Tag: Udupi

  • ಕೋಟ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಮೂವರ ಬಂಧನ

    ಕೋಟ, ಜೂನ್ 04, 2025:: ಬ್ರಹ್ಮಾವರ ತಾಲೂಕಿನ ಶಿರಿಯಾರ ಗ್ರಾಮದ ಸಾಹೈಬರಕಟ್ಟೆ ರಿಕ್ಷಾ ನಿಲ್ದಾಣದ ಸಮೀಪ ಐಪಿಎಲ್ ಟಿ20 ಕ್ರಿಕೆಟ್ ಪಂದ್ಯಾವಳಿಗೆ ಸಂಬಂಧಿಸಿದಂತೆ ಅಕ್ರಮ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಮೂವರನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.

    ದಿನಾಂಕ 03-06-2025 ರಂದು ರಾತ್ರಿ, ಕೋಟ ಪೊಲೀಸ್ ಠಾಣೆಯ ಉಪನಿರೀಕ್ಷಕ ರಾಘವೇಂದ್ರ ಸಿ. ಅವರಿಗೆ, ಸಾಹೈಬರಕಟ್ಟೆ ರಿಕ್ಷಾ ನಿಲ್ದಾಣದ ಸಮೀಪ ಕೆಲವು ಯುವಕರು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡಗಳ ನಡುವಿನ ಐಪಿಎಲ್ ಟಿ20 ಫೈನಲ್ ಪಂದ್ಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿರುವ ಬಗ್ಗೆ ಮಾಹಿತಿ ದೊರೆತಿತ್ತು.

    ಈ ಮಾಹಿತಿಯ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿಗಳಾದ ಶಿವರಾಜ್ (1ನೇ ಆರೋಪಿ), ಪ್ರದೀಪ್ (2ನೇ ಆರೋಪಿ), ಮತ್ತು ಚಂದ್ರ ಜನ್ನಾಡಿ (3ನೇ ಆರೋಪಿ) ಎಂಬವರನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಮೊಬೈಲ್ ಫೋನ್‌ಗಳನ್ನು ಬಳಸಿಕೊಂಡು ಆನ್‌ಲೈನ್ ಬೆಟ್ಟಿಂಗ್ ಆಪ್ ಮತ್ತು ವೆಬ್‌ಸೈಟ್‌ ಮೂಲಕ ಆರ್‌ಸಿಬಿ ಮತ್ತು ಪಿಬಿಕೆಎಸ್ ತಂಡಗಳಿಗೆ ಸಂಬಂಧಿಸಿದಂತೆ ಅಕ್ರಮ ಬೆಟ್ಟಿಂಗ್‌ನಲ್ಲಿ ತೊಡಗಿದ್ದರು.

    ಪೊಲೀಸರು ಆರೋಪಿಗಳಿಂದ ಕ್ರಿಕೆಟ್ ಬೆಟ್ಟಿಂಗ್‌ಗೆ ಬಳಸಿದ ಮೂರು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಘಟನೆಯ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 110/2025, ಕಲಂ: 112 BNS ಮತ್ತು 78(i)(iii) KP Act ರಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಚಾಲನೆಯಲ್ಲಿದೆ.

  • ಉಡುಪಿ: ಹೊಲಿಗೆ ಯಂತ್ರ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

    ಉಡುಪಿ: ಉಡುಪಿ ನಗರಸಭೆಯ ನಗರೋತ್ಥಾನ 4ನೇ ಹಂತದ ಅನುದಾನದಡಿ ಶೇ. 24.10, ಶೇ.7.25 ಮತ್ತು ಶೇ.5 ಕ್ಕೆ ಮಂಜೂರಾದ ಮೊತ್ತದಲ್ಲಿ ಸರ್ಕಾರದ ಸುತ್ತೋಲೆಯಲ್ಲಿ ಸೂಚಿಸಿರುವಂತೆ ವ್ಯಕ್ತಿ ಸಂಬಂಧಿತ ಸೌಲಭ್ಯಗಳ ಅಡಿಯಲ್ಲಿ ಹೊಲಿಗೆ ಯಂತ್ರ ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

