2022 ರಲ್ಲಿ ಬಂಧನಕ್ಕೊಳಗಾದಾಗ 29 ವರ್ಷದ ಭಜರಂಗದಳ ಗೋ ರಕ್ಷಾ ವಿಭಾಗದ ಸದಸ್ಯ ಸುಹಾಸ್ ಶೆಟ್ಟಿ, ಜುಲೈ 28, 2022 ರಂದು ಮಂಗಳೂರಿನ ಸುರತ್ಕಲ್ನಲ್ಲಿ ನಡೆದ ಮೊಹಮ್ಮದ್ ಫಾಜಿಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಎಂದು ಗುರುತಿಸಲ್ಪಟ್ಟಿದ್ದ. ಮಂಗಳೂರು ನಗರ ಪೊಲೀಸರು ಆತನನ್ನು ಕ್ರಿಮಿನಲ್ ದಾಖಲೆ ಹೊಂದಿರುವ ರೌಡಿ ಶೀಟರ್ ಎಂದು ಬಣ್ಣಿಸಿದ್ದಾರೆ, ಇದರಲ್ಲಿ ಮುಸ್ಲಿಂ ಪುರುಷರ ಮೇಲಿನ ಹಲ್ಲೆ ಮತ್ತು 2010 ರ ಕೊಲೆ ಪ್ರಕರಣದಂತಹ ನಾಲ್ಕು ಹಿಂದಿನ ಪ್ರಕರಣಗಳು ಸೇರಿವೆ.

ಪೊಲೀಸ್ ಆಯುಕ್ತ ಎನ್. ಶಶಿ ಕುಮಾರ್ ಅವರ ಪ್ರಕಾರ, ಶೆಟ್ಟಿ ಫಜಿಲ್ ಮೇಲಿನ ದಾಳಿಯನ್ನು ಸಂಘಟಿಸಿದರು, ಇದರಲ್ಲಿ ಮೋಹನ್ ಸಿಂಗ್ (26), ಗಿರಿಧರ್ (23), ಅಭಿಷೇಕ್ (21), ಶ್ರೀನಿವಾಸ್ (23), ಮತ್ತು ದೀಕ್ಷಿತ್ (21) ಎಂಬ ಐದು ಇತರ ಸಹಚರರು ಸೇರಿದ್ದಾರೆ – ಜೊತೆಗೆ ಅಪರಾಧಕ್ಕೆ ಬಳಸಿದ ಕಾರನ್ನು ಒದಗಿಸಿದ ಅಜಿತ್ ಕ್ರಾಸ್ತಾ (44) ಸೇರಿದ್ದಾರೆ. ಫಜಿಲ್ ಗುಂಪಿನ ಹೆಚ್ಚಿನವರಿಗೆ ವೈಯಕ್ತಿಕವಾಗಿ ತಿಳಿದಿಲ್ಲದಿದ್ದರೂ, ಯಾರನ್ನಾದರೂ ಕೊಲ್ಲುವ ಉದ್ದೇಶದಿಂದ ಶೆಟ್ಟಿ ಜುಲೈ 26, 2022 ರಿಂದ ಮೂರು ದಿನಗಳಲ್ಲಿ ಕೊಲೆಯನ್ನು ಯೋಜಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಶೆಟ್ಟಿ, ಮೋಹನ್ ಮತ್ತು ಅಭಿಷೇಕ್ ನೇರವಾಗಿ ಬಟ್ಟೆ ಅಂಗಡಿಯ ಹೊರಗೆ ಫಾಜಿಲ್ ಅವರನ್ನು ಕಡಿದು ಕೊಂದಿದ್ದಾರೆ.
ಹಿಂದೂ ಸಂಘಟನೆಗಳೊಂದಿಗಿನ ಅವರ ಸಂಬಂಧದ ಬಗ್ಗೆ, ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಮಂಗಳೂರಿನ ಕಾರ್ಯದರ್ಶಿ ಶರಣ್ ಪಂಪ್ವೆಲ್, ಸುಹಾಸ್ ಶೆಟ್ಟಿ ಅಧಿಕೃತ ಸದಸ್ಯರಲ್ಲದಿದ್ದರೂ ವಿಎಚ್ಪಿ ಮತ್ತು ಬಜರಂಗದಳ ಆಯೋಜಿಸಿದ ಕಾರ್ಯಕ್ರಮಗಳಿಗೆ ಆಗಾಗ್ಗೆ ಹಾಜರಾಗುತ್ತಿದ್ದರು ಎಂದು ದೃಢಪಡಿಸಿದರು. ವಿಎಚ್ಪಿ ಶೆಟ್ಟಿಗೆ ಕೊಲೆ ಮಾಡಲು ಸೂಚಿಸಿಲ್ಲ ಆದರೆ ಈ ಕೃತ್ಯ ಪ್ರತೀಕಾರವಾಗಿರಬಹುದು, ಬಹುಶಃ ಜುಲೈ 26, 2022 ರಂದು ಎರಡು ದಿನಗಳ ಹಿಂದೆ ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರು ಅವರ ಹತ್ಯೆಗೆ ಸಂಬಂಧಿಸಿರಬಹುದು ಎಂದು ಪಂಪ್ವೆಲ್ ಹೇಳಿದ್ದರು.
