಮಸಭೆ: ಅಧಿಕಾರಿಗಳು ಗೈರು; ಸಾರ್ವಜನಿಕರಿಂದ ಆಕ್ರೋಶ

    ಶಿರೂರು, ಜುಲೈ 5, 2025: ಸಾರ್ವಜನಿಕರಿಗೆ ಮಾಹಿತಿ ನೀಡಬೇಕಾದ ಗ್ರಾಮಸಭೆಯಲ್ಲಿ ಕೆಲವು ಅಧಿಕಾರಿಗಳು ಗೈರು ಹಾಜರಾಗಿದ್ದು ಸಾರ್ವಜನಿಕರಿಗೆ ಆಕ್ರೋಶ ವ್ಯಕ್ತಪಡಿಸಿದ ಘಟನೆ ಶಿರೂರು ಗ್ರಾಮಸಭೆಯಲ್ಲಿ ನಡೆದಿದೆ.

    ಶಿರೂರು ಗ್ರಾಮಸಭೆ ಶನಿವಾರ 11 ಗಂಟೆಗೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಆಯೋಜಿಸಿದ್ದು 22 ಅಧಿಕಾರಿಗಳು ಹಾಜರಾಗಬೇಕಾದ ಸಭೆಯಲ್ಲಿ ಕೇವಲ 10 ಜನ ಅಧಿಕಾರಿಗಳು ಮಾತ್ರ ಹಾಜರಾಗಿದ್ದಾರೆ.ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಪದೇ ಪದೇ ಗ್ರಾಮಸಭೆ ಕಾಟಾಚಾರದ ಸಭೆಯಾಗುತ್ತಿದೆ.ಹೀಗಾಗಿ ಸಭೆಗೆ ಬಾರದ ಅಧಿಕಾರಿಗಳ ನಡೆಯನ್ನು ಗ್ರಾಮ ಪಂಚಾಯತ್ ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು ಮತ್ತು ಈ ಬಗ್ಗೆ ನಿರ್ಣಯ ಕೈಗೊಳ್ಳಲು ಒತ್ತಾಯಿಸಿದರು.ಇನ್ನುಳಿದಂತೆ ಗ್ರಾಮದ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.

    ಶಿರೂರು ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳೆ ಇಲ್ಲಾ; ಅತೀ ದೊಡ್ಡ ಗ್ರಾಮ ಪಂಚಾಯತ್ ವ್ಯಾಪ್ತಿ ಹೊಂದಿರುವ ಶಿರೂರಿನ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲಾ. ಪ್ರತಿದಿನ ಇಲ್ಲಿಗೆ ನೂರಾರು ರೋಗಿಗಳು ಚಿಕಿತ್ಸೆಗಾಗಿ ಬಂದರೆ ಶಿರೂರು ಸರಕಾರಿ ಆಸ್ಪತ್ರೆಯಲ್ಲಿ ಖಾಯಂ ವೈದ್ಯರಿಲ್ಲದಿರುವುದು ಸಾರ್ವಜನಿಕರಿಗೆ ಸಮಸ್ಯೆಯಾಗಿ ಕಾಡಿದೆ.ದಾನಿಗಳ ಸಹಕಾರವಿದ್ದರು ಕೂಡ ಇಲಾಖೆಯ ಬೇಜವಬ್ದಾರಿ ಸಲ್ಲದು ಎಂದು ಗ್ರಾ.ಪಂ ಸದಸ್ಯ ಪ್ರಸನ್ನ ಕುಮಾರ್ ಶೆಟ್ಟಿ ಹಾಗೂ ಸಾರ್ವಜನಿಕರು ಹೇಳಿದರು.

    ನೀರ್‍ಗದ್ದೆ ಅಂಗನವಾಡಿ ಶೀಘ್ರ ನಿರ್ಮಾಣವಾಗಬೇಕು: ಶಿರೂರು ಗ್ರಾಮದ ನೀರ್‍ಗದ್ದೆ ಬಳಿ ಈ ಹಿಂದೆ ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ನಡೆಸುತ್ತಿದ್ದು ಈಗ ಸರಕಾರದಿಂದ ಜಾಗ ಮಂಜೂರಾಗಿದೆ.ಆದರೆ ಇಲಾಖೆ ಇದುವರೆಗೆ ಅಂಗನವಾಡಿ ಕಟ್ಟಡ ನಿರ್ಮಾಣವಾಗಿಲ್ಲ.ಹೀಗಾಗಿ ಇಲಾಖೆ ಈ ಬಗ್ಗೆ ಶೀಘ್ರವಾಗಿ ಕಟ್ಟಡ ನಿರ್ಮಾಣವಾಗಬೇಕು ಎಂದು ಗ್ರಾ.ಪಂ ಸದಸ್ಯ ಉದಯ ಪೂಜಾರಿ ಮೈದಿನಪುರ ಆಗ್ರಹಿಸಿದರು.