    ಜಾತಿ ಮತ್ತು ಆದಾಯ ದೃಢಪತ್ರ, ಪ್ರಸಕ್ತ ಸಾಲಿನ ಆಸ್ತಿತೆರಿಗೆ ಪಾವತಿ ರಶೀದಿ, ಪಡಿತರ ಚೀಟಿ ಪ್ರತಿ, ಆಧಾರ್‌ಕಾರ್ಡ್ ಪ್ರತಿಯೊಂದಿಗೆ ಅರ್ಜಿ ಸಲ್ಲಿಸಲು ಜೂನ್ 15 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಪೌರಾಯುಕ್ತರು, ನಗರಸಭೆ, ಉಡುಪಿ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

  • ಉಡುಪಿ: ಹಳೆಯ ವಿಡಿಯೋ ಶೇರ್ ಮಾಡಿ ಕೋಮು ಗಲಭೆಗೆ ಪ್ರಚೋದನೆ: ಮಾಜಿ ಜಿಪಂ ಸದಸ್ಯನ ಬಂಧನ

    ಕೋಟ: ಸಾಮಾಜಿಕ ಜಾಲತಾಣಗಳಲ್ಲಿ ಹಳೆಯ ವಿಡಿಯೋವೊಂದನ್ನು ಹಂಚಿಕೊಂಡು ಕೋಮು ಸಂಘರ್ಷಕ್ಕೆ ಪ್ರಚೋದಿಸಿ, ಕೋಮು ಗಲಭೆ ಉಂಟುಮಾಡಲು ಪ್ರೇರೇಪಿಸಿದ ಆರೋಪದ ಮೇಲೆ ಕೋಟ ಪೊಲೀಸರು ಆರೋಪಿಯೊಬ್ಬನನ್ನು ಮೇ 31, 2025ರಂದು ಬಂಧಿಸಿದ್ದಾರೆ.

    ಬಂಧಿತ ಆರೋಪಿ ಉಡುಪಿಯ ಮಾಜಿ ಜಿಪಂ ಸದಸ್ಯ ರಾಘವೇಂದ್ರ ಕಾಂಚನ್ ಬಾರಿಕೆರೆ. ಈತನ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಡಬಲ್ ಮರ್ಡರ್ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ. ಬಂಧನದ ನಂತರ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

    ರಿಯಾಜ್ ಪರಂಗಿ ಪೇಟೆ ಎಂಬವರ ಹಳೆಯ ವಿಡಿಯೋವನ್ನು (2021ರಲ್ಲಿ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ) ಶೇರ್ ಮಾಡಿ, ಸ್ಥಳೀಯ ಹಿಂದೂ ಯುವಕರನ್ನು ಕೋಮು ಸಂಘರ್ಷಕ್ಕೆ ಪ್ರಚೋದಿಸುವ ಮತ್ತು ಕೋಮು ಗಲಭೆಗೆ ಪ್ರೇರೇಪಿಸುವ ರೀತಿಯಲ್ಲಿ ರಾಘವೇಂದ್ರ ಕಾಂಚನ್ ಬಾರಿಕೆರೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಈತನ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 108/2025ರಡಿ ಕಲಂ 196, 56 BNS ಪ್ರಕಾರ ಪ್ರಕರಣ ದಾಖಲಾಗಿದೆ.

  • ಮಲ್ಪೆ: ಕಾರು ಬಾಡಿಗೆ ವಿವಾದ; ದ್ರೋಹ, ಬೆದರಿಕೆ: ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲು

    ಮಲ್ಪೆ, ಮೇ 27, 2025: ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ಕಾರು ಬಾಡಿಗೆ ವ್ಯವಹಾರಕ್ಕೆ ಸಂಬಂಧಿಸಿದಂತೆ ನಂಬಿಕೆ ದ್ರೋಹ ಮತ್ತು ಬೆದರಿಕೆ ಆರೋಪದ ಮೇಲೆ ಮೂವರು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಪಿರ್ಯಾದಿದಾರರಾದ ಇಕ್ಬಾಲ್‌ ಹೆಚ್‌, ಕೊಡವೂರು ನಿವಾಸಿ, ಲಘು ವಾಹನಗಳ ಬಾಡಿಗೆ ವ್ಯವಹಾರ ಮಾಡುತ್ತಿದ್ದು, ಒಂಬತ್ತು ತಿಂಗಳ ಹಿಂದೆ 1ನೇ ಆರೋಪಿಯಾದ ಶಂಕರ್‌ಗೆ ಟೊಯೊಟಾ ಇಟಿಯೋಸ್‌ ಲಿವಾ ಜಿ ಡಿ ಕಾರನ್ನು ಬಾಡಿಗೆಗೆ ನೀಡಿದ್ದರು.