ಹತ್ಯೆ
ಪೊಲೀಸರ ಮಾಹಿತಿ ಪ್ರಕಾರ, ಸುಹಾಸ್ ಶೆಟ್ಟಿ ತಮ್ಮ ಸ್ನೇಹಿತರಾದ ಸಂಜಯ್, ಪ್ರಜ್ವಲ್, ಅನ್ವಿತ್, ಲತೀಶ್ ಮತ್ತು ಶಶಾಂಕ್ ಅವರೊಂದಿಗೆ ಕಾರಿನಲ್ಲಿ (KA-12-MB-3731) ಪ್ರಯಾಣಿಸುತ್ತಿದ್ದರು. ಈ ವೇಳೆ ಸ್ವಿಫ್ಟ್ ಕಾರು ಮತ್ತು ಪಿಕಪ್ ವಾಹನದಲ್ಲಿ ಬಂದ ಐದರಿಂದ ಆರು ಮಂದಿ ದುಷ್ಕರ್ಮಿಗಳ ಗುಂಪು ಅವರನ್ನು ಅಡ್ಡಗಟ್ಟಿದೆ.
ನಂತರ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಸುಹಾಸ್ ಶೆಟ್ಟಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ಮಂಗಳೂರು ನಗರ ಪೊಲೀಸರು ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಕೊಲೆಯಾದ ರೌಡಿ ಶೀಟರ್ ಆಗಿರುವ ಸುಹಾಸ್ ಶೆಟ್ಟಿಯ ಮೇಲೆ ಎರಡು ಕೊಲೆ ಪ್ರಕರಣಗಳಿವೆ. ಆತ ಮುಖ್ಯವಾಗಿ 2022ರ ಫಾಝಿಲ್ ಕೊಲೆ ಪ್ರಕರಣದ ಮೊದಲ ಆರೋಪಿ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಹೇಳಿದ್ದಾರೆ.
ನಗರದ ಎ.ಜೆ. ಆಸ್ಪತ್ರೆಯ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, “ಗುರುವಾರ ರಾತ್ರಿ ಸುಮಾರು 8.30ರಿಂದ 8.40 ರ ನಡುವೆ ಬಜ್ಪೆ ಪೊಲೀಸ್ ಠಾಣೆಯ ಕಿನ್ನಿಪದವಿನಲ್ಲಿ ಘಟನೆ ನಡೆದಿದೆ. ರೌಡಿ ಶೀಟರ್ ಆಗಿರುವ ಸುಹಾಸ್ ಶೆಟ್ಟಿ ತನ್ನ ಸ್ನೇಹಿತರ ಜೊತೆ ಇನ್ನೋವಾ ಕಾರಿನಲ್ಲಿ ಹೋಗುತ್ತಿದ್ದಾಗ ಎರಡು ವಾಹನಗಳಿಂದ ಅಡ್ಡಗಟ್ಟಲಾಗಿದೆ. ಮೊದಲು ಗೂಡ್ಸ್ ವಾಹನದಲ್ಲಿ ದಾಳಿ ಮಾಡಲಾಯಿತು. ಬಳಿಕ ಸ್ವಿಫ್ಟ್ ಕಾರಿನಲ್ಲಿ ಬಂದಿದ್ದ ಆರೋಪಿಗಳು ಇಳಿದು ಸುಹಾಸ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ಅವರ ಗುರಿ ಸುಹಾಸ್ ಶೆಟ್ಟಿಯೇ ಆಗಿದ್ದ”, ಎಂದರು.
“ತಕ್ಷಣವೇ ಸುಹಾಸ್ ನನ್ನು ಮಂಗಳೂರಿನ ಎ. ಜೆ. ಆಸ್ಪತ್ರೆಗೆ ದಾಖಲಿಸಲಾಯಿತು. ಆ ಸಂದರ್ಭ ಆತ ಮೃತಪಟ್ಟಿದ್ದಾನೆ ಎಂದು ತಿಳಿದು ಬಂತು. ಘಟನೆಯ ವೇಳೆ ಸುಹಾಸ್ ಜೊತೆಗಿದ್ದ ಸ್ನೇಹಿತರ ಪೈಕಿ ಇಬ್ಬರಿಗೆ ಗಾಯಗಳಾಗಿವೆ. ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ”, ಎಂದು ಅವರು ಘಟನೆಯ ಕುರಿತು ಮಾಹಿತಿ ನೀಡಿದರು.