    ಮೆಸ್ಕಾಂ ಇಲಾಖೆ ಸ್ವಿಚ್ ಆಫ್: ಗ್ರಾ.ಪಂ ಸದಸ್ಯರಾದ ಮುಕ್ರಿ ಅಲ್ತಾಫ್,ಮಹ್ಮದ್ ಗೌಸ್,ಗಣಪತಿ ಗಾಣಿಗ,ಯಾಶೀನ್ ಕೆಸರಕೋಡಿ ಮುಂತಾದವರು ಮೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಸಣ್ಣ ಕಂಬ ಬಿದ್ದರು ಮೂರು ದಿನ  ಪವರ್ ಕಟ್ ಮಾಡಲಾಗುತ್ತದೆ.ಪ್ರತಿದಿನ ಶಿರೂರು ಭಾಗದಲ್ಲಿ ವಿದ್ಯುತ್ ಕಣ್ಣುಮುಚ್ಚಾಲೆ ಸಹಜವಾಗಿ ಬಿಟ್ಟಿದೆ.ಮೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿದರೆ ಸ್ವಿಚ್ ಆಫ್ ಮಾಡಿಕೊಳ್ಳುತ್ತಾರೆ.ಹೀಗಾಗಿ ಮೆಸ್ಕಾಂ ವಿರುದ್ದ ಗ್ರಾಮಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

    ಶಿರೂರು ಗ್ರಾ.ಪಂ ಅಧ್ಯಕ್ಷೆ ನಾಗರತ್ನ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.

    ಈ ಸಂದರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷ ಕಾಪ್ಸಿ ನೂರ್‌ಮಹ್ಮದ್,ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ರಾಜೇಂದ್ರ ಶೆಟ್ಟಿ,ನೋಡೆಲ್  ಅಧಿಕಾರಿ ಗಾಯತ್ರಿದೇವಿ,ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾ.ಪಂ ಸದಸ್ಯರು ಉಪಸ್ಥಿತರಿದ್ದರು.

  • ಶಿರೂರು: ಅಂಬುಲೆನ್ಸ್ ಡಿಕ್ಕಿ; ಟೋಲ್ ಸಿಬ್ಬಂದಿಗೆ ಗಂಭೀರ ಗಾಯ

    ಬೈಂದೂರು, ಮೇ 20, 2025: ದಿನಾಂಕ 17/05/2025 ರಂದು ರಾತ್ರಿ 10:38 ಗಂಟೆಗೆ ಬೈಂದೂರು ತಾಲೂಕು ಶಿರೂರು ಗ್ರಾಮದ ಶಿರೂರು ಟೋಲ್‌ನಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿ ಸಂದೀಪ್ ಬಾಲಸೋ ಸೂರ್ಯವಂಶಿ (25) ಅವರಿಗೆ ಅಂಬುಲೆನ್ಸ್ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಸಂದೀಪ್ ಅವರು ಟೋಲ್‌ನ W1 ಲೇನ್ ಬದಿಯ ರಸ್ತೆಯಲ್ಲಿ ನಿಂತಿದ್ದಾಗ, ಬೈಂದೂರಿನಿಂದ ಭಟ್ಕಳ ಕಡೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬರುತ್ತಿದ್ದ KL-20-G-3236 ಸಂಖ್ಯೆಯ ಅಂಬುಲೆನ್ಸ್ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದೆ.

    ಈ ಘಟನೆಯಲ್ಲಿ ಸಂದೀಪ್ ರಸ್ತೆಗೆ ಬಿದ್ದು, ಅವರ ಕೆನ್ನೆ, ಕಿವಿ ಮತ್ತು ಮೂಗಿನ ಭಾಗಕ್ಕೆ ಗಂಭೀರ ಒಳಗಾಯವಾಗಿ ರಕ್ತಸ್ರಾವವಾಗಿದೆ. ಗಂಭೀರವಾಗಿ ಗಾಯಗೊಂಡ ಅವರನ್ನು ಮೊದಲು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 103/2025, ಕಲಂ 281, 125(b) BNS ರಂತೆ ಪ್ರಕರಣ ದಾಖಲಾಗಿದೆ.