    ವರದಿಯ ಪ್ರಕಾರ, ಶಂಕರ್‌ ಕಾರನ್ನು ವಾಪಸ್‌ ನೀಡದೆ, ಬಾಡಿಗೆ ಹಣ ಪಾವತಿಸದೆ, ಕಾರನ್ನು 2ನೇ ಆರೋಪಿಯಾದ ಹರ್ಷದ್‌ಗೆ ನೀಡಿರುವುದಾಗಿ ಬೆದರಿಕೆಯ ರೀತಿಯಲ್ಲಿ ಮಾತನಾಡಿದ್ದಾರೆ. ಇಕ್ಬಾಲ್‌ ಅವರು ಹರ್ಷದ್‌ನಲ್ಲಿ ವಿಚಾರಿಸಿದಾಗ, ಕಾರು ತಮ್ಮ ಬಳಿ ಇಲ್ಲ ಎಂದು ತಿಳಿಸಿದ್ದಾರೆ. ಕೆಲವು ದಿನಗಳ ನಂತರ, 3ನೇ ಆರೋಪಿಯಾದ ಆಶಿಲ್‌, ಇಕ್ಬಾಲ್‌ಗೆ ಫೋನ್‌ ಮಾಡಿ, ಕಾರು ವಾಪಸ್‌ ಬೇಕಾದರೆ ತಾನು ಸೂಚಿಸುವ ಬ್ಯಾಂಕ್‌ ಖಾತೆಗೆ 1,50,000 ರೂಪಾಯಿ ಜಮಾ ಮಾಡಬೇಕು, ಇಲ್ಲವಾದರೆ ಕಾರಿನ ಬಿಡಿಭಾಗಗಳನ್ನು ಗುಜರಿ ಅಂಗಡಿಗೆ ಮಾರಾಟ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

    ಶಂಕರ್‌, ಹರ್ಷದ್‌ ಮತ್ತು ಆಶಿಲ್‌ ಸೇರಿಕೊಂಡು ಇಕ್ಬಾಲ್‌ಗೆ ನಂಬಿಕೆ ದ್ರೋಹ ಮಾಡಿ, ವಂಚಿಸಿ, ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಘটನೆಗೆ ಸಂಬಂಧಿಸಿದಂತೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಖಾಸಗಿ ಪ್ರಕರಣದಂತೆ ಅಪರಾಧ ಕ್ರಮಾಂಕ 62/2025 ರ ಅಡಿಯಲ್ಲಿ ಕಲಂ 61, 316, 318, 351(3) BNS ರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.

  • ಬ್ರಹ್ಮಾವರ: ಪರಿಶಿಷ್ಟ ಜಾತಿಯ ಮಹಿಳೆಯ ಮೇಲೆ ದೌರ್ಜನ್ಯ; ಪ್ರಕರಣ ದಾಖಲು

    ಬ್ರಹ್ಮಾವರ, ಮೇ 27, 2025: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಚಾಂತಾರು ಗ್ರಾಮದ ಕೃಷಿ ಕೇಂದ್ರದಲ್ಲಿ ಪರಿಶಿಷ್ಟ ಜಾತಿಯ ಮಹಿಳೆಯೊಬ್ಬರ ಮೇಲೆ ದೌರ್ಜನ್ಯ ನಡೆದ ಘಟನೆ ವರದಿಯಾಗಿದೆ. ಪಿರ್ಯಾದಿದಾರರಾದ ಶ್ರೀಮತಿ ಜ್ಯೋತಿ (39), ಶಿರಿಯಾರ ಗ್ರಾಮದ ನಿವಾಸಿಯಾಗಿದ್ದು, ದಿನಾಂಕ 23/05/2025 ರಂದು ಸಸಿ ವಿತರಣಾ ತರಬೇತಿ ಪ್ರಮಾಣಪತ್ರ ಪಡೆಯಲು ಕೃಷಿ ಕೇಂದ್ರಕ್ಕೆ ತೆರಳಿದ್ದರು.