“ ಒಂದು ವರ್ಷದ ಹಿಂದಷ್ಟೇ ಸುಹಾಸ್ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಆತನ ಚಲನವಲನಗಳ ಮೇಲೆ ಪೊಲೀಸ್ ಇಲಾಖೆ ಕಣ್ಣಿಟ್ಟಿತ್ತು. ಘಟನೆಯ ವೀಡಿಯೊವನ್ನು ನೋಡಿದ್ದೇವೆ. ಆರೋಪಿಗಳನ್ನು ಪತ್ತೆಹಚ್ಚಲು ಕ್ರಮ ಕೈಗೊಳ್ಳಲಾಗುತ್ತಿದೆ”, ಎಂದು ಕಮಿಷನರ್ ಹೇಳಿದ್ದಾರೆ.
“ಘಟನೆಯ ಬಳಿಕ ನಗರದ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು ನಗರದಾದ್ಯಂತ ರಾತ್ರಿಯಿಂದಲೇ ಬಂದೋಬಸ್ತ್, ನಾಕಾಬಂಧಿ ಮಾಡಲಾಗಿದೆ. ಹೊರಜಿಲ್ಲೆಗಳಿಂದ ಉನ್ನತಾಧಿಕಾರಿಗಳು ಬರುತ್ತಿದ್ದಾರೆ. ನಗರದಾದ್ಯಂತ ಕಾನೂನು ಸುವ್ಯವಸ್ಥೆ ಕಾಪಾಡಲಾಗುವುದು”, ಎಂದು ಅನುಪಮ್ ಅಗರ್ವಾಲ್ ಹೇಳಿದ್ದಾರೆ.
►ಸುಹಾಸ್ ಶೆಟ್ಟಿಯ ಮೇಲಿರುವ ಪ್ರಕರಣಗಳಾವು?
ರೌಡಿ ಶೀಟರ್ ಆಗಿರುವ ಸುಹಾಸ್ ಶೆಟ್ಟಿಯ ಮೇಲೆ ಒಟ್ಟು 5 ಪ್ರಕರಣಗಳಿವೆ. ಅವುಗಳ ಪೈಕಿ ಮಂಗಳೂರು ನಗರದಲ್ಲಿಯೇ 4 ಪ್ರಕರಣಗಳು ದಾಖಲಾಗಿವೆ. ಒಂದು ಪ್ರಕರಣವು ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
►ಬಜ್ಪೆ ಪೊಲೀಸ್ ಠಾಣೆಯಲ್ಲಿ 2016ರಲ್ಲಿ ಐಪಿಸಿ ಸೆಕ್ಷನ್ 143, 47, 323, 447, 504, 506, 149ರ ಅಡಿ ದಾಖಲಾಗಿದ್ದ ಪ್ರಕರಣದಲ್ಲಿ ಆತ ಖುಲಾಸೆಯಾಗಿದ್ದಾನೆ.
►ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ 2016ರಲ್ಲಿ ಐಪಿಸಿ 160ರಡಿ ದಾಖಲಾದ ಪ್ರಕರಣದಲ್ಲಿ ಆತನಿಗೆ ಶಿಕ್ಷೆಯಾಗಿದೆ.
►ಬಜ್ಪೆ ಪೊಲೀಸ್ ಠಾಣೆಯಲ್ಲಿ 2020ರಲ್ಲಿ ಐಪಿಸಿ 143, 147, 148, 323, 324, 504, 506ರಡಿ ದಾಖಲಾದ ಪ್ರಕರಣದಲ್ಲಿ ಆತ ಖುಲಾಸೆಯಾಗಿದ್ದಾನೆ.
►ಬಜ್ಪೆ ಪೊಲೀಸ್ ಠಾಣೆಯಲ್ಲಿ 2020ರಲ್ಲಿ ಐಪಿಸಿ 143, 147, 148, 323, 324, 504, 506, 307, 302, 149ರಡಿ ಮತ್ತು ಪರಿಶಿಷ್ಠ ಜಾತಿ ಪರಿಶಿಷ್ಠ ಪಂಗಡ ದೌರ್ಜನ್ಯ ಕಾಯ್ದೆಯಡಿ ದಾಖಲಾದ ಪ್ರಕರಣವು ಈಗಾಗಲೇ ವಿಚಾರಣಾ ಹಂತದಲ್ಲಿದೆ.
►2022ರಲ್ಲಿ ಸುರತ್ಕಲ್ ಠಾಣೆಯಲ್ಲಿ ಐಪಿಸಿ 143, 147, 148, 326, 302, 504, 506, 120(B) 201, 202, 204, 212, 118, 149ರಡಿ ದಾಖಲಾದ ಫಾಝಿಲ್ ಕೊಲೆ ಪ್ರಕರಣವು ವಿಚಾರಣಾ ಹಂತದಲ್ಲಿದೆ.
ಮಂಗಳೂರು: ಬಜ್ಪೆಯಲ್ಲಿ ಮಾರಕಾಸ್ತ್ರದಿಂದ ಕಡಿದು ರೌಡಿ ಶೀಟರ್ ನ ಕೊಲೆ
ಇದು ಬೆಳವಣಿಗೆ ಸುದ್ದಿ, ಇನ್ನೂ ಅಪ್ಡೇಟ್ಗಳು ಬರಬಹುದು.