    ವರದಿಯ ಪ್ರಕಾರ, ಸಭಾ ಕಾರ್ಯಕ್ರಮ ಮುಗಿದ ಬಳಿಕ ಆರೋಪಿ 1 ಹಾಗೂ ಆಕೆಯ ಜೊತೆಗಾರರಿಗೆ ಮಾತ್ರ ಪ್ರಮಾಣಪತ್ರ ವಿತರಿಸಲಾಗಿತ್ತು. ಈ ಬಗ್ಗೆ ಅಧಿಕಾರಿ ಆರೋಪಿ 2 ಅವರನ್ನು ಜ್ಯೋತಿ ಪ್ರಶ್ನಿಸಿದಾಗ, ಅವರು ಕೋಪಗೊಂಡು ಆರೋಪಿ 1 ಗೆ ಜ್ಯೋತಿಯನ್ನು “ನೋಡಿಕೊಳ್ಳುವಂತೆ” ಸೂಚಿಸಿದ್ದಾರೆ. ಸಂಜೆ 4 ಗಂಟೆ ಸುಮಾರಿಗೆ, ಜ್ಯೋತಿ ತರಬೇತಿ ಕೊಠಡಿಯ ಹೊರಗೆ ನಿಂತಿರುವಾಗ, ಆರೋಪಿ 1 ಮತ್ತು ಆರೋಪಿ 3 ಎಂಬುವವರು ಜ್ಯೋತಿಯನ್ನು ಕೊಠಡಿಯೊಳಗೆ ತಳ್ಳಿ, ಬಾಗಿಲಿಗೆ ಚಿಲಕ ಹಾಕಿ, “ನೀನು ಅಧಿಕಾರಿಗಳಿಗೆ ಗಾಂಚಲಿ ಮಾಡ್ತಿಯಾ?” ಎಂದು ಕೈಯಿಂದ ಹೊಡೆದು, ಕುರ್ಚಿಯಿಂದ ಹಲ್ಲೆ ಮಾಡಿ, ಕಾಲಿನಿಂದ ಹೊಟ್ಟೆಗೆ ಒದ್ದಿದ್ದಾರೆ . ಬಳಿಕ ಆರೋಪಿ 2 ಕೂಡ ಸ್ಥಳಕ್ಕೆ ಆಗಮಿಸಿ, ಬಾಗಿಲಿಗೆ ಚಿಲಕ ಹಾಕಿ ದೌರ್ಜನ್ಯಕ್ಕೆ ಸಹಕರಿಸಿದ್ದಾರೆ ಎಂದು ಆರೋಪಿಸಲಾಗಿದೆ.

    ಪಿರ್ಯಾದಿದಾರರು ಪರಿಶಿಷ್ಟ ಜಾತಿಗೆ ಸೇರಿದವರೆಂದು ತಿಳಿದಿದ್ದರೂ, ಉದ್ದೇಶಪೂರ್ವಕವಾಗಿ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 119/2025 ರ ಅಡಿಯಲ್ಲಿ ಕಲಂ 127(2), 115(2), 118(1), 352, 351(2), 114 R/W 3(5) BNS ಹಾಗೂ ಕಲಂ 3(1)(r), 3(1)(s), 3(2)(v-a) SC/ST POA Act ರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • Namma Nada Okkoota to Host Career Guidance & Achievers Felicitation Ceremony on 31st

    Udupi, May 24, 2025 – Namma Nada Okkoota (R), Udupi District, is set to host its upcoming Career Guidance & Achievers Felicitation Ceremony 2025 on Saturday, May 31, at Mother Palace Brahmavara. The event, scheduled to begin at 2:00 p.m., aims to celebrate academic excellence and provide career guidance to students.

    The ceremony will be presided over by Mushtaq Ahmed Belve, President of NNO Udupi District. Prominent chief guests include Jayaprakash Hegde, former Minister of the Government of Karnataka, Dr. Rizwan Ahmad, Vice President of NNO and Chairman of City Nursing Home Karkala, M.A. Moula, President of Udupi Jilla Muslim Okkoota, Dr. Irfan Ahmed, Medical Director of Malnad Lifeline Hospital Shivamogga, and Moulana U.K. Mustafa Saadi, General Manager of Al Ihsaan Group of Institutions, Mulloor. Master Rafeeque Mangalore and Advocate Suhan Sastan will serve as resource persons, sharing valuable insights.

    The event is being organized under the leadership of Mushtaq Ahmed Belve, with Zameer Ahmed Rashdi as the program convener. Other key organizers include Zaheer Nakhuda Gangolli (General Secretary), Nakwa Yahya Malpe (Treasurer), Nazeer Nejar (Taluk President, Udupi), S. Dasthagir Kandlur (Taluk President, Kundapur), Tajuddin Ibrahim (Taluk President, Brahmavar), Ashraf Padubidri (Taluk President, Kapu), Shakir Hussain Shisha (Taluk President, Karkala), Abdul Sami Halgeri (Taluk President, Byndoor), and Mohammed Rafique Ajeekar (Taluk President, Hebri).

    The Namma Nada Okkoota has extended an open invitation to the community, encouraging attendance to support and appreciate the students’ achievements. The event highlights the organization’s dedication to promoting education and career development in the region.

  • Diploma Admissions: Applications Invited

    Udupi, May 23, 2025: Applications are invited from eligible candidates who have passed the SSLC or equivalent examination with a minimum of 35% aggregate marks for admission to the first year of diploma courses in government polytechnics across the state for the current academic year.

    Candidates seeking admission to the first-year diploma program at the Government Polytechnic in Udupi can apply offline for the remaining vacant seats by visiting the institute with original documents. The last date for submitting applications is May 27, 2025. For further details, candidates may contact the Principal, Government Polytechnic, Udupi, at 0820-2570244, according to a press release from the institute’s office.

  • ಲಯನ್ಸ್ ಕ್ಲಬ್ ಉಡುಪಿಯಿಂದ ಬ್ರಹತ್ ರಕ್ತದಾನ, ನೇತ್ರ, ಸಾಮಾನ್ಯ ಅರೋಗ್ಯ, ಕೀಲು ಮತ್ತು ಎಲುಬು ತಪಾಸಣಾ ಶಿಬಿರ

    ಉಡುಪಿ: ಲಯನ್ಸ್ ಕ್ಲಬ್ ಉಡುಪಿ, ಸಿ. ಎಸ್. ಐ. ಲಾಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆ, ಉಡುಪಿ ಸರಕಾರಿ ರಕ್ತ ನಿಧಿ ಘಟಕ ಅಜ್ಜರಕಾಡು, ಉಡುಪಿ ಗಿರಿಜಾ ಹೆಲ್ತ್ ಕೇರ್ ಹಾಗೂ ಸರ್ಜಿಕಲ್ಸ್ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಬ್ರಹತ್ ರಕ್ತದಾನ, ನೇತ್ರ, ಸಾಮಾನ್ಯ ಅರೋಗ್ಯ ಕೀಲು ಮತ್ತು ಎಲುಬು ತಪಾಸಣಾ ಶಿಬಿರ ದಿನಾಂಕ 11-05-2025 ಭಾನುವಾರ ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 1:00 ಗಂಟೆ ವರೆಗೆ ಉಡುಪಿಯ ಮಿಷನ್ ಆಸ್ಪತ್ರೆಯ ಬಳಿಯ ಮಲ್ಟಿ ಪರ್ಪಸ್ ಹಾಲ್ (LMH) ನಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

    ಇದರಲ್ಲಿ ಉಡುಪಿ ಜಿಲ್ಲಾ ಆಸ್ಪತ್ರೆಯ ಬ್ಲಡ್ ಸೆಂಟರ್ ವಿಭಾಗದ ಡಾ. ವೀಣಾ ಕುಮಾರಿ ಎಂ. , ಕೀಲು ಮತ್ತು ಎಲುಬು ತಜ್ಞರಾದ ಡಾ. ಅರ್ಜುನ್ ಬಲ್ಲಾಳ್, ನೇತ್ರ ತಜ್ಞರಾದ ಡಾ. ಅಭಿನವ್ ಅಶೋಕ್ ಹಾಗು ಸಾಮಾನ್ಯ ಆರೋಗ್ಯ ತಜ್ಞರಾದ ಡಾ. ಸುಮನ್ ಆರ್. ಶೆಟ್ಟಿ ಯವರಿಂದ ಸಂಬಂಧಪಟ್ಟ ರೋಗದ ಬಗ್ಗೆ ಮಾಹಿತಿ ನೀಡಲಾಗುದು.

    ಸಾರ್ವಜನಿಕರಿಂದ ಈ ಸುವರ್ಣಾವಕಾಶದ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ವಿನಂತಿಸಿದ್ದಾರೆ.

    ಸಹಭಾಗಿ ಸಂಘಟನೆಗಳು :

    ಕ್ಯಾಥೊಲಿಕ್ ಸಭಾ (ರಿ.) ಉಡುಪಿ ವಲಯ

    ICYM (ರಿ.) ಉಡುಪಿ ವಲಯ

    ಭಾರತೀಯ ಕ್ರೈಸ್ತ ಒಕ್ಕೂಟ (ರಿ) ಉಡುಪಿ

    ಉಡುಪಿ ರನ್ನರ್ಸ್ ಕ್ಲಬ್ (ರಿ) ಉಡುಪಿ

    ಜಮೈತುಲ್ ಅಲ್ ಫಲಾಹ್ (ರಿ) ಉಡುಪಿ

  • ಕುಂದಾಪುರ ಫ್ಲೈಓವರ್‌ ಕಾಮಗಾರಿ ಮುಗಿಯದಿದ್ದರೆ ಟೋಲ್‌ ಬಂದ್‌

    ಕುಂದಾಪುರ: ಪಡುಬಿದ್ರಿ ಸೇತುವೆ ಜನವರಿಯಲ್ಲಿ, ಇಲ್ಲಿನ ಶಾಸ್ತ್ರಿ ಸರ್ಕಲ್‌ ಬಳಿಯ ಫ್ಲೈಓವರ್‌ಕಾಮಗಾರಿಯನ್ನು ಮಾರ್ಚ್‌ ಅಂತ್ಯದೊಳಗೆ ಪೂರ್ಣಗೊಳಿಸದಿದ್ದರೆ ಎಪ್ರಿಲ್‌ನಿಂದ ಸಾಸ್ತಾನ ಟೋಲ್‌ಗೇಟ್‌ನಲ್ಲಿ ಸುಂಕ ವಸೂಲಿಗೆ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ಹೇಳಿದ್ದಾರೆ.

    ಅವರು ಸೋಮವಾರ ಇಲ್ಲಿನ ತಾಲೂಕು ಪಂಚಾಯತ್‌ನಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಅವರು ಹೆದ್ದಾರಿ ಸಮಸ್ಯೆ ಕುರಿತು ನಡೆಸಿದ ಸಭೆಯಲ್ಲಿ ಹೆದ್ದಾರಿ ಪ್ರಾಧಿಕಾರದವರಿಗೆ ಎಚ್ಚರಿಕೆ ನೀಡಿದರು.

    ಕುಂದಾಪುರದಿಂದ ಶಿರೂರು ತನಕ ಹೆದ್ದಾರಿಯಲ್ಲಿ ಸಂಚಾರ ಅವ್ಯವಸ್ಥೆಯಿಂದ ಕೂಡಿದೆ. ಏಕಮುಖ ಸಂಚಾರವೂ ಸರಿಯಾಗಿಲ್ಲ. ಇದನ್ನು ಸರಿಪಡಿಸಬೇಕು ಎಂದು ಐಆರ್‌ಬಿಯವರಿಗೆ ಹೇಳಿದರು.

    ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ತನ್ನ ಅವಧಿಯಲ್ಲಿ ಮಂಜೂರಾಗದ, ಪೂರ್ಣವಾಗದ ಕಾಮಗಾರಿಗಾಗಿ ಜನರಿಂದ ಆಕ್ರೋಶ ಎದುರಿಸಬೇಕಾಗಿ ಬಂದಿದೆ. ನವಯುಗ ಸಂಸ್ಥೆಯವರನ್ನು ದೇಶದಲ್ಲೆಡೆ ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಬೆಂಗಳೂರಿನಲ್ಲಿ ಹೆದ್ದಾರಿ ಅಭಿವೃದ್ಧಿ ಬಗ್ಗೆ ಪ್ರಾಧಿಕಾರದ ರಾಜ್ಯ ನಿರ್ದೇಶಕರು, ಕೇಂದ್ರ ನಿರ್ದೇಶಕರು, ಲೋಕೋಪಯೋಗಿ ಸಚಿವರು, ಲೋಕೋಪಯೋಗಿ ಇಲಾಖಾ ಕಾರ್ಯದರ್ಶಿ, ಶಾಸಕರು, ಜಿಲ್ಲಾಧಿಕಾರಿ ಉಪಸ್ಥಿತಿಯಲ್ಲಿ ಸಭೆ ಕರೆಯಲಾಗುವುದು ಎಂದರು.

    ಹೆದ್ದಾರಿ ಪ್ರಾಧಿಕಾರದವರು ಮಾಹಿತಿ ನೀಡಿ, 2010ರಲ್ಲಿ ಆರಂಭವಾದ ಕಾಮಗಾರಿ 2013ರಲ್ಲಿ ಮುಗಿಯಬೇಕಿತ್ತು. ಸುರತ್ಕಲ್‌ನಿಂದ ಕುಂದಾಪುರವರೆಗೆ ಶೇ. 97ರಷ್ಟು ಕೆಲಸ ಆಗಿದೆ. ಉಳಿದ ಶೇ. 7ರಷ್ಟನ್ನು ಹೊಸದಾಗಿ ಟೆಂಡರ್‌ ಕರೆದು ಪೂರೈಸಲಾಗುವುದು. 2020 ಜನವರಿಯಲ್ಲಿ ಪಡುದ್ರಿ ಸೇತುವೆ, ಮಾರ್ಚ್‌ ವೇಳೆಗೆ ಫ್ಲೈಓವರ್‌, ಮತ್ತೆ ಮೂರು ತಿಂಗಳಲ್ಲಿ ಬಸ್ರೂರು ಮೂರುಕೈ ಅಂಡರ್‌ಪಾಸ್‌ ಕಾಮಗಾರಿ ಮುಗಿಸಲಾಗುವುದು ಎಂದರು.

    ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಹೊಸದಾಗಿ ಟೆಂಡರ್‌ ನೀಡುವಾಗ ಸಾರ್ವಜನಿಕರಿಗೆ ಉಪಯೋಗ ವಾಗುವ ರೀತಿಯಲ್ಲಿ ಕಾಮಗಾರಿಯ ಯೋಜನೆ ಇರಲಿ ಎಂದರು. ಸಹಾಯಕ ಕಮಿಷನರ್‌ ಕೆ. ರಾಜು ಉಪಸ್ಥಿತರಿದ್ದರು.

  • Karnataka PUC Results 2018 declared

    BENGALURU: The II Pre-University examination results will be announced on Monday. Students can check their score on karresults.nic.in and puc.kar.nic.in On May 1, the results will be published in respective colleges.






    Karnataka 2nd PUC result is expected to be released at around 11.30 am.

    Earlier in March 2018, Tanveer Sait, Minister for Primary and Secondary Education, had confirmed that the PUC result will be announced by April end.


    In all, 6.9 lakh students — 3,52,292 boys and 3,37,860 girls — appeared for the exams held from March 1 to March 17. In view of the assembly elections, they were held early this year. Evaluation had begun on March 23.


    Apart from 28,374 private candidates, there were 1,22,346 repeaters.

    After declaration of the PUC results, supplementary exams will be held in the month of May 2018.


    ಬೆಂಗಳೂರು: ದ್ವೀತಿಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.ಒಟ್ಟು 59.56% ಫಲಿತಾಂಶ ದಾಖಲಾಗಿದ್ದು, ಗ್ರಾಮೀಣ, ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಂದ ಉತ್ತಮ ಸಾಧನೆ ವ್ಯಕ್ತವಾಗಿದೆ.ದಕ್ಷಿಣ ಕನ್ನಡ ಮೊದಲ ಸ್ಥಾನ.-91.49%
    ಉಡುಪಿ ಎರಡನೇ ಸ್ಥಾನ-90.67%
    ಕೊಡಗು ಮೂರನೇ ಸ್ಥಾನ-83.94%

    ಚಿಕ್ಕೋಡಿ ಕೊನೆಸ್ಥಾನ -52.20%